ನಿದ್ರಾದೇವಿಯ ಭಕ್ತರಾಗಲು ಹೀಗೆ ಮಾಡಿ


Team Udayavani, Dec 3, 2019, 4:44 AM IST

cv-14

ಕೊಟ್ಟರೂ ಗಳಿಸಲಾಗದ, ತನ್ನಿಂದ ತಾನೆ ಒಲಿಯಬೇಕಾದ ನಿದ್ರೆ ಸುಲಭಕ್ಕೆ ಒಲಿಯಲಾರದು ಬಿಡಿ. ಹಾಗಾದರೆ ನಿದ್ರಾದೇವಿ ಒಲಿಯುವ ಮಾರ್ಗಗಳಿಲ್ಲವೆ? ಖಂಡಿತಾ ಇದೆ. ಅದಕ್ಕೇನು ಮಾಡಬೇಕು ಎಂಬ ಸರಳ ಮನೆಮದ್ದನ್ನು ಇಲ್ಲಿ ವಿವರಿಸಲಾಗಿದೆ.

ರಾಗಿ ಸೇವನೆ
ರಾಗಿ ತಿಂದರೆ ನಿರೋಗಿ ಎನ್ನುವ ಮಾತಿದೆ. ಅದರಂತೆ ರಾಗಿಯಿಂದ ತಯಾರಿಸುವ ಮುದ್ದೆ, ಮಾಲ್ಟ್, ಅಂಬಲಿ ಸೇವನೆಯಿಂದ ದೇಹದಲ್ಲಿರುವ ಉಷ್ಣಾಂಶ ಕಡಿಮೆಯಾಗುವುದಲ್ಲದೆ ಸುಖ ನಿದ್ದೆಗೂ ಈ ಆಹಾರ ಸೇವನೆಯ ಹವ್ಯಾಸ ಉಪಯುಕ್ತ.

ಬಿಸಿನೀರ ಸ್ನಾನ
ಬೆಚ್ಚಗಿನ ನೀರಿನ ಸ್ನಾನ ಸ್ನಾಯು ಸೆಳೆತ ನಿವಾರಣೆಗೆ ಉತ್ತಮ ಮಾರ್ಗ. ಮಲಗುವ ಎರಡು ಗಂಟೆ ಮೊದಲು ಬಿಸಿ ನೀರನ್ನು ಸ್ನಾನ ಮಾಡುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ.

ಕೊಬ್ಬರಿ ಎಣ್ಣೆ ಮಸಾಜ್‌
ಮಸಾಜ್‌ ಹಲವಾರು ಒತ್ತಡಗಳ ನಡುವೆಯೂ ನಾವು ಶಾಂತ ಚಿತ್ತರಾಗುವಂತೆ ಮಾಡುತ್ತದೆ. ಕೂದಲಿನ ಬುಡಕ್ಕೆ ಎಣ್ಣೆ ತಾಕುವುದರಿಂದ ತಲೆನೋವಿನಂತಹ ಸಮಸ್ಯೆಗಳು ಬರಲಾರದು. ಪಾದಕ್ಕೆ ಎಣ್ಣೆ ಮಸಾಜ್‌ ಮಾಡುವುದರಿಂದಲೂ ನಿದ್ದೆ ಚೆನ್ನಾಗಿ ಬರುತ್ತದೆ.

ಹಾಲು
ರಾತ್ರಿ ಹಾಲು ಕುಡಿದು ಮಲಗುವ ಹವ್ಯಾಸದಿಂದ ದೇಹಕ್ಕೆ ಕ್ಯಾಲ್ಸಿಯಂ ಲಭ್ಯವಾಗುವುದರೊಂದಿಗೆ ಸುಖಕರ ನಿದ್ದೆಗೂ ಸಹಕಾರಿ. ಊಟವಾದ ತಕ್ಷಣ ಹಾಲು ಕುಡಿಯುವ ಬದಲು ಹತ್ತು ನಿಮಿಷ ಬಿಟ್ಟು ಸೇವಿಸಬೇಕು. ಜತೆಗೆ ಹಾಲು ಕುಡಿದ ಕೂಡಲೇ ಮಲಗದೆ ತುಸು ವ್ಯಾಯಾಮ ಮಾಡುವುದು ನಿದ್ದೆಯನ್ನು ಉತ್ತೇಜಿಸಲು ಸಹಕಾರಿ.

ಗಸಗಸೆ
ಗಸಗಸೆಯಿಂದ ಮಾಡಿದ ಪಾಯಸ, ಇನ್ನಿತರ ಖಾದ್ಯಗಳ ಸೇವಿಸುವುದರಿಂದ ಗಾಢ ನಿದ್ರೆಗೆ ಜಾರಬಹುದು.

ಹೊಸ ಹವ್ಯಾಸ
ಹವ್ಯಾಸದಲ್ಲಿ ಕಲವೊಂದು ಬದಲಾವಣೆಯನ್ನು ನೀವು ಅನುಸರಿಸುವುದರಿಂದಲೂ ಚೆನ್ನಾಗಿ ನಿದ್ದೆ ಮಾಡಬಹುದು. ಮಲಗುವ ಮೊದಲು ಅರ್ಧಗಂಟೆ ಮೊಬೈಲ್‌, ಲ್ಯಾಪ್‌ಟಾಪ್‌, ಟಿ.ವಿ. ಮುಂತಾದವುಗಳಿಂದ ದೂರವಿದ್ದು ಧ್ಯಾನ ಮಾಡುವ ಹವ್ಯಾಸ ರೂಢಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ಇದರೊಂದಿಗೆ ಮಲಗುವ ಕೋಣೆಗೆ ಡಿಮ್‌ ಲೈಟ್‌ ಅಳವಡಿಸಿಬೇಕು. ದಿಂಬು-ಹಾಸಿಗೆ ಸುಖಕರವೆನಿಸಬೇಕು. ಉತ್ತಮ ಚಿಂತನೆಯನ್ನು ಬೆಳೆಸಲು ಪ್ರೇರೇಪಿಸುವ ಪುಸ್ತಕಗಳು ಓದುವ ಹವ್ಯಾಸ ಒಳ್ಳೆಯದು.

ಚಿಂತೆ ಬಿಡಿ
ಮಾತ್ರೆ ಸೇವನೆ ಮಾಡುವುದು ಅಥವಾ ಆಲ್ಕೋಹಾಲ್‌ ಸೇವನೆಯಿಂದ ತಾತ್ಕಾಲಿಕವಾಗಿ ನಿದ್ದೆ ಬರಬಹುದು. ಆದರೆ ಆರೋಗ್ಯಕ್ಕೆ ಈ ಮಾರ್ಗ ಸಮಂಜಸವಲ್ಲ. ಮುಖ್ಯವಾಗಿ ಹಾಸಿಗೆ ಮೇಲೆ ದಿಂಬಿಗೆ ತಲೆ ಒರಗಿಸಿದಾಗ ಅನಾವಶ್ಯಕ ವಿಚಾರಗಳನ್ನು ನೆನೆಯುತ್ತಿದ್ದರೆ ನಿದ್ರೆ ಸಮೀಪಿಸದೆ ಚಿಂತೆ ಹೆಚ್ಚಾಗುತ್ತದೆ. ಆದ್ದರಿಂದ ಚಿಂತೆ ಬಿಟ್ಟು ಖುಷಿಯಲ್ಲಿಯೇ ನಿದ್ರಿಸಿ.

- ರಾಧಿಕಾ ಕುಂದಾಪುರ

ಟಾಪ್ ನ್ಯೂಸ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.