ಕಿವಿಗೂ ಬೇಕು ಉತ್ತಮ ಆರೈಕೆ


Team Udayavani, Apr 23, 2019, 7:56 AM IST

33

ಕಿವಿಯನ್ನು ಮೂರು ವಿಭಾಗಗಳಾಗಿ ವಿಂಗಡಿ ಸಲಾಗಿದೆ. ಹೊರ, ಮಧ್ಯ ಮತ್ತು ಒಳಗಿನ ಭಾಗ. ಈ ಮೂರು ಭಾಗಗಳು ಶಬ್ಧ ಕೇಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ದೇಹದ ಉಳಿದ ಭಾಗಗಳಿಗೆ ನೀಡುವಷ್ಟು ಕಾಳಜಿ ಕಿವಿಯ ಮೇಲೆ ಯಾರೂ ನೀಡುವುದಿಲ್ಲ. ಹೀಗಾಗಿಯೇ ಹೆಚ್ಚಿನವರಿಗೆ ಕಿವಿಯ ಸಮಸ್ಯೆ ಬಹುಬೇಗನೆ ಕಾಡಲಾರಂಭಿಸುತ್ತದೆ.

ಕಿವಿ ನೋವಿನ ಬಗ್ಗೆ ಇರಲಿ ಎಚ್ಚರ
ಕಿವಿ ನೋವಿಗೆ ದೀರ್ಘ‌ ಮತ್ತು ಅಲ್ಪಕಾಲದ ಕಿವಿ ಸೋಂಕು, ದವಡೆಯ ಸಂಧಿವಾತ, ಕಿವಿಯ ಮೇಣ, ಏನಾದರೂ ಸಿಕ್ಕಿ ಹಾಕಿಕೊಂಡಿರುವುದು, ಗಾಯ, ತಮಟೆಯಲ್ಲಿ ತೂತು, ನೋಯುತ್ತಿರುವ ಗಂಟಲು ಮತ್ತು ಸೈನಸ್‌ ಸೋಂಕು ಕಾರಣವಾಗಿರುತ್ತದೆ. ಸಣ್ಣ ನೋವಿದ್ದರೆ ಮನೆ ಮದ್ದು ಸಾಕಾಗುತ್ತದೆ. ಒಂದು ವೇಳೆ ನೋವು ತೀವ್ರವಾದರೆ ವೈದ್ಯರನ್ನು ಕಾಣುವುದು ಅಗತ್ಯ. ಕಿವಿ ನೋವು ತೀವ್ರವಾದಾಗ ಬಾಹ್ಯ ಕಿವಿ ಕಾಲುವೆಯಲ್ಲಿ ನೋವು, ತುರಿಸುವಿಕೆ, ಝೇಂಕರಿಸುವ ಶಬ್ಧ, ಊದಿಕೊಂಡ ಕಿವಿ, ಕೇಳಿಸದೇ ಇರುವುದು, ವಿಯಿಂದ ದ್ರವ ವಿಸರ್ಜನೆ ಇತ್ಯಾದಿ ಲಕ್ಷಣಗಳು ಕಂಡುಬರುತ್ತದೆ.

ಮನೆ ಮದ್ದು
ಮಾನ್ಯವಾದ ಕಿವಿನೋವನ್ನು ಮನೆ ಮದ್ದಿನ ಮೂಲಕ ನಿಯಂತ್ರಿಸಬಹುದು. ಮುಖ್ಯವಾಗಿ ನೋವಿರುವ ಕಿವಿಗೆ ಬಿಸಿ ನೀರಿನ ಬಾಟಲ್ ಅಥವಾ ಪ್ಯಾಡ್‌ನಿಂದ ಕಿವಿಯ ಮೇಲೆ ಒತ್ತಿ ಹಿಡಿಯುವುದು, ಬಿಸಿ ನೀರಿನಲ್ಲಿ ಸ್ವಚ್ಛವಾದ ಬಟ್ಟೆಯನ್ನು ಮುಳುಗಿಸಿ ನೀರನ್ನು ಹಿಂಡಿ ಆ ಬಟ್ಟೆಯನ್ನು ಕಿವಿಯ ಮೇಲಿರಿಸಬಹುದು. ಬೆಳ್ಳುಳ್ಳಿ ರಸದ ಒಂದೆರಡು ಹನಿಯನ್ನು ನೋವಿರುವ ಕಿವಿಗೆ ಹಾಕುವುದು. ಈರುಳ್ಳಿಯನ್ನು ಕತ್ತರಿಸಿ ಸ್ವಲ್ಪ ಬಿಸಿ ಮಾಡಿ ತಣ್ಣಗಾದ ಬಳಿಕ ಅದರ ರಸ ತೆಗೆದು ಒಂದೆರಡು ಹನಿ ಕಿವಿಗೆ ಬಿಡಬಹುದು. ಉಪ್ಪನ್ನು ಸ್ವಲ್ಪ ಬಿಸಿ ಮಾಡಿ ದಪ್ಪನೆಯ ಕಾಲು ಚೀಲದಲ್ಲಿ ಹಾಕಿ ನೋವಿರುವ ಕಿವಿಯ ಅಡಿಯಲ್ಲಿ 8- 10 ಬಾರಿ ಇಡುವುದರಿಂದಲೂ ಕಿವಿನೋವು ಶಮನವಾಗುವುದು.

ಮಾವಿನ ಎಲೆಯನ್ನು ಜಜ್ಜಿ ರಸ ತೆಗೆದು ಬಿಸಿ ಮಾಡಿ 3- 4 ಹನಿ ಕಿವಿಗೆ ಹಾಕುವುದರಿಂದ ನೋವು ನಿವಾರಣೆ ಸಾಧ್ಯವಿದೆ. ಈ ಎಲ್ಲ ಕ್ರಮಗಳನ್ನು ಅನುಸರಿಸುವ ಮುಂಚೆ ವೈದ್ಯರ ಸಲಹೆ ಪಡೆದುಕೊಳ್ಳುವುದು ಬಹುಮುಖ್ಯ.

ಆಲಿಸಲು ಪ್ರಮುಖ ಸಾಧನವಾದ ಕಿವಿ ಆರೈಕೆಯೂ ಅಗತ್ಯ. ಹೀಗಾಗಿ ಇಯರ್‌ ಫೋನ್‌ ಅಥವಾ ಹೆಡ್‌ ಫೋನ್‌ನಲ್ಲಿ ಜೋರಾಗಿ ನಿರಂತರ ಹಾಡು ಕೇಳು ವುದರಿಂದ ಕಿವಿಯ ಡ್ರಮ್‌ ಛಿದ್ರವಾಗುವ ಅಥವಾ ತಲೆನೋವು ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಅದ್ದರಿಂದ ಶಬ್ದವನ್ನು ಕಡಿಮೆ ಮಾಡಿ ಹಾಡು ಕೇಳಿ. ಇಯರ್‌ ಫೋನ್‌ಗಳ ಬಳಕೆ ಕಡಿಮೆ ಮಾಡುವುದು ಉತ್ತಮ.

ಕಿವಿಯ ಮೇಣವು ತುಂಬಾ ಲಾಭಕಾರಿ ಯಾಗಿದೆ. ಕಿವಿಯು ತನ್ನಿಂದ ತಾನೇ ಸ್ವಚ್ಛವಾಗುತ್ತಾ ಹೋಗುತ್ತದೆ. ಕಿವಿಯ ಮೇಣವನ್ನು ಸ್ವಚ್ಛ ಮಾಡಿಕೊಳ್ಳುವ ಅಗತ್ಯವೇ ಇಲ್ಲ. ಯಾಕೆಂದರೆ ಕಿವಿಗೆ ಎಷ್ಟು ಬೇಕೋ ಅಷ್ಟು ಮೇಣವನ್ನು ಮಾತ್ರ ಕಿವಿ ಉತ್ಪಾದಿಸುತ್ತದೆ. ಇದು ಅಗತ್ಯಕ್ಕಿಂತ ಹೆಚ್ಚು ಮೇಣವನ್ನು ಉತ್ಪಾದಿಸುವುದಿಲ್ಲ. ಆದರೆ ಅದನ್ನು ಬಲವಂತವಾಗಿ ತೆಗೆಯುವಾಗ ಎಚ್ಚರ ವಹಿಸಬೇಕು.

ಚೂಪಾದ ವಸ್ತುಗಳನ್ನು ಕಿವಿ ಯೊಳಗೆ ಹಾಕುವುದು ಅಪಾಯಕಾರಿ. ಇದರಿಂದ ಶಾಶ್ವತವಾಗಿ ಟೈಂಪನಿಕ್‌ ಮೆಂಬರೆನ್ಸ್‌ಗೆಹಾನಿಯಾಗ ಬಹುದು. ಚೂಪಾದ ವಸ್ತುಗಳಿಂದ ಕಿವಿಯ ಒಳಗಿನ ಭಾಗದಲ್ಲಿ ಹಾನಿಯಾಗಬಹುದು. ಇದರಿಂದ ಸೋಂಕು ಕಾಣಿಸಿ ಕೊಳ್ಳಬಹುದು. ಇಯರ್‌ ಕ್ಯಾಂಡಲಿಂಗ್‌ ಕಿವಿಯ ಮೇಣವನ್ನು ಕರಗಿಸುವಲ್ಲಿ ತುಂಬಾ ಆರೋಗ್ಯಕಾರಿ. ಇದರ ಮೂಲಕ ಕಿವಿ ಸ್ವಚ್ಛಗೊಳಿಸಬಹುದು ಎನ್ನುತ್ತದೆ ಸಂಶೋಧನೆಗಳು.

ಸಮಸ್ಯೆ ಉಲ್ಬಣಿಸುವ ಮುನ್ನ ಎಚ್ಚೆತ್ತುಕೊಳ್ಳಿ
ದೇಹದ ಎಲ್ಲ ಭಾಗಗಳಂತೆ ಕಿವಿಯ ಆರೈಕೆ ಕೂಡ ಮುಖ್ಯ. ಸಮಸ್ಯೆ ಉಲ್ಬಣಿಸುವ ಮುನ್ನ ಎಚ್ಚೆತ್ತುಕೊಳ್ಳದಿದ್ದರೇ ಶಾಶ್ವತವಾಗಿ ಕೇಳುವ ಸಾಮರ್ಥ್ಯ ಕಳೆದುಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಕಿವಿಗೆ ಚೂಪಾದ ವಸ್ತುಗಳನ್ನು ಹಾಕುದಾಗಲಿ ಮಾಡಬಾರದು. ಇದು ಕಿವಿ ತಮಟೆಯ ಸಮಸ್ಯೆಗೆ ಕಾರಣವಾಗುತ್ತದೆ.
ಡಾ| ವಿಶ್ವಾಸ್‌, ಕರಂಗಲ್ಪಾಡಿ

ವೈದ್ಯರ ಸಲಹೆ ಪಡೆಯಿರಿ
ಕಿವಿಯಲ್ಲಿ ನೋವು , ಸೋಂಕು ದೀರ್ಘ‌ಕಾಲದಿಂದ ಕಾಣಿಸಿಕೊಂಡಾಗ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯಿರಿ. ದೀರ್ಘ‌ಕಾಲದ ನೋವಿಗೆ ಶಾಶ್ವತ ಪರಿಹಾರ ಕಂಡುಕೊಳ್ಳದೆ ಇದ್ದಲ್ಲಿ ಸಮಸ್ಯೆಯಾಗಲಿದೆ.

••ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

12

B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್‌ವೈ ಗರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.