ಮಾದರಿ ರಸ್ತೆ ನಿರ್ಮಾಣವಾಗಲಿ


Team Udayavani, Jan 20, 2019, 8:01 AM IST

20-january-12.jpg

ರಸ್ತೆಗಳು ಆಕರ್ಷಕವಾಗಿರಬೇಕು ಎಂದು ಎಲ್ಲರೂ ಹೇಳುತ್ತಾರೆ. ಆದರೆ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ಕೊಡುವುದು ಕಷ್ಟ. ಆದರೆ ಮಂಗಳೂರಿನ ಬಲ್ಲಾಳ್‌ ಬಾಗ್‌- ಮಣ್ಣ ಗುಡ್ಡ ರಸ್ತೆಯನ್ನು ಮಾದರಿ ರಸ್ತೆ ಎಂದು ಕರೆಯಬಹುದು. ಇದು ಸಂಪೂರ್ಣ ಕಾಂಕ್ರೀಟ್‌ ರಸ್ತೆಯಾಗಿದ್ದು, ಒಂದು ಕಡೆ ಸುಮಾರು 10- 15 ಮೀಟರನ್ನು ಹೊರತುಪಡಿಸಿ ರಸ್ತೆಯ ಎರಡೂ ಮಗ್ಗುಲಲ್ಲಿ ಆಕರ್ಷಕವಾದ ಕಾಲುದಾರಿಯನ್ನು ಹೊಂದಿದೆ. ಜತೆಗೆ ರಸ್ತೆಯುದ್ದಕ್ಕೂ ಗಿಡಗಳು ತುಂಬಿಕೊಂಡಿರುವುದರಿಂದ ಸುಂದರವಾಗಿ ಕಾಣುತ್ತದೆ.

ದಶಕದ ಹಿಂದೆ ಉರ್ವಸ್ಟೋರ್‌- ಲೇಡಿಹಿಲ್‌, ಲೇಡಿಹಿಲ್‌- ಪಿ.ವಿ.ಎಸ್‌., ಬಲ್ಮಠ ರಸ್ತೆ, ಮೈದಾನ ರಸ್ತೆ (ಕ್ಲಾಕ್‌ಟವರ್‌- ಪೊಲೀಸ್‌ ಕಮಿಷನರ್‌ ಕಚೇರಿ ವರೆಗಿನ )ಯ ನೆನಪು ಬರುವಂತಿದೆ. ಈಗಿನ ರೀತಿಯಲ್ಲಿ ರಸ್ತೆಯಂಚಿಗೆ ವಿದ್ಯುತ್‌ ದೀಪಗಳನ್ನು ಅಳವಡಿಸಿ, ಕಾಲುದಾರಿಯಲ್ಲಿ ವಾಹನಗಳನ್ನು ಓಡಿಸದೆ, ನಿಲ್ಲಿಸದೆ ಪಾದಚಾರಿಗಳಿಗೆ ಬಿಟ್ಟರೆ ತುಂಬಾ ಅನುಕೂಲವಾಗಬಹುದು. ಇದೇ ಮಾದರಿಯಲ್ಲಿ ಮಂಗಳೂರಿನ ಇತರ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಿದರೆ ಉತ್ತಮ.

ಮಣ್ಣಗುಡ್ಡ- ಲಾಲ್‌ಬಾಗ್‌ ರಸ್ತೆ
ಈ ರಸ್ತೆಯ ಎರಡೂ ಮಗ್ಗುಲಲ್ಲಿ ವಿಶಾಲ ಮರಗಳಿದ್ದು, ಸದಾ ನೆರಳು ಆವರಿಸಿರುತ್ತದೆ. ಆದರೆ ಹೆಚ್ಚಿನ ಮರಗಳಿಗೆ ದೊಡ್ಡ ದೊಡ್ಡ ಕಟ್ಟೆಗಳನ್ನು ಮಾಡಿದ್ದು, ಮರಗಳನ್ನು ಉಳಿಸಿ, ಕಟ್ಟೆಗಳನ್ನು ತೆಗೆದು, ರಸ್ತೆಯನ್ನು ಕಾಂಕ್ರೀಟ್‌ ರಸ್ತೆ ಮಾಡಿ, ಕಾಲುದಾರಿ ನಿರ್ಮಿಸದರೆ ತಂಬಾ ಆಕರ್ಷಕವಾಗುವುದು.

ಕೊಟ್ಟಾರ ಚೌಕಿ- ಕೊಟ್ಟಾರ- ಪಂಪ್‌ವೆಲ್‌- ಕರಾವಳಿ ವೃತ್ತ ದ್ವಿಪಥದ ರಸ್ತೆಗಳು
ಉಡುಪಿ ಕಡೆಯಿಂದ ಬರುವವರಿಗೆ ಕೊಟ್ಟಾರ ಚೌಕಿ, ಬೆಂಗಳೂರು, ಕೇರಳ ಕಡೆಯಿಂದ ಬರುವವರಿಗೆ ಪಂಪ್‌ವೆಲ್‌ ಮಂಗಳೂರು ನಗರವನ್ನು ಸ್ಪಂದಿಸುವ ತಾಣ. ಆದ್ದರಿಂದ ನಗರಕ್ಕೆ ಬರುವವರ ಅನುಕೂಲಕ್ಕೆ ಮತ್ತು ನಗರದ ಬಗ್ಗೆ ಉತ್ತಮ ಭಾವನೆ ಬರಲು ಈ ಎರಡೂ ರಸ್ತೆಗಳನ್ನು ಉತ್ತಮ ಕಾಲುದಾರಿಯೊಂದಿಗೆ ಅಭಿವೃದ್ಧಿಗೊಳಿಸಿದರೆ ನಗರ ಸೌಂದರ್ಯ ವೃದ್ಧಿಯಾಗುವುದು. ಕೋಡಿಕಲ್‌ನ ಶಾಂತಿಲೇನ್‌ನಲ್ಲಿ ಕಳೆದ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಂತಹ 15- 20 ಮೀಟರ್‌ ಉದ್ದದ ಶಾಂತಿಲೇನ್‌ – ಕೋಡಿಕಲ್‌ ಕೂಡುರಸ್ತೆಯನ್ನು ಕಾಂಕ್ರೀಟ್‌ ರಸ್ತೆಯಾಗಿ ಇತ್ತೀಚೆಗೆ ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸುವ ಜತೆಗೆ ಇದೇ ರೀತಿ ಇತರ ಒಳ ರಸ್ತೆಗಳೂ ಅಭಿವೃದ್ಧಿಯಾಗಬೇಕಿದೆ. 

ವಿಶ್ವನಾಥ್‌ ಕೋಟೆಕಾರ್‌, 
ಕೋಡಿಕಲ್‌

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.