ಅಗಣಿತ ದೃಷ್ಟಿಗೆ  ವರ್ಣರೂಪ


Team Udayavani, Sep 8, 2017, 1:53 PM IST

08-KALA-4.jpg

ನಗರದ ವೇಗದ ಬೆಳವಣಿಗೆಯ ಹಿಂದೆ ತಣ್ತೀ, ಸಿದ್ಧಾಂತರಹಿತ ಬಾನಿಗೇರುವ ಚಿತ್ತಗಳ ಅತೀವ ಅಭಿಲಾಷೆ, ಐಷಾರಾಮಿ ಬದುಕು, ಸಿರಿತನದ ಝಲಕು ಕಲಸು ಮೇಲೋಗರವಾಗಿ ಕಾಂಕ್ರೀಟು ಕಾಡು ಫ‌ಲವತ್ತಾಗುತ್ತದೆ. ನಗರದ ಸಾಮಾಜಿಕ ಬದುಕು ಸಿರಿತನದ ಕೊಡು -ಕೊಳ್ಳುವಿಕೆಗೆ ಮಾತ್ರ ಸೀಮಿತವಾಗಿ ಮಾನವೀಯತೆಯ ಸಂಬಂಧಗಳು ದೂರ ವಾಗುತ್ತಲೇ ಇರುತ್ತವೆ. ವೇದಿಕೆಯಲ್ಲಿ ಅಭಿನಯಕ್ಕೆ ಅಣಿಯಾದ ಮುಖವಾಡಗಳಿಗಿಂತ ಸಮಾಜದಲ್ಲಿ ಅಗೋಚರವಾಗಿ ತಮ್ಮ ಬದುಕಿನ ಸಂಪೂರ್ಣ ಮುಖವಾಡಗಳನ್ನು ಧರಿಸಿಕೊಳ್ಳುವ ಪರಿಸ್ಥಿತಿ ಎಂತಹದು ಎಂಬ ಪರಿಕಲ್ಪನೆಯಲ್ಲಿ ಕಲಾವಿದ ಕುಪ್ಪಣ್ಣ ಕಂಡಗಲ್‌ ಅವರು ನಗರದ ಪ್ರಸಾದ್‌ ಆರ್ಟ್‌ಗ್ಯಾಲರಿಯಲ್ಲಿ ರಹಸ್ಯ ರೂಪ ಎಂಬ ಚಿತ್ರ ಕಲಾಪ್ರದರ್ಶನವನ್ನು ಮಾಡಿದ್ದಾರೆ. ಮುಖಗಳ ಭಾವಗಳ ನವುರು ಛಾಯೆಗಳು, ಸಂದರ್ಭಕ್ಕೆ ತಕ್ಕಂತೆ ಸನ್ನಿವೇಶಗಳು ನಿರ್ಮಾಣವಾಗುವ ಸಹಜ ಸಂಕೀರ್ಣತೆಗಳ ನಾಗರಿಕ ಬದುಕಿನ ಸಂತಸದೊಳಗಿನ ಸಂಕಟಗಳು, ಉನ್ನತ ಸಿದ್ಧಾಂತಗಳಿಂದ ಆರೋಹಣವಾಗಬೇಕಾಗಿದ್ದ ನಿಲುವುಗಳ ಅವರೋಹಣ, ಸುಖೀ ಪಥದಲ್ಲಿ ಅನುಭವಿಸಬೇಕಾದ ಕಾಯಗಳು ರೋದಿಸುವಂತಹ ದುಗುಡ ಚಿಂತನೆಗಳು, ನಾರಿಯ ಕೋಮಲ ಹೂವೆಂಬ ಹೃದಯವನ್ನು ಹಿಂಡುವ ಬೆಂಕಿಯಂಥ ಕಾಠಿನ್ಯ, ಸಾಂಪ್ರದಾಯಿಕ ಆಚಾರ, ವಿಚಾರ ಗಳನ್ನು ಸಾಂದರ್ಭಿಕವಾಗಿ ಸಾದರ ಪಡಿಸುವ ಪ್ರಕಾರಗಳನ್ನು ಕುಪ್ಪಣ್ಣನವರು ವಸ್ತು ವಿಚಾರ ಕ್ಕನುಗುಣವಾಗಿ ಚಿತ್ರಿಸಿರುವರು. ಕಡು ಬಣ್ಣಗಳನ್ನು ಹೆಚ್ಚು ಬಳಸದೇ ತಿಳಿ ಬಣ್ಣಗಳಲ್ಲೇ ವಸ್ತುಗಳ ಕಲಾತ್ಮಕ ಒಳಹೂರಣಗಳನ್ನು ಕೃತಿಗಳಲ್ಲಿ ದೃಢಪಡಿಸಿದ್ದಾರೆ. ಸಾಮಾಜಿಕ ಚಿಂತನೆ ಗಳಲ್ಲೂ ಹೆಚ್ಚು ಗೊಂದಲಕ್ಕೊಳಪಡದ ಹಾಗೂ ಅಧ್ಯಯನಕ್ಕೆ ಆಧಾರವಾಗುವಂತಹ ವಿಚಾರಗಳನ್ನು ತರ್ಕಿಸುವಂತಹ ಸಾಮರ್ಥ್ಯ ದಲ್ಲಿ ಬಣ್ಣಗಳಿಗೊಂದು ಒಪ್ಪ ಓರಣ ನೀಡಬಲ್ಲರು. ಕಲಾಕೃತಿಗಳನ್ನು ವೀಕ್ಷಕರು ಮೆಚ್ಚುವಂತಿದ್ದರೆ ಮೊದಲಿಗೆ ಕೃತಿ ಕರ್ತನಿಗೆ ಅದು ಇಷ್ಟವಾಗಬೇಕು ಮತ್ತು ಕಲಾವಿದ ಬಿಂಬಿಸಿದ ಕಲಾಕೃತಿ ಯನ್ನು ವೀಕ್ಷಕರು ಗ್ರಹಿಸಿಕೊಳ್ಳಲು ಯಾವುದೇ ಗೊಂದಲ ಗಳಿರಬಾರದು ಮತ್ತು ಆ ಗೊಂದಲದಿಂದ ಕಲಾವಿದ ಮತ್ತು ಕಲಾಭಿಮಾನಿಯ ನಡುವೆ ದೂರತೀರವಾಗಬಾರದೆನ್ನುವ ಇವರ ಅಭಿಪ್ರಾಯ ಈಗಿನ ಕಲಾಕ್ಷೇತ್ರಕ್ಕೆ ಅನ್ವಯವಾಗುವಂಥದ್ದೇ. ಪರಿಕಲ್ಪನೆಗಳು ಒಂದಕ್ಕೊಂದು ಪೋಣಿಸುವ‌ಂತಿದ್ದು ಹಿಂದಿನ ವಸ್ತುಸ್ಥಿತಿ ಮುಂದಿನ ಪ್ರಗತಿಗೆ ಪೂರಕವಾಗುವ ಕಲಾಧೋರಣೆಗಳು ವಿಕಸನವಾದರೆ ಕೃತಿ ಖರೀದಿಸುವವರಿಗೆ ಏಕತಾನತೆಯಿಂದ ಹೊರಬರುವ ಹಾಗೂ ಕಲಾವಿದ ಮತ್ತು ಕಲಾಪೋಷಕರ ಒಡನಾಟ ಹತ್ತಿರವಾಗಬಹುದು ಎಂಬ ಧ್ಯೇಯದಲ್ಲಿ ಇವರು ಕಲಾಕ್ಷೇತ್ರದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ನಾಗರಿಕತೆಯ ತೊಟ್ಟಿಲಲ್ಲಿ ಆಧುನಿಕತೆಯ ಜೋಗುಳ ನಾದವನ್ನು ಹೊಮ್ಮಿಸಿದರೂ ಅಗೋಚರ ಆಕ್ರಂದ‌ನವು ಮರೆಯಾಗಿಯೇ ಉಳಿಯಬಲ್ಲದು, ಆ ರೋದನವು ಭವಿಷ್ಯದಲ್ಲಿ ದುರಂತವಾಗ ಲಿರುವುದಂತೂ ಕಟು ಸತ್ಯ.

ದಿನೇಶ್‌ ಹೊಳ್ಳ
 

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.