ಅಮ್ಮನ ಪ್ರೀತಿ ಸಾಕ್ಷಾತ್ಕರಿಸಿದ ಅವ್ವ 


Team Udayavani, Mar 8, 2019, 12:30 AM IST

q-12.jpg

ಕೊಡವೂರಿನಲ್ಲಿ ಸುಮನಸಾ ಕೊಡವೂರು ತಂಡದವರಿಂದ ಪ್ರದರ್ಶಿತವಾದ ನಾಟಕ “ಅವ್ವ’ ಮಕ್ಕಳ ಮೇಲೆ ಅಮ್ಮನ ಪ್ರೀತಿಯ ನೈಜ ಚಿತ್ರಣವನ್ನು ಪರಿಚಯ ಮಾಡಿಸಿತು. ಡಾ| ಪದ್ಮಿನಿ ನಾಗರಾಜು ಅವರ ನಾಟಕವನ್ನು ರಂಗಕ್ಕಿಳಿಸಿದವರು ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್‌. ಪ್ರಮುಖ ಪಾತ್ರಧಾರಿ “ಅವ್ವ’ನ ಮಾತಿನಲ್ಲೇ ಹೇಳುವುದಾದರೆ ಕಚ್ಚೆ ಹರುಕ ಗಂಡ ನಂದಿಬಸಪ್ಪನ ಪರಸಂಗ, ಬೀಡಿ ಸೇವನೆ ಮುಂತಾದ ದುಶ್ಚಟಗಳ ಹೊರತಾಗಿಯೂ ಅವನೊಂದಿಗೆ ಸಂಸಾರ ಮಾಡುತ್ತಾ ಮಕ್ಕಳನ್ನು ಸಲಹಿ, ಅವರ, ಅದರಲ್ಲೂ ಮುಖ್ಯವಾಗಿ ಮಗ ಲಂಕೇಶನ ವಿದ್ಯಾಭ್ಯಾಸಕ್ಕಾಗಿ ಮಗ ವಿದ್ಯಾವಂತನಾಗಿ ಊರಿಗೆ ಹೆಸರು ತರಬೇಕೆಂದು, ಅದಕ್ಕಾಗಿ ತನ್ನ ಸರ್ವಸ್ವವನ್ನು ಧಾರೆಯೆರೆಯಲು ಸಿದ್ಧಳಾಗಿರುವ ಮಮತಾ ಮೂರ್ತಿಯಾಗಿ ಕಂಡು ಬರುತ್ತಾಳೆ. ಪ್ರಾಥಮಿಕ ವಿದ್ಯಾಭ್ಯಾಸದಿಂದ ಹಿಡಿದು ಉನ್ನತ ವಿದ್ಯಾಭ್ಯಾಸದವರೆಗೂ ಅವನೆಲ್ಲ ಹಂಬಲಗಳಿಗೆ ಇಂಬು ನೀಡುತ್ತಾಳೆ. ಬೇರೆ ಯಾವ ವಿಷಯದಲ್ಲೂ ಗಂಡನಿಗೆ ಎದುರಾಡದ “ಅವ್ವ’ ಮಗನ ವಿಷಯ ಬಂದಾಗ ಚಾಮುಂಡಿಯಾಗಿ ಗಂಡನನ್ನೆ ಮಣಿಸುವ ತಾಕತ್ತು ಮಾತೃ ಹೃದಯದ ಮಿಡಿತಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ. ಮುಂದೆ ಮಗ ಉದ್ಯೋಗಸ್ಥನಾಗಿ ಮನೆಗೆ ಮರಳಿದಾಗ ಊರಿನವರನ್ನೆಲ್ಲಾ ಕರೆದು ಸಂಭ್ರಮಿಸುವ ಅಪ್ಪ ಒಂದೆಡೆಯಾದರೆ ತನ್ನ ಮಗಳ ಮಗಳನ್ನೇ ಮದುವೆಯಾಗಬೇಕೆಂದು ಒತ್ತಾಯಿಸುವ “ಅವ್ವ’ನ ಮಾತು ಆಕೆಯ ತಾಯಿ ಮಮತೆಯ ಮತ್ತೂಂದು ಮಗ್ಗುಲನ್ನು ತೆರೆದಿಡುತ್ತದೆ. ಮಗನಿಗೆ ಈ ಮಾತು ಒಪ್ಪಿಗೆ ಇಲ್ಲದಿದ್ದರೂ ಅಷ್ಟೊಂದು ಸಬಲೆಯಾಗಿರದ ಮಗಳ ಬಾಳು ಹಸನಾಗಲೆಂದು ಬಯಸುವ ತಾಯಿಯ ಅಸಹಾಯಕತೆ ಈ ಒತ್ತಾಯಪೂರ್ವಕ ಬೇಡಿಕೆಯಲ್ಲಿ ಅಡಗಿದೆ. ಅಂತಿಮವಾಗಿ ಮಗ ಉದ್ಯೋಗಸ್ಥನಾಗಿ ನೆಲೆ ಕಂಡುಕೊಳ್ಳುವಂತಾದಾಗ ವಯೋಸಹಜ ಕಾರಣದಿಂದಾಗಿ ಭೂಮಿಯಲ್ಲಿ ನೆಲೆ ಕಳೆದುಕೊಂಡು ಗತ ಪ್ರಾಣಳಾಗುವ “ಅವ್ವ’ ಚಿರಕಾಲ ನೆನಪಿನಲ್ಲಿ ಉಳಿಯುತ್ತಾಳೆ.

“ಅವ್ವ’ ದೇವೀರಿಯ ಸುತ್ತ ಹೆಣೆಯಲಾದ ಕಥೆಯಾದರೂ ನಾಟಕದ ಮಧ್ಯೆ ಜಾತ್ರೆಯ ಸನ್ನಿವೇಶ, ಪ್ರಾಥಮಿಕ ಶಾಲಾ ವಾತಾವರಣ, ಮುಂದೆ ಕಾಲೇಜು ವಿದ್ಯಾಭ್ಯಾಸದಲ್ಲಿ ಹದಿಹರೆಯದ ಸುಮಧುರ ಕಂಪನ ಮುಂತಾದ ವಿಷಯಗಳು ರಂಜನೀಯವಾಗಿ ಮೂಡಿ ಬಂದು ಒಟ್ಟಂದವನ್ನು ಹೆಚ್ಚಿಸಿತು. ದೇವೀರಿ (ಅವ್ವ) ಪಾತ್ರಧಾರಿ ಕು| ವಿದ್ಯಾದಾಯಿನಿಯ ಪ್ರೌಢ ಅಭಿನಯ ಶ್ಲಾಘನೀಯ. ಅದರಲ್ಲೂ ಜಾತ್ರೆಗೆ ಹೋಗಿ ಬಂದು ಒಂದೊಂದೇ ವಸ್ತುವನ್ನು ಆಣೆ ಲೆಕ್ಕದಲ್ಲಿ ತೆಗೆದಿರಿಸಿ ಸಂಭ್ರಮಿಸುವ ಪರಿ, ಮಗನ ವಿದ್ಯಾಭ್ಯಾಸಕ್ಕೆ ಮಿಡುಕುವ ಮನ, ಅವನಿಗಾಗಿ ವಿಶೇಷ ಅಡುಗೆ ಮಾಡಿ ತೋರುವ ಪ್ರೀತಿ, ಕೊನೆಗೆ ತಾನು ಸಾಯುವ ಕ್ಷಣದಲ್ಲಿ ಮಗ ಹಾಗೂ ಮಗಳ ಮೇಲೆ ಪ್ರಕಟ ಪಡಿಸುವ ಮಮಕಾರವನ್ನು ನಾಜೂಕಾಗಿ, ನೈಜವಾಗಿ ಅಭಿನಯಿಸಿದ ಪರಿ ಅದ್ಭುತ. ಅಂತೆಯೇ ಮಗ ಲಂಕೇಶನ ಪಾತ್ರದಲ್ಲಿ ಮಿಂಚಿದ ಅಕ್ಷತ್‌ ಅಮೀನ್‌ ಹಾಗೂ ದೇವೀರಿಯ ಗಂಡ ತೆವಲುಗಳ ದಾಸನಾಗಿ ನಂದಿಬಸಪ್ಪ ಪಾತ್ರ ವಹಿಸಿದ ಯೋಗೀಶ್‌ ಕೊಳಲಗಿರಿ ಅಭಿನಯ ಮನಮುಟ್ಟುತ್ತದೆ. 

 ಅಬ್ಬರವಿಲ್ಲದ ಹಿತಮಿತವಾದ ಹಿನ್ನಲೆ ಸಂಗೀತ ಬಳಸಿಕೊಂಡಿದ್ದರೆ ಪೂರಕವಾಗಿರುತ್ತಿತ್ತು. ಕೆಲವನ್ನು ಪರಿಕರ ಬಳಸಿ ಮತ್ತೆ ಹಲವನ್ನು ಮೂಕಾಭಿನಯದ ಮೂಲಕ ವ್ಯಕ್ತ ಪಡಿಸುವ ಬದಲಾಗಿ ಎಲ್ಲವನ್ನೂ ಅಂಗಾಭಿನಯದ ಮುಖಾಂತರ ಪ್ರಸ್ತುತ ಪಡಿಸಿದ್ದರೆ ಹೆಚ್ಚು ಪರಿಣಾಮಕಾರಿಯಾಗಿರುತ್ತಿತ್ತು. ಉದಾಹರಣೆಗೆ ಹೇಳುವುದಾದರೆ ಬೆಂಕಿ ಹಚ್ಚದ ಬೀಡಿ, ಮೈ ತುರಿಸುವ ಪುಡಿ ಸಂಗ್ರಹಣೆ ಮುಂತಾದವು. ನಾಟಕ ಸಾಮಾನ್ಯ ಕಥೆ ಹೊಂದಿರುವುದರಿಂದ ಇನ್ನಷ್ಟು ಪರಿಣಾಮಕಾರಿ ಸೂತ್ರಗಳನ್ನು ಅಳವಡಿಸಿ ನಾಟಕದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವ ಅವಶ್ಯಕತೆ ಇದೆ. 

ಜನನಿ ಭಾಸ್ಕರ, ಕೊಡವೂರು

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.