ಶಾಸ್ತ್ರದ ಶಿಸ್ತಿನಲ್ಲೊಂದು ಭಾವೋತ್ಕರ್ಷದ ಅನ್ವೇಷಣೆ


Team Udayavani, Mar 8, 2019, 12:30 AM IST

q-5.jpg

ಮಾತು ಮತ್ತು ಧಾತು ಸಮಪಾಕದಲ್ಲಿ ಮೇಳೈಸಿದಾಗ ಮಾತ್ರ ಸಂಗೀತದಲ್ಲಿ ರಸಾನುಭಾವ ಪರಾಕಾಷ್ಠೆಯನ್ನು ತಲುಪುತ್ತದೆ ಎಂಬುದನ್ನು ಪಟ್ಟಾಭಿರಾಮ ಪಂಡಿತರ ಕಛೇರಿ ಶ್ರುತಪಡಿಸಿತು. 34ನೇ ಆಲಂಪಾಡಿ ವೆಂಕಟೇಶ ಶಾನುಭಾಗ ಸ್ಮಾರಕ ಸಂಗೀತೋತ್ಸವದಲ್ಲಿ ಪ್ರಧಾನ ಕಛೇರಿ ನೀಡಿದ ಅವರು ಮಾತು – ಧಾತುಗಳನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಂಡು ಕೇಳುಗರ ಮನಸ್ಸಿನಲ್ಲಿ ಗಾಢವಾದ ಪರಿಣಾಮವನ್ನುಂಟು ಮಾಡಲು ಶಕ್ತರಾದರು. ಪರಸ್ಪರ ಸ್ಪರ್ಧಾತ್ಮಕವಾಗಿ ಮೂಡಿಬಂದು ರಂಜಿಸಿದ ಹಿಮ್ಮೇಳ ಧಾತುವಿಗೆ ಜೀವಂತಿಕೆಯ ಕಳೆಯನ್ನಿತ್ತುದುದು ಕಛೇರಿಯ ಸರ್ವಾಂಗೀಣ ಯಶಸ್ಸಿಗೆ ಕಾರಣವಾಯಿತು.

ಅಖೀಲಾಂಡೇಶ್ವರಿ ರಕ್ಷಮಾಂ-ದ್ವಿಜಾವಂತಿಯ ದೀಕ್ಷಿತರ ಕೀರ್ತನೆಯೊಂದಿಗೆ ಕಛೇರಿ ಆರಂಭಿಸಿದ ಪಂಡಿತ ಶೋಭಿಲ್ಲು ಸಪ್ತಸ್ವರದಲ್ಲಿ ತೆಗೆದ ವೇಗ ಜಗನ್ಮೋಹಿನಿಯ ಭಾವಗಳನ್ನು ಪೋಷಿಸಿಕೊಳ್ಳುತ್ತಾ ಒಂದು ಗಟ್ಟಿತನವನ್ನು ನಿರ್ಮಿಸಿ ಕಛೇರಿಯ ಯಶಸ್ಸಿಗೆ ಭದ್ರ ಬುನಾದಿಯನ್ನು ನಿರ್ಮಿಸಿತು. ರವಿಚಂದ್ರಿಕೆ ಒಂದು ವಿಸ್ತಾರವಾದ ಮನೋಧರ್ಮದೊಂದಿಗೆ ಮಾಕೇಲರಾ ವಿಚಾರಮು ಕೃತಿಯಲ್ಲಿ ಪ್ರಸ್ತುತವಾಯಿತು. ಹೃಸ್ವ ಆಲಾಪನೆಯಿಂದ ಸ್ವಾತಿ ತಿರುನಾಳರ ಪದವರ್ಣ ಸುಮ ನಾಯಕ ಕಾಪಿಯಲ್ಲ ಚರಣ ಸ್ವರಗಳ ಬಳಿಕ ರಾಗಮಾಲಿಕೆಯಾಗಿ ಕಲ್ಯಾಣಿ, ಬಮಾಸ್‌, ವಸಂತ ಮೊದಲಾದ ರಾಗಗಳನ್ನು ಹಾಡಿದರು. ವಿಸ್ತಾರದ ಪ್ರಸ್ತುತಿಗೆ ಮುಂದಕ್ಕೆ ಕಾಮವರ್ಧಿನಿಯನ್ನು ಆಯ್ದುಕೊಂಡರು. ಸುಖನಾದದ ಆಲಾಪನೆ, ಭಾವಪೂರ್ಣ ನೆರವಲ್‌ ಮನೋಧರ್ಮಗಳೊಂದಿಗೆ ಆರೈಕೆಗೊಂಡ ತ್ಯಾಗರಾಜರ ವಾದೇರ ದೈವವು ಮಾನಸ ಕೃತಿ ತನ್ಮಯಗೊಳಿಸಿತು. ಬಳಿಕ ಪ್ರಧಾನ ಕೃತಿಯಾಗಿ ತ್ಯಾಗರಾಜರ ಮೋಹನರಾಮ ಮೂಡಿಬಂತು. ಆಲಾಪನೆಯಿಲ್ಲವಾದರೂ ವಿಸ್ತಾರವಾದ ಮನೋಧರ್ಮದಿಂದ ಮೋಹನದ ಎಳೆಎಳೆಯನ್ನು ಮೊಗೆದು ಕೊಟ್ಟ ಪಂಡಿತ್‌ ಗುರುಗಳಾದ ಪಾಲ್ಗಾಟ್‌ ಕೆ.ವಿ. ನಾರಾಯಣ ಸ್ವಾಮಿಯವರ ಬಾನಿಯನ್ನು ನೆನಪಿಸಿದರು. ರಾಮ ರಾಮ ರಾಮ ಸೀತಾರಾಮ (ತಿಲಾಂಗ್‌, ರೂಪಕ) ಹರಿಹರ ನಿನ್ನನ್ನು ಮೆಚ್ಚಿಸಬಹುದು (ಸಿಂಧುಭೈರವಿ, ಆದಿ) ಜಗದೋದ್ಧಾರನ (ಹಿಂದೂಸ್ತಾನಿ ಕಾಪಿ, ಆದಿ), ಪುರಂದರದಾಸರ ಕೀರ್ತನೆಗಳ ಬಳಿಕ ರಾಮನಾಥ್‌ ಶ್ರೀನಿವಾಸ ಅಯ್ಯಂಗಾರರ ಪೂರ್ಣಚಂದ್ರಿಕದ ತಿಲ್ಲಾನ ಹಾಡಿ ಎರಡೂವರೆ ತಾಸುಗಳ ಕಛೇರಿಗೆ ಮಂಗಳ ಹಾಡಿದರು.ವೇಣುಗೋಪಾಲ ಶಾನುಭಾಗ ವಯೋಲಿನ್‌ನಲ್ಲಿ ಮಿಂಚಿದರು. ಮೃದಂಗದಲ್ಲಿ ಡಾ| ಶಂಕರರಾಜ್‌, ಘಟಂನಲ್ಲಿ ಕುರುಚಿತ್ತಾನಂ ಆನಂದಕೃಷ್ಣನ್‌ ಸಹಕರಿಸಿ ಒಂದು ಸೊಗಸಾದ ತನಿ ಆವರ್ತನವನ್ನಿತ್ತರು.

ಇದರ ಮೊದಲು ನಡೆದ ಸಂಗೀತಾರಾಧನಾ ಕಾರ್ಯಕ್ರಮದಲ್ಲಿ ರಾಧಾಮುರಳೀಧರ್‌, ಡಾ| ಶೋಭಿತಾ ಸತೀಶ್‌, ಡಾ| ಇಂಚರಾ, ಪ್ರಭಾಕರ ಕುಂಜಾರು, ನಯನಾರಾಜ್‌, ಪುರುಷೋತ್ತಮ ಪುಣಿಂಚಿತ್ತಾಯ, ಗೋವಿಂದನ್‌ ನಂಬ್ಯಾರ್‌, ಬಡಗಕ್ಕರೆ ಶ್ರೀಧರ ಭಟ್‌ ಮೊದಲಾದವರು ಭಾಗವಹಿಸಿದರು. 

ಸುಕುಮಾರ ಆಲಂಪಾಡಿ

ಟಾಪ್ ನ್ಯೂಸ್

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

ವಿಜಯಪುರ: ಗಂಡನಿಂದ ಕಿತ್ತು ಹೆಂಡತಿಗೆ ಕೊಡುವುದೇ ಸಿದ್ದು ಗ್ಯಾರಂಟಿ: ಸಿ.ಟಿ.ರವಿ ವಾಗ್ದಾಳಿ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.