ಸ್ಮಾರ್ಟ್‌ ನಗರಿಗೂ ಬರಲಿ ಗೆರಿಲ್ಲಾ ತೋಟಗಾರಿಕೆ


Team Udayavani, Mar 10, 2019, 9:27 AM IST

10-march-11.jpg

ಸ್ವಲ್ಪ ಜಾಗವಿದ್ದರೂ ಸಾಕು ಅಲ್ಲೊಂದು ಫ‌ಲ ಪುಷ್ಪಗಳ ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದು ಕೆಲವರ ನೆಚ್ಚಿನ ಹವ್ಯಾಸ. ನಗರ ಸೌಂದರ್ಯ ಹೆಚ್ಚಿಸುವಲ್ಲೂ ನಾವು ಈ ನೀತಿಯನ್ನು ಅನುಸರಿಸಿದರೆ ನಗರ ಹೆಚ್ಚು ಸುಂದರ, ಸ್ವಚ್ಛವಾಗಲು, ಕಾಂಕ್ರೀಟ್‌ ಕಾಡಿನಲ್ಲೂ ಹಚ್ಚಹಸುರು ನಳನಳಿಸಲು ಸಾಧ್ಯವಿದೆ.  ಕಾಂಕ್ರೀಟ್‌ ಕಾಡುಗಳ ಮಧ್ಯೆ ಇರುವ ಸಣ್ಣ ಪುಟ್ಟ ಜಾಗಗಳು, ಇಂಟರ್‌ ಲಾಕ್‌ ಹಾದಿಯ ನಡುವೆ ಅಲ್ಲೊಂದು ಇಲ್ಲೊಂದು ಸಿಗುವ ಜಾಗಗಳಲ್ಲಿ ತೋಟಗಾರಿಕೆಯನ್ನು ನಡೆಸಬಹುದು ಎಂಬುದನ್ನು ಅಮೆರಿಕಾದ ಲಾಸ್‌ ಏಂಜಲೀಸ್‌ ನಗರ ನಿವಾಸಿಗಳು ಮಾಡಿ ತೋರಿಸಿದ್ದಾರೆ. ಅಲ್ಲಿ  ಅವರು ಮೊರೆ ಹೋಗಿದ್ದು ಗೆರಿಲ್ಲಾ ತೋಟಗಾರಿಕೆ ನೀತಿಗೆ.

ಏನಿದು ಗೆರಿಲ್ಲಾ ತೋಟಗಾರಿಕೆ?
ಗೆರಿಲ್ಲಾ ತೋಟಗಾರಿಕೆ ಎಂಬುದು ಭೂಮಿಯ ಮೇಲೆ ನಡೆಸಬಹುದಾದ ತೋಟಗಾರಿಕೆ ಪ್ರಕ್ರಿಯೆಯಾಗಿದ್ದು, ತೋಟಗಾರರು ಬೆಳೆಸಿಕೊಳ್ಳುವಂತಹ ಕಾನೂನುಬದ್ಧ ಹಕ್ಕುಗಳನ್ನು ಹೊಂದಿಲ್ಲ. ತೋಟಗಾರಿಕೆಯ ಬಗ್ಗೆ ಆಸಕ್ತಿ ಹೊಂದಿರುವ ಗುಂಪೊಂದು ಗೆರಿಲ್ಲಾ ತೋಟಗಾರಿಕೆ ನಡೆಸುವ ಹೊಣೆ ಹೊತ್ತಿರುತ್ತದೆ. ಕೈಬಿಟ್ಟ ಸ್ಥಳಗಳು, ಕಾಳಜಿ ವಹಿಸದ ಪ್ರದೇಶಗಳು ಅಥವಾ ಖಾಸಗಿ ಆಸ್ತಿಯು ಗೆರಿಲ್ಲಾ ತೋಟಗಾರಿಕೆಗೆ ಒಳಗೊಳ್ಳುತ್ತದೆ. ಉದ್ಯಾನವನದ ಗೆರಿಲ್ಲಾ ಎಂದು ಕರೆಯಲ್ಪಡುವ ಭೂಮಿ ಸಾಮಾನ್ಯವಾಗಿ ಕಾನೂನುಬದ್ಧ ಮಾಲಕರಿಂದ ನಿರ್ಲಕ್ಷಿಸಲ್ಪಟ್ಟ ಕಾರಣ ಇಲ್ಲಿ ಸಸ್ಯಗಳನ್ನು ಬೆಳೆಸಲು ಗೆರಿಲ್ಲಾ ತೋಟಗಾರರು ಆ ಭೂಮಿಯನ್ನು ಬಳಸುತ್ತಾರೆ. ಸೌಂದರ್ಯದ ಉದ್ದೇಶಗಳಿಗಾಗಿ ಹೂವು, ಆಹಾರ ಬೆಳೆಗಳು ಅಥವಾ ಉಪಯೋಗಕಾರಿ ಸಸ್ಯಗಳನ್ನು ನೆಡಲು, ಸಂರಕ್ಷಿಸಲು ಕಾಳಜಿ ವಹಿಸುತ್ತಾರೆ. ನಿರ್ಲಕ್ಷಿಸಲ್ಪಟ್ಟ ಜಾಗವೇ ಆಗಬೇಕೆಂದಿಲ್ಲ. ಉಪಯೋಗಕ್ಕೆ ಬಾರದ ವಾಹನಗಳು, ಇನ್ನಿತರ ಅನಗತ್ಯ ವಸ್ತುಗಳನ್ನು ಬಳಸಿಯೂ ತೋಟಗಾರಿಕೆ ನಡೆಸಬಹುದು ಎಂಬುದನ್ನು ಇವರು ಮಾಡಿ ತೋರಿಸಿದ್ದಾರೆ.

ಗೆರಿಲ್ಲಾ ತೋಟಗಾರಿಕೆ ಎಂಬುದು ಕೇವಲ ಅಮೆರಿಕದಲ್ಲಿ ಮಾತ್ರವಲ್ಲ ವಿಶ್ವದ ಅನೇಕ ಕಡೆಗಳಲ್ಲಿ ನಡೆಯುತ್ತಿದೆ. ಇದಕ್ಕಾಗಿ ರಾತ್ರಿ ಹಗಲೆನ್ನದೆ ಕಾರ್ಯ ನಿರ್ವಹಿಸುವ ಸ್ವಯಂ ಸೇವಕರೂ ಇದ್ದಾರೆ. ಇದರಲ್ಲಿ ಹೆಚ್ಚಾಗಿ ಉನ್ನತ ಹುದ್ದೆಯಲ್ಲಿರುವ ವರೂ ತಮ್ಮ ತಮ್ಮ ನಗರವನ್ನೂ ರೂಪಿಸಲು ಗೆರಿಲ್ಲಾ ತೋಟಗಾರಿಕೆಯ ಮೂಲಕ ಪ್ರಯತ್ನಿಸುತ್ತಿದ್ದಾರೆ.

ಸ್ಮಾರ್ಟ್‌ ನಗರಿಗೂ ಬರಲಿ
ಮಂಗಳೂರಿನಲ್ಲಿ ಕೆಲವೊಂದು ಸ್ವಯಂ ಸೇವಕ ತಂಡಗಳು ಈ ಕೆಲಸವನ್ನೂ ಮಾಡುತ್ತಿವೆ. ಇದು ಇನ್ನಷ್ಟು ಪ್ರಭಾವಗೊಳ್ಳಬೇಕು, ಸರಕಾರದಿಂದ ಪ್ರೋತ್ಸಾಹ ಸಿಗಬೇಕು. ಹೀಗಾಗಿ ಗೆರಿಲ್ಲಾ ತೋಟಗಾರಿಕಾ ನಿರ್ಮಾಣ ತಂಡ ಆಸಕ್ತ ಜನರನ್ನು ಸೇರಿಸಿ ಸ್ಥಳೀಯಾಡಳಿತವೇ ಕಟ್ಟಿಕೊಳ್ಳಬೇಕಿದೆ. ಜತಗೆ ಇವರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುವ ಕ್ರಮಕೈಗೊಂಡರೆ ನಗರದಲ್ಲಿ ಅವ್ಯವಸ್ಥಿತ ಸ್ಥಳಗಳು, ನಿರ್ಲಕ್ಷಿಸಲ್ಪಟ್ಟ ಪ್ರದೇಶಗಳು, ರಸ್ತೆ ಬದಿ, ರಸ್ತೆ ಮಧ್ಯೆ ಇರುವ ಡಿವೈಡರ್‌ ಗಳನ್ನು ಇನ್ನಷ್ಟು ಆಕರ್ಷಕಗೊಳಿಸಲು ಪ್ರಯತ್ನಿಸಬಹುದು.

ವಿಶ್ವಾಸ್‌ ಅಡ್ಯಾರ್‌

ಟಾಪ್ ನ್ಯೂಸ್

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್‌: ಮತ್ತೆ ನಕ್ಸಲರ ಸದ್ದು?

Kerala-ಕರ್ನಾಟಕ-ತಮಿಳುನಾಡು ತ್ರಿಜಂಕ್ಷನ್‌: ಮತ್ತೆ ನಕ್ಸಲರ ಸದ್ದು?

Narayan Murthy INFOSYS

Infosys; 4 ತಿಂಗಳ ಮೊಮ್ಮಗನಿಗೆ 243 ಕೋಟಿ ರೂ.ಷೇರು ಗಿಫ್ಟ್ ನೀಡಿದ ಮೂರ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Congress

21 ಕಾಂಗ್ರೆಸ್‌ ಅಭ್ಯರ್ಥಿ ಪಟ್ಟಿ ಇಂದು?ದಿಲ್ಲಿಯಲ್ಲಿ ಮಂಗಳವಾರ ಪಕ್ಷದ ಚುನಾವಣ ಸಮಿತಿ ಸಭೆ

AI (3)

AI; ನಿಮ್ಮ ಮಕ್ಕಳ ‘ಧ್ವನಿ’ ಕೇಳಿ ಮೋಸ ಹೋಗದಿರಿ ಜೋಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.