ನಯವಾದ ತುಟಿ ಹೊಂದಲು ಸರಳ ಮಾರ್ಗ


Team Udayavani, Dec 17, 2019, 5:55 AM IST

LIP

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ ಹೆಚ್ಚಿನವರಲ್ಲಿ ಕಾಡುವ ಸಮಸ್ಯೆಯೆಂದರೆ ಪಾದ, ತುಟಿ ಒಡೆಯುವುದು ಮತ್ತು ಚರ್ಮ ಸುಕ್ಕುಗಟ್ಟಿದಂತೆ ತಡೆಯುವುದು ಹೇಗೆ ಎನ್ನುವುದು. ಹೇಳಿ ಕೇಳಿ ಹುಡುಗಿಯರಿಗೆ ಚರ್ಮ, ತುಟಿಗಳ ಮೇಲೆ ಅತಿಯಾದ ಕಾಳಜಿ ಇರುವುದರಿಂದ ಅವುಗಳ ಸಂರಕ್ಷಣೆ ತಲೆ ನೋವಾಗಿ ಬಿಡುತ್ತದೆ. ಅದು ಕೂಡ ಚಳಿಗಾಲದಲ್ಲಿ ಕೊಂಚ ಹೆಚ್ಚಾಗಿಯೇ ತುಟಿಗಳು ಒಡೆಯುವ ಕಾರಣದಿಂದ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಹಾಗಾಗಿ ಮನೆ ಮದ್ದಿನಿಂದ ತುಟಿಗಳನ್ನು ಹೇಗೆ ಸಂರಕ್ಷಿಸುವುದು ಮತ್ತು ಚಳಿಗಾಲದಲ್ಲಿಯೂ ಹೇಗೆ ಅಧರಗಳ ಅಂದವನ್ನು ಹೆಚ್ಚಿಸುವುದು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

1 ತುಪ್ಪದಲ್ಲಿ ಅಡಗಿದೆ
ಅಧರಗಳ ಪೋಷಣೆ
ನಯವಾದ ತುಟಿಗಳನ್ನು ಪಡೆಯಬೇಕೆಂಬ ಆಸೆ ನಿಮಗಿದ್ದರೆ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ತುಪ್ಪವನ್ನು ತುಟಿಗಳಿಗೆ ಹಚ್ಚಿಕೊಂಡು ಐದರಿಂದ ಹತ್ತು ನಿಮಿಷ ಬಿಡಬೇಕು. ಇದರಲ್ಲಿ ಇರುವಂತಹ ಮೊಶ್ಚರೈಸರ್‌ ಗುಣಗಳು ಗಡಸು ಮತ್ತು ಒಡೆದ ತುಟಿಗಳ ಸಮಸ್ಯೆಯನ್ನು ನಿವಾರಣೆ ಮಾಡುತ್ತವೆ.
2 ಹರಳು ಸಕ್ಕರೆಯಿಂದ
ಒಣಗಿದ ತುಟಿಗಳಿಗೆ ಸತ್ವ
ಹರಳು ಸಕ್ಕರೆಗೆ ತುಟಿಗಳನ್ನು ಮೃದುವಾಗಿಸುವ ಶಕ್ತಿ ಇದ್ದು, ಒಣಗಿದಂತೆ ಕಾಣುವ ತುಟಿಗಳಿಗೆ ಸತ್ವವನ್ನು ತುಂಬುತ್ತದೆ. ಹಾಗಾಗಿ ಅರ್ಧ ಟೀ ಚಮಚದಷ್ಟು ಹರಳು ಸಕ್ಕರೆಗೆ ಒಂದು ಚಮಚದಷ್ಟು ರೋಸ್‌ ವಾಟರ್‌ ಹಾಕಿ ಈ ಮಿಶ್ರಣವನ್ನು ತುಟಿಗಳಿಗೆ ಹಚ್ಚಿಕೊಂಡು ಕೆಲವು ನಿಮಿಷ ಬಳಿಕ ನೀರಿನಿಂದ ತೊಳೆಯಿರಿ. ದಿನದಲ್ಲಿ 3-4 ಸಲ ಹೀಗೆ ಮಾಡುವುದರಿಂದ ತುಟಿಗಳು ಮೃದುವಾಗುತ್ತವೆ.
3 ದಾಳಿಂಬೆ ರಸ
ದಾಳಿಂಬೆ ತುಂಬಾ ಆರೋಗ್ಯಕಾರಿ ಎಂದು ಎಲ್ಲರಿಗೂ ತಿಳಿದಿದೆ. ಇದರ ರಸವನ್ನು ಹಚ್ಚಿಕೊಳ್ಳುವುದರಿಂದ ತುಟಿಗಳ ಆರೋಗ್ಯ ಉತ್ತಮವಾಗುವುದರೊಂದಿಗೆ ಅದರಲ್ಲಿರುವ ಮೊಶ್ಚರೈಸರ್‌ ಗುಣ ನೈಸರ್ಗಿಕವಾಗಿ ತುಟಿಯನ್ನು ಮೃದುವಾಗಿಡುತ್ತದೆ. ಜತೆಗೆ ತುಟಿ ಗುಲಾಬಿ ಬಣ್ಣ ಪಡೆಯುತ್ತದೆ. ಹಾಗಾಗಿ ದಾಳಿಂಬೆ ರಸವನ್ನು ಹತ್ತಿ ಉಂಡೆಯನ್ನು ಅದ್ದಿಕೊಂಡು ಅದನ್ನು ತುಟಿಗಳಿಗೆ ಹಚ್ಚಿ. ಅರ್ಧ ಗಂಟೆ ಕಾಲ ಅದನ್ನು ಹಾಗೇ ಬಿಟ್ಟು ಬಳಿಕ ತಣ್ಣನೆ ನೀರಿನಿಂದ ತೊಳೆಯಿರಿ. ದಿನದಲ್ಲಿ ಒಂದು ಸಲ ಹೀಗೆ ಮಾಡಿದರೆ ಸುಂದರ ತುಟಿಗಳು ನಿಮ್ಮದಾಗುವುವು.
3 ತಣ್ಣಗಿನ ಹಾಲಿನಿಂದ ತುಟಿಗಳಿಗೆ ಪೋಷಕಾಂಶ
ತಣ್ಣಗಿನ ಹಾಲನ್ನು ತುಟಿಗಳಿಗೆ ಲೇಪಿಸಿ 15 ನಿಮಿಷ ಕಾಲ ಬಿಟ್ಟು ತಣ್ಣನೆಯ ನೀರಿನಿಂದ ತೊಳೆಯಬೇಕು. ಹೀಗೆ ಮಾಡುವುದರಿಂದ ಗಡುಸಾಗಿರುವ ತುಟಿಗಳು ಮೃದುವಾಗುತ್ತವೆ. ಜತೆಗೆ ಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ತುಟಿಯನ್ನು ಸುಂದರವಾಗಿಡುತ್ತವೆ. ಹಾಗಾಗಿ ತುಟಿಗಳು ಗಡುಸಾಗದಂತೆ ತಡೆಯಲು ನೀವು ಪ್ರತಿದಿನ ಈ ಮಾರ್ಗವನ್ನು ಪಾಲಿಸಬಹುದು.
4 ಬೀಟ್ರೂಟ್‌
ತುಟಿಗಳ ಆರೈಕೆ ಮಾಡುವಂತಹ ನೈಸರ್ಗಿಕ ವಸ್ತುಗಳಲ್ಲಿ ಬೀಟ್‌ರೂಟ್‌ ತುಂಬಾ ಪರಿಣಾಮಕಾರಿ. ಗಡಸು ತುಟಿಗಳಿಗೆ ಇದು ತುಂಬಾ ಉಪಯುಕ್ತ. ಒಂದು ತುಂಡು ಬೀಟ್ರೂಟ್‌ ಕತ್ತರಿಸಿ ಅದನ್ನು ತುಟಿಗಳಿಗೆ ಹಚ್ಚಿಕೊಳ್ಳಿ. 5ರಿಂದ 10 ನಿಮಿಷ ಕಾಲ ಬಿಟ್ಟು ಬಳಿಕ ತಣ್ಣನೆಯ ನೀರಿನಿಂದ ತೊಳೆಯಿರಿ. ನಯವಾದ ತುಟಿಗಳನ್ನು ಪಡೆಯಬೇಕು ಎಂದಿದ್ದರೆ ದಿನದಲ್ಲಿ 2-3 ಸಲ ಹೀಗೆ ಮಾಡಿ.

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.