ಲಕ್ಷ್ಮಣದಾಸ್‌ ವೇಲಣಕರ್‌, ಸುಭದ್ರಾ ಪಾರ್ಥಸಾರಥಿಗೆ ಅಚ್ಯುತಶ್ರೀ ಪ್ರಶಸ್ತಿ


Team Udayavani, Nov 8, 2019, 3:48 AM IST

cc-6

ಸುರಮಣಿ ಡಾ| ದತ್ತಾತ್ರೇಯ ವೇಲಣಕರ್‌ರ ಷಡ್ಜ ಕಲಾಕೇಂದ್ರ ಅಚ್ಚುತದಾಸ್‌ರ ಸಂಸ್ಮರಣಾರ್ಥ ಕೊಡ ಮಾಡುವ ಅಚ್ಯುತಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಈ ಬಾರಿ ಲಕ್ಷ್ಮಣದಾಸ್‌ ವೇಲಣಕರ್‌ ಮತ್ತು ಸುಭದ್ರಾ ಪಾರ್ಥಸಾರಥಿ ಆಯ್ಕೆಯಾಗಿದ್ದಾರೆ. ನ.16ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ.

ಲಕ್ಷ್ಮಣದಾಸ ವೇಲಣಕರ್‌
ಕಥಾ ಕೀರ್ತನ ಮೇರುಗಳಾದ ಭದ್ರಗಿರಿ ಅಚ್ಯುತದಾಸ್‌ ಮತ್ತು ಕೇಶವದಾಸರ ಶಿಷ್ಯರಾದ ಲಕ್ಷ್ಮಣದಾಸರು ಹರಿಕಥಾ ಕ್ಷೇತ್ರದಲ್ಲಿ ತನ್ನದೇ ಆದ ಒಂದು ವರ್ಚಸ್ಸನ್ನು ಬೀರಿದರು. ಉತ್ತಮ ವಾಗ್ಮಿಗಳೂ,ಲೇಖಕರು,ತತ್ವಜ್ಞಾನಿಗಳು, ಸಂತ ಹೃದಯಿಗಳು ಆಗಿದ್ದಾರೆ.

1960ರಲ್ಲಿ ಬೆಂಗಳೂರಿಗೆ ಬಂದು ಭದ್ರಗಿರಿ ಸಹೋದರರಲ್ಲಿ ಆಶ್ರಯ ಪಡೆದು ಕಥಾ ಕೀರ್ತನವನ್ನು ಅಭ್ಯಸಿಸಲು ಪ್ರಾರಂಭಿಸಿದರು. ದಾಸಾಶ್ರಮ ಅಂತರಾಷ್ಟ್ರೀಯ ಕೇಂದ್ರವನ್ನು ಸೇರಿ ಗುರುಕುಲ ಪದ್ಧತಿಯಂತೆ ಆಶ್ರಮದ ಎಲ್ಲಾ ಕಾರ್ಯವನ್ನು ನಿರ್ವಹಿಸುತ್ತಾ, ಕೀರ್ತನ ಕಲೆಯನ್ನು ಕಲಿಯತೊಡಗಿದರು. ಸಂತ ಅಚ್ಯುತದಾಸರೊಂದಿಗೆ ಹೆಚ್ಚಾಗಿ ಇದ್ದು, ಅವರ ಹರಿಕಥಾ ಅಧ್ಯಯನದಲ್ಲಿ ಸಹಭಾಗಿಯಾದರು. ಅವರ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು.

1964ರಲ್ಲಿ ಅಖೀಲ ಭಾರತ ಕೀರ್ತನ ಸಮ್ಮೇಳನದಲ್ಲಿ ಇವರ ಮೊದಲ ಹರಿಕಥಾ ಕಾರ್ಯಕ್ರಮ ನಡೆಯಿತು. ಅಂದಿನಿಂದ ಇಂದಿನವರೆಗೂ ಹರಿಕಥಾ ಕ್ಷೇತ್ರದಲ್ಲೇ ದುಡಿಯುತ್ತಿದಾ‌ªರೆ. ದೇಶದ ವಿವಿದೆಡೆ ಇವರು ಕಥಾ ಕೀರ್ತನ ನಡೆಸಿದ್ದಾರೆ. ಸಾಧು ಸಂತರ ಚರಿತ್ರೆಗಳನ್ನು ನಿರೂಪಿಸುವುದು ಇವರ ವೈಶಿಷ್ಟ್ಯ. ತತ್ವಜ್ಞಾನದ ಆಳವಾದ ಅಭ್ಯಾಸ ಇರುವುದರಿಂದ ಇವರ ಪೂರ್ವರಂಗ ಪೀಠಿಕೆ ಅದ್ಭುತವಾದುದು. ಪ್ರವಚನದಲ್ಲಿಯೂ ಇವರು ಸಿದ್ಧಹಸ್ತರು. ನಿರೂಪಣಾ ಶೈಲಿಗೆ ತಲೆಬಾಗಲೇಬೇಕು.

ಸುಭದ್ರಾ ಪಾರ್ಥಸಾರಥಿ
ಇವರೋರ್ವ ಪ್ರಗ‌ಲ್ಮ ಪ್ರವಚನಗಾರ್ತಿ. ಹನ್ನೆರಡೆನೇ ವಯಸ್ಸಿನಿಂದಲೇ ಕಥಾ ಕೀರ್ತನೆ ಕಾರ್ಯಕ್ರಮಗಳನ್ನು ನೀಡಲು ಪ್ರಾರಂಬಿಸಿದರು. ಖ್ಯಾತ ಹರಿದಾಸರಾದ ವಿ|ನದೀಪುರ‌ಂ ಶ್ರೀನಿವಾಸ ರಂಗಾಚಾರ್‌ ಮತ್ತು ಗಮಕಿ ರಾಮಕೃಷ್ಣ ಶಾಸ್ತ್ರಿಗಳಲ್ಲಿ ಹರಿಕಥಾ ಶಿಕ್ಷಣ ಪಡೆದು ಮುಂದೆ ಖ್ಯಾತ ಹರಿದಾಸರಾಗಿ ರೂಪುಗೊಂಡರು. ಆರು ದಶಕಗಳಿಂದ ನಾಡಿನಾದ್ಯಂತ ಕಥಾಕೀರ್ತನೆಗಳನ್ನು ನಡೆಸುತ್ತಾ ಕಲಾಸೇವೆಗೈಯುತ್ತಿದ್ದಾರೆ. ತಿರುಪ್ಪಾವೈ ಉಪನ್ಯಾಸಗಳನ್ನು ನೀಡುವುದರಲ್ಲಿ ಇವರು ಸಿದ್ಧಹಸ್ತರು.

ಸಂದೀಪ್‌ ನಾಯಕ್‌ ಸುಜೀರ್‌

ಟಾಪ್ ನ್ಯೂಸ್

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.