ಮೋಡಿ ಮಾಡಿದ ನೃತ್ಯಂ ಸಮರ್ಪಯಾಮಿ 


Team Udayavani, Sep 21, 2018, 6:00 AM IST

z-6.jpg

ಕು| ಅನುಷಾ ಜೈನ್‌ ನೆಲ್ಯಾಡಿ ಇವರ ನೃತ್ಯಂ ಸಮರ್ಪಯಾಮಿ ಭರತ ನಾಟ್ಯ ಕಾರ್ಯಕ್ರಮ ಇತ್ತೀಚೆಗೆ ಪುತ್ತೂರಿನ ನಟರಾಜ ವೇದಿಕೆಯಲ್ಲಿ ನಡೆಯಿತು. ಮೊದ ಲಿಗೆ ಪುಷ್ಪಾಂಜಲಿಯಲ್ಲಿ ರಾಗ ಹಂಸಧ್ವನಿ, ತಿಶ್ರ, ತ್ರಿಪುಟತಾಳದಲ್ಲಿ ಪುಷ್ಪಾಂಜಲಿ ಎಂದರೆ ಕೈಯಲ್ಲಿ ಪುಷ್ಪಪುಟ ಹಸ್ತದಲ್ಲಿ ಪುಷ್ಪಗಳನ್ನು ಹಿಡಿದು ರಂಗಾದಿ ದೇವತೆಗಳಿಗೆ ನಟರಾಜನಿಗೆ ಪುಷ್ಪಗಳನ್ನು ಅರ್ಪಿಸಿ ಎಲ್ಲರಿಗೆ ವಂದಿಸಿ ಕಾರ್ಯಕ್ರಮದ ಯಶಸ್ಸಿಗೆ ಪ್ರಾರ್ಥಿಸುವಂತಹ ಒಂದು ಸುಂದರ ನೃತ್ಯಬಂಧವಾಗಿದೆ. ಇದರಲ್ಲಿ ಕ್ಲಿಷ್ಟಕರವಾದ ಅಡವುಗಳು ಇದ್ದು ತಿಶ್ರ ತ್ರಿಪುಟ. ಅದು ಇನ್ನೊಂದು ರೀತಿಯಲ್ಲಿ ಮಿಶ್ರ ಛಾಪು ತಾಳದ ಮತ್ತೂಂದು ಪರಿಕಲ್ಪನೆಯಾಗಿತ್ತು. ಅದಕ್ಕೆ ಬೇರೆ ಬೇರೆ ಪಂಚನಡೆಯಲ್ಲಿ ಹೆಜ್ಜೆ ವಿನ್ಯಾಸಗಳನ್ನು ಅಳವಡಿಸಲಾಗಿತ್ತು. ವಿಶೇಷ ಎಂದರೆ ಮುಂದಿನ ಶ್ಲೋಕದ ನೃತ್ಯವನ್ನು ವೇದಿಕೆಯಿಂದ ನಿರ್ಗಮಿಸಿದೇ ಮಾಡಿದ್ದು. ಶ್ರೀ ಕಾಂತೋ ಮಾತಲೋ ಯಸ್ಯ ಜನನೀ…ಸರ್ವಮಂಗಳಾ ಜನಕ ಶಂಕರಾ ದೇವಾ… ಯಾವನಿಗೆ ವಿಷ್ಣುವು ಸೋದರ ಮಾವನಾಗಿದ್ದನೋ ಯಾರಿಗೆ ಸರ್ವ ಮಂಗಳೆಯ ತಾಯಿಯಾಗಿದ್ದಾಳ್ಳೋ ಯಾರಿಗೆ ಶಿವನು ತಂದೆಯಾಗಿದ್ದಾನೆಯೋ ಅಂತಹ ವಿಘ್ನವಿನಾಯಕ ಗಣಪತಿಗೆ ವಂದಿಸುವೆನು. ಈ ಪ್ರತಿಯೊಂದು ಸಾಲಿನಲ್ಲೂ ಚಿಕ್ಕ ಚಿಕ್ಕ ಕಥೆಗಳನ್ನು ಬಹಳ ಸೊಗಸಾಗಿ ಅಳವಡಿಸಲಾಗಿತ್ತು. 

ಅನಂತರ “ಮುದಾಕರಾಕ್ತ ಮೋದಕಂ’ ಹಾಡು. ಇದು ರಾಗಮಾಲಿಕೆ ಹಾಗೂ ತಿಶ್ರ ನಡೆ ಆದಿತಾಳದಲ್ಲಿದೆ. ಈ ನೃತ್ಯದಲ್ಲಿ ಐದು ಚರಣಗಳಲ್ಲಿ ಅಳವಡಿಸಿದ ವಿವಿಧ ರೀತಿಯ ತಟ್ಟು ಮೆಟ್ಟುಗಳು ಬಹಳಷ್ಟು ಮೆಚ್ಚುವಂತದ್ದು. ಮೂರನೆಯ ನೃತ್ಯ ನಾಟ್ಯ ನೀಲಾಂಜನೇ. ಡಿ.ವಿ.ಜಿ ಯವರ ಅಂತಪುರ ಗೀತೆಯಿಂದ ಪ್ರೇರೇಪಿತರಾಗಿ ಜೈನ ಸಾಹಿತಿಯಲ್ಲಿ ಪಂಪನ ಆದಿ ಪುರಾಣದಲ್ಲಿ ಬರುವಂತಹ ಒಂದು ಪಾತ್ರ ನೀಲಾಂಜನೆ ಎಂಬ ಅಪ್ಸರ ಸ್ತ್ರೀಯ (ನೃತ್ಯಗಾತಿಯ) ವರ್ಣನೆ ಮಾಡಲಾಗಿದೆ. ನೀಲಾಂಜನೆಯ ಓರ್ವ ಸಖೀಯಾಗಿ ಕಲಾವಿದೆಯು ನೀಲಾಂಜನೆಯೊಂದಿಗೆ ಸರಸ ಸಂಭಾಷಣೆಯನ್ನು ಮಾಡುವಂತಹ ನೃತ್ಯ ಇದಾಗಿದೆ. ನಾಟ್ಯ ವಿಲಾಸ, ನವಭಾವ ರಾಗದಿಂದ ಕೂಡಿದ ನಿನ್ನ ಅಭಿನಯವೇನೆಂದು ವರ್ಣಿಸಲಾಗಿದೆ. ನಂತರ ಮುಖ್ಯ ನೃತ್ಯ ಬಂಧವಾಗಿ ಮೂಡಿ ಬಂದದ್ದು ಪದವರ್ಣ. ಇದು ಷಣ್ಮುಖ ಪ್ರಿಯರಾಗ ಆದಿತಾಳ ವೀಣೇ ಶೇಷ ಅಯ್ಯರ್‌ ರಚಿಸಿದ ದೇವಾದಿ ದೇವ ನಟರಾಜ ಚಿದ‌ಂಬರ ದೇವಸ್ಥಾನದಲ್ಲಿರುವ ನಟರಾಜನ ವರ್ಣನೆಯನ್ನು ಮಾಡಲಾಗಿದೆ. ವರ್ಣದಲ್ಲಿ ಅನಾಯಾಸವಾಗಿ ಸುಮಾರು ಮೂವತ್ತರಿಂದ ನಲುವತ್ತು ನಿಮಿಷಗಳ ಕಾಲ ನೃತ್ಯ ಮಾಡಿದ್ದು ಸಾಧನೆಗೆ ಹಿಡಿದ ಕನ್ನಡಿ.

ನಂತರದ ಹಾಡು ಹಿಂದಿಯದ್ದಾಗಿದ್ದು ಮಯ್ನಾ ಮೋರೆ ಮೇ ನಾಯಿ ಖಾಯೇ… ಕೃಷ್ಣ ಬೆಣ್ಣೆ ಕದ್ದು ತಿನ್ನುವ ಸನ್ನಿವೇಶ. ಕೊನೆಯ ನೃತ್ಯ ತಿಲ್ಲಾನ. ಇದು ಖ್ಯಾತ ವಯಲಿನ್‌ ವಾದಕರಾದ ಲಾಲ್ಗುಡಿ ಡಿ. ಜಯರಾಮ ಅವರ ರಚನೆಯಾಗಿದೆ. ಆದಿತಾಳ ಸುಂದರವಾದ ಅಡವು ಅಲ್ಲದೆ ಗೆತ್ತು ಅಂದರೆ ಸವಾಲ್‌, ಜವಾಬ್‌, ಜುಗಲ್‌ ಬಂದಿಯ ರೀತಿಯಲ್ಲಿದೆ. ಶೊಲ್‌ಕಟ್‌ಗಳನ್ನು ಬಾಯಲ್ಲಿ ಹೇಳಲಾಗುತ್ತದೆ. ಅದಕ್ಕೆ ಸರಿಯಾಗಿ ಮೃದಂಗ, ನಟುವಾಂಗ, ಹೆಜ್ಜೆ ಗೆಜ್ಜೆ ಶಬ್ಧದ ಪ್ರಸ್ತುತಿ ಕೊನೆಯಲ್ಲಿ ಎಲ್ಲಾರು ಒಟ್ಟಿಗೆ ನುಡಿಸಿ, ನರ್ತಿಸಿ ಮುಕ್ತಾಯವಾಗುತ್ತದೆ. ಇದು ಬಹಳ ನಯನ ಮನೋಹರವಾದ ಪ್ರಸಂಗ. ಕೊಳಲಿನಲ್ಲಿ ಕಾಂಞಗಾಡ್‌ ರಾಜಗೋಪಾಲ್‌ , ಮೃದಂಗದಲ್ಲಿ ಗೀತೇಶ್‌, ನೀಲೇಶ್ವರ ಸಾಥ್‌ ನೀಡಿದ್ದಾರೆ. 

 ವೇಣಿಪ್ರಸಾದ್‌

ಟಾಪ್ ನ್ಯೂಸ್

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

13-

Woman: ಸದಾಕಾಲ ಸಾಧಕಿ ಹೆಣ್ಣು

12-

Sirsi Festival: ನಾವು ಬಂದೇವ ಶಿರಸಿ ಜಾತ್ರೆ ನೋಡಲಿಕ್ಕೆ !

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.