ರಂಜಿಸಿದ ಬಲಿಪ ಗಾನ ಯಾನ-ಯಕ್ಷಗಾನ

ಯಕ್ಷ ತರಂಗಿಣಿ ಪ್ರಸ್ತುತಿ

Team Udayavani, Sep 27, 2019, 5:00 AM IST

k-6

ಮೂರೂ ಭಾಗವತರ ಪ್ರತಿಭೆಗೆ ಸವಾಲೊಡ್ಡುವ ಹಾಡುಗಳನ್ನೇ ಆಯ್ಕೆ ಮಾಡಿ ಕೊಟ್ಟದ್ದರಿಂದ ಹಾಗೂ ಪದ್ಯಗಳ ಆಯ್ಕೆಯಲ್ಲೂ ಹೊಸತನವಿದ್ದದರಿಂದ ಕಲಾಭಿಮಾನಿಗಳಿಗೆ ಅಂದು ಕಲಾ ರಸದೌತಣವೇ ದೊರೆಯಿತು.

ಯಕ್ಷತರಂಗಿಣಿ ಕೈಕಂಬ ಆಶ್ರಯದಲ್ಲಿ ಗಣೇಶೊತ್ಸವದ ಪ್ರಯುಕ್ತ ಕೈಕಂಬದ ಬೆನಕ ವೇದಿಕೆಯಲ್ಲಿ ಯಕ್ಷ ವೈಭವ ಜರಗಿತು. ಆರಂಭದಲ್ಲಿ ಬಲಿಪ ಶೈಲಿಯ ಗವತತ್ರಯರಿಂದ ಗಾನ ಯಾನ, ನಂತರ ಶ್ರೀ ಸುಬ್ರಹ್ಮಣೇಶ್ವರ ಯಕ್ಷನಾಟ್ಯ ಕಲಾಕೇಂದ್ರ ತಕಧಿಮಿ ತಂಡದ ವಿದ್ಯಾರ್ಥಿಗಳಿಂದ “ಲೀಲಾಮಾನುಷ ವಿಗ್ರಹ’ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು.

ಯಕ್ಷಗಾನದಲ್ಲಿ ಬಲಿಪ ಶೈಲಿಯ ಬಲಿಪ ಪ್ರಸಾದ್‌ ಭಟ್‌, ಬಲಿಪ ಶಿವಶಂಕರ ಭಟ್‌ ಮತ್ತು ಪುಂಡಿಕಾಯಿ ಗೋಪಾಲಕೃಷ್ಣ ಭಟ್‌ ಈ ಮೂವರು ಭಾಗವತರು ಗಣಪತಿ ಸ್ತುತಿಯಿಂದ ಹಿಡಿದು ರಂಗನಾಯಕನ ಮಂಗಳದ ಹಾಡಿನವರೆಗೆ ಸುಮಾರು ಎರಡು ಗಂಟೆಗಳ ಕಾಲ ಹರಿಸಿದ ಅಮೋಘ ಗಾನ ಸುಧೆಯನ್ನು ಯಕ್ಷಪ್ರಿಯರು ಮಂತ್ರಮುಗ್ಧರಾಗಿ ಆಲಿಸಿದರು. ಮೂರೂ ಭಾಗವತರ ಪ್ರತಿಭೆಗೆ ಸವಾಲೊಡ್ಡುವ ಹಾಡುಗಳನ್ನೇ ಆಯ್ಕೆ ಮಾಡಿ ಕೊಟ್ಟದ್ದರಿಂದ ಹಾಗೂ ಪದ್ಯಗಳ ಆಯ್ಕೆಯಲ್ಲೂ ಹೊಸತನವಿದ್ದದರಿಂದ ಕಲಾಭಿಮಾನಿಗಳಿಗೆ ಅಂದು ಕಲಾ ರಸದೌತಣವೇ ದೊರೆಯಿತು. ಭರತಾಗಮನದ “ಬಂದೆಯಾ ಇನವಂಶ ವಾರಿಧಿ’, ಶರಸೇತು ಬಂಧನದ “ಅಕಟಕಟ ಏತಕೆ ಇವನಲಿ’, ಕುಮಾರ ವಿಜಯದ “ಕನ್ನೆ ಸುಗುಣ ಸಂಪನ್ನೆ’ ಹಾಗೂ ಹಿರಣ್ಯಾಕ್ಷದ “ಸುಂದರಾಂಗಿ ಸುಮಗಂಧಿ ಚಂದ್ರವದನೆ’ ಹಾಡುಗಳು ಬಲಿಪ ಪ್ರಸಾದರ ಕಂಠಸಿರಿಯಲ್ಲಿ ಅದ್ಭುತವಾಗಿ ಹೊರಹೊಮ್ಮಿತ್ತು. ಗೋಪಾಲಕೃಷ್ಣ ಭಟ್ಟರು ಜಾಂಬವತಿ ಕಲ್ಯಾಣದ “ಕಿರು ಬೆಟ್ಟಿನೊಳಗೆ ನಾನು ಗೋವರ್ಧನ ಗಿರಿಯ” ಹಾಗೂ ಸತ್ಯಹರಿಶ್ಚಂದ್ರದ “ಆಡಿದರಾಡಿದರು’ ಪದ್ಯಗಳನ್ನು ಸುಶ್ರಾವ್ಯವಾಗಿ ಹಾಡಿ ರಂಜಿಸಿದರು. ಬಲಿಪ ಶಿವಶಂಕರ್‌ ಭಟ್‌ ಇಂಪಾದ ಸ್ವರದಲ್ಲಿ ಮಾಗಧ ವಧೆಯ “ತಿಳಿಯದಾದಿರೆ ನಮ್ಮ ಕಂಸಗೆ’, ಇಂದ್ರಜಿತುವಿನ “ಈತಗಳು ನರರಲ್ಲ’ ಹಾಗೂ ಕರ್ಣಾವಸಾನದ “ಮನಸಿಜ ಪಿತ ನೀನು ಮಾತಿನಲಿ’ ಹಾಡಿದ ಹಾಡುಗಳು ಮೆಚ್ಚುಗೆ ಗಳಿಸಿತು. ಮೂರೂ ಭಾಗವತರು ಜತೆಯಾಗಿ ಹಾಡಿದ ಭೀಷ್ಮವಿಜಯದ ಭಾಮಿನಿ “ಪರಮ ಋಷಿ ಮಂಡಲದಿ’, ದೇವಿ ಮಹಾತ್ಮೆಯ “ವೀಣೆಯ ಪಿಡಿದಿರ್ಪ ವಾಣಿಯ ಪರಿಯ’ ಮತ್ತು “ಕಂಡೆಯಾ ಸುರಪಾಲ ದೈತ್ಯರ ರುಂಡಗಳ’, ರಾವಣ ವಧೆಯ “ಕಂಡು ದಶವದನ ಕೋದಂಡರಾಮನ’ ಹಾಗೂ ವಾಲಿಮೋಕ್ಷದ “ಜಾಣನಹುದಹುದು’ ಪದ್ಯಗಳು ಮನಗೆದ್ದಿತು. ಏರು ಪದ್ಯಗಳ ಬಳಿಕ ಮೂರು ಭಾಗವತರು ಸೇರಿ “ರಂಗನಾಯಕ ರಾಜೀವಲೋಚನ’ ಹಾಡಿನೊಂದಿಗೆ ಗಾನಯಾನಕ್ಕೆ ಮಂಗಳ ಹಾಡಿದರು.

ಕೊಂಕಣಾಜೆ ಚಂದ್ರಶೇಖರ ಭಟ್ಟರ ಚೆಂಡೆವಾದನ, ಚೈತನ್ಯ ಕೃಷ್ಣ ಪದ್ಯಾಣ ಹಾಗೂ ಸುಮಿತ್‌ ಆಚಾರ್ಯ ಅವರ ಮದ್ದಲೆಯ ನಾದ, ಪೂರ್ಣೇಶ ಆಚಾರ್ಯರ ಚಕ್ರತಾಳದ ಝೇಂಕಾರ ಹಾಗೂ ವಾದಿರಾಜ ಕಲ್ಲೂರಾಯರ ನಿರೂಪಣೆ ಇವೆಲ್ಲ ಗಾನ ಯಾನದ ಸೊಬಗನ್ನು ಮತ್ತಷ್ಟೂ ಹೆಚ್ಚಿಸಿತು.

ರಕ್ಷಿತ್‌ ಶೆಟ್ಟಿ ಪಡ್ರೆಯವರಿಂದ ಯಕ್ಷಾಭ್ಯಾಸ ಮಾಡುತ್ತಿರುವ ತಕಧಿಮಿ ತಂಡದ ವಿದ್ಯಾರ್ಥಿಗಳು ಪ್ರದರ್ಶಿಸಿದ ಲೀಲಾಮಾನುಷ ವಿಗ್ರಹ (ಕಂಸ ವಧೆ ಮತ್ತು ನರಕಾಸುರ ವಧೆ) ಪ್ರಸಂಗ ಕಾಲಮಿತಿಯಲ್ಲಿ ಸುಂದರವಾಗಿ ಪ್ರಸ್ತುತಗೊಂಡಿತು. ಕಂಸನ ಸೆರೆಯಲ್ಲಿರುವ ವಸುದೇವ ದೇವಕಿಯರು ಬಿಡುಗಡೆಗಾಗಿ ಕೃಷ್ಣನಿಗೆ ಮೊರೆಯಿಡುವ ದೃಶ್ಯದೊಂದಿಗೆ ಆರಂಭಗೊಂಡ ಈ ಪ್ರದರ್ಶನದಲ್ಲಿ ಕೃಷ್ಣ, ವಿಜಯರ ನಡುವಿನ ನವಿರು ಹಾಸ್ಯದ ಸಂಭಾಷಣೆ, ಅಭಿನಯ ಸೊಗಸಾಗಿತ್ತು. ಶಕಟ, ಧೇನುಕ, ಹಾಗೂ ಇತರ ರಕ್ಕಸ ಬಲಗಳ ವೇಷಭೂಷಣ, ಅಬ್ಬರದ ಪ್ರವೇಶ, ದಿಗಿಣ ಹಾಗೂ ಉತ್ತಮ ಕುಣಿತ ಕಲಾಪ್ರಿಯರಿಗೆ ಮುದ ನೀಡಿತು. ನಿದ್ರೆಯಲ್ಲಿ ಕೆಟ್ಟ ಕನಸುಗಳನ್ನು ಕಂಡು ಭಯಭೀತನಾಗಿ ಬೆಚ್ಚಿ ಬೀಳುವ ಕಂಸನ ಪಾತ್ರಧಾರಿಯ ಅಭಿನಯ ಮನಮೋಹಕವಾಗಿತ್ತು. ವಸುದೇವ – ದೇವಕಿ, ಬಲರಾಮ, ಚಾನೂರ – ಮುಷ್ಟಿಕ ಮಲ್ಲರ ಹಾಗೂ ಇತರ ಪೋಷಕ ಪಾತ್ರಗಳ ನಿರ್ವಹಣೆಯೂ ತೃಪ್ತಿಕರವಾಗಿತ್ತು. ನರಕಾಸುರ ವಧೆಯಲ್ಲಿ ನರಕಾಸುರ ಪಾತ್ರಧಾರಿಯ ಪಾತ್ರ ಪೋಷಣೆ ಅಚ್ಚುಕಟ್ಟಾಗಿತ್ತು. ಕೃಷ್ಣ ಸತ್ಯಭಾಮೆಯರ ನಾಟ್ಯ ವೈವಿಧ್ಯ, ಸೊಗಸಾದ ಭಾವಾಭಿನಯ, ಮಾತಿನ ಸೊಬಗು ಕಲಾರಸಿಕರ ಮನಗೆದ್ದಿತು. ಇನ್ನು ದೇವೇಂದ್ರ ಹಾಗೂ ನರಕಾಸುರನ ಸಹಚರನ ವೇಷಧಾರಿಗಳು ಸಿಕ್ಕಿದ ಚಿಕ್ಕ ಅವಕಾಶದಲ್ಲಿ ಚೊಕ್ಕವಾದ ನಿರ್ವಹಣೆ ನೀಡಿದರು. ಸಮರ್ಥ ಚೆಂಡೆ-ಮದ್ದಳೆ ವಾದಕರ ಸಾಂಗತ್ಯದೊಂದಿಗೆ ಸತೀಶ್‌ ಶೆಟ್ಟಿ ಬೊಂದೇಲ್‌ ತಮ್ಮ ಕಂಚಿನ ಕಂಠದ ಸುಶ್ರಾವ್ಯವಾದ ಭಾಗವತಿಕೆಯಿಂದ ಪ್ರದರ್ಶನದ ಒಟ್ಟಂದವನ್ನು ಹೆಚ್ಚಿಸಿದರು.

ನರಹರಿ ರಾವ್‌ ಕೈಕಂಬ

ಟಾಪ್ ನ್ಯೂಸ್

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

Lok Sabha Election ಹಂತ-1: ಬಹಿರಂಗ ಪ್ರಚಾರಕ್ಕೆ ಇಂದು ತೆರೆ, ನಾಳೆ ಮನೆ ಪ್ರಚಾರ

arvind kejriwal aap

Lok Sabha Election; ಕೇಜ್ರಿವಾಲ್‌ ಸೆರೆ‌ ಆಪ್‌ಗೆ ವರವೇ? ಶಾಪವೇ?

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.