ಪುರಭವನಕ್ಕೆ ನೇರ ಸಂಚಾರ ವ್ಯವಸ್ಥೆಯಾಗಲಿ


Team Udayavani, Dec 16, 2018, 1:20 PM IST

16-december-11.gif

ಹಲವು ವರ್ಷಗಳ ಹಿಂದೆ ವಾಹನಗಳು ಹಂಪನಕಟ್ಟೆಯಿಂದ ಬಂದು ಕ್ಲಾಕ್‌ ಟವರ್‌ ನಿಂದ ನೇರವಾಗಿ ಟೌನ್‌ ಹಾಲ್‌ಗೆ ಹೋಗಬಹುದಿತ್ತು. ಆದರೆ ಅನಂತರ ಟೌನ್‌ ಹೌಲ್‌ಗೆ ಹೋಗುವುದಿದ್ದರೆ ಮೊದಲು ಸರಕಾರಿ ಬಿ.ಎಡ್‌. ಕಾಲೇಜಿನ ಮುಂಭಾಗದಲ್ಲಿದ್ದ ಗೇಟ್‌ ಮೂಲಕ ತೆರಳಬಹುದಿತ್ತು. ಬಳಿಕ ಈ ಅವಕಾಶವನ್ನು ತೆಗೆದು ಹಾಕಲಾಯಿತು. ಹೀಗಾಗಿ ಪುರಭವನಕ್ಕೆ ತೆರಳುವವರು ಎ.ಬಿ. ಶೆಟ್ಟಿ ಸರ್ಕಲ್‌ ನಿಂದ ಮತ್ತೆ ವಾಪಸ್‌ ಬಂದು ಅಥವಾ ಎಸ್‌ಬಿಐ ಮಾರ್ಕೆಟ್‌ನಿಂದ ಬಂದು ಟೌನ್‌ಹಾಲ್‌ ಮುಂಭಾಗದ ಗೇಟ್‌ನಿಂದ ಒಳ ಬರಬಹುದಿತ್ತು. ಪುರಭವನಕ್ಕೆ ದಾರಿ ಕಲ್ಪಿಸಲು ಹಲವು ಅವಕಾಶಗಳಿರುವಾಗ ಸುತ್ತಿ ಬಳಸಿ ಬರುವ ಆವಶ್ಯಕತೆಯಾದರೂ ಏನು ಎಂಬ ಪ್ರಶ್ನೆ ಇಲ್ಲಿಗೆ ಆಗಮಿಸುವವರಲ್ಲಿ ಮೂಡದೇ ಇರಲಾರದು.

ನಗರದ ಹೃಯದ ಭಾಗದಲ್ಲಿರುವ ಪುರಭವನದಲ್ಲಿ ಮದುವೆ, ನಾಟಕ, ವೈಟ್‌ ಲಿಫ್ಟಿಂಗ್ , ಬಾಡಿ ಬಿಲ್ಡಿಂಗ್‌ ಹೀಗೆ ಹಲವಾರು ಕಾರ್ಯಕ್ರಮಗಳು ದಿನನಿತ್ಯವೂ ನಡೆಯುತ್ತಿರುತ್ತವೆ. ಇಂಥ ಕಾರ್ಯಕ್ರಮಗಳಿಗೆ ನೂರಾರು ವಾಹನಗಳು ಇಲ್ಲಿಗೆ ಬಂದು ಹೋಗುತ್ತವೆ. ಅವುಗಳು ಸುತ್ತಿ ಬಳಸಿಯೇ ಒಳಗೆ ಪ್ರವೇಶಿಸಬೇಕು.

ವಿಪರ್ಯಾಸವೆಂದರೆ ಗಣ್ಯವ್ಯಕ್ತಿಗಳು ಯಾವುದೇ ಸಂಚಾರ ನಿಯಮ ಪಾಲನೆ ಮಾಡದೆ ನೇರವಾಗಿ ಸೆಂಟ್ರಲ್‌ ಟಾಕೀಸ್‌ನ ಮುಂಭಾಗ ರಸ್ತೆಯಿಂದಲೇ ಟೌನ್‌ಹಾಲ್‌ಗೆ ಹೋಗುತ್ತಾರೆ. ಈ ತಾರತಮ್ಯ ಏಕೆ? ಇದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುವ ಬದಲು ಸಂಬಂಧ ಪಟ್ಟವರು ಕೂಡಲೇ ಕ್ರಮ ಕೈಗೊಂಡರೆ ಸಾಮಾನ್ಯ ಜನರಿಗೆ ಆಗುವ ತೊಂದರೆಯನ್ನು ನಿವಾರಿಸಿದಂತಾಗುವುದು.

ಪುರಭವನದ ಮುಂಭಾಗದಲ್ಲಿ ಪಾರ್ಕ್‌ ಇದ್ದು, ಅದರ ಎರಡೂ ಬದಿಗಳಲ್ಲಿ ಸಾಕಷ್ಟು ಜಾಗವಿದೆ. ಸೆಂಟ್ರಲ್‌ ಟಾಕೀಸ್‌ನ ಮುಂಭಾಗದಲ್ಲಿರುವ ಪಾರ್ಕ್‌ನ ಜಾಗದಲ್ಲಿ 20- 25 ಅಡಿ ಅಗಲದ ರಸ್ತೆ ಮಾಡಿದರೆ ಪುರಭವನಕ್ಕೆ ಕ್ಲಾಕ್‌ಟವರ್‌ನಿಂದಲೇ ಹೋಗಲು ಅನುವು ಮಾಡಿಕೊಡಬಹುದು. ಸ್ಮಾರ್ಟ್‌ ನಗರಿಯಾಗುತ್ತಿರುವ ಮಂಗಳೂರಿನಲ್ಲಿ ಅನಗತ್ಯ ಸುತ್ತಿ ಬಳಸಿ ಬರುವಂಥ ದಾರಿಗಳಿಗೆ ಪರ್ಯಾಯ ಹಾಗೂ ಸುಲಭವಾಗುವಂಥ ವ್ಯವಸ್ಥೆ ಕಲ್ಪಿಸಿದರೆ ನಗರದೊಳಗಿನ ವಾಹನ ದಟ್ಟಣೆಯನ್ನೂ ನಿಯಂತ್ರಿಸಬಹುದು.

 ಜೆ.ಎಫ್.ಡಿ’ಸೋಜಾ, ಅತ್ತಾವರ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.