ನೃತ್ಯ ಚಿಲುಮೆಯ ಮನೋಲ್ಲಾಸ


Team Udayavani, Jan 24, 2020, 6:50 PM IST

jan-2

ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಹೆಜ್ಜೆ ಗೆಜ್ಜೆ ನೃತ್ಯ ಸಂಸ್ಥೆಯ ರಜತ ಮಹೋತ್ಸವದ ಸಮಾರೋಪ ಸಮಾರಂಭದ ಭಾಗ-1 ರಲ್ಲಿ “ನೃತ್ಯ ಚಿಲುಮೆ’ ಎಂಬ ಶೀರ್ಷಿಕೆಯಡಿಯಲ್ಲಿ ಲಘು ಶಾಸ್ತ್ರೀಯ, ಜಾನಪದ ನೃತ್ಯಗಳು ಹಾಗು ವಿವಿಧ ಪ್ರಕಾರದ ಕೊರವಂಜಿ ನೃತ್ಯಗಳು, ಸಂಸ್ಥೆಯ ನಿರ್ದೇಶಕಿ ವಿ| ಯಶಾ ರಾಮಕೃಷ್ಣರವರ ನಿರ್ದೇಶನದಲ್ಲಿ ರಾಜಾಂಗಣದಲ್ಲಿ ಜರ ಗಿ ತು. ಮೊದಲಿಗೆ ಹಿಂದೋಳ ರಾಗದ ಆದಿತಾಳದಲ್ಲಿ ನಿಬದ್ಧವಾದ ಮೀರಾಬಾಯಿಯಿಂದ ರಚಿತವಾದ ಪಗಘುಂಘುರು ಬಾಂದ್‌ ಮೀರ ನಾಚೀರೆ ಎಂಬ ಲಘು ಶಾಸ್ತ್ರೀಯ ನೃತ್ಯದಲ್ಲಿ ತನ್ನ ಹೃದಯದಲ್ಲಿರುವ ಶ್ರೀ ಕೃಷ್ಣನು ಪ್ರತ್ಯಕ್ಷವಾದಂತೆ ಅವನೊಂದಿಗೆ ನರ್ತಿಸಿದ ಅನುಭವವು ಮೀರಾಬಾಯಿಗೆ ಆಗಿದ್ದು, ನಂತರ ಅವಳಿಗೆ ಅರಿವಾಗುತ್ತದೆ.ತನ್ನ ಮನಸಿನ ಭ್ರಮೆ ಎಂದು ಮೀರಾಳ ಅತ್ತೆಯ ಕುಲನಾಶಿನಿಯೆಂದು ಹಗೆದರೂ, ಮಾವ ರಾಣಾ ರಾಜನು ವಿಷವನ್ನು ಕೊಟ್ಟರೂ ಶ್ರೀ ಕೃಷ್ಣನಲ್ಲಿ ತೋರುವ ಅತೀವ ಭಕ್ತಿ ಪ್ರೇಮವನ್ನು ಹೊಂದಿದ ಮೀರಾಳು ಗಿರಿಧರನ ದಾಸ ಎಂದು ಭಕ್ತಿಯಿಂದ ನರ್ತಿಸುವುದನ್ನು ಹೆಜ್ಜೆ-ಗೆಜ್ಜೆ ವಿದ್ಯಾರ್ಥಿನಿಯರು ಮನೋಜ್ಞವಾಗಿ ನರ್ತಿಸಿದರು. ಫಾಗು ನೋರೆ ಎಂಬ ಅಸ್ಸಾಮ್‌ ಜಾನಪದ ನೃತ್ಯ ಬೇಡರ ನೃತ್ಯವನ್ನು ಅಚ್ಚುಕಟ್ಟಾಗಿ ಪ್ರದ ರ್ಶಿಸಿದರು.

ವಸಂತ ಮಾಸದ ಚಿತ್ರಣವನ್ನು ನೃತ್ಯಾಭಿನಯದಲ್ಲಿ ಪ್ರಕಟಿಸಿದ ಹೆಜ್ಜೆ ಗೆಜ್ಜೆಯ ವಿದ್ಯಾರ್ಥಿನಿಯರು,ವಸಂತ ಬಂದ ಋತುಗಳ ರಾಜ ಎಂದು ಬಿ.ಎಂ ಶ್ರೀಕಂಠಯ್ಯವರ ಇಂಗ್ಲೀಷ್‌ ಗೀತೆಗಳು ಎಂಬ ಕವನ ಸಂಕಲದಿಂದ ಆಯ್ದ ಈ ಹಾಡನ್ನು ಚುರುಕಾಗಿ ನರ್ತಿಸಿದರು. ಹಿರಿಯ ಕಲಾವಿದರು ಹಾಡು ಕೋಗಿಲೆ ಗಾನ ಸುಮಧುರ ಎಂಬ ಕೂರಾಡಿ ಸೀತಾರಾಮ ಅಡಿಗ ಕವಿಯವರು ರಚಿಸಿದ ಭಾವಗೀತೆಯನ್ನು ಹಸಿರೇ ಉಸಿರು ಎಂಬ ಮಂತ್ರದಿಂದ ಪ್ರಕೃತಿ ಮಾತೆಯನ್ನು ಪೂಜಿಸೋಣ ಎಂಬ ಆಶಯದಿಂದ ಭಾವ-ನೃತ್ಯದ ಮೂಲಕ ಹೊರಹೊಮ್ಮಿಸಿದರು.

ನಾಲ್ಕು ಕೊರವಂಜಿ ನೃತ್ಯ ಗುತ್ಛಗಳು ಪ್ರಧಾನ ಆಕರ್ಷಣೆ ಯಾಗಿದ್ದವು. ಬೀದಿ ಬೀದಿಯ ಮೇಲೆ ಹೊರಟಾಳ್ಳೋ ಕೊರವಿ ಎಂಬ ನೃತ್ಯದಲ್ಲಿ ಕೊರವಂಜಿಯಾಗಿ 6 ವಿದ್ಯಾರ್ಥಿನಿಯರು ಹಾಗೂ ಕಣಿಯನ್ನು ಹೇಳಿಸಿಕೊಳ್ಳುವವಳು 6 ವಿದ್ಯಾರ್ಥಿನಿಯರು ಇದ್ದು, ಕೊರವಿ-ಹೆಂಗಳೆಯರ ಸಂಭಾಷಣೆಯಂತೆ ವಿವಿಧ ರಂಗ ಸಂಯೋಜನೆಗಳಿಂದ ಅದಕ್ಕೊಪ್ಪುವ ವೇಷ ಭೂಷಣಗಳಿಂದ ಪ್ರಸ್ತುತಗೊಂಡಿತ್ತು. 17 ಪುಟಾಣಿ ಕೊರವಂಜಿಯ ಕಲಾವಿದೆಯರು, ದೂರದ ಊರಿಂದ ಕಣಿ ಹೇಳುವುದಕ್ಕೆ ಬಂದು ಮಕ್ಕಳೆಷ್ಟಿವೆ, ಹಿಂದೇನೇನು ಮಾಡಿದ್ದೀರ ಮುಂದೇನು ಮಾಡ್ತೀರ ಎಂದು ಮುದ್ದಾಗಿ ಅಭಿನಯಿಸಿದ ನೃತ್ಯವು ಮನಸೆಳೆಯುವಂತ್ತಿತು. ತಮಿಳುನಾಡಿನ ತಿರು ಕುಟ್ರಾಲ ಕೊರಂಜಿಯು ಆನಂದ ಭೈರವಿ ರಾಗದಲ್ಲಿದ್ದು, ಇದರಲ್ಲಿ ಕುರತಿ ಎಂಬ ಜನಾಂಗದ ಹೆಣ್ಣು ಭವಿಷ್ಯವಾಣಿ ನುಡಿಯುತ್ತಾ ಶಿವ ದೇವರನ್ನು ಬಣ್ಣಿಸುತ್ತಾ ಶಿವನ ರೂಪ, ಗುಣ, ಮಹಿಮೆಗಳನ್ನು ಹೊಗಳಿ ಹಾಡುವುದನ್ನು ವಿದ್ಯಾರ್ಥಿನಿಯರು ಉತ್ತಮವಾಗಿ ಪ್ರದರ್ಶಿಸಿದರು. ಡಿ.ವಿ.ಜಿ. ರಚಿಸಿದ ಅರವತ್ತು ಮಧುರಗೀತೆಗಳ ಸುಂದರ ಗುಚ್ಚ ಅಂತಃಪುರಗೀತೆಗಳನ್ನು ಮದನಿಕೆಯರನ್ನು ಕುರಿತಾದ ಹೃದಯಂಗಮ ಹಾಡುಗಳಲ್ಲಿ ಒಂದಾದ ಕೊರವಂಜೆ ಶೀರ್ಷಿಕೆಯ ನಟನವಾಡಿದಳು ನೃತ್ಯದಲ್ಲಿ ಭಾವಾಭಿನಯ ತಾಂಡವ ನೃತ್ಯ, ರಾಸ ರಭಸ ನೃತ್ಯ ನಾಟ್ಯ ಶಾಸ್ತ್ರದಲ್ಲಿ ಹೇಳಿರುವ ಕೆಲವು ಚಾರಿ ಹಾಗೂ ಕರಣಗಳನ್ನು ಬಳಸಿದ್ದು ಬಹಳ ಸೂಕ್ತವಾಗಿತ್ತು. ಅಲ್ಲದೇ ಬೇಲೂರಿನ ಮದನಿಕಾ ವಿಗ್ರಹಗಳಂತೆಯೇ ವೇಷಭೂಷಣಗಳನ್ನು ತೊಟ್ಟಿದ್ದುದರಿಂದ ಮದನಿಕಾ ವಿಗ್ರಹಗಳೇ ನರ್ತನ ಮಾಡಿದಂತೆ ಭಾಸವಾಗಿತ್ತು. ಗುಜರಾತ್‌ನ ಬೆಸ್ತರ ನೃತ್ಯದಲ್ಲಿ ಬೆಸ್ತರ ದಿನಚರಿಯನ್ನು ಪ್ರಸ್ತುತಗೊಳಿಸುವುದುದೇ ಅಲ್ಲದೇ ಹೋಲಿ ಹಬ್ಬದ ಆಚರಣೆಯನ್ನು ಕೂಡಾ ಅರ್ಥಪೂರ್ಣವಾಗಿ ಪ್ರದರ್ಶಿಸಿದರು. ಕರ್ನಾಟಕದ ಕೋಲಾಟದಲ್ಲಿ ಸಾಮಾನ್ಯವಾದ ಕೋಲಾಟ ವಿನ್ಯಾಸ ಬಳಸದೇ ಆನೆಯ ಕಿವಿ ನವಿಲು ಕುದುರೆ ಗರುಡ ಹೀಗೆ ಕೆಲವು ವಿಶೇಷ ಕೋಲಾಟ ಹೆಜ್ಜೆಗಳನ್ನು ಚಲನವಲನಗಳನ್ನು ಹಾಡಿಗೆ ತಕ್ಕ ಹಾಗೆ ನರ್ತಿಸುತ್ತಿದ್ದು ವಿಶೇಷವಾಗಿ ಕಂಡು ಬಂತು. ಹಿರಿಯ ವಿದ್ಯಾರ್ಥಿನಿಯರಿಂದ ಝೂಲತ್‌ ರಾಧಾ ಎಂಬ ಲಘು ಶಾಸ್ತ್ರೀಯ ನೃತ್ಯದೊಂದಿಗೆ ಮುಕ್ತಾಯಗೊಂಡಿತು.

ರಾಘವೇಂದ್ರ ಆಚಾರ್ಯ-ವಿ| ದೀಕ್ಷಾ ರಾಮಕೃಷ್ಣರ ಹಾಡು ಗಾರಿಕೆ ಸಾಂಗತ್ಯದಿಂದ ಕೂಡಿತ್ತು. ಕೊಳಲಿನಲ್ಲಿ ನಿತೇಶ್‌ ಅಮ್ಮಣ್ಣಾಯ ಹಾಗೂ ಕೀ ಬೋರ್ಡಿನಲ್ಲಿ ಮುರಳೀಧರ್‌ , ತಬಲಾದಲ್ಲಿ ವಿ| ಮಾಧವ ಆಚಾರ್ಯ ಹಾಗೂ ಮೃದಂಗದಲ್ಲಿ ವಿ| ಬಾಲಚಂದ್ರ ಭಾಗವತರು ಸಹಕಾರ ನೀಡಿದರು.

ವಾಣಿ ವೆಂಕಟೇಶ್‌

ಟಾಪ್ ನ್ಯೂಸ್

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ರಾಜ್ಯದಲ್ಲಿ ಎನ್‌ಕೌಂಟರ್‌ ಕಾನೂನು ಜಾರಿ ಅವಶ್ಯ: ಸಂತೋಷ್‌ ಲಾಡ್‌

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ

ವೈಯಕ್ತಿಕ ಕಾರಣಗಳಿಂದ ರಾಜ್ಯದಲ್ಲಿ ಕೊಲೆ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

Brahmavar ಕೋಟ್ಯಂತರ ರೂ. ಮೌಲ್ಯದ ಗೋಡಂಬಿ ಅಪಹರಣ; ಸೆರೆ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಲಿಂಗಾಯತರಿಗೆ ಸಿಎಂ ಹುದ್ದೆ ವಂಚಿಸಿದ್ದು ಕುಮಾರಸ್ವಾಮಿ: ಸಚಿವ ಎಂ.ಬಿ. ಪಾಟೀಲ್‌

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ಜೆಡಿಎಸ್‌ -ಬಿಜೆಪಿ ಬಿ ಟೀಮ್‌ ಹೌದು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

ನೇಹಾ ಅಂತ್ಯಕ್ರಿಯೆ, ಹಂತಕನ ಹುಟ್ಟೂರಲ್ಲಿ ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.