ಬಹೂಪಯೋಗಿ ಹರಳೆಣ್ಣೆ
Team Udayavani, Feb 11, 2020, 5:36 AM IST
ಬಹಳ ಹಿಂದೆ ಹರಳೆಣ್ಣೆ ಅಡುಗೆಯಿಂದ ಹಿಡಿದು ಸೌಂದರ್ಯ ಪೋಷಣೆಗೂ ಸಹ ದಿನನಿತ್ಯ ಬಳಸುತ್ತಿದ್ದರಂತೆ. ಇದು ಸಾಮಾನ್ಯ ಎಣ್ಣೆಯೆಂದು ಭಾವಿಸದೇ ಇದರಲ್ಲಿರುವ ನೈಸರ್ಗಿಕ ಗುಣಾಂಶಗಳನ್ನು ಈ ಲೇಖನದಿಂದ ನೀವು ತಿಳಿಯಬಹುದಾಗಿದೆ.
ಏನಿದು ಹರಳೆಣ್ಣೆ?
ಹರಳೆ ಬೀಜವನ್ನು ಹುರಿದು ಅದರಿಂದ ತಯಾರಾಗುವ ಎಣ್ಣೆಯಾಗಿದೆ. ಸಾಮಾನ್ಯವಾಗಿ ರಾಸಾಯನಿಕ ವಿಧಾನದಿಂದಲೂ ಇದನ್ನು ತಯಾರಿಸಲು ಸಾಧ್ಯವಿದ್ದು ಆರೋಗ್ಯದ ದೃಷ್ಟಿಯಿಂದ ನೈಸರ್ಗಿಕ ವಿಧಾನ ಸೂಕ್ತವೆನ್ನ ಬಹುದು.
ತ್ವಚೆಯ ಅಂದವನ್ನು ಹೆಚ್ಚಿಸಲು
ಇದರಲ್ಲಿನ ಅಂಡಿ ಸೈಲೆನಿಕ್ ಆಮ್ಲ ತ್ವಚೆಯ ತೊಂದರೆಗಳನ್ನು ಸರಿಪಡಿಸಿ ಹೊಳಪುಳ್ಳ, ಕಲೆಯಿಲ್ಲದ ತ್ವಚೆಯನ್ನು ನಿಮ್ಮದಾಗಿಸಬಹುದು. ಬ್ಯಾಕ್ಟಿರಿಯಾ ಮತ್ತು ಶಿಲೀಂಧ್ರ ನಿವಾರಕ ಗುಣವು ತ್ವಚೆಯ ಸುಕ್ಕನ್ನು ನಿವಾರಿಸುತ್ತದೆ. ಮೂಳೆ ಸಮಸ್ಯೆ ನಿವಾರಿಸಲು ಓಲಿಕ್, ಲಿನೋಲಿಕ್, ರಿಸಿನೋಲಿಕ್ ಆಮ್ಲವು ಮೂಳೆ ಸಮಸ್ಯೆ, ಸಂಧಿವಾತ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ಹರಳೆಣ್ಣೆಯನ್ನು ಕೊಂಚ ಬಿಸಿ ಮಾಡಿ ನೋವು ಉಂಟಾದ ಭಾಗಕ್ಕೆ ನಿಧಾನವಾಗಿ ಮಸಾಜ್ ಮಾಡಿಕೊಳ್ಳಬೇಕು. ಬಳಿಕ ಉಗುರು ಬೆಚ್ಚನೆಯ ನೀರಿನಲ್ಲಿ ತೊಳೆಯು ವುದು ಇಲ್ಲವೇ ಸ್ನಾನ ಮಾಡುವುದರಿಂದ ಸಮಸ್ಯೆ ನಿವಾರಿಸಲು ಸಾಧ್ಯವಿದೆ.
ಸೊಂಪಾದ ಕೇಶಕ್ಕೂ ಬೇಕು
ಯಾರಾದರೂ ಹಿರಿಯರಲ್ಲಿ ಒಮ್ಮೆ ಅವರ ಕಾಲದ ಕೇಶ ಕಾಂತಿಗೆ ಏನು ಬಳಕೆ ಮಾಡುತ್ತಿದ್ದರು ಎಂದು ಕೇಳಿದರೆ ಬರುವ ಉತ್ತರ ಹರಳೆಣ್ಣೆಯೆಂದು. ತಲೆ ಕೂದಲ ಬೇರಿಗೆ ತಾಕುವವರೆಗೂ ಎಣ್ಣೆ ಮಸಾಜ್ ಮಾಡಿ ಅರ್ಧಗಂಟೆಯ ಬಳಿಕ ತಲೆಕೂದಲನ್ನು ತೊಳೆಯಬೇಕು. ಇದರಲ್ಲಿ ಅಂಟಿನ ಗುಣವಿರುವುದರಿಂದ ತೊಳೆಯುವುದು ಕಷ್ಟವಾದರೂ ಕೂದಲ ಆರೈಕೆಗೆ ಇದೊಂದು ಉತ್ತಮ ವಿಧಾನವೆನ್ನಬಹುದು. ಇದರಿಂದ ಕೂದಲು ಉದುರುವಿಕೆ ಸಮಸ್ಯೆ ನಿವಾರಣೆಯಾಗುವುದಲ್ಲದೆ ಸಿಲ್ಕಿ ಸೊಂಪಾದ ಕೂದಲು ನಿಮ್ಮದಾಗುತ್ತದೆ.
ಮಲಬದ್ಧತೆ ನಿವಾರಿಸಲು
ಇದನ್ನು ಕುಡಿಯುವುದರಿಂದ ಹೊಟ್ಟೆಯಲ್ಲಿರುವ ಕಲ್ಮಶವನ್ನು ದೂರಮಾಡಿ ಉತ್ತಮ ಜೀರ್ಣಕ್ರಿಯೆ ಪ್ರಾಪ್ತಿಯಾಗುತ್ತದೆ. ಇಂದು ಮಲಬದ್ಧತೆ ಸಮಸ್ಯೆ ಕಾಡಿದಾಗ ಇಂಗ್ಲಿಷ್ ಮೆಡಿಸಿನ್ ಮೊರೆಹೋಗುತ್ತಿದ್ದಾರೆ.ಬದಲಿಗೆ ಹರಳೆಣ್ಣೆಯ ನೈಸರ್ಗಿಕ ಗುಣದಿಂದಲೂ ಈ ಸಮಸ್ಯೆ ನಿವಾರಣೆ ಸಾಧ್ಯವಿದ್ದು ಒಮ್ಮೆ ಈ ಕುರಿತು ಚಿಂತಿಸಬೇಕಾಗಿದೆ.
- ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ