ಸಕ್ಕರೆ ತ್ಯಜಿಸಿ ದೇಹದಲ್ಲಿ ಬದಲಾವಣೆ ಕಾಣಿ


Team Udayavani, Jul 23, 2019, 5:32 AM IST

i-37

ಇತ್ತೀಚೆಗೆ ಎಲ್ಲರು ಸಕ್ಕರೆಯನ್ನು ದ್ವೇಷಿಸಲಾರಂಭಿಸಿದ್ದಾರೆ. ಹೌದು ಸಕ್ಕರೆ ದೇಹ ತೂಕ ಇಳಿಕೆಯ ಯೋಜನೆಯನ್ನು ಹಾಳುಗೆಡವುತ್ತದೆ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ತರುತ್ತದೆ ಎಂಬ ಕಾರಣಕ್ಕೆ ಸಕ್ಕರೆಯನ್ನು ದ್ವೇಷಿಸುವವರು ಹೆಚ್ಚು. ಡಯಟ್ ಯೋಜನೆಗೆ ಸಕ್ಕರೆ ಬಹುದೊಡ್ಡ ದುಷ್ಟ. ಆದರೆ ಸಿಹಿ ಪದಾರ್ಥಗಳನ್ನು ನೋಡಿದಾಕ್ಷಣ ಅದನ್ನು ತಿನ್ನಬೇಕೆಂಬ ಆಸೆ ಹುಟ್ಟುವುದು ಸಹಜ. ಸಕ್ಕರೆ ಬಳಕೆಯನ್ನು ನಿಲ್ಲಿಸುವುದರಿಂದ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ಅವು ಯಾವ ಬದಲಾವಣೆ ಎಂಬ ಮಾಹಿತಿ ಇಲ್ಲಿದೆ.

ತೂಕ ಇಳಿಕೆ
ವರದಿಗಳ ಪ್ರಕಾರ ಸಕ್ಕರೆಯನ್ನು ತ್ಯಜಿಸಿದರೆ ಗ್ಲೂಕೋಸ್‌ ಇಲ್ಲದಿರುವ ಕಾರಣ ದೇಹ ಕೊಬ್ಬಿನಿಂದ ಕೀಟೋನ್‌ ಶಕ್ತಿಯನ್ನು ಉತ್ಪಾದಿಸಲು ಆರಂಭಿಸುತ್ತದೆ. ಇದು ಕೊಬ್ಬನ್ನು ಕರಗಿಸುವ ಲಕ್ಷಣ. ಒಂದು ವೇಳೆ ಕೀಟೋ ಜ್ವರ ಅಂದರೆ ತಲೆನೋವು, ವಿವರಿಸಲಾಗದ ಸುಸ್ತು ಹಾಗೂ ಸೆಳೆತಗಳಿಂದ ಕೂಡಿರುವ ಜ್ವರವನ್ನು ಹೊಂದಿದ್ದರೆ ಒಂದು ವಾರದೊಳಗೆ ರೋಗಲಕ್ಷಣಗಳು ಕಡಿಮೆಯಾಗುತ್ತದೆ. ಕೀಟೋದ ಅಡ್ಡಪರಿಣಾಮ ಹಾಗೂ ಈ ಡಯಟ್ ಸೂಕ್ತವೆ ಎಂಬುದನ್ನು ಪೌಷ್ಟಿಕತಜ್ಞರಲ್ಲಿ ಕೇಳಿ ಅನುಸರಿಸುವುದು ಉತ್ತಮ.

ಆರೋಗ್ಯಕರ ಹೃದಯ
ಸಕ್ಕರೆಯನ್ನು ಸೇವಿಸಿದಾಗ ಇನ್ಸುಲಿನ್‌ ಮಟ್ಟ ಹೆಚ್ಚುತ್ತದೆ. ಇದು ನರಮಂಡಲವನ್ನು ಉತ್ತೇಜಿಸುತ್ತದೆ. ಹೀಗಾಗಿ ಹೃದಯ ಬಡಿತ ಮತ್ತು ರಕ್ತದೊತ್ತಡ ಹೆಚ್ಚುತ್ತದೆ. ಒಂದು ವೇಳೆ ಸಕ್ಕರೆಯನ್ನು ತ್ಯಜಿಸಿದಾಗ ಒಂದು ವಾರದಲ್ಲಿ ರಕ್ತದೊತ್ತಡ ಸ್ಥಿರವಾಗುತ್ತದೆ ಹಾಗೂ ದೇಹದಲ್ಲಿರುವ ಕೆಟ್ಟ ಕೊಬ್ಬು ಕಡಿಮೆಯಾಗುತ್ತದೆ.

ಮಧುಮೇಹ ನಿಯಂತ್ರಣ
ಎಲ್ಲ ಮಧುಮೇಹಿಗಳಿಗೆ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೇಗೆ ಕಡಿಮೆಗೊಳಿಸುವುದೆಂಬ ಚಿಂತೆ. ಸಕ್ಕರೆ ಪ್ರಮಾಣ ಕುಗ್ಗಿಸಿದಲ್ಲಿ ದೇಹದಲ್ಲಿನ ಇನ್ಸುಲಿನ್‌ ಉತ್ಪಾದನೆ ನಿಷ್ಕ್ರಿಯಗೊಳ್ಳುತ್ತದೆ ಎಂದು ಹೇಳುತ್ತಾರೆ. ಆಹಾರ ಸೇವನೆಯಲ್ಲಿ ಸಕ್ಕರೆಯನ್ನು ಬಿಟ್ಟು ಆರೋಗ್ಯಕರ ಆಯ್ಕೆಯನ್ನು ಸೇರಿಸಿದಾಗ ದೇಹದಲ್ಲಿ ಕೊಬ್ಬು ಕಡಿಮೆಯಾಗುವುದು ಮಾತ್ರವಲ್ಲದೆ ರಕ್ತದಲ್ಲಿನ ಇನ್ಸುಲಿನ್‌ ಮಟ್ಟ ಆರೋಗ್ಯಕರವಾಗಿರುವುದು.
ಹೊಳೆಯುವ ಚರ್ಮ
ಸಕ್ಕರೆ ಕೇವಲ ತೂಕ, ಮಧುಮೇಹ ಮತ್ತು ಇತರ ಜೀವನಶೈಲಿಯನ್ನು ಕೆಡಿಸುವುದು ಮಾತ್ರವಲ್ಲದೇ ಮೊಡವೆಗಳನ್ನು ಪ್ರಚೋದಿಸುತ್ತದೆ.ವಾಸ್ತವವಾಗಿ ಅಮೆರಿಕದ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್‌ ನಡೆಸಿದ ಅಧ್ಯಯನವು ಸಕ್ಕರೆ ತುಂಬಿರುವ ಸೋಡಾ, ಸಾಫ್ಟ್ ಡ್ರಿಂಕ್ಸ್‌ಗಳನ್ನು ತ್ಯಜಿಸಿದ ಮಹಿಳೆಯರು ಉತ್ತಮ ಚರ್ಮವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಉತ್ತಮ ಮನಸ್ಥಿತಿ
ಕೊಲಂಬಿಯಾ ವಿಶ್ವವಿದ್ಯಾನಿಲಯ ನಡೆಸಿದ ಅಧ್ಯಯನದಲ್ಲಿ ಅಧಿಕ ಸಕ್ಕರೆಯುಳ್ಳ ಆಹಾರವನ್ನು ಸೇವಿಸುವ ಮಹಿಳೆಯರಲ್ಲಿ ಕಿರಿಕಿರಿ ಮತ್ತು ಆತಂಕಗಳು ಹೆಚ್ಚಿರುತ್ತವೆ ಎಂದು ತಿಳಿದು ಬಂದಿದೆ. ಸಕ್ಕರೆಯನ್ನು ತ್ಯಜಿಸಿದ್ದಲ್ಲಿ ಉತ್ತಮ ಮನಃಸ್ಥಿತಿ ಹೊಂದಲು ಸಾಧ್ಯ.

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.