ಆರ್ಟಿಸ್ಟ್ಸ್ ಫೋರಂನ ರಜತ ಸಂವತ್ಸರ ಕಲಾಪ್ರದರ್ಶನ


Team Udayavani, Aug 18, 2017, 8:20 AM IST

18-KALA-2.jpg

ಕಲೆ- ಕಲಾವಿದ- ಕಲಾ ಪ್ರದರ್ಶನ- ಕಲಾಸಂಸ್ಥೆ ಯಾವುದೇ ಇರಲಿ ಅದು ತಾನಿರುವ ಪರಿಸರದ ಅಭಿರುಚಿಗೆ ಅನುಗುಣವಾಗಿ ಇರಬೇಕು. ತನ್ನ ಪರಿಸರದಲ್ಲಿರುವ ಕಲಾಭಿಮಾನಿಗಳ ಆಸಕ್ತಿಗಳನ್ನು ಕಂಡುಕೊಂಡು ಅದಕ್ಕೆ ತಕ್ಕಂತೆ ಕಲಾಪ್ರದರ್ಶನ ನೀಡಿದಾಗ ಆ ಸಂಸ್ಥೆ ಬೆಳೆಯಬಲ್ಲುದು. ಈ ದೃಷ್ಟಿಯಿಂದ ಗಮನಿಸುವಾಗ ಉಡುಪಿ ಜಿಲ್ಲೆ ಅಭಿವೃದ್ಧಿಗೊಳ್ಳುತ್ತಿರುವ ಜಿಲ್ಲೆಯಾಗಿರುವುದರಿಂದ ಮುಂಬೈ, ಬೆಂಗಳೂರಿನಂತಹ ತೀರಾ ಆಧುನಿಕ ಕಲ್ಪನೆಯ ಕಲಾಪ್ರದರ್ಶನ ಇಲ್ಲಿಗೆ ಹಿತವೆನಿಸುವುದಿಲ್ಲ. ಇಲ್ಲಿ ಹಳೆ ಬೇರಿನೊಂದಿಗೆ ಹೊಸ ಚಿಗುರೂ ಬೇಕು. ಸಾಂಪ್ರದಾಯಿಕ, ನೈಜ ಕಲಾಕೃತಿಗಳೊಂದಿಗೆ ಒಂದಿಷ್ಟು ನವ್ಯ ದೃಷ್ಟಿಕೋನದ ಕಲಾಕೃತಿಗಳಿದ್ದರೆ ಇಲ್ಲಿ ಕಲಾಪ್ರದರ್ಶನ ಗೆಲ್ಲುತ್ತದೆ. ಈ ಸತ್ಯವನ್ನು ಬಲ್ಲ ಉಡುಪಿಯ ಆರ್ಟಿಸ್ಟ್ಸ್ ಫೋರಂ ಕಲಾವಿದರ ಬಳಗ ಇಲ್ಲಿನ ಪರಿಸರಕ್ಕೆ ತಕ್ಕಂತೆ ಕಲಾಪ್ರದರ್ಶನ, ಕಲಾಚಟುವಟಿಕೆಗಳನ್ನು ನಡೆಸುತ್ತಾ ಜನಮನ ಗೆದ್ದಿದೆ. ಅದರ ಪರಿಣಾಮವಾಗಿ ಇದೀಗ ತನ್ನ ರಜತ ವರ್ಷದ ಸಂಭ್ರಮವನ್ನು ಆಚರಿಸುವಂತಾಗಿದೆ. ಒಂದು ಉತ್ತಮ ಕಲಾಪ್ರದರ್ಶನವನ್ನು ನೀಡುತ್ತಿದೆ. 

ಇಂದ್ರಿಯಗೋಚರ ವಿಷಯವನ್ನು ಸೃಜನಾತ್ಮಕವಾಗಿ ಪ್ರಕಟಿಸುವವನೇ ನಿಜವಾದ ಕಲಾವಿದ. ಕೆಮರಾ ಕಣ್ಣಿನಲ್ಲಿ ಕಾಣುವಂತೆ ಚಿತ್ರಿಸುವುದು ಆತನ ಕೆಲಸವಲ್ಲ. ಕಣ್ಣಲ್ಲಿ ಕಂಡದ್ದನ್ನು, ಕಿವಿಯಲ್ಲಿ ಕೇಳಿದ್ದನ್ನು ಹಾಗೂ ಅನುಭವಜನ್ಯವಾದದ್ದನ್ನು ಮಂಥನ ಮಾಡಿ, ಸಮಾಜಕ್ಕೆ ಹಿತವೆನಿಸುವ ರೀತಿಯಲ್ಲಿ ಅದರ ಹೂರಣವನ್ನು ಕ್ಯಾನ್ವಾಸ್‌ ಮೇಲೆ ರೂಪಿಸುವವನೇ ನಿಜಾರ್ಥದಲ್ಲಿ ಕಲಾವಿದನೆನಿಸುತ್ತಾನೆ. ಇದು ಆತನಿಗೆ ಅನವರತ ಸಾಧನೆ ಹಾಗೂ ಕಲಾಜೀವನದಿಂದ ಸಿದ್ಧಿಸುವುದು ಎಂದು ಪ್ರತಿಪಾದಿಸುತ್ತಾ ಬಂದಿರುವ ಆರ್ಟಿಸ್ಟ್ಸ್ ಫೋರಂ ಅಧ್ಯಕ್ಷ ರಮೇಶ್‌ ರಾವ್‌ ತನ್ನ ಬಳಗದಲ್ಲಿ ಅಂತಹ ಕಲಾವಿದರಿಗೆ ಮಾತ್ರ ಅವಕಾಶ ನೀಡುತ್ತಿದ್ದಾರೆ. ತನ್ನ ಬಳಿಗೆ ಬಂದ ಕಲಾವಿದರನ್ನು ತಿದ್ದಿ ತೀಡಿ ಸಮಕಾಲೀನ ಕಲಾ ಬೆಳವಣಿಗೆಗೆ ತಕ್ಕಂತೆ ಅವರನ್ನು ನಿಜಾರ್ಥದಲ್ಲಿ ಕಲಾವಿದರನ್ನಾಗಿ ಮಾಡುತ್ತಿದ್ದಾರೆ. ತಾನು ಸ್ಥಾಪಿಸಿರುವ “ಗ್ಯಾಲರಿ ದೃಷ್ಟಿ’ಯಲ್ಲಿ ಆಗಾಗ್ಗೆ ಉತ್ತಮ ಗುಣಮಟ್ಟದ ಕಲಾ ಪ್ರದರ್ಶನವನ್ನು ನಡೆಸುತ್ತಿದ್ದಾರೆ. ಹಾಗಾಗಿ ಆರ್ಟಿಸ್ಟ್ಸ್ ಫೋರಂ ಕಲಾಸಂಸ್ಥೆ ರಜತ ವರ್ಷದ ಸಂಭ್ರಮಾಚರಣೆಯನ್ನು ನಡೆಸಲು ಸಾಧ್ಯವಾಗಿದೆ.  

ರಜತ ವರ್ಷದ ಈ ಕಲಾಪ್ರದರ್ಶನದಲ್ಲಿ ಫೋರಂನ ಹಿರಿಯ ಹಾಗೂ ಕಿರಿಯ 28 ಕಲಾವಿದರ 40ಕ್ಕೂ ಹೆಚ್ಚು ಚಿತ್ರಕೃತಿಗಳು ಪ್ರದರ್ಶನ ಗೊಂಡಿದ್ದವು. ಕಲಾಕೃತಿಗಳು ಜಲವರ್ಣ, ಆಕ್ರಿಲಿಕ್‌ ಮತ್ತು ತೈಲವರ್ಣ ಮಾಧ್ಯಮದಲ್ಲಿ ವೈವಿಧ್ಯಮಯ ವಿಷಯಗಳೊಂದಿಗೆ ವಿವಿಧ ಶೈಲಿಗಳಲ್ಲಿ ರಚನೆಗೊಂಡಿದ್ದವು. ಕಲಾವಿದರಾದ ಭಾಸ್ಕರ ರಾವ್‌ ಹಾಗೂ ರಮೇಶ್‌ ರಾಯರ ಜೀವನಚಿತ್ರಗಳು, ಮೋಹನ್‌ ಪೆರ್ಮುದೆಯವರ ಮಳೆಗಾಲದ ನಿಸರ್ಗ, ಲಂಗರು ಹಾಕಿರುವ ಬೋಟ್‌, ಎಚ್‌.ಕೆ. ರಾಮಚಂದ್ರ ಅವರ ಗಲ್ಲಿಯ ದೃಶ್ಯ, ವಸಂತ್‌ ದೇವಾಡಿಗರ ಅಮೂರ್ತ ಭೂದೃಶ್ಯಗಳು, ಪುರುಷೋತ್ತಮ ಅಡ್ವೆಯವರ ಜನಪದ ಶೈಲಿಯ ಗೌರಿಗಣೇಶ, ಕಂದನ್‌ ಅವರ ಆಧುನಿಕ ಷೇರ್‌ಗೂಳಿ, ಶಿವಪ್ಪ ಹಾದಿಮನಿಯವರ ರಾಧಾಕೃಷ್ಣ ಡೈಮಂಡ್‌ ಸ್ಟ್ರೋಕ್‌ ಚಿತ್ರ, ಜಯವಂತ್‌ ಅವರ ಟೆಕÏ$cರ್‌ ಗೂಳಿ, ಶ್ರೀನಾಥ್‌ ಅವರ ನವಚೌಕದ ಜನಪದ ಮುಖವರ್ಣಿಕೆ, ಮಂಜುನಾಥ ಮಯ್ಯರ ಅಕ್ವೇರಿಯಂ, ಅಶೋಕ್‌ ಶೇಟ್‌ಅವರ ಚಿಂತನಾತ್ಮಕ ಶೈಲಿಯ ಚಿತ್ರ, ಸಿಂಧು ಕಾಮತ್‌ ಚಿತ್ರಿಸಿದ ಸ್ಟ್ರೋಕ್‌ ಶೈಲಿಯ ಭಾವಚಿತ್ರಗಳು, ವೀಣಾ ಶ್ರೀನಿವಾಸ್‌ ಅವರ ರಾಧಾಕೃಷ್ಣ ಕಾವಿಚಿತ್ರ ಕಲಾಕೃತಿಗಳು ಆಕರ್ಷಕವಾಗಿದ್ದವು. 

ಉಡುಪಿ ರಥಬೀದಿಯ ದೃಶ್ಯವನ್ನು ವಿಭಿನ್ನ ಶೈಲಿಗಳಲ್ಲಿ ಗಣೇಶ್‌ ಕೆ. ಮತ್ತು ಮುಸ್ತಾಫ‌ ಕೆ.ಪಿ. ಚಿತ್ರಿಸಿದ್ದರು. ಕಲಾವಿದರಾದ ನಾಗರಾಜ ಹನೆಹಳ್ಳಿಯವರ ರೇಖಾಶೈಲಿಯ ವೀಣಾ ವಾದಕಿ, ರಾಜೇಂದ್ರ ಕೇದಿಗೆಯವರ ಜೀವನ ಸ್ಕೆಚ್‌ಗಳು, ಶೈಲೇಶ್‌ ಕೋಟ್ಯಾನ್‌ ಚಿತ್ರಿಸಿದ ನೈಜಶೈಲಿಯ ಗೊಲ್ಲಕೃಷ್ಣ, ಜನಾರ್ದನ ಹಾವಂಜೆಯವರ ಪಂಚೆ ಕಲಾಕೃತಿ,  ವಿಘ್ನೇಶ್‌ ಕಳತ್ತೂರು ಚಿತ್ರಿಸಿದ ಸ್ವಾತಂತ್ರ್ಯ ಪಾರಿವಾಳ, ಅರುಣ ಅಮೀನ್‌ರ ಚದುರಿದ ಭೂದೃಶ್ಯಗಳು, ಖುರ್ಷಿದ್‌ ಯಾಕೂಬ್‌ ಅವರ ಮಿನಿಯೇಚರ್‌ ಚಿತ್ರ, ಜೀವನ್‌ ಅವರ  ಯಕ್ಷಮುಖ, ಲಿಯಾಕತ್‌ ಅಲಿಯವರ ಎಸಳುಗಳ ಚಿತ್ರ, ಹಾಗೆಯೇ ಸಕು ಪಾಂಗಾಳ, ಸಂತೋಷ್‌ ಪೈ, ಪವನ್‌ ಕುಮಾರ್‌ ಅತ್ತಾವರರ ಕಲಾಕೃತಿಗಳು ಸಹಾ ವೈವಿಧ್ಯಮಯವಾಗಿದ್ದವು. ಅನೇಕ ಗಣ್ಯರು ಕಲಾಕೃತಿಗಳನ್ನು ವೀಕ್ಷಿಸಿ ಪ್ರಶಂಸಿಸಿದರು. ಸ್ಥಳದಲ್ಲಿಯೇ ಹಲವು ಕಲಾಕೃತಿಗಳು ಮಾರಾಟವಾಗಿರುವುದು ಕಲಾಪ್ರದರ್ಶನದ ಸಫ‌ಲತೆಯನ್ನು ಎತ್ತಿ ತೋರಿಸುತ್ತದೆ. ರಜತ ವರ್ಷಾಚರಣೆಯ ಅಂಗವಾಗಿ ಆರ್ಟಿಸ್ಟ್ಸ್ ಫೋರಂ ವರ್ಷವಿಡೀ ಕಲಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಉಪಾಧ್ಯಾಯ ಮೂಡುಬೆಳ್ಳೆ

ಟಾಪ್ ನ್ಯೂಸ್

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Lok Sabha Election: ಏಪ್ರಿಲ್ 28 ರಂದು ಬೆಳಗಾವಿಗೆ ಪ್ರಧಾನಿ ಮೋದಿ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.