ಅಚ್ಚುಕಟ್ಟಾಗಿ ಅಬ್ಬರಿಸಿದ ಭೌಮಾಸುರ


Team Udayavani, Feb 21, 2020, 5:10 AM IST

kala-12

ಕಿನ್ನಿಕಂಬಳ ಶ್ರೀ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಕಾಲಮಿತಿಯ ಯಕ್ಷತಾರಾ ಮೇಳ ಬೆಳ್ಮಣ್ಣು ಇದರ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಪ್ರದರ್ಶಿತವಾದುದು ಅಮೃತ ಸೋಮೇಶ್ವರ ವಿರಚಿತ “ಭೌಮಾಸುರ ‘ ಪ್ರಸಂಗ. ಭಾಗವತರಾಗಿ ದಯಾನಂದ ಕೋಡಿಕಲ…, ಮದ್ದಳೆ ವಾದನದಲ್ಲಿ ಜಯಕರ ಪಂಡಿತ್‌, ಚೆಂಡೆವಾದಕರಾಗಿ ಸ್ಥಳೀಯ ಪ್ರತಿಭೆ ಸುಮಿತ್‌ ಆಚಾರ್ಯ ಕಿನ್ನಿಕಂಬಳ, ಚಕ್ರತಾಳದಲ್ಲಿ ಧನುಷ್‌ ಎಕ್ಕಾರು ಭಾಗವಹಿಸಿದ್ದರು.

ಅಮಿತಾ ಪೊಳಲಿ ದೇವೇಂದ್ರನಾಗಿ ಸೊಗಸಾದ ಮಾತುಗಾರಿಕೆ, ಕುಣಿತಗಳಿಂದ ಮನಗೆದ್ದರೆ, ಆಶಿತಾ ಸುವರ್ಣರವರ ನರಾಕಾಸುರನ ಪಾತ್ರ ಅಬ್ಬರದ ಸುಂದರ ರಂಗಚಲನೆ, ಗಂಭೀರ ಧ್ವನಿಯ ಸ್ಪಷ್ಟವಾದ ಮಾತುಗಳಿಂದ ವೀರರಸದ ಸಮರ್ಥ ಅಭಿವ್ಯಕ್ತಿ ಎನಿಸಿತು. ಮುರಾಸುರನಾಗಿ ಚರಣ್‌ರಾಜ್‌ ಕೆಲವೇ ನಿಮಿಷಗಳ ಅವಧಿಯ ಪಾತ್ರವಾದರೂ ಚೆಂದದ ಅಭಿನಯದಿಂದ ರಂಗವನ್ನು ತುಂಬಿದರು. ತಾರನಾಥ ವರ್ಕಾಡಿ ಹಾಗೂ ಅವರ ಪುತ್ರಿ ಆಜ್ಞಾಸೋಹಮ್‌ರವರ ಜೋಡಿ ಶ್ರೀಕೃಷ್ಣ- ಸತ್ಯಭಾಮರಾಗಿ ಸು#ಟವಾದ ಹಾಸ್ಯ-ಲಾಸ್ಯ ಭರಿತ ಸಂಭಾಷಣೆ ಮತ್ತು ಮೋಹಕವಾದ ನಾಟ್ಯಗಾರಿಕೆಗಳಿಂದ ಪ್ರಮುಖ ಆಕರ್ಷಣೆ ಎನಿಸಿತು. ಭಾವಾಭಿನಯ ಪ್ರಾಸಬದ್ಧ ನುಡಿಗಳಿಂದ, ತಾತ್ವಿಕ ಚಿಂತನ ಲಹರಿಗಳಿಂದ ವರ್ಕಾಡಿ ರಂಜಿ ಸಿ ದರೆ ಸಂತಸ, ಕುತೂಹಲ, ಭಯ, ಹಠ, ವೀರತನ ಹೀಗೆ ಸರ್ವಭಾವಗಳನ್ನೂ ಮುದ್ದು ಮಾತುಗಳು ನೃತ್ಯಾಭಿನಯಗಳ ಮೂಲಕ ತೋರ್ಪಡಿಸಿದ ಸತ್ಯಭಾಮಾ ಪಾತ್ರಧಾರಿ ಆಜ್ಞಾಸೋಹಮ್‌ ತಾನು ಪ್ರತಿಭಾವಂತ ಕಲಾವಿದೆ ಎಂಬುದನ್ನು ಸಾಬೀತು ಪಡಿಸಿದರು. ಚಿಕ್ಕಚೊಕ್ಕ ಅಚ್ಚುಕಟ್ಟಾದ ಯಕ್ಷಗಾನ ದಯಾನಂದ ಕೋಡಿಕಲ್‌ ಭಾಗವತಿಗೆ ಸುಮಧುರ, ಉಳಿದ ಹಿಮ್ಮೇಳಗಳೂ ಪೂರಕ ಮತ್ತಷ್ಟು ಪಾತ್ರಗಳ ಸೇರ್ಪಡೆ, ಅಂತ್ಯದಲ್ಲಿ ಮಂಗಳ ನೃತ್ಯವಂದನ ಅಗತ್ಯವಿದೆ ಎಂದೆನಿಸಿತು.

ಇದು ಪ್ರಾರಂಭ ಮಾತ್ರಾ, ಬಹಳಷ್ಟು ಪರಿಷ್ಕಾರ ಮಾಡಲಿಕ್ಕಿದೆ. ತೆಂಕುತಿಟ್ಟಿನ ಸಂಪ್ರದಾಯ, ಕಲಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಬಡಗಿನ ಕೆರೆಮನೆ ಮೇಳದ ಮಾದರಿಯಲ್ಲಿ ಮುಂದುವರಿಯುವ ಅಭಿಲಾಷೆ ನಮ್ಮದು ಎಂಬ ವರ್ಕಾಡಿಯವರ ಯೋಚನೆ- ಯೋಜನೆಗಳು ಸಾಕಾರಗೊಳ್ಳುವಂತಾಗಲಿ.

– ರಮೇಶ್‌ ರಾವ್‌, ಕೈಕಂಬ

ಟಾಪ್ ನ್ಯೂಸ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.