ಕತ್ತಿನ ಕಪ್ಪುಕಲೆ ನಿವಾರಣೆಗೆ ಇಲ್ಲಿದೆ ಸರಳ ಟಿಪ್ಸ್‌


Team Udayavani, Mar 10, 2020, 5:56 AM IST

ಕತ್ತಿನ ಕಪ್ಪುಕಲೆ ನಿವಾರಣೆಗೆ ಇಲ್ಲಿದೆ ಸರಳ ಟಿಪ್ಸ್‌

ಮುಖ ಸ್ವಲ್ಪ ಕಾಂತಿ ಕಳೆದುಕೊಂಡರೂ ಎಲ್ಲಿಲ್ಲದಂತೆ ಚಿಂತೆ ಮಾಡಿ ಬಗೆ ಬಗೆಯ ಪರಿಹಾರ ಕ್ರಮಗಳನ್ನು ಹುಡುಕಲಾಗುತ್ತದೆ. ಆದರೆ ಮುಖಕ್ಕೆ ಇರುವ ಪ್ರಾಮುಖ್ಯ ಕತ್ತಿನ ಭಾಗಕ್ಕೂ ಇದ್ದು ಅದು ಕಪ್ಪು ಕಲೆಯನ್ನು ಹೊಂದಿದ್ದರೆ ಸಾರ್ವಜನಿಕವಾಗಿ ಮುಜುಗರಕ್ಕೆ ಇಡಾಗಲೂಬಹುದು. ಹಾಗಾದರೆ ಇದಕ್ಕೆ ಮದ್ದಿಲ್ಲವೇ? ಕಪ್ಪು ಕಲೆಗೆ ಕಾರಣವೇನು, ನಿವಾರಣಾ ಮಾರ್ಗಗಳು ಸಹಿತ ಇತ್ಯಾದಿ ಅಂಶಗಳ ಮಾಹಿತಿ ಇಲ್ಲಿದೆ.

ಕಪ್ಪು ಕಲೆಯಾಗಲು ಕಾರಣ
ದೇಹದಲ್ಲಿ ಹಾರ್ಮೋನ್‌ ಬದಲಾವಣೆಯಿಂದ ತೂಕ ಹೆಚ್ಚಾಗುವ ಸಂದರ್ಭದಲ್ಲಿ ಕತ್ತಿನ ಭಾಗದಲ್ಲಿ ಚರ್ಮವು ವಿಸ್ತಾರಗೊಳ್ಳುತ್ತದೆ. ಚರ್ಮದ ಮೇಲೆ ಧೂಳಿನ ಕಣಗಳು ಕೂತು ಅದು ದೇಹದಲ್ಲಿ ಕಪ್ಪುಕಲೆಯನ್ನು ಉಂಟುಮಾಡುತ್ತದೆ. ಗರ್ಭಿಣಿಯರೂ ಬಾಣಂತಿಯಾದ ಬಳಿಕ ದೇಹದ ತೂಕ ಇಳಿದಾಗ ಈ ಕಲೆ ಅವರಿಗೆ ಕಿರಿಕಿರಿ ಅನುಭವ ನೀಡುತ್ತದೆ. ಮಕ್ಕಳು ಹೊರಗಡೆ ಜಾಸ್ತಿ ಆಟವಾಡಿದಾಗ ಬೆವರು ಮತ್ತು ಧೂಳಿನ ಪ್ರದೂಷಣೆ ಮಕ್ಕಳಲ್ಲಿ ಕಪ್ಪು ಕಲೆಯನ್ನು ಉಂಟು ಮಾಡಿ ಹೆತ್ತವರಿಗೂ ತಲೆ ನೋವಿನ ಅನುಭವವನ್ನು ನೀಡುತ್ತದೆ.

ಕಾಫಿ ಪುಡಿ, ಜೇನು ತುಪ್ಪ
ಹಿಂದಿನಿಂದಲೂ ಜೇನು ತುಪ್ಪ ಮತ್ತು ಕಾಫಿ ಪುಡಿಯನ್ನು ಸೌಂದರ್ಯ ವೃದ್ಧಿಗೆ ಬಳಸುವ ವಾಡಿಕೆ ಇತ್ತು. ಜೇನು ತಿನ್ನಲು ಸಿಹಿಯಾಗಿರುತ್ತದೆ ಅದೇ ರೀತಿ ಇದರಲ್ಲಿ ರಿಬೋಫ್ಲೇವಿಸ್‌, ಥಾಯಾಮಿನ್‌, ಲವಣ ಮತ್ತು ಖನಿಜ ಸತ್ವಗಳು ಹೇರಳವಾಗಿ ಲಭ್ಯವಿದ್ದು ಮಖದ ಕಾಂತಿಗೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ಕಾಫಿ ಪುಡಿಯೂ ತ್ವಚೆಯ ಧೂಳನ್ನು ಹೊರಗೊಳಿಸುವ ಕಾರಣದಿಂದ ಇದನ್ನು ಸಹ ಬಳಕೆ ಮಾಡುತ್ತಾರೆ. ಕಾಫಿ ಪುಡಿ ಮತ್ತು ಜೇನನ್ನು ಮಿಶ್ರಣಗೊಳಿಸಿ ಕತ್ತು ಮತ್ತು ಮುಖದ ಭಾಗಕ್ಕೆ ಮಸಾಜ್‌ಮಾಡಿಕೊಳ್ಳಬೇಕು. ಒಂದೂವರೆ ಗಂಟೆಯ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ಯಾವುದೇ ಸೋಪ್‌ ಅಥವಾ ಫೇಸ್‌ ವಾಶ್‌ ಬಳಸದೇ ಕತ್ತು ಮತ್ತು ಮುಖವನ್ನು ತೊಳೆದುಕೊಳ್ಳಬೇಕು. ಹೀಗೆ ವಾರಕ್ಕೆ ಮೂರು ಬಾರಿ ಮಾಡುವುದರಿಂದ ಕತ್ತಿನ ಕಪ್ಪುಕಲೆಯನ್ನು ನಿವಾರಿಸಬಹುದಾಗಿದೆ.

ಅಕ್ಕಿ ಹಿಟ್ಟು- ಟೊಮೇಟೋ
ಅಕ್ಕಿ ಹಿಟ್ಟಿನಲ್ಲಿ ತರಾತರಿ ತಿಂಡಿ ಮಾಡಿ ತಿಳಿದವರಿಗೆ ಅದರಲ್ಲಿಯೂ ಸೌಂದರ್ಯವೃದ್ಧಿ ಮಾಡಲು ಸಾಧ್ಯವಿದೆ ಎಂಬ ಸತ್ಯ ತಿಳಿದಿರಲಾರದು. ಅಕ್ಕಿ ಹಿಟ್ಟನ್ನು ಲಿಂಬೆಹಣ್ಣನ್ನು ಮಿಶ್ರಗೊಳಿಸಿ ಅರ್ಧ ಭಾಗ ಟೊಮೇಟೊಗೆ ಅದನ್ನು ಮೆತ್ತಿಕೊಂಡು ಕತ್ತಿನ ಸುತ್ತ 15ರಿಂದ 20 ನಿಮಿಷಗಳ ಕಾಲ ಮಸಾಜ್‌ ಮಾಡಬೇಕು. ಬಳಿಕ ತಣ್ಣಗಿನ ನೀರಿನಲ್ಲಿ ಕತ್ತಿನ ಭಾಗವನ್ನು ತೊಳೆದುಕೊಳ್ಳಬೇಕು ಈ ರೀತಿ ವಾರಕ್ಕೆ ನಾಲ್ಕು ಭಾರಿ ಮಾಡಿದರೆ ಸಮಸ್ಯೆ ನಿವಾರಣೆ.

ಮೊಟ್ಟೆ- ಅರಿಶಿನ
ಮೊಟ್ಟೆಯಲ್ಲಿರುವ ಕ್ಯಾಲ್ಸಿಯಂ ಮತ್ತು ಅರಶಿನದ ಆ್ಯಂಟಿ ಆಕ್ಸಿಡೆಂಟ್‌ ಕಲೆಗಳನ್ನು ನಿವಾರಿಸಬಹುದಾಗಿದೆ. ಮೊಟ್ಟೆಯ ಬಿಳಿ ಭಾಗವನ್ನು ತೆಗೆದಿಟ್ಟು ಅದಕ್ಕೆ ಅರಶಿನವನ್ನು ಬೆರೆಸಬೇಕು. ಇದನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಮಸಾಜ್‌ ಮಾಡಿ 10 ರಿಂದ 15 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಳ್ಳಿ. ಬಳಿಕ ಮುಖಕ್ಕೆ ಅಲೋವೆರಾ ಜೆಲ್‌ ಬಳಸಿ ಪುನಃ ಮಸಾಜ್‌ ಮಾಡಬೇಕು. ಇದರಿಂದ ಮುಖದ ಕಾಂತಿ ಹೆಚ್ಚಾಗುವುದರೊಂದಿಗೆ ಕತ್ತಿನ ಕಪ್ಪು ಕಲೆಯನ್ನು ನಿವಾರಿಸಬಹುದು.

ಟಾಪ್ ನ್ಯೂಸ್

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Jayaprakash Hegde “ಉತ್ತಮ ಕೆಲಸ ಮಾಡಿಸಿಕೊಳ್ಳಬೇಕಾದ ಅವಶ್ಯಕತೆ ಮತದಾರರಿಗಿದೆ’

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆKundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Kundapura “ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಗೆಲ್ಲಿಸಿ’: ಜಯಪ್ರಕಾಶ್‌ ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.