ಮನ ತಣಿಸಿದ ಸಂಗೀತ ಕಛೇರಿ
Team Udayavani, Jul 20, 2018, 6:00 AM IST
ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದಿದ್ದ ಚೆನ್ನೈಯ ಯುವ ಗಾಯಕಿ ಕುಮಾರಿ ಸಹನಾ ಸಾಮ್ರಾಜ್ ಜೂ.25 ಸಂಗೀತ ಕಛೇರಿ ನೀಡಿದರು. ಸಭಾಂಗಣ ಪೂರ್ತಿ ತುಂಬಿದ್ದ ಸಂಗೀತ ರಸಿಕರ ಮನದಂತರಾಳದ ಬಯಕೆಯನ್ನು ಮೊದಲೇ ಅರಿತಂತೆ ಪ್ರಸ್ತುತಗೊಂಡ ಸಂಗೀತ ಸಭಿಕರಿಂದ ದೊರೆತ ಕರತಾಡನದ ಪ್ರಶಂಸೆ ಕಛೇರಿಯ ಯಶಸ್ಸನ್ನು ಪ್ರತಿಬಿಂಬಿಸುತ್ತಿತ್ತು.
ಸ್ವಾತಿ ತಿರುನಾಳರ ಮಾಯಾಮಾಳವಗೌಳ ರಾಗ-ರೂಪಕ ತಾಳದ ತುಳಸೀದಳ ಕೃತಿಯಿಂದ ಪ್ರಾರಂಭವಾದ ಕಛೇರಿ ಕೃತಿ ದೇವರನಾಮಗಳನ್ನು ಒಂದರ ಹಿಂದೊಂದರಂತೆ ಪೋಣಿಸುವ ಮೂಲಕ ಎಲ್ಲ ವರ್ಗದ ಶ್ರೋತೃಗಳಿಗೂ ಸಂತಸ ನೀಡಿತು. ಕೇದಾರಗೌಳ-ಮಿಶ್ರಛಾಪು ತಾಳದ ತನುವು ನಿನ್ನದು, ವಸಂತ ರಾಗ-ರೂಪಕ ತಾಳದ ಸೀತಮ್ಮ ಮಾಯಮ್ಮ ಶ್ಯಾಮ ಶಾಸ್ತ್ರಿಗಳ, ವರಾಳಿ- ಆದಿತಾಳದ ಮಾಮವ ಮೀನಾಕ್ಷಿ, ರಾಗಮಾಲಿಕೆ-ಆದಿತಾಳದ ಬಾರೋ ಕೃಷ್ಣಯ್ಯ, ಕಲ್ಯಾಣ ವಸಂತ-ಆದಿ ತಾಳದ ಇನ್ನು ದಯೆ ಬಾರದೆ, ರೇವತಿ-ಆದಿ ತಾಳದ ಶಂಭೋ ಶಿವ ಶಂಭೋ , ಬೇಹಾಗ್-ಆದಿತಾಳದಲ್ಲಿನ ಸಾರಮೈನ ಜಾವಳಿ, ಕಾಪಿ-ಆದಿತಾಳದ ಜಗದೋದ್ಧಾರನ, ನಾದನಾಮಕ್ರಿಯ-ಆದಿತಾಳದ ದಾಸನ ಮಾಡಿಕೋ, ತಿಲ್ಲಾನ, ಭಾಗ್ಯದ ಲಕ್ಷ್ಮಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಗಮಕ-ಬಿರ್ಕಾಗಳಿಗೆ ಪಳಗಿಸಿಕೊಂಡ ಉತ್ತಮ ಶಾರೀರ, ರಾಗ-ಸಾಹಿತ್ಯ ಭಾವಗಳನ್ನು ಪುಷ್ಠಿàಕರಿಸಿ ಶ್ರೋತೃಗಳಿಂದ ಭಲೇ ಅನ್ನಿಸಿಕೊಳ್ಳುವ ಕಲಾವಿದೆಯ ಸಾಮರ್ಥ್ಯ ಶ್ಲಾಘನೀಯ. ವಯಲಿನ್ನಲ್ಲಿ ವಿಶ್ವಜಿತ್ ಮತ್ತೂರು ಮತ್ತು ಮೃದಂಗದಲ್ಲಿ ನಿಕ್ಷಿತ್ ಟಿ. ಪುತ್ತೂರು ಸಹಕಸಿದರು.
ಈ ಸಂದರ್ಭದಲ್ಲಿ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭದಿಂದ ಅಂತ್ಯದ ತನಕ ಕಛೇರಿಯನ್ನು ಆಲಿಸಿ ಕೊನೆಗೆ ಕಲಾವಿದರೆಲ್ಲರನ್ನೂ ಸನ್ಮಾನಿಸಿದರು.
ಪಿ. ನಿತ್ಯಾನಂದ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ