ಕ್ಯಾನ್ವಾಸ್‌ ಮೇಲೆ ಸಂಗೀತದಲೆಗಳ ಲಾಸ್ಯ 


Team Udayavani, Jun 22, 2018, 9:33 PM IST

b-13.jpg

ಪವನ್‌ ಕುಮಾರ್‌ ಅವರ ಕಲಾಕೃತಿಗಳಲ್ಲಿ ಬಣ್ಣಗಳ ಬಿಸು ಹೊಡೆತವಿದ್ದರೂ ಸೌಂದರ್ಯವಿದೆ, ವರ್ಣ ಸಾಂಗತ್ಯವಿದೆ. ನೈಜಕ್ಕೆ ಹತ್ತಿರವಾದ ನವ್ಯವನ್ನು ಬಿಡದ ಕಲಾಶೈಲಿಯಿದೆ. ಸಂಗೀತದಲ್ಲಿ ಹೈ ನೋಟ್‌ ಲೋ ನೋಟ್‌ ಇರುವಂತೆ ಚಿತ್ರದಲ್ಲೂ ಡಾರ್ಕ್‌ ಮತ್ತು ಲೈಟ್‌ ವರ್ಣ ಸಾಂಗತ್ಯವಿದೆ.

ಯಾವುದೇ ಕಲೆಯ ಪ್ರಸ್ತುತಿಯಲ್ಲಿ ಹಾವಭಾವಗಳ ಪ್ರದರ್ಶನಕ್ಕೆ ಹೆಚ್ಚು ಮಹತ್ವವಿದೆ. ಕಲಾವಿದನ ಕೈ ಕಾಲು, ದೇಹ- ಮುಖಗಳು ಬಳುಕುವ ಭಂಗಿಯಿಂದಲೇ ಕಲೆಯ ಪ್ರಸ್ತುತಿ ಪುಷ್ಟಿಗೊಳ್ಳುತ್ತದೆ. ಸಂಗೀತದ ಕೊನೆಯಲ್ಲಿ ಮೃದಂಗದ ಪೆಟ್ಟಿಗೆ ಟಪ್ಪನೆ ನಿಲ್ಲುವ ಹಾಡಿನ ರೋಚಕ ಕ್ಷಣ ಅವಿಸ್ಮರಣಿಯವಾಗಿರುತ್ತದೆ. ಇದನ್ನೇ ಕಲಾವಿದ ಪವನ್‌ ಕುಮಾರ್‌ ಅತ್ತಾವರ ತನ್ನ ಚಿತ್ರಕಲಾಕ್ರತಿಗಳಲ್ಲಿ ಪ್ರಸ್ತುಪಡಿಸಿದ್ದಾರೆ. ಅವರ ಕೃತಿಗಳಲ್ಲಿ ಸಂಗಿತದಲೆಗಳ ರಭಸಕ್ಕೆ ಬಣ್ಣಗಳು ತೊಯ್ದು ಕ್ಯಾನ್ವಾಸ್‌ ತುಂಬಾ ರಭಸವಾಗಿ ಹರಡಿ ವಿದ್ಯುತ್‌ ಸಂಚಾರ ನಡೆಸಿವೆ. ಬಣ್ಣಗಳ ರಭಸವಾದ ಸ್ಟ್ರೋಕ್‌ಗಳಲ್ಲಿ ಹಾಡುಗಾರನ ಬಳುಕು ಭಂಗಿ ಮಾರ್ಮಿಕವಾಗಿ ಮೂಡಿದ್ದು ನಮ್ಮೆದುರೇ ಸಂಗೀತ ಕಛೇರಿ ನಡೆಯುತ್ತಿರುವಂತೆ ಅನುಭವವಾಗುತ್ತದೆ. ಹಾಡಿನ ವೇಗಕ್ಕೆ ಅವರ ಕುಂಚಗಳು ನರ್ತಿಸಿ ಕ್ಯಾನ್ವಾಸ್‌ ಮೇಲೆ ನಾದತರಂಗಗಳು ಮೂಡಿವೆ. ಇದು ಅವರ ಅಮಿತೋತ್ಸಾಹ ಹಾಗೂ ಹೊಸತನದ ಹುಡುಕಾಟದಿಂದ ಸಿದ್ಧಿಸಿದೆ. ಅವರ ಅದ್ಭುತ ಕಲಾಕೃತಿಗಳ ಪ್ರದರ್ಶನ ಅನಿಕೇತನ ಶೀರ್ಷಿಕೆಯಡಿ ಉಡುಪಿಯ ದೃಷ್ಟಿ ಗ್ಯಾಲರಿಯಲ್ಲಿ ನಡೆಯಿತು. 

ಮಂಗಳೂರಿನ ಹಿರಿಯ ಕಲಾವಿದ ಓಂಪ್ರಕಾಶ್‌ ಅವರ ಮಗ ಪವನ್‌ ಕುಮಾರ್‌ ಅತ್ತಾವರ ಅವರ ವೃತ್ತಿ ಮತ್ತು ಪ್ರವೃತ್ತಿ ಗಳೆರಡೂ ವಿಭಿನ್ನ. ಇನ್ಫೋಸಿಸ್‌ ಉದ್ಯೋಗಿಯಾಗಿದ್ದರೂ ಕಲಾದೇವಿ ಕೈಬೀಸಿ ಕರೆದಾಗ ಬಾರೆನೆನ್ನಲಾಗದೆ ಕಲೆಯನ್ನೂ ಕೈಗೆತ್ತಿಕೊಂಡರು. ಕಲೆಯನ್ನು ಸಂಶೋಧನಾತ್ಮಕವಾಗಿ ದುಡಿಸಿ ಕೊಂಡರು. ಸೃಜನಾತ್ಮಕ ಅಂಶಗಳನ್ನು ಮೈಗೂಡಿಸಿಕೊಂಡು ಮೂರ್ತ-ಅಮೂರ್ತವನ್ನೊಳಗೊಂಡ ಕಲಾಕೃತಿ ರಚನೆಯನ್ನು ಕೈಗೆತ್ತಿಕೊಂಡರು. ಸಂಗೀತವನ್ನು ಚಿತ್ರವಸ್ತುವನ್ನಾಗಿಸಿಕೊಂಡು ರಾಗತರಂಗಗಳನ್ನು ವರ್ಣತರಂಗಗಳಾಗಿ ರೂಪಿಸಿ ದರು. ಉಡುಪಿಯ ಜನತೆಗೆ ಸಂಗೀತ ಕಲಾಕೃತಿಗಳ ರುಚಿಯನ್ನು ಉಣ್ಣಿಸಬೇಕು ಎಂದು ನಿರ್ಧರಿಸಿ ಆರ್ಟಿಸ್ಟ್ಸ್ ಫೋರಂನ ಅಧ್ಯಕ್ಷರಾದ ರಮೇಶ್‌ ರಾಯರನ್ನು ಭೇಟಿಯಾಗಿ ಅವರ ಮಾರ್ಗದರ್ಶನ ಪಡೆದು ಕಲಾಪ್ರದರ್ಶನಕ್ಕೆ ದಿನವಿಟ್ಟರು. ಹಾಗೆ ಕಾರ್ಯದರ್ಶಿ ಸಕು ಪಾಂಗಾಳ ಬಳಗದ ಸಹಕಾರದೊಂದಿಗೆ ಕಲಾಕೃತಿಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಉತ್ತಮ ಪ್ರದರ್ಶನ ನೀಡಿದರು. 

 ಕಲಾಕೃತಿ ರಚನೆಯಲ್ಲಿ ಹೊಸತನದ ಹುಡುಕಾಟದೊಂದಿಗೆ ಹೊರಟ ಪವನ್‌ ಕುಮಾರ್‌ ಅತ್ತಾವರ ಅವರ ಕಲಾಕೃತಿಗಳನ್ನು ಕಾಣುವಾಗ ಖ್ಯಾತ ಕಲಾವಿದರಾದ ಎನ್‌.ಎಸ್‌.ಬೇಂದ್ರೆಯವರ ಸಂಗೀತ ಕಲಾಕೃತಿಗಳು, ವೆಂಕಟಪ್ಪರವರ ವೀಣೆಯ ಹುಚ್ಚು ಕಲಾಕೃತಿಗಳು ನೆನಪಾಗುತ್ತದೆ. ಆದರೆ ಇವರ ಕಲಾಕೃತಿಗಳಲ್ಲಿ ಕಲರ್‌ ಸ್ಟ್ರೋಕ್‌ ವೇಗಗತಿಯಲ್ಲಿದೆ. ಕಲಾಕೃತಿಗಳಲ್ಲಿ ಜಲವರ್ಣದಂತೆ ಕ್ಯಾನ್‌ವಾಸ್‌ನ ಬಿಳಿಭಾಗವನ್ನು ಹಾಗೇ ಉಳಿಸಿಕೊಂಡು ಬೇಕಾದೆಡೆ ಮಾತ್ರ ಬಣ್ಣಗಳನ್ನು ಬೀಸು ಹೊಡೆತಗಳಿಂದ ಹಿನ್ನೆಲೆಯೊಂದಿಗೆ ಮಿಶ್ರ ಮಾಡಿ ಚಿತ್ರಿಸಿರುವುದು ತ್ರೀಡಿ ಎನಿಮೇಶನ್‌ನಂತೆ ಅದ್ಭುತವಾಗಿ ಕಾಣುತ್ತಿತ್ತು. ವಿವಿಧ ಗಾತ್ರದ ಕ್ಯಾನ್ವಾಸ್‌ ಮೇಲೆ ತೈಲ ಮತ್ತು ಆಕ್ರಲಿಕ್‌ ಬಣ್ಣಗಳಲ್ಲಿ, ವಿಧವಿದ ಛಾಯೆಗಳಲ್ಲಿ ವೇಗಭರಿತವಾಗಿ ಚಿತ್ರಿಸಿದ್ದಾರೆ. ಸಂಗೀತದಲ್ಲಿ ಹೈ ನೋಟ್‌ ಲೋ ನೋಟ್‌ ಇರುವಂತೆ ಚಿತ್ರದಲ್ಲೂ ಡಾರ್ಕ್‌ ಮತ್ತು ಲೈಟ್‌ ವರ್ಣಸಾಂಗತ್ಯವಿದೆ. ಸಂಗೀತ ವಾದ್ಯಗಳ ಆಕಾರಕ್ಕೆ ತಕ್ಕಂತೆ ಬಳುಕುವ ಸಂಗೀತಗಾರನನ್ನು ಚಿತ್ರಿಸಲಾಗಿದೆ. ಇಲ್ಲಿ ನಾವು ಮೂರು ಅಂಶಗಳನ್ನು ಗಮನಿಸಬಹುದು. ಅದೇನೆಂದರೆ: ಚಿತ್ರದಲ್ಲಿ ಬಣ್ಣಗಳ ಬಿಸು ಹೊಡೆತವಿದ್ದರೂ ಸೌಂದರ್ಯವಿದೆ, ವರ್ಣ ಸಾಂಗತ್ಯವಿದೆ. ನೈಜಕ್ಕೆ ಹತ್ತಿರವಾದ ನವ್ಯವನ್ನು ಬಿಡದ ಕಲಾಶೈಲಿಯಿದೆ. ಕಲಾಕೃತಿ ರಚನೆಯಲ್ಲಿ ಒಂದಕ್ಕೊಂದು ಹೊಂದಾಣಿಕೆಯಿದೆ. ಒಂದೇ ಬಣ್ಣದ ವಿಧವಿಧ ಛಾಯೆಗಳನ್ನು ರೂಪಿಸುವ ಕೌಶಲವಿದೆ. ಎಲ್ಲಕ್ಕಿಂತ ಮಿಗಿಲಾಗಿ ಕಲಾಕೃತಿಗಳೊಳಗೆ ವೇಗವಿದೆ. ಇದೇ ವೇಗದಲ್ಲಿ ಪವನ್‌ ಕುಮಾರ್‌ ವಿಧವಿಧ ಕಲಾಕೃತಿಗಳನ್ನು ರಚಿಸುವಂತಾಗಲಿ.

 ಉಪಾಧ್ಯಾಯ ಮೂಡುಬೆಳ್ಳೆ

ಟಾಪ್ ನ್ಯೂಸ್

Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

ಅಶ್ಲೀಲ ವಿಡಿಯೋ ಮಾದರಿಯಲ್ಲಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಕ್ಕೆ ಮಹಿಳೆಯನ್ನು ಕೊಂದ ಟೆಕಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

1-aaaa

Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್‌ ನಲ್ಲಿ ಬಂಧನ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-y-a

Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ

Odisha ಕಾಲೇಜಿನ ವಿಡಿಯೋ ಉಡುಪಿಯದ್ದು ಎಂದು ವೈರಲ್: ಕೇಸ್ ದಾಖಲು

baba-ramdev

Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.