ಆಷಾಢದ ಸಂಜೆಯಲ್ಲಿ ಝೇಂಕರಿಸಿದ ಅರ್ಚನಾ – ಸಮನ್ವಿ ದ್ವಂದ್ವ ಗಾಯನ


Team Udayavani, Aug 16, 2019, 5:00 AM IST

samanvi-3q-1

ಪರ್ಕಳದ ಸರಿಗಮ ಭಾರತಿಯಲ್ಲಿ, ಆ. 1ರಂದು ನಿರ್ದೇಶಕಿ ಉಮಾಶಂಕರಿಯವರ ಜನ್ಮ‌ದಿನದ ಆಚರಣೆಯ ಅಂಗವಾಗಿ ಕು| ಅರ್ಚನಾ ಹಾಗೂ ಕು| ಸಮನ್ವಿ ಅವರ ಹಾಡುಗಾರಿಕೆಯನ್ನು ಏರ್ಪಡಿಸಲಾಗಿತ್ತು. ಆರಂಭದಲ್ಲಿ ದಿ|ಟಿ. ಕೆ. ಗೋವಿಂದ ರಾವ್‌ ವಿರಚಿತ ವಾಚಸ್ಪತಿ ರಾಗದಲ್ಲಿ ನಿನ್ನನೇ ಪಾಡುವೆ ನಿನ್ನನೇ ಪೊಗಳುವೆಯನ್ನು ವರ್ಣದ ಮಾದರಿಯಲ್ಲಿ ಹಾಡಿದರು. ಮುಂದೆ ಉಮಾಮಹೇಶ್ವರಾತಜಂ (ಉಮಾಭರಣ ರಾಗ), ಬಳಿಕ ಕರ್ಣರಂಜಕವಾದ ಕರ್ಣರಂಜನಿ ರಾಗಾಲಾಪನೆ ಬಹು ರಂಜಕವಾಗಿ ಮೂಡಿ ಬಂತು. ಇಲ್ಲಿ ಹಾಡಿದ ಪುರಂದರ ದಾಸರ “ನೀನ್ಯಾಕೋ ನಿನ್ನ ಹಂಗ್ಯಾಕೋ’ ಆದ್ರವಾಗಿ ತೆರೆದುಕೊಂಡ ಈ ರಚನೆಯನ್ನು ಸುಖಾನುಭವದಿಂದ ಕೇಳುವಂತಾಯಿತು. ಪ್ರತಿಯೊಂದು ಸಂಗತಿಗಳೂ ವಿಭಿನ್ನವೂ, ಹೊಸದೂ ಆಗಿದ್ದು “ಘನ್ನ ಮಹಿಮ ಶ್ರೀ’ಯಲ್ಲಿನ ಸಾಹಿತ್ಯ, ಸಂಗೀತ ಬದ್ಧವಾದ ನೆರವಲ್‌ ಸ್ವರಪ್ರಸ್ತಾರಗಳು ರಾಗದ ಸೊಬಗನ್ನು ಸೊಗಸಾಗಿ ಚಿತ್ರಿಸಿದವು. ಅಠಾಣದ “ಚಡೇ ಬುದ್ಧಿ’ ಕೃತಿಯ ಬಿಗುವಿನ ಪ್ರಸ್ತುತಿ ಹಾಗೂ ಅತೀತ ಎಡಪ್ಪಿನಲ್ಲಿನ ಕಲ್ಪನಾ ಸ್ವರಗಳು ಕೇಳುಗರನ್ನು ಲಾಲಿತ್ಯದಿಂದ (ಕರ್ಣರಂಜನಿ) ಬಿಗುವಿನೆಡೆಗೆ ಹುರಿದುಂಬಿಸಿ ಬಡಿದೆಬ್ಬಿಸಿದಂತಿತ್ತು. ನಡುವೆ ಮೂಡಿ ಬಂದ “ರಾಮಾ ರಾಮಾ’ ಎನ್ನುವ ರಾಮ್‌ ಕಲೀ ರಾಗದ ದೀಕ್ಷಿತರ ರಚನೆ ಹೃದ್ಯವಾಗಿತ್ತು. ಮುಂದೆ ಕೇದಾರಗೌಳದ ಸವಿಸ್ತಾರವಾದ ಆಲಾಪನೆಯೊಂದಿಗೆ “ಸಾಮೀಕೀ ಸರಿ ಎವರು’ ಕೃತಿಯನ್ನು ಪ್ರಸ್ತುತಿಪಡಿಸಿದರು.

“ರಾಮ ಸುಂದರ ಜಗನ್ಮೋಹನ ಲಾವಣ್ಯಂ’ನಲ್ಲಿ ನೆರವಲ್‌ ಹಾಗೂ ಸ್ವರ ಪ್ರಸ್ತಾರವನ್ನು ಮಾಡಲಾಯಿತು. ಕೇದಾರಗೌಳದ ಕರಾರುವಕ್ಕಾದ ನೆರವಲ್‌ನ್ನು ತಲ್ಲೀನರಾಗಿ ಸವಿಯುತ್ತಿರುವಂತೆಯೇ, ಅಲ್ಲಿಯೇ ನಯವಾಗಿ ಜಾರುತ್ತಾ ಮೋಹನಕ್ಕೆ ಬಂದ ರೀತಿಯಂತೂ ಆಕರ್ಷಕವಾಗಿತ್ತು. ಹಾಗೆಯೇ ಶಿವರಂಜನಿ, ಭೂಪಾಲ, ವಾಸಂತಿ ( ಈ ಎಲ್ಲಾ ಔಡವ-ಔಡವ ರಾಗಗಳ ಆರೋಹಣ ಅವರೋಹಣಗಳೂ, ಸರಿಗಪದಸ-ಸದಪಗರಿಸ ಆಗಿದೆ ಎಂಬುದು ಉಲ್ಲೇಖನೀಯ ) ಅಂತೆಯೇ ತಿರುಗಿ ಬರುವ ಯಾದಿಯಲ್ಲಿ ಈ ರಾಗಗಳಲ್ಲಿ ಕಲ್ಪನಾ ಸ್ವರಗಳನ್ನು ಹಾಡಲಾಯಿತು. ಕೇದಾರಗೌಳದ ಎಲ್ಲಾ ಸ್ತರಗಳಲ್ಲಿಯೂ ಸಂಚರಿಸಿದ ಆಲಾಪನೆಯೂ ಸೇರಿದಂತೆ ಈ ಪ್ರಸ್ತುತಿಯು ಕಾರ್ಯಕ್ರಮದ “ಮಾಸ್ಟರ್‌ಪೀಸ್‌’ ಆಗಿತ್ತು. ಇಲ್ಲಿ ಮೃದಂಗವಾದಕ ಶಂಕರ್‌ ಪ್ರಸಾದ್‌ ನುಡಿಸಿದ ತನಿ ಆವರ್ತನವು ಗಾಯಕಿಯರ ಮಟ್ಟಕ್ಕೆ ಸಮನಾಗಿಯೇ ಇತ್ತು. ಮುಂದೆ ಮಾಲ್‌ಕೌಂಸ್‌ ರಾಗದಲ್ಲಿ ಹಿಂದುಸ್ತಾನಿ ಶೈಲಿಯಲ್ಲಿ ಅಭಂಗನ್ನು ಹಾಡಿದರು.

ಮಾಲ್ಕಂಸ್‌ನ ಆಲಾಪನೆಯೂ, ನಡುವೆ ಗಾಯಕಿಯರಲ್ಲಿ ಒಬ್ಬರು ಸರಗಮ್‌, ಇನ್ನೊಬ್ಬರು ಅಕಾರವನ್ನು ಖಚಿತತೆಯಿಂದ ಹಾಗೂ ಕ್ಷಿಪ್ರವಾಗಿ ಹಾಡಿ ಬೆರಗುಗೊಳಿಸಿದರು. ಕೊನೆಯಲ್ಲಿ ಇಂದು ಸೈರಿಸಿರಿ (ದೇಶ್‌), ನಂಬಿಕೆಟ್ಟವರಿಲ್ಲ (ಪೂರ್ವಿಕಲ್ಯಾಣಿ), ಬಾಗೇಶ್ರೀ ರಾಗದ ತಿಲ್ಲಾನ ಮುಂತಾದ ಲಘು ಪ್ರಸ್ತುತಿಗಳೊಂದಿಗೆ ಈ ದ್ವಂದ್ವ ಹಾಡುಗಾರಿಕೆ ಸಮಾಪನ‌ಗೊಂಡಿತು. ಪಕ್ಕವಾದ್ಯವನ್ನು ನುಡಿಸಿದವರು ಆರ್‌. ದಯಾಕರ್‌(ವಯಲಿನ್‌), ಶಂಕರ್‌ ಪ್ರಸಾದ್‌ ಚೆನ್ನೈ(ಮೃದಂಗ). ಈ ಕಲಾವಿದೆಯರು ಕಛೇರಿಯನ್ನು ನಡೆಸುವ ರೀತಿಯೇ ವಿಭಿನ್ನ. ರಾಗ ವಿಸ್ತಾರ ಮಾಡುವಾಗಲೂ ಒಂದು ಸಂಚಾರವನ್ನು ಒಬ್ಬರು ಹಾಡಿ ಮುಗಿಸುತ್ತಿರುವಂತೆಯೇ, ಇನ್ನೊಬ್ಬರು ಅದನ್ನೇ ಭಿನ್ನವಾಗಿ ಹಾಡಿ ಮುಂದುವರಿಯುತ್ತಾರೆ.

ವಿದ್ಯಾಲಕ್ಷ್ಮೀ ಕಡಿಯಾಳಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.