ನೃತ್ಯಾಂತರಂಗ ದೀಪಕ


Team Udayavani, Jul 21, 2017, 3:05 PM IST

21-KALA-1.gif

ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ಆಶ್ರಯದಲ್ಲಿ ಕೆಲವು ವರ್ಷಗಳಿಂದ ನೃತ್ಯಾಂತರಂಗ ಕಾರ್ಯಕ್ರಮ ನಡೆದು ಬರುತ್ತಿದೆ. ನೃತ್ಯಾಂತ ರಂಗ ಕಲಾಶಾಲೆಯ ಮಕ್ಕಳಿಗೊಂದು ವೇದಿಕೆ ಎಂಬಂತೆ ಪ್ರಾರಂಭವಾಯಿತು. ಆದರೆ ಇಂದು ಈ ಚೌಕಟ್ಟನ್ನು ಮೀರಿ ಶ್ರೇಷ್ಠ ಕಲಾವಿದರ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಗಿದೆ. ಇದರ ಮೂಲಕ ದೇಶ ವಿದೇಶಗಳಲ್ಲಿ ಹೆಸರು ಗಳಿಸಿದ ಕಲಾವಿದರನ್ನು ನಮ್ಮೂರಲ್ಲೇ ನೋಡುವ ಭಾಗ್ಯವನ್ನು ಕಲ್ಪಿಸಿಕೊಟ್ಟವರು ಕಲಾಶಾಲೆಯ ಗುರುಗಳಾದ ವಿ| ದೀಪಕ್‌ ಕುಮಾರ್‌ ಹಾಗೂ ಕುಟುಂಬ. 

ಪುತ್ತೂರಿನ ದರ್ಬೆಯಲ್ಲಿರುವ ಶಶಿಶಂಕರ ಸಭಾಭವನದಲ್ಲಿ ನೃತ್ಯಾಂತರಂಗ 29ನೇ ಸರಣಿಯು ನೆರವೇರಿತು. ಕಲಾಶಾಲೆಯ ಗುರುಗಳು, ದೂರದರ್ಶನದ “ಎ’ ಗ್ರೇಡ್‌ ಕಲಾವಿದರಲ್ಲಿ ಒಬ್ಬರಾದ ವಿ| ದೀಪಕ್‌ ಕುಮಾರ್‌ ಭಕ್ತಿಮಾರ್ಗ ಎಂಬ ವಿಷಯಾಧಾರಿತ ನೃತ್ಯ ಪ್ರದರ್ಶನವನ್ನು ನೀಡಿದರು. ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಸರೋಜಿನಿ ನಾಗಪ್ಪಯ್ಯ ಕಾರ್ಯಕ್ರಮ ಉದ್ಘಾಟಿಸಿದರು. 

“ಭಕ್ತಿ ಮಾರ್ಗ’ “ನೃತ್ಯಾಂತರಂಗ’ 29ನೇ ಸರಣಿಯು ಸಂಕೀರ್ಣ ಜಾತಿಯ ಅಲರಿಪುವಿನೊಂದಿಗೆ ಅಚ್ಚುಕಟ್ಟಾಗಿ ಆರಂಭ ಗೊಂಡಿತು. ಸಾಮಾನ್ಯ ವಾಗಿ ಅಲರಿಪು ವಿನಲ್ಲಿ ಒಂದು ಅಥವಾ ಎರಡು ಮಂಡಿ ಅಡವು ಇದ್ದರೆ, ಇಲ್ಲಿ ಮೂರು ಕ್ಲಿಷ್ಟಕರವಾದ ಮಂಡಿ ಅಡವುಗಳಿದ್ದು, ಶೊಲ್ಲುಕಟ್ಟುಗಳು ಬಹಳ ಕ್ಲಿಷ್ಟವಾಗಿದ್ದವು. ಇದು ಗಮನಾರ್ಹ ವಿಷಯ. ತದನಂತರ ಮೂಡಿಬಂದ ಲತಾಂಗಿ ರಾಗ, ಆದಿತಾಳದ ಮುಖ್ಯ ನೃತ್ಯಬಂಧ ವರ್ಣದಲ್ಲಿ ವಿಶ್ವವ್ಯಾಪಿ ಯಾದ, ಅತಿ ಸುಂದರನೂ ಆದ ನೀಲಕಂಠ ಅರ್ಧನಾರೀಶ್ವರ ಶಿವನನ್ನು ವರ್ಣಿಸುತ್ತಾ ಆತನ ದರ್ಶನಕ್ಕಾಗಿ ಹಂಬಲಿಸುವ ಭಕ್ತ, ಶಿವನ ಸಾಕ್ಷಾತ್ಕಾರವನ್ನು ಪಡೆದು ಆನಂದಿಸುವುದು ಅತಿ ಆಹ್ಲಾದಕಾರಿಯಾಗಿತ್ತು. ಪಂಚಭೂತಗಳಲ್ಲಿ ವ್ಯಾಪಿಸಿ ರುವ ಶಿವ ಸಕಲ ಜೀವಿಗಳ ಆಧಾರವಾಗಿ ಮಾನವನಲ್ಲಿ ಲೀನವಾಗಿದ್ದಾನೆ. ಮಾನವನು ಅರಿಷಡ್ವೆ„ರಿಗಳನ್ನು ಮೆಟ್ಟಿ ಶಿವನ ಪಾದಕ್ಕೆ ಎಂದು ಪೂರ್ತಿಯಾಗಿ ಶರಣೆನ್ನುತ್ತಾನೋ ಆಗ, ಶಿವ ತನ್ನ ಅಭಯಹಸ್ತವನ್ನು ಚಾಚಿ ಆತನನ್ನು ಪೊರೆಯುತ್ತಾನೆಂದು ಸೃಷ್ಟಿ, ಸ್ಥಿತಿ, ಲಯ, ಶರಣಾಗತಿ ಹಾಗೂ ಆತೊದ್ಧಾರದ ಸಂಕೇತ ನಟರಾಜನನ್ನು ಈ ವರ್ಣದಲ್ಲಿ ನಿರೂಪಿಸಿದರು. ಅದಲ್ಲದೆ, ವೀರ ಮತ್ತು ಲಾಸ್ಯ ಭಾವದೊಂದಿಗೆ ಅರ್ಧ ನಾರೀಶ್ವರನನ್ನು ಪ್ರತಿಪಾದಿಸುವ ಒಂದು ಚರಣದ ಭಾಗ ಸೊಗಸಾಗಿ ಮೂಡಿಬಂದಿತು. ಈ ವರ್ಣದಲ್ಲಿನ ಕ್ಲಿಷ್ಟ ಜತಿಗಳು ನೃತ್ಯಗಾರನ ಸಾಧನೆ, ನಟುವಾಂಗದವರ ಪರಿಶ್ರಮಕ್ಕೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು. 

ಇದಾದ ಬಳಿಕ ಶ್ರೀರಾಮಚಂದ್ರ ಕೃಪಾಳು ಭಜಮನ ಎಂದು ಶ್ರೀರಾಮನ ಗುಣಗಾನ ಮಾಡುತ್ತಾ, ರಾಮನ ಜೀವನದ ಮುಖ್ಯ ಹಂತಗಳನ್ನು ಅತಿ ಸುಂದರವಾಗಿ ಪೋಣಿಸುತ್ತಾ ಮಾಡಿದ ಈ ನೃತ್ಯದಲ್ಲಿ ದಶರಥನ ಪುತ್ರ ವಾತ್ಸಲ್ಯ, ರಾಮ ಸೌಂದರ್ಯ, ಸೀತಾ-ರಾಮ ಕಲ್ಯಾಣ ವೈಭೋಗ ಮುಂತಾದ ದೃಶ್ಯಗಳು ಮೂಡಿಬಂದವು. ಅಹಲ್ಯಾ ಶಾಪ ವಿಮೋಚನೆಯ ಸಂದರ್ಭದಲ್ಲಿ ನೃತ್ಯ ಗಾರನೇ ಶಬರಿಯಾಗುತ್ತಾ ರಾಮನ ದರ್ಶನದ ಪರಮಾ ನಂದವನ್ನು ತಾನು ಅನುಭವಿಸಿ, ಸೇರಿದ ಪ್ರತಿಯೋರ್ವ ನಿಗೂ ಉಣಬಡಿಸಿದರು. ಆ ಅನುಭವ ಎಲ್ಲರನ್ನೂ ಒಂದು ಕ್ಷಣ ಮಂತ್ರಮುಗ್ಧರನ್ನಾಗಿಸಿತು, ಎಂದರೆ ಅತಿಶಯೋಕ್ತಿಯಲ್ಲ.

ಕೊನೆಯಲ್ಲಿ ಲವಂಗಿ ರಾಗ, ಆದಿತಾಳದಲ್ಲಿ ತಿಲ್ಲಾನ ಮೂಡಿ ಬಂದಿತು. ಹಾಡುಗಾರ ಹಾಗೂ ನೃತ್ಯಗಾರನ ಜುಗಲ್‌ಬಂದಿಯೇ ನೃತ್ಯದ ಗಮನಾರ್ಹ ವಿಷಯ. ಸಂಗೀತದಲ್ಲಿನ ಮನೋಧರ್ಮವನ್ನು ನೃತ್ಯದಲ್ಲೂ ಪ್ರಸ್ತುತಪಡಿಸಲು ಸಾಧ್ಯ ಎಂಬ ಅಂಶವನ್ನು ತಿಲ್ಲಾನದಲ್ಲಿ ತೋರಿಸಿದ್ದು ಕಲಾವಿದರ ವೈಶಿಷ್ಟ. 

ನಟುವಾಂಗ ಮತ್ತು ಹಾಡುಗಾರಿಕೆ ಎರಡನ್ನೂ ಸಮರ್ಥವಾಗಿ ನಿಭಾಯಿಸಿದ ವಿ| ಪ್ರೀತಿಕಲಾ ಅವರ ನೈಪುಣ್ಯ ಹಾಗೂ ವಿದ್ವತ್ತು ಈ ನೃತ್ಯ ಕಾರ್ಯಕ್ರಮದಲ್ಲಿ ಬಿಂಬಿತವಾಯಿತು. ಮೃದಂಗದಲ್ಲಿ ವಿ| ಗೀತೇಶ್‌ ನೀಲೇಶ್ವರ ಹಾಗೂ ಕೊಳಲಿನಲ್ಲಿ ವಿ| ರಾಜ ಗೋಪಾಲ ಕಾಞಂಗಾಡ್‌ ಸಹಕರಿಸಿದರು. ಕಲಾಶಾಲೆಯ ವಿದ್ಯಾರ್ಥಿನಿಯರಾದ ಸಾಯಿ ಪದ್ಮಾ ಡಿ. ಎಸ್‌. ಅವರ ನಿರೂಪಣೆ, ಅಪೂರ್ವ ದೇವಸ್ಯ ಅವರಿಂದ ಅತಿಥಿಗಳ ಪರಿಚಯ ಹಾಗೂ ವಿದ್ಯಾರ್ಥಿ ಆಶ್ರಯ ನಾಯಕ್‌ ಅವರಿಂದ ಕಲಾವಿದರ ಪರಿಚಯ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು. 

ಪದ್ಮಶ್ರೀ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.