ಮನ ತಣಿಸಿದ ಸಂಗೀತ ಕಛೇರಿ


Team Udayavani, Jul 20, 2018, 6:00 AM IST

x-4.jpg

ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಬಂದಿದ್ದ ಚೆನ್ನೈಯ ಯುವ ಗಾಯಕಿ ಕುಮಾರಿ ಸಹನಾ ಸಾಮ್ರಾಜ್‌ ಜೂ.25 ಸಂಗೀತ ಕಛೇರಿ ನೀಡಿದರು. ಸಭಾಂಗಣ ಪೂರ್ತಿ ತುಂಬಿದ್ದ ಸಂಗೀತ ರಸಿಕರ ಮನದಂತರಾಳದ ಬಯಕೆಯನ್ನು ಮೊದಲೇ ಅರಿತಂತೆ ಪ್ರಸ್ತುತಗೊಂಡ ಸಂಗೀತ ಸಭಿಕರಿಂದ ದೊರೆತ ಕರತಾಡನದ ಪ್ರಶಂಸೆ ಕಛೇರಿಯ ಯಶಸ್ಸನ್ನು ಪ್ರತಿಬಿಂಬಿಸುತ್ತಿತ್ತು. 

ಸ್ವಾತಿ ತಿರುನಾಳರ ಮಾಯಾಮಾಳವಗೌಳ ರಾಗ-ರೂಪಕ ತಾಳದ ತುಳಸೀದಳ ಕೃತಿಯಿಂದ ಪ್ರಾರಂಭವಾದ ಕಛೇರಿ ಕೃತಿ ದೇವರನಾಮಗಳನ್ನು ಒಂದರ ಹಿಂದೊಂದರಂತೆ ಪೋಣಿಸುವ ಮೂಲಕ ಎಲ್ಲ ವರ್ಗದ ಶ್ರೋತೃಗಳಿಗೂ ಸಂತಸ ನೀಡಿತು. ಕೇದಾರಗೌಳ-ಮಿಶ್ರಛಾಪು ತಾಳದ ತನುವು ನಿನ್ನದು, ವಸಂತ ರಾಗ-ರೂಪಕ ತಾಳದ ಸೀತಮ್ಮ ಮಾಯಮ್ಮ ಶ್ಯಾಮ ಶಾಸ್ತ್ರಿಗಳ, ವರಾಳಿ- ಆದಿತಾಳದ ಮಾಮವ ಮೀನಾಕ್ಷಿ, ರಾಗಮಾಲಿಕೆ-ಆದಿತಾಳದ ಬಾರೋ ಕೃಷ್ಣಯ್ಯ, ಕಲ್ಯಾಣ ವಸಂತ-ಆದಿ ತಾಳದ ಇನ್ನು ದಯೆ ಬಾರದೆ, ರೇವತಿ-ಆದಿ ತಾಳದ ಶಂಭೋ ಶಿವ ಶಂಭೋ , ಬೇಹಾಗ್‌-ಆದಿತಾಳದಲ್ಲಿನ ಸಾರಮೈನ ಜಾವಳಿ, ಕಾಪಿ-ಆದಿತಾಳದ ಜಗದೋದ್ಧಾರನ, ನಾದನಾಮಕ್ರಿಯ-ಆದಿತಾಳದ ದಾಸನ ಮಾಡಿಕೋ, ತಿಲ್ಲಾನ, ಭಾಗ್ಯದ ಲಕ್ಷ್ಮಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಗಮಕ-ಬಿರ್ಕಾಗಳಿಗೆ ಪಳಗಿಸಿಕೊಂಡ ಉತ್ತಮ ಶಾರೀರ, ರಾಗ-ಸಾಹಿತ್ಯ ಭಾವಗಳನ್ನು ಪುಷ್ಠಿàಕರಿಸಿ ಶ್ರೋತೃಗಳಿಂದ ಭಲೇ ಅನ್ನಿಸಿಕೊಳ್ಳುವ ಕಲಾವಿದೆಯ ಸಾಮರ್ಥ್ಯ ಶ್ಲಾಘನೀಯ. ವಯಲಿನ್‌ನಲ್ಲಿ ವಿಶ್ವಜಿತ್‌ ಮತ್ತೂರು ಮತ್ತು ಮೃದಂಗದಲ್ಲಿ ನಿಕ್ಷಿತ್‌ ಟಿ. ಪುತ್ತೂರು ಸಹಕಸಿದರು. 

ಈ ಸಂದರ್ಭದಲ್ಲಿ ಶಾಂತಿವನದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರಂಭದಿಂದ ಅಂತ್ಯದ ತನಕ ಕಛೇರಿಯನ್ನು ಆಲಿಸಿ ಕೊನೆಗೆ ಕಲಾವಿದರೆಲ್ಲರನ್ನೂ ಸನ್ಮಾನಿಸಿದರು. 

ಪಿ. ನಿತ್ಯಾನಂದ ರಾವ್‌ 

ಟಾಪ್ ನ್ಯೂಸ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

 PM Modi:ನನ್ನ 90 ಸೆಕೆಂಡ್‌ ಭಾಷಣ ಕಾಂಗ್ರೆಸ್‌, INDIA ಮೈತ್ರಿಕೂಟಕ್ಕೆ ತಲ್ಲಣ ಹುಟ್ಟಿಸಿದೆ

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು

Padibagilu: ರಿಂಗ್ ಹಾಕಲೆಂದು ಬಾವಿಗಿಳಿದ ಇಬ್ಬರು ಉಸಿರುಗಟ್ಟಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?

bp harish

Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.