ಕೊಂಕಣಿಯಲ್ಲಿ ಭಾರ್ಗವ ವಿಜಯ


Team Udayavani, Apr 19, 2019, 6:00 AM IST

2

ಇತ್ತೀಚೆಗೆ ಮಂಗಳೂರಿನ ಪುರಭವನದಲ್ಲಿ ಕೊಂಕಣಿ ಸಾಂಸ್ಕೃತಿಕ ಸಂಘ ( ರಿ. ) ಮಂಗಳೂರು ಇದರ ಸದಸ್ಯರು ಕೊಂಕಣಿ ಭಾಷೆಯಲ್ಲಿ ಪ್ರದರ್ಶಿಸಿದ ಭಾರ್ಗವ ವಿಜಯ ಉತ್ತಮವಾಗಿ ಪ್ರಸ್ತುತಗೊಂಡಿತು . ಕನ್ನಡ ಹೊರತು ಪಡಿಸಿ ಇತರ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನಗೊಂಡಾಗ ಸ್ವಲ್ಪ ಮಟ್ಟಿನ ಭಿನ್ನತೆ , ಗೊಂದಲ ಕಾಣವುದು ಸಹಜ . ಆದರೆ ಕೊಂಕಣಿ ಭಾಷೆಯಲ್ಲಿ ಪ್ರದರ್ಶನಗೊಂಡ ಭಾರ್ಗವ ವಿಜಯ ಈ ಎಲ್ಲಾ ಭಿನ್ನತೆಯನ್ನು ಮೀರಿ ಪ್ರದರ್ಶನಗೊಂಡಿತು.

ಪತ್ನಿಯಾದ ರೇಣುಕೆಯ ಪಾತಿವ್ರತ್ಯದ ಬಗ್ಗೆ ಶಂಕಿತಗೊಂಡ ಜಮದಗ್ನಿ ಮಹರ್ಷಿಯು ಮಗನಾದ ಪರಶುರಾಮನಿಂದಲೇ ,ಪತ್ನಿಯ ರುಂಡ ಕತ್ತರಿಸುತ್ತಾನೆ . ನಂತರ ಪರಶುರಾಮನ ಅಪೇಕ್ಷೆಯಂತೆ ರೇಣುಕೆಯನ್ನು ಬದುಕಿಸಿ ತನ್ನ ಕೋಪ ವನ್ನು ತ್ಯಜಿಸುತ್ತಾನೆ.

ಮಾಹಿಷ್ಮತಿಯ ಚಕ್ರವರ್ತಿಯಾದ ಕಾರ್ತ್ಯ ಬೇಟೆಗೆಂದು ಬಂದಾಗ ಜಮದಗ್ನಿ ಮಹರ್ಷಿಗಳ ಅಪೇಕ್ಷೆಯಂತೆ ಪರಿವಾರ ಸಹಿತ ಸುಗ್ರಾಸ ಭೋಜನ ಸ್ವೀಕರಿಸುತ್ತಾನೆ. ಇದಕ್ಕೆಲ್ಲ ಕಾರಣ , ಜಮದಗ್ನಿಯ ಬಳಿ ಇರುವ ದೇವೇಂದ್ರನಿಂದ ಕೊಡಲ್ಪಟ್ಟ ಧೇನುವೆಂದು ಅರಿತು ಅದನ್ನು ಬಲಾತ್ಕಾರವಾಗಿ ಕೊಂಡೊಯ್ಯುತ್ತಾನೆ . ದುಃಖೀತನಾದ ಜಮದಗ್ನಿಯನ್ನು ಕಂಡು ಪರಶುರಾಮನು ಕಾರ್ತ್ಯನನ್ನು ಸಂಹರಿಸಿ ಧೇನುವನ್ನು ಮರಳಿ ಪಡೆಯುತ್ತಾನೆ .ಇವಿಷ್ಟು ಕಥಾನಕವನ್ನೊಳಗೊಂಡ ಭಾರ್ಗವ ವಿಜಯ ಎರಡೂವರೆ ತಾಸಿನ ಕಾಲಮಿತಿಯಲ್ಲಿ ಸುಂದರವಾಗಿ ಪ್ರಸ್ತುತಗೊಂಡಿತು.

ಹವ್ಯಾಸಿ ಕಲಾವಿದರಾದ ಕೊಂಕಣಿ ಸಾಂಸ್ಕೃತಿಕ ಸಂಘದ ಸದಸ್ಯರೇ ಭೂಮಿಕೆಯಲ್ಲಿ ಕಾಣಿಸಿಕೊಂಡರು. 15 ರಿಂದ 70ರ ವಯಸ್ಸಿನ ಸದಸ್ಯರು ಉತ್ಸಾಹದಿಂದ ಪಾತ್ರ ನಿರ್ವಹಿಸಿದರು. ಪೂರ್ವಾರ್ಧದ ಜಮದಗ್ನಿಯಾಗಿ ಎಂ.ಆರ್‌.ಕಾಮತ್‌ ಹಾಗೂ ಉತ್ತರಾರ್ಧದಲ್ಲಿ ನಿವೇದಿತಾ ಪ್ರಭು , ರೇಣುಕೆಯಾಗಿ ಹಿರಿಯ ಕಲಾವಿದೆ ಪ್ರಫ‌ುಲ್ಲಾ ಹೆಗ್ಡೆ , ಕೋಪ ದ ಪಾತ್ರದಲ್ಲಿ ಭೀಮನಮುಡಿ ಧರಿಸಿ ಎಂ.ಶ್ರೀನಿವಾಸ ಕುಡ್ವ ಮಿಂಚಿದರು . ಭಾರ್ಗವನಾಗಿ ಹನುಮಗಿರಿ ಮೇಳದ ಪ್ರಸಿದ್ಧ ಪುಂಡುವೇಷಧಾರಿಯಾದ ಪ್ರಕಾಶ್‌ ನಾಯಕ್‌ ನೀರ್ಚಾಲ್‌ರವರು ಯಕ್ಷಗಾನದ ವಿವಿಧ ಪರಂಪರೆಯ ನಾಟ್ಯ ವೈವಿಧ್ಯದ ಮೂಲಕ ಕರತಾಡನಕ್ಕೆ ಪಾತ್ರರಾದರು. ಕಾರ್ತ್ಯನಾಗಿ ಸಾಣೂರು ಮೋಹನದಾಸ್‌ ಪ್ರಭು ರಾಜವೇಷದ ಗಾಂಭೀರ್ಯಕ್ಕೆ ಕಳೆ ತಂದರು. ಕಿರಾತಪಡೆಯ ಮುಖಂಡನಾಗಿ ಎಂ.ಶಾಂತರಾಮ ಕುಡ್ವರು ಪಾರಂಪರಿಕ ಹಾಸ್ಯದ ಮೂಲಕ ರಸಿಕರ ಮನ ಸೂರೆಗೊಂಡರು. ಶತ್ರುಜಿತುವಾಗಿ ಗಜಾನನ ಶೆಣೈ ಹಾಗೂ ಕಾಲಜ್ಞನಾಗಿ ಗುರುಮೂರ್ತಿಯವರು ಉತ್ತಮ ನಿರ್ವಹಣೆ ನೀಡಿದರು . ಜಮದಗ್ನಿಯ ಮಕ್ಕಳಾಗಿ ವೈದ್ಯ ಡಾ| ಸುದೇಶ್‌ ರಾವ್‌, ಗೋವಿಂದರಾಯ ಪ್ರಭು, ಕೇಶವ ಕಾಮತ್‌ ಹಾಗೂ ಕು|ವೈಶಾಲಿಯವರು ಉತ್ತಮ ಕುಣಿತದ ಮೂಲಕ ರಂಜಿಸಿದರು . ಕಿರಾತ ಪಡೆಯವರಾಗಿ ಪ್ರಭಾ ಭಟ್‌, ಪ್ರವೀಣ್‌ ಕಾಮತ್‌, ದೀಪಾ ಕಾಮತ್‌, ಅರುಣಾ ಪ್ರಭು, ಮಾ| ಕಾರ್ತಿಕ್‌ ಹಾಗೂ ಮಾ| ಹೃತಿಕ್‌ರವರು ಶಾಂತರಾಮ ಕುಡ್ವರ ಹಾಸ್ಯರಸೋತ್ಕರ್ಷೆಗೆ ಪೂರಕವಾದರು. ಹಿಮ್ಮೇಳದಲ್ಲಿ ದಯಾನಂದ ಕೋಡಿಕ್ಕಲ್‌ , ರಾಮ ಹೊಳ್ಳ , ಕೃಷ್ಣರಾಜ್‌ ಹಾಗೂ ಶ್ರೀಕಾಂತ್‌ ಸಹಕರಿಸಿದರು.

ಎಂ.ಗಿರಿಧರ್‌ ಪಿ.ನಾಯಕ್‌

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.