ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ನಗರದ ಆದ್ಯತೆಯಾಗಲಿ


Team Udayavani, Nov 10, 2019, 5:03 AM IST

dd-27

ಪ್ಲಾಸ್ಟಿಕ್‌ ಜಗತ್ತನ್ನು ಕಾಡುತ್ತಿರುವ ಜಟಿಲವಾದ ಸಮಸ್ಯೆ. ಮಾನವನ ನಿತ್ಯದ ಬಳಕೆಗೆ ಕಂಡುಹಿಡಿಯಲಾದ ಪ್ಲಾಸ್ಟಿಕ್‌ ಇಂದು ಇಡೀ ಜಗತ್ತಿಗೆ ಹೆಮ್ಮಾರಿಯಾಗಿ ಪರಿಣಮಿಸಿದೆ. ಇದರಿಂದ ಉದ್ಭವಿಸಿರುವ ಸಮಸ್ಯೆಗಳು ಕೂಡ ಹಲವು. ದೀರ್ಘ‌ಕಾಲಿಕ ಬಾಳಿಕೆ ಬರುವಂತ ಪ್ಲಾಸ್ಟಿಕ್‌ಗಿಂತ ಬಳಸಿ ಎಸೆಯುವ -ಪ್ಲಾಸ್ಟಿಕ್‌ನಿಂದ ಇಂದು ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಲ್ಲೂ ದಿನನಿತ್ಯ ಸಾವಿರಾರು ಟನ್‌ ಲೆಕ್ಕದಲ್ಲಿ ಕಸದ ರಾಶಿ ಸೃಷ್ಟಿಯಾಗುತ್ತಿದೆ. ಹೀಗೆ ಸೃಷ್ಟಿಯಾದ ತ್ಯಾಜ್ಯದ ಸಮರ್ಪಕ ಮರುಬಳಕೆ ಮತ್ತು ಸಂಸ್ಕರಣೆಯ ಕೊರತೆಯಿಂದಾಗಿ ಪರಿಸರಕ್ಕೆ ತೀವ್ರತರವಾದ ಹಾನಿಯಾಗುತ್ತದೆ.

ಅದರಲ್ಲಿ ಭಾರತದಂತಹ ದೇಶಗಳಲ್ಲಿ ಸ್ವತ್ಛತೆಯ ಅರಿವಿನ ಕೊರತೆಯಿಂದಾಗಿ ಎಲ್ಲೆಂದರಲ್ಲಿ ಕಸದ ರಾಶಿ ಹಾಕಿ ಅದು ಮಣ್ಣಿನಡಿಯಲ್ಲಿ ಸೇರಿ ಮಣ್ಣು ತನ್ನ ಫ‌ಲವತ್ತೆತೆ ಕಳೆದುಕೊಂಡು ವಿಷಕಾರಿಯಾಗುತ್ತಿದೆ. ಮಳೆಗಾಲದಲ್ಲಿ ತೊರೆ, ಹಳ್ಳ, ನದಿ ಸಾಗರಗಳೊಡಲೊಳಗೆ ಸೇರಿ ಅಲ್ಲಿರುವ ಜಲಚರ ಜೀವರಾಶಿಗಳ ಬದುಕಿಗೂ ಕಂಟಕವಾಗಿದೆ. ಇದರಿಂದಾಗುತ್ತಿರುವ ಈ ಎಲ್ಲ ಹಾನಿಯನ್ನು ತಡೆಯಲು ಪ್ಲಾಸ್ಟಿಕ್‌ ರಸ್ತೆಗಳ ನಿರ್ಮಾಣ ಅತ್ಯಂತ ಪರಿಣಾಮಕಾರಿಯಾದ ಪರಿಹಾರವಾಗಿದೆ ಎನ್ನಬಹುದು. ಈ ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಮೊದಲಬಾರಿಗೆ ಸಂಶೋಧನೆಯಲ್ಲಿ ತೊಡಗಿಕೊಂಡವರು ಮಧುರೈನ ತಿಯಾಗರಾಜರ್‌ ಎಂಜಿನಿಯರಿಂಗ್‌ ಕಾಲೇಜಿನ ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರದಾ ರಾಜಗೋಪಾಲನ್‌ ವಾಸುದೇವನ್‌. ಇವರನ್ನು “ಪ್ಲಾಸ್ಟಿಕ್‌ ಮ್ಯಾನ್‌ ಆಫ್ ಇಂಡಿಯಾ’ ಎಂದು ಕರೆಯಲಾಗುತ್ತದೆ.

ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ಹೇಗೆ?
ದಿನನಿತ್ಯ ಸೃಷ್ಟಿಯಾಗುತ್ತಿರುವ ಪ್ಲಾಸ್ಟಿಕ್‌ ತಾಜ್ಯ ಬಳಸಿಕೊಂಡು ರಸ್ತೆಗಳನ್ನು ನಿರ್ಮಾಣ ಮಾಡುವುದನ್ನು ಇತ್ತೀಚೆಗೆ ಸಂಶೋಧಿಸಲಾಗಿದ್ದು ಪ್ಲಾಸ್ಟಿಕ್‌ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಈ ಸಂಶೋಧನೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದೆ. ಪ್ಲಾಸ್ಟಿಕ್‌ ತಾಜ್ಯವನ್ನು ಸಂಗ್ರಹಿಸಿ ಅದನ್ನು ಒಣಗಿಸಿ, ಚೂರು ಚೂರು ಮಾಡಿ ಅನಂತರ 170ಡಿಗ್ರಿ ಸೆಲ್ಸಿಯಸ್‌ ನಷ್ಟು ಶಾಖದಲ್ಲಿ ಕಾಯಿಸಿದ ಡಾಮರಿನೊಂದಿಗೆ ಮಿಶ್ರಣ ಮಾಡಲಾಗುತ್ತದೆ. ಅನಂತರ ಇದನ್ನು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತದೆ.

ಎಲ್ಲಲ್ಲಿ ರಸ್ತೆಗಳ ನಿರ್ಮಾಣ
ನೆದರ್‌ಲ್ಯಾಂಡ್‌ ಸಹಿತ ಇಂದು ವಿಶ್ವದ ಅನೇಕ ರಾಷ್ಟ್ರಗಳು ಪ್ಲಾಸ್ಟಿಕ್‌ ರಸ್ತೆ ನಿರ್ಮಾಣ ಮಾಡಲು ಉತ್ಸುಕತೆ ತೊರಿಸುತ್ತಿವೆ. ಇದಕ್ಕೆ ಭಾರತವೂ ಹೊರತಾಗಿಲ್ಲ . ಜಗತ್ತಿನಲ್ಲೆ ಭಾರತ ಎರಡನೇ ಅತಿ ಅತಿದೊಡ್ಡ ರಸ್ತೆ ಸಂಪರ್ಕಜಾಲವನ್ನು ಹೊಂದಿದೆ. ಇದು ನಮ್ಮ ದೇಶಕ್ಕೆ ಇನ್ನಷ್ಟು ಸಹಕಾರಿಯಾಗಬಲ್ಲದು. ದಿನನಿತ್ಯ ಭಾರತದಲ್ಲಿ 15,000 ಟನ್‌ ಪ್ಲಾಸ್ಟಿಕ್‌ ತಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ 9,000 ಟನ್‌ಗಳಷÒನ್ನು ಮಾತ್ರ ಮರುಬಳಕೆಗೆ ಬಳಸಲಾಗುತ್ತಿದ್ದು ಉಳಿದ ತ್ಯಾಜ್ಯ ಸುಡುವುದು, ಜಲಮೂಲ, ಮಣ್ಣಿನ ಪದರದಲ್ಲಿ ಸೇರುತ್ತಿದೆ. ಭಾರತದಲ್ಲಿ ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್‌ ಬಳಕೆ ಮಾಡುವಲ್ಲಿ ಮುಂಚೂಣಿಯಲ್ಲಿದೆ 2011 ರಿಂದ ಇದುವರೆಗೆ 1,600 ಟನ್‌ ಪ್ಲಾಸ್ಟಿಕೆ ಬಳಸಿಕೊಂಡು 1,0345.23 ಕಿ.ಮೀ ರಸ್ತೆ ನಿರ್ಮಾಣ ಮಾಡಿದೆ. ಮಹಾರಾಷ್ಟ್ರ 3,343 ಕಿಲೊ ಪ್ಲಾಸ್ಟಿಕ್‌ ಬಳಸಿ 1,430 ಕಿ. ಮೀ ರಸ್ತೆ ನಿರ್ಮಿಸಿದೆ. ಇಂದೋರ್‌ ಕಳೆದೆರಡು ವರ್ಷಗಳಲ್ಲಿ 5,000 ಕಿಲೋ ಪ್ಲಾಸ್ಟಿಕ್‌ ಬಳಸಿ 45 ಕಿ.ಮೀ ರಸ್ತೆ ನಿರ್ಮಿಸಿದೆ. ಭಾರತ ಸರಕಾರ ಒಂದು ಲಕ್ಷ ಕಿಮೀ ರಸ್ತೆಯನ್ನು ನಿರ್ಮಿಸುವ ಗುರಿ ಹೊಂದಿದೆ.

ಆದರೆ ಕರ್ನಾಟಕ ಈ ವಿಚಾರದಲ್ಲಿ ಹಿಂದೆ ಬಿದ್ದಂತಿದೆ. ಸ್ಮಾರ್ಟಯಾಗುವತ್ತು ಹೆಜ್ಜೆ ಇಟ್ಟಿರುವ ಬೆಂಗಳೂರು, ಮಂಗಳೂರುಗಳಲ್ಲಿ ಇದನ್ನು ಅಳವಡಿಸಿಕೊಂಡರೆ ಪ್ಲಾಸ್ಟಿಕ್‌ ಸಮಸ್ಯೆಗೆ ಒಂದು ರೀತಿ ಪರಿಹಾರ ಮತ್ತು ಸ್ವತ್ಛ ಭಾರತ ಯೋಜನೆಯನ್ನು ಸಹ ಸಮರ್ಪಕವಾಗಿ ಜಾರಿಗೆ ತಂದಾಗುತ್ತದೆ.

ಪ್ಲಾಸ್ಟಿಕ್‌ ರಸ್ತೆಯಿಂದಾಗುವ ಲಾಭಗಳು
· ಪ್ಲಾಸ್ಟಿಕ್‌ ಸಮಸ್ಯೆಯನ್ನು ಹೊಗಲಾಡಿಸಬಹುದು.
· ಪರಿಸರ ಮಾಲಿನ್ಯ ತಡೆಗೆ ಸಹಕಾರಿ.
· ಧಾರಾಕಾರ ಮಳೆ, ಪ್ರವಾಹಗಳಂತ ಸಮಯದಲ್ಲಿ ಬೇಗನೆ ಹಾಳಗುವದಿಲ್ಲ.
· ಕಡಿಮೆ ವೆಚ್ಚ ತಗುಲುತ್ತದೆ.
· ಕಾಂಕ್ರಿಟ್‌ ರಸ್ತೆಗಿಂತ ಸುರಕ್ಷತೆ ಹೆಚ್ಚು, ಗುಂಡಿಗಳು ಉಂಟಾಗುವುದು ವಿರಳ ಮತ್ತು ನಿರ್ವಹಣಾ ವೆಚ್ಚವು ಕಡಿಮೆ.
· ಸುಧೀರ್ಘ‌ ಬಾಳಿಕೆ ಬರುತ್ತದೆ.
· ಆರ್ಥಿಕ ಸ್ನೇಹಿ ಯೋಜನೆಯಾಗಿದೆ.

-  ಶಿವಾನಂದ ಎಚ್‌.

ಟಾಪ್ ನ್ಯೂಸ್

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.