ಸಕ್ಕರೆ ಪ್ರಮಾಣ ನಿಯಂತ್ರಿಸುವ ತರಕಾರಿಗಳು


Team Udayavani, Jul 16, 2019, 5:08 AM IST

kiru-leakana-1

ಕಣ್ಣ ಮುಂದೆ ಜಾಹಂಗೀರು, ಜಿಲೇಬಿ ಕೈಬೀಸಿ ಕರೆಯುತ್ತಿದ್ದರೂ ನಾಲಗೆ ಚಪಲ ಬಿಡುತ್ತಿಲ್ಲ. ತಿನ್ನದಿದ್ದರೆ ನಾಲಿಗೆಗೆ ಮೋಸ ತಿಂದರೆ ದೇಹವೇ ಕೈಲಾಸ ಎಂದು ಮುದಿವಯಸ್ಸಿನ ಸಾಕಮ್ಮ ಮನಸ್ಸಿನಲ್ಲಿ ಅಂದುಕೊಳ್ಳುತ್ತಿದ್ದಾರೆ. ಮಧುಮೇಹ ಬಂದು ಬದುಕೇ ಕಹಿ ಅನಿಸಿದ ಅದೆಷ್ಟೋ ಮಂದಿ ಇದ್ದಾರೆ. 2015ರ ವಿಶ್ವ ಆರೋಗ್ಯ ಸಂಸ್ಥೆಯ ವರದಿಯಂತೆ ಭಾರತದಲ್ಲಿ ಶೇ.69.2 ಮಿಲಿಯನ್‌ ನಷ್ಟು ಮಂದಿ ಮಧುಮೇಹಿಗಳಿದ್ದಾರೆ. ದೇಹದ ಸಕ್ಕರೆ ಕಾಯಿಲೆಗೆ ಔಷಧಗಳು ಮಾತ್ರವೇ ಪರಿಹಾರವಾಗಿರದೇ ದಿನನಿತ್ಯದ ಆಹಾರ ಸೇವನೆಯಲ್ಲಿ ವಹಿಸುವ ಕಾಳಜಿಯು ಮುಖ್ಯ. ತರಕಾರಿಗಳ ಸೇವನೆ ಮಧುಮೇಹಿಗಳಿಗೆ ರಾಮಬಾಣವಿದ್ದಂತೆ.

ಮುಳ್ಳು ಸೌತೆ
ಅತಿ ಹೆಚ್ಚು ನೀರಿನ ಅಂಶ ಹೊಂದಿರುವ ಮುಳ್ಳು ಸೌತೆಕಾಯಿ ರಕ್ತದಲ್ಲಿ ಇನ್ಸುಲಿನ್‌ ಮಟ್ಟವನ್ನು ಸಮತೋಲನದಲ್ಲಿರಿಸುತ್ತದೆ. ರಕ್ತಪರಿಚಲನೆಗೆ ನೆರವಾಗುವ ಸೌತೆಕಾಯನ್ನು ಸಲಾಡ್‌ ಅಥವಾ ಮೊಸರಿನೊಂದಿಗೆ ಸೇವಿಸಿದರೆ ಸಕ್ಕರೆ ಕಾಯಿಲೆ ನಿಯಂತ್ರಣವಾಗುತ್ತದೆ.

ಬೆಂಡೆಕಾಯಿ
ಇದು ರಕ್ತದ ಕಾರ್ಟಿಸೋಲ್‌ ಮಟ್ಟವನ್ನು ಕಡಿಮೆ ಮಾಡಿ ದೇಹ ಸಮಸ್ಥಿತಿಯಲ್ಲಿಡುತ್ತದೆ. ಇದನ್ನು ಬೇಯಿಸಿ ಪಲ್ಯ ಮಾಡಬಹುದು ಅಥವಾ ಸ್ವಲ್ಪ ಹುರಿದು ಹಾಗೆ ಕೂಡಾ ಸೇವಿಸಬಹುದು.

ಹಾಗಲಕಾಯಿ
ಸಕ್ಕರೆ ಕಾಯಿಲೆಗೆ ರಾಮಬಾಣವೆಂದು ಹಾಗಲಕಾಯಿಯನ್ನು ಕರೆಯುತ್ತಾರೆ. ಹೆಚ್ಚಿದ ಹಾಗಲಕಾಯಿಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ ರುಬ್ಬಿ ಇಂಗಿಸಿದ ಭಾಗದ ಸೇವನೆ ಪ್ರತಿದಿನ ಮಾಡಿದರೆ ತಿಂಗಳೊಳಗೆ ಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.

ಕುಂಬಳಕಾಯಿ
ರೋಗ ನಿರೋಧಕ ಶಕ್ತಿಯ ಅಂಶವು ಕುಂಬಳಕಾಯಿಯಲ್ಲಿದೆ. ಇದು ಇನ್ಸುಲಿನ್‌ ಮಟ್ಟವನ್ನು ನಿಯಂತ್ರಣಕ್ಕೆ ತಂದು ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ತರಲು ಸಹಕಾರಿ. ಇದರ ಸಾರು ಅಥವಾ ಉಪ್ಪಿನೊಂದಿಗೆ ಬೇಯಿಸಿದ ಆಹಾರವನ್ನು ಸೇವಿಸಬಹುದಾಗಿದೆ.

ಮೂಲಂಗಿ
ರುಚಿ ಮತ್ತು ವಾಸನೆಯಲ್ಲಿ ಮೂಲಂಗಿ ಜನಸಾಮಾನ್ಯರಿಂದ ದೂರ ಉಳಿದಿದೆ. ದಿನಕ್ಕೆ ಒಂದು ಬಾರಿ ಪಲ್ಯ, ಸಾಂಬಾರು, ಚಟ್ನಿ, ಉಪ್ಪಿನಕಾಯಿ ಅಥವಾ ಹಸಿಯಾಗಿಯೂ ಸೇವಿಸಿ ಸಕ್ಕರೆ ಅಂಶವನ್ನು ನಿಯಂತಿಸಬಹುದು.

ಕೆಲವೊಂದು ಆಹಾರ ಸೇವನಯಲ್ಲಿ ಮಧುಮೇಹಿಗಳು ದೂರ ಇರುವುದೇ ಒಳ್ಳೆಯದು.ಆಲೂಗಡ್ಡೆ, ಒಣದ್ರಾಕ್ಷಿ, ವೈಟ್‌ ರೈಸ್‌ ಮುಂತಾದ ಆಹಾರ ಡಯಾಬೀಟಿಸ್‌ ಪೀಡಿತರಿಗೆ ಮಾರಕವಾಗಿದ್ದು ನುಗ್ಗೆಕಾಯಿ, ನವಿಲು ಕೊಸು, ತೊಂಡೆಕಾಯಿ, ಬೀನ್ಸ್‌, ಬೊÅಕೊಲಿ, ಕೊಸು ಗಡ್ಡೆ ಸೇವನೆ ಸಕ್ಕರೆ ಕಾಯಿಲೆಗೆ ಉತ್ತಮ ಪರಿಹಾರವಾಗಿದೆ.

ಟೊಮೇಟೊ
ಇಂದಿನ ಬಹುತೇಕ ಅಡುಗೆ ಮನೆಗಳಲ್ಲಿ ಟೊಮೆಟೊ ಇ¨ªೆ ಇರುತ್ತದೆ. ಇದರಲ್ಲಿ ಕಡಿಮೆ ಕಾಬೊìಹೈಡ್ರೇಟ್‌ ಮತ್ತು ಕಡಿಮೆ ಕ್ಯಾಲೋರಿಗಳಿರುವ ಕಾರಣ ಸಕ್ಕರೆಯ ಪ್ರಮಾಣ ಕಡಿಮೆ ಮಾಡುತ್ತದೆ.

ಸೊಪ್ಪುಗಳು
ಹಸಿರು ಎಲೆ ತರಕಾರಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಮೆಂತ್ಯೆ, ಪಾಲಕ್‌ , ನುಗ್ಗೆ ಸೊಪ್ಪುಗಳಲ್ಲಿ ಸಾಕಷ್ಟು ಪ್ರಮಾಣದ ವಿಟಮಿನ್‌ ಗಳು ಲಭ್ಯವಾಗಲಿದೆ. ಸೊಪ್ಪಿನ ಬೇಯಿಸಿದ ನೀರು ಸೇವನೆ ಸಕ್ಕರೆ ಕಾಯಿಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ.

ಕ್ಯಾರೆಟ್‌
ಕ್ಯಾರೆಟ್‌ನಲ್ಲಿ ವಿಟಮಿನ್‌ ಎ ಮತ್ತು ನಾರಿನಾಂಶ ವಿದ್ದು ಸಲಾಡ್‌, ಸೂಪ್‌ (ಹಸಿ ಅಥವಾ ಬೇಯಿಸಿ) ಸೇವಿಸಬಹುದು. ಇದರಲ್ಲಿ ಸಕ್ಕರೆ ಪ್ರಮಾಣ ತೀರಾ ಕಡಿಮೆ ಇರುವುದರಿಂದ ಮಧು ಮೇಹಿಗಳ ಸಕ್ಕರೆ ಅಂಶದ ನಿಯಂತ್ರಣ ಸಾಧ್ಯ.

-  ರಾಧಿಕಾ ಕುಂದಾಪುರ


ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.