ಗಡಿನಾಡಿನಲ್ಲಿ ಕಾರ್ಟೂನ್‌ ಕಚಗುಳಿ


Team Udayavani, Mar 8, 2019, 12:30 AM IST

q-2.jpg

ಉಪ್ಪಳದ ಪೈವಳಿಕೆ ಸಮೀಪ ಬಾಯಾರಿಕಟ್ಟೆಯಲ್ಲಿ  ಜಿಲ್ಲಾ ಕನ್ನಡ ಲೇಖಕರ ಸಂಘ, ತಪಸ್ಯ ಕಲಾ ಸಾಹಿತ್ಯ ವೇದಿಕೆ ಮತ್ತು ಕಾರ್ಟೂನು ಕಾಸರಗೋಡು ಇವರ ಸಂಯುಕ್ತ ಆಶ್ರಯದಲ್ಲಿ ಕವನ ವಾಚನ ಮತ್ತು ವ್ಯಂಗ್ಯಚಿತ್ರ ರಚನೆಯನ್ನು ಸವಿಯಲು ಸುಮಾರು 80 ಮಂದಿ ಸೇರಿದ್ದರು. ವೆಂಕಟ್‌ ಭಟ್‌ ಎಡನೀರು, ಬಾಲ ಮಧುರ ಕಾನನ ಮತ್ತು ಪ್ರೊ|ಪಿ. ಎನ್‌. ಮೂಡಿತ್ತಾಯರವರ 100ಕ್ಕೂ ಅಧಿಕ ಕಾರ್ಟೂನ್‌ಗಳ ಪ್ರದರ್ಶನ ಏರ್ಪಡಿಸಿದ್ದು, ಮಕ್ಕಳಿಗೆ ಕಾರ್ಟೂನ್‌ ಪ್ರಾತ್ಯಕ್ಷಿಕೆಯ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿತ್ತು. ಬಾಲ ಅವರು ಹಿಂದೆ ರಚಿಸಿದ ದೊಡ್ಡ ಗಾತ್ರದ 25 ಕ್ಯಾರಿಕೇಚರ್‌ಗಳು ಗಮನ ಸೆಳೆದುವು. 

ಸುಲಲಿತ ಗೆರೆಗಳಲ್ಲೇ ನಗು ತರಿಸುವ ಖ್ಯಾತ ವ್ಯಂಗ್ಯ ಚಿತ್ರಕಾರ ಹರಿಣಿ ಯವರು ಆರಂಭದಲ್ಲಿ ಬಿಡಿಸಿದ ಸಂಘಟಕರ ಕ್ಯಾರಿಕೇಚರ್‌ ಉತ್ಸಾಹದ ಸಂಚಲನ ಮೂಡಿಸಿತು. ನಂತರ ಅವರು ಕಣ್ಣೀರಿನ ಕಾರಂಜಿ ಸಿಡಿಸುವ ಕುಮಾರಸ್ವಾಮಿ, ಸಿಟ್ಟಿನ ಮುಖಮುದ್ರೆಯ ಬಿ. ಎಸ್‌. ಯಡಿಯೂರಪ್ಪ, ಪ್ರೇಕ್ಷಕರೊಬ್ಬರ ಅಪೇಕ್ಷೆ ಮೇರೆಗೆ ವಾಜಪೇಯಿ ಅವರುಗಳನ್ನು ರಚಿಸುತ್ತಿದ್ದಂತೆ ಮಕ್ಕಳು ಕೂಡ ಗುರುತು ಹಚ್ಚಿ ಹೆಸರು ಹೇಳುತ್ತಿದ್ದದ್ದು ಹರಿಣಿಯವರ ಕೈಚಳಕಕ್ಕೆ ಸಂದ ಯಶಸ್ಸು. ಪ್ರೇಕ್ಷಕರಲ್ಲಿ ಇಬ್ಬರು ಕವಯಿತ್ರಿ ಗೆಳತಿಯರನ್ನು ಜತೆಯಾಗಿ ಚಿತ್ರಿಸಿದರು. ವೆಂಕಟ್‌ ಭಟ್‌ ಮತ್ತು ಬಾಲ ಅವರು ಮಕ್ಕಳಿಗೂ ಬರೆಯಲು ಅನುಕೂಲವಾಗುವಂತೆ ಕೆಲವು ಕಾರ್ಟೂನ್‌ಗಳನ್ನು ಬರೆದರು. ಜೀವನ್‌ ಅವರು ಕಾರ್ಟೂನನ್ನು ಒಗಟಾಗಿ ಚಿತ್ರಿಸಿ ಮಕ್ಕಳು ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ನಂತರ ವ್ಯಂಗ್ಯಚಿತ್ರಗಳ ಮೂಲಭೂತ ವಿಷಯಗಳನ್ನು ತಿಳಿ ಹೇಳುತ್ತಾ ವಿವಿಧ ಮುಖಬಾವಗಳನ್ನು ಬರೆಯಿಸಿದರು. ಒಟ್ಟಾರೆ 3ಗಂಟೆಗಳು ರಂಜಿಸಿದ ಅಪರೂಪದ ಕಾರ್ಟೂನ್‌ ಕಾರ್ಯಕ್ರಮ. ಕೊನೆಗೆ ಹಿರಿಯರು ಕಿರಿಯರು ಕಾರ್ಟೂನ್‌ ಬರೆಯುತ್ತಿದ್ದದ್ದನ್ನು ಕಂಡಾಗ ಇದು ವ್ಯಂಗ್ಯಚಿತ್ರಕಲೆಯ ಪ್ರಭಾವ ಎಂಬುದು ಸ್ಪಷ್ಟವಾಯಿತು. 

ಜೀವನ್‌ ಶೆಟ್ಟಿ 

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.