ಗರ್ಭಿಣಿಯರ ಸ್ವಸ್ಥ ಆರೋಗ್ಯಕ್ಕಾಗಿ ಯೋಗ
Team Udayavani, May 7, 2019, 7:17 AM IST
ಮಹಿಳೆಯರ ಜೀವನದ ಒಂದು ಪ್ರಮುಖ ಘಟ್ಟ ಗರ್ಭಧಾರಣೆ. ಈ ವೇಳೆ ತಾಯಿ ತನ್ನ ಆರೋಗ್ಯದ ಕಾಳಜಿ ಮಾತ್ರವಲ್ಲ ಹೊಟ್ಟೆಯಲ್ಲಿರುವ ಮಗುವಿನ ಕಾಳಜಿಗೂ ವಿಶೇಷ ಗಮನಹರಿಸಬೇಕಾಗುತ್ತದೆ. ಆರಂಭದ ದಿನದಿಂದಲೇ ಪೋಷಕಾಂಶಯುಕ್ತ ಆಹಾರದ ಜತೆಗೆ, ಒಂದಷ್ಟು ವ್ಯಾಯಾಮಗಳನ್ನು ತಾಯಿ ಅಳವಡಿಸಿಕೊಂಡರೆ ತಾಯಿ, ಮಗು ಆರೋಗ್ಯವಾಗಿರಲು ಸಾಧ್ಯವಿದೆ. ಗರ್ಭಿಣಿಯರು ಮಾಡಬಹುದಾದ ಸರಳ ಯೋಗಾಸನಗಳು ಇಲ್ಲಿವೆ.
ವಿಪರೀತ ಕಾರಣಿ
ನೇರವಾಗಿ ಮಲಗಿ ಕಾಲುಗಳನ್ನು ಗೋಡೆಯ ಸಹಾಯದಿಂದ ಎತ್ತುವುದು. ಇದರಿಂದ ಕಾಲುಗಳಲ್ಲಿನ ಊತ, ಉಬ್ಬಿರುವ ರಕ್ತನಾಳಗಳನ್ನು ಸಮಸ್ಥಿತಿಗೆ ತಂದು ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತದೆ.
ಮಾರ್ಜಾರಿಯಾಸನ
ಕೈ ಮತ್ತು ಕಾಲಿನ ಸಹಾಯದಿಂದ ಬೆಕ್ಕು ಕುಳಿತುಕೊಳ್ಳುವ ಭಂಗಿಯಲ್ಲಿ ಕುಳಿತು ಕತ್ತಿನ ಚಲನೆಯನ್ನು ನಿಧಾನವಾಗಿ ಮೇಲ್ಮುಖ ಮತ್ತು ಕೆಳಮುಖವಾಗಿ ಮಾಡಬೇಕು. ನಿಧಾನವಾಗಿ ಉಸಿರನ್ನು ಒಳಕ್ಕೆ ಮತ್ತು ಹೊರಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಡೆಸಬೇಕು. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗುತ್ತದೆ. ಬೆನ್ನೆಲುಬುಗಳಿಗೆ ಶಕ್ತಿ ತುಂಬುತ್ತದೆ, ಜೀರ್ಣ ಕ್ರಿಯೆಯ ವೃದ್ಧಿಗೂ ಇದು ಸಹಕಾರಿ. ಜತೆಗೆ, ಮಣಿಕಟ್ಟು ಮತ್ತು ಭುಜಗಳು ಬಲಯುತವಾಗುತ್ತದೆ.
ನಾಡಿ ಶೋಧನ ಪ್ರಾಣಾಯಾಮ
ನೇರವಾಗಿ ಕುಳಿತು ಎಡಗೈಯನ್ನು ಮೆಲ್ಮುಖವಾಗಿ ಎಡಕಾಲಿನ ಮೇಲೆ ಹೆಬ್ಬೆರಳು ಮತ್ತು ತೋರುಬೆರಳನ್ನು ಒಂದಕ್ಕೊಂದು ಜೋಡಿಸಿಡಬೇಕು. ಕಣ್ಣುಗಳನ್ನು ಮುಚ್ಚಿ ಬಲಗೈಯ ಹೆಬ್ಬೆರಳಿನ ಸಹಾಯದಿಂದ ಬಲ ಮೂಗು, ತೋರು ಬೆರಳು ಮತ್ತು ಮಧ್ಯದ ಬೆರಳನ್ನು ಹಣೆಗೆ ತಾಕುವಂತೆ ಹಾಗೂ ಉಂಗುರ ಬೆರಳು ಕಿರುಬೆರಳುಗಳನ್ನು ಎಡ ಮೂಗಿನ ಮೇಲಿಡಬೇಕು. ಪ್ರಶಾಂತ ಮನಸ್ಥಿತಿಯಿಂದ ಎಡ ಮೂಗನ್ನು ಮುಚ್ಚಿ ಬಲ ಮೂಗಿನಿಂದ ಉಸಿರನ್ನು ನಿಧಾನಕ್ಕೆ ಎಳೆದುಕೊಂಡು ಕೊಂಚ ಹೊತ್ತಿನ ಬಳಿಕ ಎಡ ಮೂಗಿನ ಮೂಲಕ ಹೊರ ಬಿಡಬೇಕು. ಹಾಗೇ ಎಡ ಮೂಗಿನಿಂದ ಉಸಿರು ತೆಗೆದುಕೊಂಡು ಬಲ ಮೂಗಿನಿಂದ ಬಿಡಬೇಕು. ಇದು ಅನಾರೋಗ್ಯಕರ ಜೀವನಶೈಲಿ, ಮಾನಸಿಕ ಮತ್ತು ದೈಹಿಕ ಆಘಾತ ಹಾಗೂ ತೀರದ ಒತ್ತಡ ಇವುಗಳಿಂದಾಗುವ ದುಷ್ಪರಿಣಾಮಗಳನ್ನು ತಡೆದು ದೇಹ ಮತ್ತು ಮನಸ್ಸಿಗೆ ಉಲ್ಲಾಸ ತುಂಬುತ್ತದೆ.
ಭುವನ ಬಾಬು, ಪುತ್ತೂರು
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಕೃಷ್ಣ ಮಠಕ್ಕೆ ಬಾಳೆ ಎಲೆಯನ್ನು ನೀಡುವ ಯುವಕ
ತೊಗರಿ ರಾಶಿಗೆ ಬೆಂಕಿ ಹಚ್ಚಿ, ಪಂಪ್ ಸೆಟ್ ವಿದ್ಯುತ್ ಸಂಪರ್ಕ ಕಡಿತ ಮಾಡಿದ ದುಷ್ಕರ್ಮಿಗಳು!
ಸಮುದ್ರದಲ್ಲಿ ಪದ್ಮಾಸನ ಭಂಗಿ: ಕಾಲಿಗೆ ಸರಪಳಿ ಬಿಗಿದು ಈಜಿ ದಾಖಲೆ ಬರೆದ ಗಂಗಾಧರ್ ಜಿ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಚಾಲಕನ ಅವಾಂತರ: ನೂರಾರು ಮಂದಿಯ ಪ್ರಾಣ ಉಳಿಸಿದ ಕಾಪು ಎಸ್ಐ
ಅಹಿತಕರ ಬೆಳವಣಿಗೆಗಳು ಕಂಡುಬಂದರೆ ವಾಟ್ಸಾಪ್ ಮೂಲಕ ಮಾಹಿತಿ ಹಂಚಿಕೊಳ್ಳಿ; Compol ಶಶಿಕುಮಾರ್
ಹೊಸ ಸೇರ್ಪಡೆ
ಬೆಂ. ಗ್ರಾಮಾಂತರ ಉಸ್ತುವಾರಿ ಕೊಟ್ಟರೆ ನಾನು ನಿಭಾಯಿಸುತ್ತೇನೆ: ಎಂಟಿಬಿ ನಾಗರಾಜ್
ಮಾತುಕತೆ ಬೆನ್ನಲ್ಲೇ ಸಿಕ್ಕಿಂ ಗಡಿಯಲ್ಲಿ ಭಾರತ, ಚೀನಾ ಸೇನೆ ಘರ್ಷಣೆ; ಸೈನಿಕರಿಗೆ ಗಾಯ
ಉತ್ತರಪತ್ರಿಕೆ ಮರುಎಣಿಕೆ ಲೋಪ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸುರೇಶ್ ಕುಮಾರ್ ಸೂಚನೆ
ಮುಂದುವರಿದ ಖಾತೆ ಸಂಗೀತ ಕುರ್ಚಿ: ಮತ್ತೆ ಸಚಿವರ ಖಾತೆ ಬದಲಾವಣೆಗೆ ಮುಂದಾದ ಸಿಎಂ!
ದೆಹಲಿ: ಸಿಂಘು ಗಡಿಯಲ್ಲಿ ಕಾಂಗ್ರೆಸ್ ಸಂಸದರ ಮೇಲೆ ಹಲ್ಲೆ, ಕಾರು ಜಖಂ