ಮಹಿಳೆಯರ ನೆಚ್ಚಿನ ಸಂಗಾತಿ ಮೆನ್‌ಸ್ಟ್ರೆವಲ್‌ ಕಪ್‌


Team Udayavani, Sep 10, 2019, 5:24 AM IST

y-21

ಋತುಚಕ್ರ ಹೆಣ್ಣು ಮಕ್ಕಳಲ್ಲಿ ಸ್ವಾಭಾವಿಕ. ಪ್ರತಿ ತಿಂಗಳು ಹೆಣ್ಮಕ್ಕಳು ಈ ಋತುಚಕ್ರದಲ್ಲಿ ಸಾಕಷ್ಟು ಮಾನಸಿಕ, ದೈಹಿಕ ಹಿಂಸೆ, ನೋವು ಅನುಭವಿಸುತ್ತಾರೆ. ಹಿಂದೆ ಋತುಚಕ್ರದ ವೇಳೆ ಬಟ್ಟೆಗಳು ಉಪಯೋಗವಾಗುತ್ತಿತ್ತು. ಆ ಬಳಿಕ ಅದರ ಸ್ಥಾನಕ್ಕೆ ಸ್ಯಾನಿಟರಿ ಪ್ಯಾಡ್‌ಗಳ ಆಗಮನವಾಗಿ ಮಹಿಳೆಯರಿಗೆ ಕೊಂಚ ನೆಮ್ಮದಿ ನೀಡಿತ್ತು. ಆದರೆ ಪ್ಯಾಡ್‌ಗಳ ವಿಲೇವಾರಿ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದೀಗ ಸ್ಯಾನಿಟರಿ ಪ್ಯಾಡ್‌ಗಳ ಜಾಗಕ್ಕೆ ಬಂದಿದೆ ಮನ್‌ಸ್ಟ್ರೆವಲ್‌ ಕಪ್‌ (ಮುಟ್ಟಿನ ಕಪ್‌). ಇವುಗಳ ಬಳಕೆ ಹೇಗೆ, ಪ್ರಯೋಜನಗಳೇನು ಎಂಬ ಮಾಹಿತಿ ಇಲ್ಲಿದೆ.

ಹೆಣ್ಣು ಮಕ್ಕಳಿಗೆ ಮುಟ್ಟು ಸ್ವಾಭಾವಿಕ. ಆ ನೋವು ಸಹಿಸುವುದರೊಂದಿಗೆ ಆ ಸಮಯವನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಉದ್ಯೋಗಕ್ಕಾಗಿ ಹೊರಗಡೆ ತೆರಳುವ ಮಹಿಳೆಯರಿಗೆ ಈ ಸಮಯವನ್ನು ಕೂಲ್‌ ಆಗಿ ನಿಭಾಯಿಸುವುದು ಸವಾಲು.

ದಶಕಗಳ ಹಿಂದೆ ಮುಟ್ಟಿನ ಸಮಯದಲ್ಲಿ ಬಟ್ಟೆಗಳನ್ನು ಬಳಸುತ್ತಿದ್ದರು. ಬಳಸಿದ ಬಟ್ಟೆಯನ್ನು ಶುಚಿಯಾಗಿಟ್ಟುಕೊಳ್ಳಬೇಕಾಗಿತ್ತು. ಶುದ್ಧತೆ ಕಾಪಾಡಿಕೊಳ್ಳದೆ ಇದ್ದಲ್ಲಿ ಸೋಂಕುಗಳು ಕಾಣಿಸಿಕೊಳ್ಳುತ್ತವೆ ಎಂಬ ಕಾರಣಕ್ಕಾಗಿ ಇಂದು ಹೆಚ್ಚಿನ ಮಹಿಳೆಯರು ಸ್ಯಾನಿಟರಿ ಪ್ಯಾಡ್‌, ಟ್ಯಾಂಪೂನ್‌ ಬಳಸಲಾರಂಭಿಸಿದ್ದಾರೆ. ಆದರೆ ಹೊರಗಡೆ ಹೋದಾಗ ಅದನ್ನು ನಿಭಾಯಿಸುವುದು ಕಷ್ಟ. ಪ್ಯಾಡ್‌ ಬದಲಾಯಿಸಿಕೊಳ್ಳುವ ಅವಕಾಶ ಎಲ್ಲಾ ಕಡೆಯಲ್ಲೂ ಇರುವುದಿಲ್ಲ. ಅದಕ್ಕಾಗಿ ಋತುಚಕ್ರದ ವೇಳೆ ಧರಿಸಲು ಹೊಸ ಅವಿಷ್ಕಾರವಾಗಿರುವಂತಹ ಮೆನ್‌ಸ್ಟ್ರೆವಲ್‌ ಕಪ್‌ ಬಂದಿದೆ. ಇದು ಸ್ವಚ್ಛತೆಯನ್ನು ಮತ್ತೂಂದು ಮಟ್ಟಕ್ಕೆ ಕೊಂಡೊಯ್ದಿದೆ.

ಪ್ಯಾಡ್‌ ವಿಲೇವಾರಿ ಮಾಡುವುದು ದೊಡ್ಡ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಈ ಕಪ್‌ ತುಂಬಾ ನೆರವಿಗೆ ಬರುತ್ತದೆ. ಇದನ್ನು ಬಳಸುವುದು ತುಂಬಾ ಸುಲಭ. ಹಲವಾರು ಅಧ್ಯಯನಗಳು ಇದರಿಂದ ಆರೋಗ್ಯದ ಮೇಲೆ ಮಾರಕ ಪರಿಣಾಮವಿಲ್ಲ ಎಂದು ಹೇಳಿವೆ.

ಮೆನ್‌ಸ್ಟ್ರೆವಲ್‌ ಕಪ್‌ಗಳ ಪ್ರಯೋಜನ
ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿದರೆ ಅದನ್ನು ಆಗಾಗ ಬದಲಾಯಿಸಬೇಕಾಗುತ್ತದೆ. ಅಧಿಕ ರಕ್ತಸ್ರಾವ ಇರುವವರಿಗೆ ಇದನ್ನು ನಿಭಾಯಿಸುವುದು ಬಹಳ ಕಷ್ಟದ ಕೆಲಸ. ಆದರೆ ಕಪ್‌ಗ್ಳಿಂದ ಅಧಿಕ ರಕ್ತಸ್ರಾವದಿಂದ ಆಗುವ ಮುಜುಗರ ತಪ್ಪುತ್ತದೆ. ಇದಕ್ಕೆ 12 ಗಂಟೆಗಳ ರಕ್ತಸ್ರಾವವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇದೆ. ಅದರೊಂದಿಗೆ ಕಪ್‌ ಸ್ವತ್ಛತೆಯನ್ನು ಕಾಪಾಡುತ್ತದೆ. ಅಲರ್ಜಿ ಸಮಸ್ಯೆ ಇಲ್ಲ. ಒಮ್ಮೆ ಬಳಸಿದ ಕಪ್‌ನ್ನು ಮತ್ತೂಮ್ಮೆ ಬಳಸಬಹುದು. ಕೆಲವು ಮಹಿಳೆಯರು ಇದನ್ನು ಬಳಸಲು ಕಷ್ಟ ಎನ್ನುತ್ತಾರೆಯಾದರೂ ರೂಢಿಯಾದ ಮೇಲೆ ಸುಲಭ ಅನ್ನುವುದು ಇನ್ನು ಹಲವರ ವಾದ. ಇದರಲ್ಲಿ ರಾಸಾಯನಿಕ ವಸ್ತುಗಳಿರುವುದಿಲ್ಲ. ಸರಿಯಾದ ವಿಧಾನದಲ್ಲಿ ಬಳಸಿದರೆ ಇದು ಮುಟ್ಟಿನ ದಿನಗಳಲ್ಲಿ ಮಹಿಳೆಯರಿಗೆ ಅತ್ಯುತ್ತಮ ಸಂಗಾತಿ ಎಂದರೆ ತಪ್ಪಾಗಲಾರದು. ಇವುಗಳನ್ನು ಹಾಕಿಕೊಂಡು ಯಾವುದೇ ರೀತಿಯ ಚಟುವಟಿಕೆಯಲ್ಲಿ ಭಯವಿಲ್ಲದೇ ಭಾಗವಹಿಸಬಹುದು. ಈಜು, ಯೋಗ ಚಟುವಟಿಕೆಗಳನ್ನು ಆರಾಮವಾಗಿ ಮಾಡಬಹುದು.

ಪ್ಯಾಡ್‌ ಮತ್ತು ಟ್ಯಾಂಪೂನ್‌ ನಿಗೆ ಇದು ಸರಿಯಾದ ಪರ್ಯಾಯ. ಆರಂಭದಲ್ಲಿ ತುಂಬಾ ಕಿರಿಕಿರಿ ಅನಿಸಬಹುದು. ಈ ಕಪ್‌ ನ್ನು ಮರಳಿ ಬಳಕೆ ಮಾಡಬಹುದು. ಅದರ ದಿನಾಂಕದ ಬಳಿಕ ಬದಲಾಯಿಸಿಕೊಳ್ಳಿ. ಆರು ತಿಂಗಳ ಕಾಲ ಬಳಸಿ ಕೊಳ್ಳಬಹುದು.

ಮೆನ್‌ಸ್ಟ್ರೆವಲ್‌ ಕಪ್‌ಗ್ಳಿಗೆ ಹೆಚ್ಚಿದ ಬೇಡಿಕೆ
ಮುಟ್ಟಿನ ಕಪ್‌ನ ವೈದ್ಯಕೀಯ ದರ್ಜೆಯ ಸಿಲಿಕೋನ್‌ ಎಂಬ ಸಂಯುಕ್ತ ಪದಾರ್ಥದಿಂದ ಮಾಡಲಾಗುತ್ತದೆ. ಇದರಿಂದ ಯಾವುದೇ ಸೋಂಕುಗಳು ಉಂಟಾಗುವುದಿಲ್ಲ. ಇದರಲ್ಲಿ ಹಲವು ವಿಧ ಹಾಗೂ ಬಣ್ಣಗಳಿದ್ದು, ಬಳಸುವುದು ಕೂಡ ಸುಲಭವಾಗಿದೆ. ಆ ಕಾರಣಕ್ಕಾಗಿ ಬಹುತೇಕ ಮಹಿಳೆಯರು ಬಟ್ಟೆ, ಸ್ಯಾನಿಟರಿ ಪ್ಯಾಡ್‌ಗಳನ್ನು ದೂರ ಸರಿಸಿ ಮೆಸ್ಟ್ರವಲ್‌ ಕಪ್‌ಗ್ಳನ್ನು ಬಳಸುತ್ತಿದ್ದಾರೆ. ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಎಂದು ಸಾಬೀತಾದ ಬಳಿಕ ಮಹಿಳೆಯರು ಪ್ಯಾಡ್‌ಗಳ ಬದಲಾಗಿ ಕಪ್‌ಗ್ಳ ಬಳಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.

ಬಳಕೆ ಹೇಗೆ
ತಿಂಗಳ ಮುಟ್ಟು ಆರಂಭವಾದ ದಿನ ಪ್ರಥಮವಾಗಿ ಕೈಗಳನ್ನು ಹಾಗೂ ಕಪ್‌ ಅನ್ನು ನೀರಿನಲ್ಲಿ ಶುಚಿಗೊಳಿಸಬೇಕು. ಬಾಗುವ ಹಾಗೂ ಬಳಕುವ ಈ ಕಪ್‌ ಅನ್ನು ಮಡಚಿ ಯೋನಿಯೊಳಗೆ ತೂರಿಸಬೇಕು. ಬೆರಳುಗಳ ಸಹಾಯದಿಂದ ಈ ಕಪ್‌ ಅನ್ನು ಒಳಗೆ ಸೇರಿಸಿದ ಅನಂತರ ಯೋನಿಯ ಗೋಡೆಯ ಆಕಾರದಂತೆ ಈ ಕಪ್‌ ತೆರೆದುಕೊಳ್ಳುತ್ತದೆ. ಅನಂತರ ಋತುಸ್ರಾವವು ಅದರಲ್ಲಿ ಶೇಖರಣೆಯಾಗುತ್ತದೆ. ಋತುಸ್ರಾವ ಕಡಿಮೆ ಹಾಗೂ ಸಾಮಾನ್ಯವಾಗಿದ್ದಲ್ಲಿ 8ರಿಂದ 12 ಗಂಟೆಗಳ ಅನಂತರ ಅದನ್ನು ಹೊರತೆಗೆದು ಶುಚಿಗೊಳಿಸಿ ಮತ್ತೆ ಬಳಸಬಹುದು. ಈ ಕಪ್‌ನ ಬಳಕೆ ಕಷ್ಟವೇನಲ್ಲ. ಆ ದಿನಗಳಲ್ಲಿ ಕಪ್‌ ಅನ್ನು ಬಳಸುವಾಗ ಪ್ರತಿಬಾರಿಯೂ ಕೈ ಹಾಗೂ ಕಪ್‌ ಅನ್ನು ಬಿಸಿನೀರು ಅಥವಾ ತಣ್ಣೀರಿನಲ್ಲಿ ಶುಭ್ರಗೊಳಿಸಬೇಕು. ಮುಟ್ಟಿನ ದಿನಗಳು ಮುಗಿದ ಬಳಿಕ ಕಪ್‌ ಅನ್ನು ತೊಳೆದು, ಬಿಸಿನೀರಿನಲ್ಲಿ ಕುದಿಸಿ ಒಣ ಪ್ರದೇಶದಲ್ಲಿ ಶೇಖರಿಸಿಡಬೇಕು.

ಬಳಸಿದ ಬಳಿಕ ರೂಢಿಯಾಗುತ್ತದೆ
ಮುಟ್ಟಿನ ಸಮಯದಲ್ಲಿ ಬಟ್ಟೆ, ಸ್ಯಾನಿಟರಿ ಪ್ಯಾಡ್‌ಗಳನ್ನು ಬಳಸಿ ಸ್ವಚ್ಛತೆ ಕಾಪಾಡದೆ ಇದ್ದಲ್ಲಿ ಕೆಲವರಿಗೆ ಬ್ಯಾಕ್ಟೀರಿಯಾದ ಸೋಂಕು, ಚರ್ಮದಲ್ಲಿ ತುರಿಕೆ ಮೊದಲಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂತಹವರು ಮುಟ್ಟಿನ ಕಪ್‌ ಬಳಸಿಕೊಳ್ಳಬಹುದು. ಮೊದಲಾಗಿ ಕಂಫರ್ಟ್‌ ಫೀಲ್‌ ಸಿಗದೆ ಇದ್ದರೂ ಮತ್ತೆ ರೂಢಿಯಾಗುತ್ತದೆ.
– ಡಾ| ನಯನಾ ವೈದ್ಯರು

-  ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.