ಹೊಸ ಕ್ಷಿತಿಜ ತೋರಿಸಿದ ಭರತ ನೃತ್ಯ


Team Udayavani, Dec 14, 2018, 6:00 AM IST

2.jpg

ಭರತನಾಟ್ಯದ ಇನ್ನೊಂದು ಆಯಾಮವೇ ಭರತ ನೃತ್ಯ. ಸುಂದರವಾದ ಕರಣ ಹಾಗೂ ಚಾರಿಗಳನ್ನೊಳಗೊಂಡ ಭರತ ನೃತ್ಯವು ಬೆಂಗಳೂರಿನ ವಿ| ಕ್ಷಿತಿಜಾ ಕಾಸರವಳ್ಳಿಯವರಿಂದ ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ನೃತ್ಯಾಂತರಂಗ ಸರಣಿ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡಿತು. 

ಸುಂದರವಾದ ಕನ್ನಡದ ರಚನೆಯುಳ್ಳ ವಿದ್ವಾನ್‌ ಜಿ.ಗುರುಮೂರ್ತಿಯವರಿಂದ ರಚಿತವಾದ,ಹಾಗೂ ವಿದ್ವಾನ್‌ ಬಾಲಸುಬ್ರಮಣ್ಯ ಶರ್ಮಾ ಇವರಿಂದ ರಾಗ ಸಂಯೋಜಿಸಲ್ಪಟ್ಟ ನರಸಿಂಹ ಕೌತ್ವಂನ ಮೂಲಕ ನರಸಿಂಹ ದೇವರ ವಿವಿಧ ಸ್ವರೂಪಗಳ ವರ್ಣನೆಯೊಂದಿಗೆ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು.ನರಸಿಂಹನ ವರ್ಣನೆಗೆ ಸಂಬಂಧಪಟ್ಟ ಆಯಾ ಭಾವನೆಗಳಿಗೆ ತಕ್ಕುದಾದ ರಾಗಗಳನ್ನೊಳಗೊಂಡ ಈ ಕೌತ್ವಂ ಅನ್ನು ವಿವಿಧ ಚಾರಿ, ಕರಣ,ಭಂಗಿಗಳ ಮೂಲಕ ಪ್ರೇಕ್ಷಕರ ಚಪ್ಪಾಳೆಯ ಮೆಚ್ಚುಗೆಗೆ ಪಾತ್ರರಾದರು.

ನಂತರ ಶುದ್ಧ ಸಂಗೀತ ಪ್ರಕಾರದ ರಚನಾ ವಿಶೇಷತೆಯಾದ ಕೃತಿಯ ಮೂಲಕ ತಂಜಾವೂರು ಶಂಕರ್‌ ಅಯ್ಯರ್‌ರವರ ರಚನೆಯಾದ ದೇವಿಯನ್ನು ವರ್ಣಿಸುವ ರಂಜನಿ ಮಾಲೆಯನ್ನು ಅವರ ನೃತ್ಯ ಶೈಲಿಯ ಮೂಲಕ ಪ್ರಸ್ತುತ ಪಡಿಸಿದರು.ಕರ್ನಾಟಕ ಸಂಗೀತದ ನಾಲ್ಕು ವಿಶೇಷವಾದ ರಂಜನಿ, ಶ್ರೀ ರಂಜನಿ, ಮೇಘರಂಜನಿ ಮತ್ತು ಜನರಂಜನಿ ರಾಗಗಳ ರಾಗಮುದ್ರೆಯನ್ನೊಳಗೊಂಡ ಸಾಹಿತ್ಯಕ್ಕೆ ಕಲಾವಿದೆಯು ತಮ್ಮ ಕಲಾಪೌಢಿಮೆಯ ಮೂಲಕ ರಸಿಕರ ಮನಗೆದ್ದರು.

 ಕೃಷ್ಣನಿಲ್ಲದೆ ಬದುಕಲಾರದೆ ತೊಳಲಾಡುತ್ತಿರುವ ದಾಸಿಯು, ತನ್ನ ಬದುಕು ಕಮಲವಿಲ್ಲದ ಕೆರೆಯಂತೆ,ಚಂದ್ರನಿಲ್ಲದ ರಾತ್ರಿಯಂತೆ ಭಾಸವಾಗುತ್ತಿದೆ ಎಂಬ ಸಾಹಿತ್ಯವನ್ನೊಳಗೊಂಡ ನಾಡಿನ ಹೆಸರಾಂತ ಕವಿ ಶ್ರೀ ಎನ್‌.ಎಸ್‌ ಲಕ್ಷ್ಮೀನಾರಾಯಣ ಭಟ್‌ ರವರು ರಚಿಸಿದ “ನೀ ಸಿಗದೆ ಬಾಳೊಂದು ಬಾಳೇ ಕೃಷ್ಣ…’ಎಂಬ ಭಾವಗೀತೆಯ ಮೂಲಕ ಕೃಷ್ಣನಿಗಾಗಿ ಪರಿತಪಿಸಿ ನಿದ್ದೆಯೂ ಬಾರದೆ, ಆಹಾರವು ಸೇರದೆ ಕೊನೆಗೆ ಅಂತರ್ಯಾಮಿಯಾಗಿ ಒಳಗಿರುವ ಚೈತನ್ಯ ರೂಪಿಯಾದ ಕೃಷ್ಣನನ್ನೇ ಹೊರಗೆ ಅವಿರ್ಭವಿಸು ಎಂದು ಕರೆಕೊಡುವ,ಮೊರೆಯಿಡುವ ನಾಯಕಿಯ ವಿರಹವೇದನೆಯನ್ನು ತನ್ನ ಅಭಿನಯದಿಂದ ಪ್ರೇಕ್ಷಕರನ್ನು ರೋಮಾಂಚಿತರನ್ನಾಗಿ ಮಾಡಿದರು.

ನಿರಂತರ ಪ್ರೀತಿ ಮತ್ತು ಭಕ್ತಿಯಂದ ಕೃಷ್ಣನನ್ನು ಆರಾಧಿಸುವುದರಿಂದ ದೇವರ ಸಾನಿಧ್ಯ ಪಡೆಯಬಹುದು ಎಂದು ವೇದ ಸಿದ್ಧಾಂತವು ಹೇಳಿದೆ.ಈ ಸಿದ್ಧಾಂತವನ್ನು ಪುಷ್ಟಿಮಾರ್ಗ ಎಂದು ವಲ್ಲಭಾಚಾರ್ಯರು ಕರೆದರು.ಅವರು ಸಂಸ್ಕೃತದಲ್ಲಿ ರಚಿಸಿದ “ಮಧುರಾಷ್ಟಕಂ’ ಅನ್ನು ಕಲಾವಿದೆಯು ವಿವಿಧ ಚಾರಿ ಕರಣಗಳನ್ನು ಅಳವಡಿಸಿಕೊಂಡು ಅಭಿನಯಿಸಿದರು. ಕೃಷ್ಣನಿಗೆ ಸಂಬಂಧಪಟ್ಟ ಎಲ್ಲಾ ವಿಷಯಗಳು ಮಧುರವಾಗಿದೆ ಎಂದು ಕೃಷ್ಣನ ಕೆಲವು ಲೀಲೆಗಳನ್ನು ತೋರಿಸುವ ಮೂಲಕ ಸುಂದರವಾಗಿ ಪ್ರದರ್ಶಿಸಿದರು.

ಭರತನಾಟ್ಯದಲ್ಲಿ ಕೊನೆಯದಾಗಿ ಪ್ರಸ್ತುತಗೊಳ್ಳುವ ಚುರುಕಾದ, ಲವಲವಿಕೆಯ, ಕ್ಷಿಪ್ರಗತಿಯ ನೃತ್ಯಬಂಧವೇ ತಿಲ್ಲಾನ. ಕ್ಷಿತಿಜಾರವರು ವಿದ್ವಾನ್‌ ಡಿ.ವಿ ಪ್ರಸನ್ನ ಕುಮಾರ್‌ರವರ ರಚನೆ ಹಾಗೂ ವಿ| ಕೆ.ಎಸ್‌. ಜಯರಾಮ್‌ರವರ ಸಂಗೀತ ಸಂಯೋಜನೆಯ ತಿಲ್ಲಾನವನ್ನು ಪ್ರದರ್ಶಿಸುವ ಮೂಲಕ ಮೆಚ್ಚುಗೆ ಪಡೆದರು. 

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.