ಆತಂಕ ನಿವಾರಣೆಗೆ ಸೆಲ್ಫ್  ಹಿಪ್ನಾಟಿಸಂ


Team Udayavani, Jan 14, 2020, 5:30 AM IST

j-5

ಭಯ ಯಾರಿಗೆ ತಾನೆ ಇರುವುದಿಲ್ಲ. ಕೆಲಸಕ್ಕೆ ತೆರಳುವಾಗ, ಪರೀಕ್ಷೆ ಬರೆಯುವಾಗ, ಕೆಲಸದ ಗಡುವು ಸಮೀಪಿಸಿದಾಗ, ಒತ್ತಡ ಸನ್ನಿವೇಶ ಇದ್ದಾಗ ಮನುಷ್ಯನಿಗೆ ಸಾಮಾನ್ಯವಾಗಿ ಭಯ ಕಾಡುತ್ತದೆ. ಆತಂಕ ಅಥವಾ ಭಯ ಸಾಮಾನ್ಯವಾಗಿ ಮಾನವರಲ್ಲಿ ಪ್ರಭಾವ ಬೀರುತ್ತದೆ. ಭಯವು ಯೋಚನೆಗಳ, ಭಾವನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ಇತ್ತೀಚಿನ ದಿನಗಳಲ್ಲಿ ಭಯ ಎನ್ನುವುದು ಒಂದು ಖಾಯಿಲೆಯಾಗಿ ಮಾರ್ಪಟ್ಟಿದೆ. ಅದರಲ್ಲೂ ಇಂದಿನ ಕಾಲದ ಆಧುನಿಕ ಕಾಲಘಟ್ಟದಲ್ಲಿ ನಮ್ಮ ಜೀವನಶೈಲಿಯು ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಕೆಲವರಿಗೆ ಆತಂಕವೇ ದೊಡ್ಡ ಖಾಯಿಲೆಯಾಗಿ ಪರಿಣಮಿಸುತ್ತದೆ. ಕೆಲವೊಮ್ಮೆ ಕೆಟ್ಟ ಕನಸುಗಳು ಭಯಕ್ಕೆ ಕಾರಣವಾಗಬಹುದು. ಕನಸಿನ ಕಲ್ಪನೆಯಲ್ಲಿ ಭ್ರಮೆಗಳು ಈಗಲೂ ಕಣ್ಣ ಮುಂದೆ ಆ ಘಟನೆ ನಡೆಯುತ್ತಿದೆಯೋ ಎಂಬಂತಿನ ಭಯ ಇರಬಹುದು.

ಅಸಂಭವನೀಯ ವಿಚಾರವು ನಮ್ಮ ಮನಸ್ಸಿನ ಒಳಹೊಕ್ಕಾಗ ನಮ್ಮ ಕಲ್ಪನೆಗೆ ಅನುಗುಣವಾಗಿ ನಾವು ಯೋಚಿಸಲಾರಂಭಿಸುತ್ತೇವೆ.

ಆ ಸನ್ನಿವೇಶಗಳು ಭಯ ಸೃಷ್ಟಿಸುತ್ತದೆ. ಆದರೆ ಈ ಸನ್ನಿವೇಶಗಳು ಕಲ್ಪನೆಯೇ ಆಗಿರಬಹುದು. ನಾವು ಇದನ್ನು ಭಯದ ದೃಷ್ಠಿಕೋನದಲ್ಲಿ ನೋಡಲು ಆರಂಭಿಸುತ್ತೇವೆ. ಭಯವು ಎಚ್ಚರಿಕೆಯ ಸಂಕೇತವಾಗಿ ವರ್ತಿಸುತ್ತದೆ.

ಭಯ ಎಂದಾಗ ಮನುಷ್ಯನ ಮನಸ್ಸು ಶೂನ್ಯವಾಗುತ್ತದೆ. ಆ ವೇಳೆ ಮನಸ್ಸಿನಲ್ಲಿ ಯಾವುದೇ ವಿಚಾರ, ಆಲೋಚನೆಗಳು ಹೊಳೆಯುವುದಿಲ್ಲ. ಒಬ್ಬೊಬ್ಬರಿಗೆ ಒಂದೊಂದು ವಿಚಾರದಲ್ಲಿ ಭಯ ಇರಬಹುದು. ಮನಸ್ಸಿನ ಶುದ್ಧೀಕರಣವೇ ಇದಕ್ಕೆಲ್ಲ ಮದ್ದು. ಮನಸ್ಸಿನಲ್ಲಿ ಏನೇನೋ ಯೋಚನೆಗಳನ್ನು ಮಾಡಿ ಇಲ್ಲ ಸಲ್ಲದ ಭಯ ಪಡುವವರೂ ಅನೇಕ ಮಂದಿ ಇದ್ದಾರೆ. ಹೀಗಿರುವಾಗ ನಮಗೆ ಯಾವ ವಿಷಯದ ಬಗ್ಗೆ ಭಯ ಎನ್ನುವುದನ್ನು ತಿಳಿದು ಅದನ್ನು ಆತ್ಮೀಯರೊಡನೆ ಚರ್ಚೆ ಮಾಡುವುದು ಉತ್ತಮ.

ಕೆಲವೊಬ್ಬರಿಗೆ ಮೂಢನಂಬಿಕೆಗಳ ಬಗ್ಗೆ ಯಾವುದೇ ನಂಬಿಕೆ ಇಲ್ಲದಿದ್ದರೂ, ಅಕಸ್ಮಾತ್‌ ಅದು ನಡೆದು ಹೋದ ಬಳಿಕ ಭಯ ಆರಂಭವಾಗುತ್ತದೆ. ಈ ವೇಳೆ ಸಕಾರಾತ್ಮಕ ದೃಷ್ಟಿಕೋನವನ್ನು ನಾವು ಬೆಳೆಸಿಕೊಳ್ಳಬೇಕು. ಯಾವುದೇ ನಿರ್ಣಯಗಳನ್ನು ಕೈಗೊಳ್ಳುವಾಗ ಯೋಚಿಸಿ ಅನುಷ್ಠಾನಕ್ಕೆ ತರಬೇಕು. ಭಯ ನಿವಾರಿಸುವುದಕ್ಕೆ ಪ್ರಯತ್ನಿಸಿ ತಜ್ಞ ವೈದ್ಯರನ್ನು ಭೇಟಿಯಾಗಬಹುದು.

ಭಯದಿಂದ ಕೆಲವೊಂದು ಬಾರಿ ನಮ್ಮ ವ್ಯಕ್ತಿತ್ವದ ಮೇಲೆ ಪೆಟ್ಟು ಬೀಳಬಹುದು. ಭಯವನ್ನು ಮಾನಸಿಕ ಚಿಕಿತ್ಸೆಯಿಂದ ನಿವಾರಿಸಲು ಸಾಧ್ಯವಿದೆ. ಮನಶಾಸ್ತ್ರಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಬಹುದು. ಭಯ ಎಂಬ ಖಾಯಿಲೆಗೆ ಒಳಗಾಗಿದ್ದರೆ ಮನುಷ್ಯನು ತನ್ನ ಚಿಂತನ ಲಹರಿಯನ್ನು ಬದಲಾಯಿಸಲು ಪ್ರಯತ್ನಿಸಬೇಕು.

ಭಯದ ಲಕ್ಷಣಗಳೇನು?
ಭಯ ಎಂದರೆ ಮನುಷ್ಯನಲ್ಲಿ ಕೆಲವೊಂದು ಬದಲಾವಣೆಗಳಾಗುತ್ತದೆ. ಸಾಮಾನ್ಯವಾಗಿ ಕೆಲವೊಬ್ಬರು ನಿದ್ರಾಹೀನತೆ, ಏಕಾಗ್ರತೆಯಿರದಿರುವುದು, ಬೆಚ್ಚಿ ಬೀಳುವುದು ಕೂಡ ಭಯದ ಸೂಚನೆಗಳು. ಅದರ ಜತೆಗೆ ಉಸಿರಾಟದ ವೇಗ ಹೆಚ್ಚತೊಡಗುತ್ತದೆ. ತಲೆ ತಿರುಗಿದಂತಾಗುತ್ತದೆ. ಬಾಯಿ ಒಣಗುತ್ತದೆ. ಹೃದಯ ಬಡಿತ ಹೆಚ್ಚಾಗುತ್ತದೆ. ಅತಿಸಾರ, ಭೇದಿಯೂ ಕಾಣಿಸಿಕೊಳ್ಳಬಹುದು.

ಭಯ ಎಂದಾಗ ತೀವ್ರವಾಗಿ ಬೆವರುವುದನ್ನು ನೋಡುತ್ತೇವೆ. ಗಂಟಲಿನಲ್ಲಿ ಏನೋ ಸಿಕ್ಕಂತೆ ಆಗಿ ಎಂಜಲು ನುಂಗಲು ಕಷ್ಟವಾಗುತ್ತದೆ. ಮಾತು ತೊದಲುತ್ತದೆ. ಇಲ್ಲ ಸಲ್ಲದ ವಿಚಾರಗಳು ಮನಸ್ಸಿಗೆ ಸುಳಿಯಲಾರಂಭಿಸುತ್ತದೆ. ಸಣ್ಣ ಪುಟ್ಟ ವಿಚಾರಕ್ಕೆ ಕೋಪ ಬರುತ್ತದೆ. ಕೈ-ಕಾಲಿನಲ್ಲಿ ನಿಶಕ್ತಿ ಉಂಟಾಗುತ್ತದೆ. ಮಾತು ತೊದಲುತ್ತದೆ. ಈ ಎಲ್ಲ ಲಕ್ಷಣಗಳು ಮನುಷ್ಯನಲ್ಲಿ ತೀವ್ರ ಭಯವಾದಾಗ ಕಾಣಿಸಿಕೊಳ್ಳುತ್ತದೆ.

ಸೆಲ್ಫ್ ಹಿಪ್ನಾಟಿಸಂ ಪರಿಹಾರ
ನಮಗೆ ನಾವೇ ಧೈರ್ಯ ಹೇಳುವುದಕ್ಕೆ ಸೆಲ್ಫ್ ಹಿಪ್ನಾಟಿಸಂ ಎಂದು ಹೇಳಬಹುದು.
ನಾಳೆಯ ಬಗ್ಗೆ ಕೆಲವರು ಇಂದೇ ಭಯ ಬಿದ್ದು ತಮ್ಮ ಜೀವನವನ್ನು ಹಾಳುಗೆಡುವವರಿದ್ದಾರೆ. ಹೀಗಿರುವಾಗ ಯಾರಿಗೂ ಅಂಜಬೇಕಿಲ್ಲ ಎಂದು ಮನಸ್ಸಿನಲ್ಲಿಯೇ ನಮಗೆ ನಾವೇ ಧೈರ್ಯ ಹೇಳಬೇಕು. ಆ ಸಮಯ ಯಾವುದಕ್ಕೂ ಭಯ ಪಡದೆ ಗುರಿ ತಲುಪಲು ಸಾಧ್ಯವಿದೆ.

ವಯೋಮಾನಕ್ಕೆ ತಕ್ಕಂತೆ ಭಯ
ಇತ್ತೀಚಿನ ದಿನಗಳಲ್ಲಿ ಭಯ ಎನ್ನುವುದು ಒಂದು ಸಾಮಾನ್ಯ ಖಾಯಿಲೆ ಯಾಗಿದೆ. ಮಕ್ಕಳಿಗೆ, ಯುವಕರಿಗೆ ಸೇರಿದಂತೆ ಬೇರೆ ಬೇರೆ ವಯೋಮಾನಕ್ಕೆ ತಕ್ಕಂತೆ ಭಯ ಇರಬಹುದು. ಮನುಷ್ಯನಿಗೆ ತನ್ನಲ್ಲೇ ಧೈರ್ಯ ಇದ್ದಾಗ ಯಾವುದೇ ಭಯ ಸುಳಿಯುವುದಿಲ್ಲ. ಭಯ ಎನ್ನುವುದು ಖಾಯಿಲೆಯಾದಾಗ ವೈದ್ಯರನ್ನು ಸಂಪರ್ಕಿಸಬೇಕು.
– ಡಾ| ಸುಭೋದ್‌ ಭಂಡಾರಿ, ವೈದ್ಯರು

– ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.