ಅಜಪುರದಲ್ಲಿ ದಮಯಂತಿ ಪುನರ್‌ ಸ್ವಯಂವರ


Team Udayavani, Jun 21, 2019, 5:00 AM IST

8

ತನ್ನ ಜೀವನದುದ್ದಕ್ಕೂ ಸಣ್ಣ ತಪ್ಪನ್ನು ಎಸಗದೇ ಜನಾನುರಾಗಿಯಾಗಿ ರಾಜ್ಯಬಾರ ಮಾಡುತ್ತಿದ್ದ ರಾಜನೆಂದೇ ಖ್ಯಾತಿಗಳಿಸಿದವನು ನಳ ಮಹಾರಾಜ. ಈತನಲ್ಲಿ ಏನಾದರೂ ಒಂದು ತಪ್ಪನ್ನು ಕಂಡುಹಿಡಿದು, ಸೋಲಿಸಬೇಕೆಂದು ಕಾಯುತ್ತಿದ್ದವನು ಶನಿದೇವ. ಅದರಂತೇ ಒಂದು ದಿನ ನಿತ್ಯಾಹಿ°ಕವನ್ನು ಪೂರೈಸಿದ ನಳನು ಕಾಲ ಹಿಮ್ಮಡಿಗೆ ನೀರು ಹಾಕಿಕೊಳ್ಳದೇ ಬಂದುದನ್ನು ಗಮನಿಸಿದ ಶನಿಯು ಆತನ‌ನ್ನು ಮೂವತ್ತು ವರ್ಷಗಳ ಕಾಲ ಕಾಡುತ್ತಿರುತ್ತಾನೆ. ಹೀಗಿರುವಾಗ ಒಂದು ದಿನ ನಳನು ದಾಯಾದಿ ಪುಷ್ಕರನೊಡನೆ ಜೂಜಾಟವಾಡಿ ಸರ್ವಸ್ವವನ್ನೂ ಕಳೆ‌ದುಕೊಂಡು ದೇಶ ಭ್ರಷ್ಟನಾಗಿ, ಮಡದಿ ದಮಯಂತಿಯೊಂದಿಗೆ ಕಾಡಲ್ಲಿ ಅಲೆದು ವಿಶ್ರಾಂತಿ ಪಡೆಯುವ ಸಂದರ್ಭದಲ್ಲಿ ನಿದ್ರಾವಸ್ಥೆಗೆ ಜಾರಿದ ಮಡದಿಯನ್ನು ಮೆಲ್ಲನೆ ತೊರೆದು ಬಹು ಮುಂದಕ್ಕೆ ಸಾಗಿದಾಗ‌, ಕಾರ್ಕೋಟಕ ಎನ್ನುವ ಹೆಸರಿನ ಸರ್ಪ ದಂಶನದಿಂದ ನಳನ ದೇಹವೇ ವಿರೂಪವಾಗುತ್ತದೆ. ಕಾರ್ಕೋಟಕನ ಸೂಚನೆಯಂತೆ ನಳನು ಮಹಾರಾಜ ಋತುಪರ್ಣನ ರಾಜ್ಯ ಪ್ರವೇಶಿಸಿ, ಅರಮನೆಯಲ್ಲಿ ಬಾಹುಕನೆನ್ನುವ ಹೆಸರಿನಿಂದ ಅಶ್ವಶಾಲೆಯ ಮೇಲ್ವಿಚಾರಕನಾಗಿ ಸೇರುತ್ತಾನೆ. ಮುಂದೊಂದು ದಿನ ರಾಜನಿಗೆ ಸಾಂದರ್ಭಿಕ ಘಟನೆಗಳಿಂದಾಗಿ ಬಾಹುಕನೇ ನಳ ಮಹಾರಾಜ ಎಂದು ತಿಳಿದಾಗ ಬಹಳ ಸಂತೋಷವಾಯಿತು.

ಮುಂದೆ ಕುಂಡಿನಿಯ ಕಡೆ ಈರ್ವರೂ ಸಾಗಿ ದಮಯಂತಿಯನ್ನು ನಳನು ಪುನರ್‌ ವಿವಾಹವಾಗುವಲ್ಲಿಗೆ ಪ್ರಸಂಗ ಮುಕ್ತಾಯಗೊಳ್ಳುತ್ತದೆ. ಇದನ್ನು ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಆಡಿ ತೋರಿಸಿದವರು ಬ್ರಹ್ಮಾವರದ ಅಜಪುರ ಯಕ್ಷಗಾನ ಸಂಘ(ರಿ.)ದ ಸದಸ್ಯರು. ನಳನಾಗಿ ಮಹೇಂದ್ರ ಆಚಾರ್ಯ ಹೇರಂಜೆ ಮತ್ತು ದಮಯಂತಿಯಾಗಿ ಪ್ರತೀಶ್‌ ಕುಮಾರ್‌ ಬ್ರಹ್ಮಾವರ ಜೀವನದಲ್ಲಿ ಬಂದಂತಹ ಕಷ್ಟ ಕಾರ್ಪಣ್ಯಗಳನ್ನು ಧೃತಿ ಗೆಡದೆ ಅನುಭವಿಸುತ್ತಾ ಮುಂದಡಿಯಿಡುವ ಸನ್ನಿವೇಶವನ್ನು ಆಂಗಿಕ ಮತ್ತು ವಾಚಿಕಾಭಿನಯದ ಮೂಲಕ ಅನಾವರಣಗೊಳಿಸಿರುವುದು ಮನಸ್ಸನ್ನು ಬಹುವಾಗಿ ಕಾಡಿತು. ಋತುಪರ್ಣನಾಗಿ ಶಶಾಂಕ್‌ ಪಟೇಲ್‌ ಕೆ. ಜೆ. ಅವರ ರಂಗ ನಡೆ ಮತ್ತು ಚಿತ್ತ ಸೆಳೆವ ಮಾತಿನ ಶೈಲಿ ಹಾಗೂ ಕುರೂಪಿ ಬಾಹುಕನಾಗಿ ಪದ್ಮನಾಭ ಗಾಣಿಗ ಬ್ರಹ್ಮಾವರ ಇವರು, ಋತುಪರ್ಣನಿಗೆ ತನ್ನ ನಿಜ ವಿಚಾರ ತಿಳಿಯದಂತೆ ನಡೆದುಕೊಂಡ ಆಂಗಿಕ ಅಭಿನಯ ಮತ್ತು ಮೆಲುದನಿಯ ಮಾತು ಕ್ಷಣಕಾಲ ಭಾವುಕರನ್ನಾಗಿಸಿತು.

ಬ್ರಾಹ್ಮಣ ಮತ್ತು ರತ್ನದ ವ್ಯಾಪಾರಿಯಾಗಿ ಪ್ರಭಾಕರ ಆಚಾರ್ಯ ಮಟಪಾಡಿ ಇವರ ಪಾತ್ರೋಚಿತ ನಟನೆ ಮೆಚ್ಚುಗೆಗೆ ಪಾತ್ರವಾಯಿತು. ಚೈದ್ಯ ರಾಣಿಯಾಗಿ ಸ್ಪೂರ್ತಿ ಶ್ಯಾನುಭೋಗ್‌ ಮಂದಾರ್ತಿಯವರು ಸೊಗಸಾದ ಪಾತ್ರ ಪೋಷಣೆ ಗೈದರೆ, ಪುಷ್ಕರನಾಗಿ ವಿಜಯ ನಾಯಕ್‌ ಮಟಪಾಡಿ, ಕಿರಾತನಾಗಿ ದಯಾನಂದ ನಾಯಕ್‌ ಸುಂಕೇರಿ, ಸುದೇವ ಬ್ರಾಹ್ಮಣನಾಗಿ ರಾಜೇಶ್‌ ನಾವಡ ಜಿ. ವಿ. , ಬೀಮಕನಾಗಿ ವಿನೋದ್‌ ಕುಮಾರ್‌, ಖೂಳ ರಕ್ಕಸನಾಗಿ ಕಾರ್ತಿಕ್‌ ಶೆಟ್ಟಿಗಾರ್‌, ಶನಿಯಾಗಿ ಶುಭಕರ ಗಾಣಿಗ ಇವರುಗಳು ತಮ್ಮ ಪಾತ್ರಗಳನ್ನು ಉತ್ತಮವಾಗಿ ನಿರ್ವಹಿಸಿದರು. ಪ್ರಸಾದ್‌ ಕುಮಾರ್‌ ಮೊಗೆಬೆಟ್ಟು ಇವರ ಸೊಗಸಾದ ಕಂಠಸಿರಿಯ ಭಾಗವತಿಕೆಗೆ ಮದ್ದಳೆಯಲ್ಲಿ ದೇವದಾಸ್‌ ರಾವ್‌ ಕೂಡ್ಲಿ ಮತ್ತು ಚಂಡೆಯಲ್ಲಿ ಕೃಷ್ಣಾನಂದ ಶೆಣೈ ಶಿರಿಯಾರ ಇವರುಗಳು ಜೊತೆಯಾಗಿ ಹಿಮ್ಮೇಳದ ಸೊಗಸನ್ನು ಹೆಚ್ಚಿಸಿದರು.

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು1

Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Bird flu: ಕೇರಳದಲ್ಲಿ ಹಕ್ಕಿಜ್ವರ ಭೀತಿ; ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್‌ ಭೇಟಿ; ಆಯೋಗಕ್ಕೆ “ಕೈ’ ದೂರು

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.