ಅನಂತ ಭಟ್‌-ಗಿರಿಧರ ನಾಯಕ್‌ಗೆ ಕೊಂಕಣಿ ಯಕ್ಷರತ್ನ ಪ್ರಶಸ್ತಿ 


Team Udayavani, Mar 9, 2018, 6:00 AM IST

s-16.jpg

ಮೂರು ದಶಕಗಳಿಂದ ಸಾಂಸ್ಕೃತಿಕ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವ ಮಂಗಳೂರಿನ ಕೊಂಕಣಿ ಸಾಂಸ್ಕೃತಿಕ ಸಂಘ ಮಾ.11ರಂದು ಮಂಗಳೂರಿನ ಪುರಭವನದಲ್ಲಿ ಶ್ರೀ ಕೃಷ್ಣ ಪರಂಧಾಮ ಕೊಂಕಣಿ ಯಕ್ಷ ಪ್ರದರ್ಶನದೊಂದಿಗೆ ಯಕ್ಷ ಕಲಾವಿದರಾದ ಅನಂತ ರಾಮ ಭಟ್‌ ಮತ್ತು ಗಿರಿಧರ ಪಿ. ನಾಯಕ್‌ರಿಗೆ ಕೊಂಕಣಿ ಯಕ್ಷರತ್ನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.ಸಂಘದ ಸದಸ್ಯರು ಮತ್ತು ಹವ್ಯಾಸಿ ಕಲಾವಿದರು ಪ್ರದರ್ಶಿಸಲಿರುವ ಶ್ರೀಕೃಷ್ಣ ಪರಾಂಧಮ ಆಖ್ಯಾನವನ್ನು ಎಂ.ಶಾಂತರಾಮ ಕುಡ್ವಾ ರಚಿಸಿದ್ದಾರೆ ಹಾಗೂ ಎಂ.ಆರ್‌. ಕಾಮತ್‌ ಸಂಭಾಷಣೆ ಬರೆದಿದ್ದಾರೆ. 

ಗಣೇಶ್‌ಪುರ ಗಿರೀಶ್‌ ನಾವಡ ತರಬೇತಿ ನೀಡಿದ್ದಾರೆ. 10ರ ಹರೆಯದ ಬಾಲಕರಿಂದ ತೊಡಗಿ 72ರ ಹಿರಿಯರು ವೇಷಧಾರಿಗಳಾಗಿರುವುದು ಇದರ ಈ ಪ್ರದರ್ಶನದ ವೈಶಿಷ್ಟ. ಕೆಲ ಮಹಿಳಾ ಕಲಾವಿದರೂ, ಯಕ್ಷಗಾನ ವಿದ್ಯಾರ್ಥಿಗಳೂ ಇದ್ದಾರೆ. ಯಾದವರ ಅಂತ್ಯ ಮತ್ತು ಶ್ರೀಕೃಷ್ಣ ನಿರ್ಯಾಣದ ಕಥಾಭಾಗವನ್ನು ಒಳಗೊಂಡಿರುವ ಪ್ರಸಂಗವಿದು. ಕೊಂಕಣಿ ಸಾಂಸ್ಕೃತಿಕ ಕೇಂದ್ರದ ಆರನೇ ಕೊಂಕಣಿ ಯಕ್ಷಗಾನ ಪ್ರಸಂಗವಿದು. 

ಅನಂತರಾಮ ಭಟ್‌
 ಕಲ್ಲಮುಂಡ್ಕೂರ್‌ ರಾಮ ಭಟ್‌ ಮತ್ತು ಪದ್ಮಾವತಿ ದಂಪತಿಯ ಪುತ್ರ ಭಾಗವತ ಅನಂತ ರಾಮ ಭಟ್‌. 1929,ಅ.4ರಂದು ಜನಿಸಿದ ಇವರು ಬಾಲ್ಯದಲ್ಲೇ ಯಕ್ಷಗಾನದ ಅಭಿರುಚಿ ಹೊಂದಿದ್ದರು. ಮುಂದೆ ಯಕ್ಷ ಕಲಾವಿದರಾಗಿ ಮೆರೆಯಲು ಇದು ತಳಹದಿಯಾಯಿತು. 
ರಾಘವೇಂದ್ರ ಶೆಣೈ ಇವರ ಗುರು. ಶ್ರೀ ಕಾಶೀ ಮಠದ ವೃಂದಾವನಸ್ಥ ಯತಿವರ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಪಾದಂಗಳವರ ಸಮಕ್ಷಮ ತಮ್ಮ ತಂಡದೊಂದಿಗೆ ಕೊಂಕಣಿ ಯಕ್ಷಗಾನ ಪ್ರದರ್ಶಿಸಿ ಮುಂಬಯಿಯಲ್ಲಿ “ಜನಪ್ರಿಯ ಯಕ್ಷಗಾನ ಮಂಡಳಿ’ಯ ಉಗಮಕ್ಕೆ ಕಾರಣಕರ್ತರಾದವರಲ್ಲಿ ಓರ್ವರು. ಭಾಗವತರಾಗಿ 30 ವರ್ಷಗಳಿಂದ ಯಕ್ಷರಂಗಕ್ಕೆ ತಮ್ಮ ಸಿರಿಕಂಠ ಧಾರೆ ಎರೆದಿದ್ದಾರೆ. ಕನ್ನಡ/ಕೊಂಕಣಿ ಯಕ್ಷ ಪಾತ್ರಧಾರಿ, ಪ್ರಸಂಗ ಕರ್ತರೂ ಹೌದು. ಕಿನ್ನಿಗೋಳಿಯ ಯಕ್ಷಲಹರಿ, ಮುಂಬಯಿಯ ಯಕ್ಷಗಾನ ಸಾಹಿತ್ಯ ಪರಿಷತ್‌ನ ಸಮ್ಮಾನ ಪಡೆದಿದ್ದಾರೆ.

ಗಿರಿಧರ್‌ ಪಿ. ನಾಯಕ್‌ 
 ಮಿತ್ತಬೈಲಿನ ಪುರಷೋತ್ತಮ ನಾಯಕ್‌ ಮತ್ತು ರೋಹಿಣಿ ದಂಪತಿಯ ಪುತ್ರ ಗಿರಿಧರ್‌ ನಾಯಕ್‌. 1963,ನ.27ರಂದು ಜನಿಸಿದ ಇವರು ವ್ಯವಹಾರ ನಿಮಿತ್ತ ದುಬೈಯಲ್ಲಿದ್ದರೂ ಕೊಂಕಣಿ ಸಾಂಸ್ಕೃತಿಕ ಸಂಘದ ಹಾಗೂ ಊರಿನ ಇತರ ಯಕ್ಷಗಾನ ಪ್ರದರ್ಶನಗಳಲ್ಲಿ ಸಕ್ರಿಯ ತೊಡಗುವಿಕೆ ತಪ್ಪಿಲ್ಲ. ದುಬೈನ ಯಕ್ಷ ಮಿತ್ರ ತಂಡದ ಮುಖ್ಯ ಕಲಾವಿದ. 
ರಂಗಭೂಮಿ ಕಲಾವಿದ ಹಾಗೂ ಹಿನ್ನೆಲೆ ಗಾಯಕರೂ ಆಗಿದ್ದು, ನಾಟಕಗಳಲ್ಲಿ ಬಾಲ, ಸ್ತ್ರೀ ವೇಷ, ನಾಯಕ , ಖಳ ನಾಯಕ, ಹಾಸ್ಯ ಪಾತ್ರಗಳಲ್ಲಿ ಮತ್ತು ಯಕ್ಷಗಾನದಲ್ಲಿ ಶ್ರೀ ಕೃಷ್ಣ, ಈಶ್ವರ, ಜಮದಗ್ನಿ ಷಣ್ಮುಖ. ರಕ್ತಬೀಜ, ಮಹಿಷಾಸುರ, ಹನುಮಂತ ಮುಂತಾದ ವೇಷ ಮಾಡಿ ಸೈ ಎನಿಸಿಕೊಂಡಿದ್ದಾರೆ. ಮಿತ್ತಬೈಲಿನ ಶ್ರೀರಾಮ ಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿ ಧಾರ್ಮಿಕ ಚಟುವಟಿಕೆಗಳಲ್ಲೂ ದುಡಿಯುತ್ತಿದ್ದಾರೆ.   

ಸಂದೀಪ್‌ ನಾಯಕ್‌ ಸುಜೀರ್‌

ಟಾಪ್ ನ್ಯೂಸ್

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

Raichur; ಎಐಸಿಸಿ ಅಧ್ಯಕ್ಷ ಸ್ಥಾನ ಕಚೇರಿ ಕಸ ಗುಡಿಸುವ ಕಾಯಕವಷ್ಟೇ: ಛಲವಾದಿ ನಾರಾಯಣ ಸ್ವಾಮಿ

17

Sirsi: ಶಿರಸಿ ಮಾರಿಕಾಂಬೆ ವೈಭವದ ಜಾತ್ರೆ

16-wtr

Water: ನೀರು ಭುವನದ ಭಾಗ್ಯ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.