ನವರಸಭರಿತ ಚಂದ್ರಮುಖಿ ಸೂರ್ಯಸಖಿ


Team Udayavani, Dec 6, 2019, 5:25 AM IST

ws-10

ಸಾಲಿಗ್ರಾಮ ಮೇಳ ಈ ಸಾಲಿನ ತಿರುಗಾಟದ ದೇವದಾಸ ಈಶ್ವರಮಂಗಲ ವಿರಚಿತ “ಚಂದ್ರಮುಖೀ ಸೂರ್ಯಸಖೀ’ ಆಖ್ಯಾನ ಜಯಭೇರಿ ಕಾಣುವ ಎಲ್ಲಾ ಲಕ್ಷಣವನ್ನು ಹೊಂದಿದೆ. ಚಲನಚಿತ್ರಗಳ ಕತೆಯನ್ನು ಆಧರಿಸಿ ಸಿದ್ಧಗೊಂಡ ಅದೆಷ್ಟೋ ಪ್ರಸಂಗಗಳು ಸೋತದ್ದೂ ಉಂಟು, ಗೆದ್ದದ್ದೂ ಉಂಟು. ಆದರೆ ಈ ಬಾರಿ ಯಾವುದೇ ಚಲನಚಿತ್ರದಿಂದ ಪ್ರಚೋದಿತವಾಗದೆ, ಕೇವಲ ಕಲಾವಿದರನ್ನು ಮನಸ್ಸಿನಲ್ಲಿ ಕೇಂದ್ರೀಕರಿಸಿಟ್ಟುಕೊಂಡು ಬರೆದ ಸುಂದರ ಆಖ್ಯಾನ ರಂಗದಲ್ಲಿ ಬಿತ್ತರಗೊಂಡು ಯಶಸ್ವಿ ಪ್ರದರ್ಶನದತ್ತ ದಾಪುಗಾಲು ಹಾಕುತ್ತಿದೆ.

ಪ್ರಸಂಗದ ಆರಂಭವು ವಿಭಿನ್ನ ಎರಡು ಬಲದ ವೇಷದ ಹೊಸ ಕಲ್ಪನೆಯೊಂದಿಗೆ ನರಸಿಂಹ ಗಾಂವ್ಕರ್‌ ಒಡ್ಡೋಲಗವನ್ನು ಕೊಟ್ಟು ಉತ್ತಮ ಆರಂಭವನ್ನು ಪ್ರಸಂಗಕ್ಕೆ ಒದಗಿಸಿಕೊಟ್ಟರು. ಮಂಜನ ಪಾತ್ರದಾರಿ ಕ್ಯಾದಿಗೆ ಮಹಾಬಲೇಶ್ವರ ಹೆಗಡೆ ಹಾಗೂ (ಬಸು) ಅರುಣ್‌ ಜಾರRಳರ ಹಾಸ್ಯವನ್ನು ಆಸ್ವಾದಿಸಬೇಕೆಂದು ಸಿದ್ಧರಾದ ಪ್ರೇಕ್ಷಕ ವರ್ಗಕ್ಕೆ ಪ್ರಸಿದ್ಧ ಸ್ತ್ರೀವೇಷದಾರಿ ಶಶಿಕಾಂತ ಶೆಟ್ಟಿಯವರ ಚಂದ್ರಿಕೆ ಪಾತ್ರವು ಹಾಸ್ಯ ಉಣಿಸುತ್ತದೆ ಎಂದು ಅರ್ಥೈಸಿಕೊಳ್ಳುವುದಕ್ಕೆ ಸ್ವಲ್ಪ ಹೊತ್ತು ಬೇಕಾಗುತ್ತದೆ. ಶಶಿಕಾಂತ ಶೆಟ್ಟಿಯವರ ಹಾಸ್ಯಕ್ಕೆ ಜೊತೆಯಾಗಿ ಸಹಕರಿಸುವವರು ಲಂಕೇಶ್‌ ಪಾತ್ರದಾರಿ ನರಸಿಂಹ ಗಾಂವ್ಕರ್‌ ಹಾಗೂ ಬಸು ಪಾತ್ರದಾರಿ ಅರುಣ್‌ ಜಾರ್ಕಳ.

ತಂಗಿ ವಿಮಲೆಯನ್ನು (ವಂಡಾರು ಗೋವಿಂದ) ನೃತ್ಯ ಸ್ಪರ್ಧೆಗೆ ಅಣಿಗೊಳಿಸಿದ ಕಮಲಿ (ನೀಲ್ಕೋಡು ಶಂಕರ ಹೆಗಡೆ) ಪಾತ್ರದ ಗಾಂಭೀರ್ಯವನ್ನು ಪ್ರಸಂಗದುದ್ದಕ್ಕೂ ಹಿಡಿದಿಟ್ಟುಕೊಂಡು ಪ್ರಸಂಗದ ಕೊನೆಯ ಭಾಗದಲ್ಲಿ ಸೂರ್ಯಸಖೀಯಾಗಿ ಪಟ್ಟವೇರುತ್ತಾಳೆ. ಖಳನಾಯಕಿಗೆ ಕಥಾನಾಯಕಿ ತಿರುಗೇಟು ನೀಡುತ್ತಾಳೆ ಎಂಬ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗುತ್ತದೆ. ಪರಿಶುದ್ಧ ಪಾತ್ರದಾರಿ (ಕೃಷ್ಣಯಾಜಿ ಬಳ್ಕೂರು) ದುರಂತ ನಾಯಕನಾಗುತ್ತಾನೆ. ಸುಪ್ರಸನ್ನ (ಪ್ರಸನ್ನ ಶೆಟ್ಟಿಗಾರ) ಖಳನಾಯಕಿಯ ಗಂಡನಾಗಿ ಮಾನವೀಯತೆ ಮೆರೆದು ಪ್ರಸಂಗದ ನಾಯಕ ನಟನಾಗುತ್ತಾನೆ. ಉದಯಸೂರ್ಯ (ಮಂಕಿ ಈಶ್ವರ ನಾಯ್ಕ) ಪ್ರಸಂಗದ ಆಧಾರಸ್ತಂಭವಾಗಿ ಮುನ್ನಡೆಸುತ್ತಾನೆ. ಮಂಜ ನಗಿಸುವುದನ್ನು ಮರೆತು ಪ್ರೇಕ್ಷಕರ ಚಿತ್ತಕ್ಕೆ ಹತ್ತಿರವಾಗಿ ಅಳುವುದರಲ್ಲೇ ಗೆಲ್ಲುತ್ತಾನೆ. ತುಂಬ್ರಿ ಭಾಸ್ಕರರು ಹತಾಶತೆಯನ್ನು ಕಟ್ಟಿಟ್ಟು ನಗುವಿನ ಹೊಳೆಯಲ್ಲಿ ಪ್ರೇಕ್ಷಕರನ್ನು ತೇಲಿಸಿದರು. ಉಳಿದ ಹಲವು ಕಲಾವಿದರು ಕತೆಯ ಪೋಷಕ ನಟರಾಗಿ ಮಿಂಚಿನ ಸಂಚಾರಕ್ಕೆ ಸಾಕ್ಷಿಯಾಗಿ ರಂಗದಲ್ಲಿ ನಿಲ್ಲುತ್ತಾರೆ. ಹಿಮ್ಮೇಳದಲ್ಲಿ ಹಿಲ್ಲೂರು, ಮೂಡುಬೆಳ್ಳೆ, ಪ್ರದೀಪ್‌ಚಂದ್ರ, ಶಿವಾನಂದ ಕೋಟ, ರಾಕೇಶ ಮಲ್ಯ, ಪರಮೇಶ್ವರ ಭಂಡಾರಿ, ನಾಗರಾಜ ಭಂಡಾರಿ ಕಥಾಹಂದರಕ್ಕೆ ಪೂರಕವಾಗಿ ಪ್ರಬುದ್ಧತೆ ಮೆರೆದು ಸಾಥ್‌ ನೀಡಿದರು.

ಒಟ್ಟಿನಲ್ಲಿ ರಾತ್ರಿ ಇಡೀ ಪ್ರೇಕ್ಷಕರಲ್ಲಿ ನಿದ್ದೆ ಸುಳಿಯದಂತೆ ಮಾಡುವ ಕತೆಯ ಹಂದರದಲ್ಲಿ, ಹೊಸ ಅಲೆಯ ರಂಗಭೂಮಿಯ ರಂಗತಂತ್ರ ಹಾಗೂ ಧ್ವನಿ-ಬೆಳಕುಗಳನ್ನು ಬಳಸಿ, 25ಕ್ಕೂ ಮಿಕ್ಕಿದ ಕಲಾವಿದರ ಕಸರತ್ತಿನಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಫ‌ಲ ದೊರಕೀತು ಎಂಬ ಆಶಯ ಪ್ರೇಕ್ಷಕ ವರ್ಗದ್ದು.ಒಟ್ಟಾರೆಯಾಗಿ ನವರಸಗಳನ್ನು ಹೊಂದಿರುವ ಪ್ರಸಂಗವಿದು.

ಪ್ರಶಾಂತ್‌ ಮಲ್ಯಾಡಿ

ಟಾಪ್ ನ್ಯೂಸ್

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Shimoga; ಕೆ.ಎಸ್. ಈಶ್ವರಪ್ಪರನ್ನು ಭೀಷ್ಮರಿಗೆ ಹೋಲಿಸಿದ ಋಷಿಕುಮಾರ ಸ್ವಾಮೀಜಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್-‌ ಬಿಜೆಪಿ ನೇರ ಹಣಾಹಣಿ

ganihara

Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.