ಸಮತೋಲನದಲ್ಲಿರಲಿ ಹಾರ್ಮೋನ್‌


Team Udayavani, May 21, 2019, 6:00 AM IST

Lead5

ಹಾರ್ಮೋನ್‌ನ ಅಸಮತೋಲನ ಹೆಚ್ಚಿನ ಮಹಿಳೆಯರನ್ನು ಕಾಡುವ ಸಮಸ್ಯೆ. ಇದು ದೇಹಕ್ಕೆ ಮಾತ್ರವಲ್ಲ ಮಾನಸಿಕ ನೆಮ್ಮದಿಯನ್ನೂ ಕಸಿದುಕೊಳ್ಳುತ್ತದೆ. ಇಂದಿನ ಜೀವನಶೈಲಿ, ಆಹಾರ ಕ್ರಮವೇ ಇದಕ್ಕೆ ಮುಖ್ಯ ಕಾರಣ. ಆಧುನಿಕತೆಗೆ ಒಗ್ಗಿಕೊಂಡು ಆರೋಗ್ಯದತ್ತ ಗಮನ ಹರಿಸದೇ ಇದ್ದಾಗ ಈ ಸಮಸ್ಯೆ ಕಂಡು ಬರುತ್ತದೆ. ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಹಾರ್ಮೋನ್‌ ಅನ್ನು ಸಮತೋಲನದಲ್ಲಿರಿಸಬಹುದು.

ಹೆಣ್ಣಿನ ಶರೀರದಲ್ಲಿ ಕಿಶೋರಾವಸ್ಥೆಯಿಂದ ವೃದ್ಧಾಪ್ಯದವರೆಗೂ ಹಲವಾರು ರೀತಿಯ ದೈಹಿಕ ಬದಲಾವಣೆಗಳಾಗುತ್ತವೆ. ಇದಕ್ಕೆ ಆಕೆಯ ಶರೀರ ಒಗ್ಗಿಕೊಳ್ಳುತ್ತದಾದರೂ, ಕೆಲವೊಮ್ಮೆ ಆರೋಗ್ಯದ ಏರುಪೇರಿಗೂ ಇದು ಕಾರಣವಾಗುವುದು. ಅದರಲ್ಲಿ ಮುಖ್ಯವಾಗಿ ಹಾರ್ಮೋನ್‌ನ ಅಸಮತೋಲನ.

ಹಾರ್ಮೋನ್‌ನಲ್ಲಿ ವ್ಯತ್ಯಾಸ ಹೆಣ್ಣು ಮಕ್ಕಳಲ್ಲಿ ಸಾಮಾನ್ಯ. ಇದಕ್ಕೆ ಕಾರಣಗಳು ಕೆಲವೊಮ್ಮೆ ವಂಶಪಾರಂಪರ್ಯವಾಗಿ ಬಂದರೆ, ಬಹುತೇಕ ಸಂದರ್ಭದಲ್ಲಿ ತಿನ್ನುವ ಆಹಾರ, ಜೀವನಶೈಲಿಯಿಂದಾಗಿರುತ್ತದೆ. ಆಧುನಿಕ ಕಾಲಘಟ್ಟದಲ್ಲಂತೂ ವಂಶಪಾರಂಪರ್ಯ ಎನ್ನುವುದಕ್ಕಿಂತ ಆಹಾರ, ಜೀವನಶೈಲಿಯೇ ಮುಖ್ಯ ಕಾರಣ.

ಹಾರ್ಮೋನ್‌ಗಳಲ್ಲಿ ವ್ಯತ್ಯಾಸವಾದರೆ ಹೆಣ್ಣು ಮಕ್ಕಳಲ್ಲಿ ದೈಹಿಕ, ಮಾನಸಿಕವಾಗಿ ಒಂದಲ್ಲ ಒಂದು ರೀತಿಯ ಸಮಸ್ಯೆ ಗಳನ್ನು ಎದುರಿಸಬೇಕಾಗುತ್ತದೆ. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆದುಕೊಂಡರೆ ಜೀವನ ಸಲೀಸಾಗುತ್ತದೆ.

ಆರೋಗ್ಯಕರ ಜೀವನಶೈಲಿ
ವಿಟಮಿನ್‌ಯುಕ್ತ ಆಹಾರ ಸೇವಿಸುವುದು, ಫಾಸ್ಟ್‌ಫುಡ್‌, ಕರಿದ ತಿಂಡಿಗಳ ಅತಿಯಾದ ಸೇವನೆಯಿಂದ ದೂರವಿರುವುದು, ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದೇ ಹಾರ್ಮೋನ್‌ ಸಮತೋಲನಕ್ಕೆ ಪ್ರಥಮ ಚಿಕಿತ್ಸೆ. ತಾಜಾ ಹಣ್ಣಗಳು, ತರಕಾರಿ ಅದರಲ್ಲೂ ಸೊಪ್ಪು ತರಕಾರಿ ಸೇವನೆ ಜಾಸ್ತಿಯಾಗಬೇಕು. ನೆಲ್ಲಿಕಾಯಿ, ಕಾಳುಗಳು, ಮೂಸಂಬಿ, ಖರ್ಜೂರ, ಸೇಬು ಮುಂತಾದ ಹಣ್ಣುಗಳು ಹಾರ್ಮೋನ್‌ ಸಮತೋಲನದಲ್ಲಿರಿಸಲು ಸಹ ಕಾರಿ.

ಲಕ್ಷಣಗಳು
ಹಾರ್ಮೋನ್‌ನಲ್ಲಿ ವ್ಯತ್ಯಾಸ ಕಿಶೋರಾವಸ್ಥೆಯಲ್ಲೇ ಕಾಣಿಸಿಕೊಳ್ಳುತ್ತದೆಯಾದರೂ, ಅತಿಯಾಗಿ ಕಾಡುವುದು 30ರಿಂದ 40 ವರ್ಷದೊಳಗಿನ ಮಹಿಳೆಯರಲ್ಲಿ. ವಯಸ್ಸಾದಂತೆ ಈ ಸಮಸ್ಯೆ ಹೆಚ್ಚಾಗುತ್ತದೆ. ಹಲವು ಸಮಯಗಳಿಂದ ಮುಟ್ಟಾಗದೇ ಇರುವುದು, ಆಯಾಸ, ಅಲರ್ಜಿ, ಕೂದಲು ಉದುರುವಿಕೆ, ಅನಗತ್ಯ ಕೂದಲು ಬೆಳೆಯುವುದು, ಹೆಚ್ಚಿನ ಅಥವಾ ಅನಿಯಮಿತ ರಕ್ತಸ್ರಾವ, ಗರ್ಭಧಾರಣೆ ಸಮಸ್ಯೆ, ಹಸಿವಾಗದಿರುವುದು, ತೂಕ ಹೆಚ್ಚಳ, ಚರ್ಮದ ಸಮಸ್ಯೆ, ಏಕಾಗ್ರತೆ ಕೊರತೆ, ನಿದ್ರಾಹೀನತೆ ಸಹಿತ ಹಲವಾರು ರೀತಿಯ ದೈಹಿಕ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಮಹಿಳೆಯರಲ್ಲಿ ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟೆರೋಜೆನ್‌ ಉತ್ಪಾದನೆಯಲ್ಲಿ ವ್ಯತ್ಯಾಸವಾದಾಗ ಹಾರ್ಮೋನ್‌ಗಳಲ್ಲಿ ಅಸಮತೋಲನವಾಗುತ್ತದೆ. ಇದರ ಉತ್ಪಾದನೆ ವ್ಯತ್ಯಾಸಕ್ಕೆ ಕಾರಣ ದೈಹಿಕ ಚಟುವಟಿಕೆ ಇಲ್ಲದಿರು ವುದು, ಅತಿಯಾದ ಗರ್ಭ ನಿರೋಧಕ ಮಾತ್ರೆ ಸೇವನೆ, ಮದ್ಯಪಾನ, ಧೂಮಪಾನ, ಕಾಫಿ, ಟೀಯ ಅತಿ ಯಾದ ಸೇವನೆ, ಬದಲಾದ ಆಧುನಿಕ ಜೀವನಶೈಲಿ, ಫಾಸ್ಟ್‌ ಫುಡ್‌ ಸೇವನೆಯೇ ಇದಕ್ಕೆ ಮುಖ್ಯ ಕಾರಣವಾಗಿರುತ್ತದೆ.

ದೈಹಿಕ ಚಟುವಟಿಕೆಯೇ ಮದ್ದು
ಇಂದು ದೇಹ ದಂಡನೆಗೆ ಅವಕಾಶ ಕೊಡದೆ ಬದುಕಲು ಸುಲಭದ ದಾರಿಗಳನ್ನಷ್ಟೇ ಹುಡುಕುತ್ತೇವೆ. ಇವು ಇನ್ನಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಯಾವುದೇ ಶಾರೀರಿಕ ಕಾಯಿಲೆಗೆ ದೈಹಿಕವಾಗಿ ಚಟುವಟಿಕೆಯಿಂದಿರುವುದೇ ಉತ್ತಮ ಮದ್ದು. ಪ್ರತಿ ದಿನ ಯೋಗ, ಧ್ಯಾನ, ವ್ಯಾಯಾಮ ಮಾಡುವುದು, ಆದಷ್ಟು ನಡೆದಾಡುವುದು, ಮನೆಗೆಲಸ ಮಾಡುವುದು, ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಶಾರೀರಿಕ ನೋವುಗಳು ಶಮನವಾಗಿ ಆರೋಗ್ಯಕರ ಬದುಕು ಸಾಗಿಸಲು ಸಹಾಯಕವಾಗುತ್ತದೆ.

ಗುಳಿಗೆ ತಿನ್ನಬೇಡಿ
ಋತುಸ್ರಾವ, ಮಕ್ಕಳಾಗುವಿಕೆ ಈ ಸೃಷ್ಟಿಯಲ್ಲಿ ನೈಸರ್ಗಿಕವಾಗಿಯೇ ಬಂದಿರುವಂತಹದ್ದು. ಬೇಗನೇ ಮಕ್ಕಳು ಬೇಡವೆಂದು ಗರ್ಭ ನಿರೋಧಕ ಗುಳಿಗೆಗಳನ್ನು ಸೇವಿಸುವುದು, ಋತುಸ್ರಾವ ಮುಂದೆ ಹಾಕಲು ಗುಳಿಗೆ ಸೇವನೆ ಬೇಡವೇ ಬೇಡ. ಈ ಎರಡು ಪ್ರಕ್ರಿಯೆಗಳಿಂದ ಹಾರ್ಮೋನ್‌ ಏರುಪೇರು ಮಾತ್ರವಲ್ಲದೆ, ಜೀವನಪೂರ್ತಿ ದೈಹಿಕ ಸಮಸ್ಯೆಗೂ ಕಾರಣವಾಗುತ್ತದೆ. ದಿನಕ್ಕ 2- 3 ಲೀ. ನೀರು ಕುಡಿಯವುದು, ಯೋಗ, ಧ್ಯಾನದ ಮೇಲೆ ಗಮನ ಹರಿಸಿದರೆ ಹಾರ್ಮೋನ್‌ನ ಸಮತೋಲನ ಮಾಡಿಕೊಳ್ಳಬಹುದು.

ಹಾರ್ಮೋನ್‌ನಲ್ಲಿ ವ್ಯತ್ಯಾಸ ಬಹುತೇಕ ಎಲ್ಲ ವಯಸ್ಸಿನವರಲ್ಲೂ ಕಾಡುವಂತ ಸಮಸ್ಯೆಯಾಗಿದೆ. ಆಧುನಿಕ ಜೀವನಶೈಲಿ, ಆಹಾರ ಕ್ರಮವೇ ಇದಕ್ಕೆ ಮುಖ್ಯ ಕಾರಣ. ಆರಂಭಿಕ ಹಂತದಲ್ಲೇ ವೈದ್ಯರನ್ನು ಕಂಡು ಸರಿಯಾದ ಚಿಕಿತ್ಸೆ ಪಡೆದುಕೊಳ್ಳುವುದರಿಂದ ಸಮಸ್ಯೆ ಬಿಗಡಾಯಿಸುವುದನ್ನು ತಡೆಯಬಹುದು. ದಿನಂಪ್ರತಿ ವ್ಯಾಯಾಮ, ಯೋಗ ಮಾಡುವುದು ಅತ್ಯುತ್ತಮ ಪರಿಹಾರ.
– ಡಾ|ಸವಿತಾ,ವೈದ್ಯರು

 -ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-sdssd

Dharwad; ಚುನಾವಣೆ ಕರ್ತವ್ಯದಲ್ಲಿದ್ದ ಸೆಕ್ಟರ್ ಅಧಿಕಾರಿ ಹೃದಯಾಘಾತದಿಂದ ಸಾವು

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.