ಧಾರೇಶ್ವರ ಬಳಗದ ಯಕ್ಷ ಅಷ್ಟಾಹ ಸಂಪನ್ನ


Team Udayavani, Aug 10, 2018, 6:00 AM IST

x-12.jpg

ಪಾರ್ಥಿಸುಬ್ಬನ ಸೀತಾ ಕಲ್ಯಾಣ, ಕವಿರತ್ನಕಾಳಿದಾಸ, ಕಂದಾವರ ರಘುರಾಮ ಶೆಟ್ಟರ ಶಿಖಂಡಿ ವಿವಾಹ, ಹಲಸಿನಹಳ್ಳಿ ನರಸಿಂಹ ಶಾಸ್ತ್ರಿಗಳ ದೇವವ್ರತ ಪ್ರತಿಜ್ಞೆ, ಬಬ್ರುವಾಹನ ಕಾಳಗ, ದೇವಿದಾಸ ಕವಿಯ ಭೀಷ್ಮಪರ್ವ, ಬಬ್ರುವಾಹನ ಕಾಳಗ, ವಿಠಲ ಕಾಮತ್‌ ಉಪ್ಪಿನಕುದ್ರು ಅವರ ಧನ್ವಂತರಿ ಮಹಿಮೆ ಯಕ್ಷಗಾನ ನಡೆಯಿತು.

ಎಂಟು ದಿನ, ಎಂಟು ಆಖ್ಯಾನಗಳು. ಎಲ್ಲವೂ ಕಾಲಮಿತಿ. ಅದೇ ಕಲಾವಿದರು, ವಿಭಿನ್ನ ಪಾತ್ರಗಳು. ಪ್ರತಿದಿನ ಹೊಸರೂಪದಿಂದ ಬರುತ್ತಿದ್ದ ಕೊಂಡದಕುಳಿ, ವಂಡಾರು, ತೀರ್ಥಹಳ್ಳಿ, ಕಾಸರಕೋಡು, ಸಿದ್ದಾಪುರ ಮೊದಲಾದವರು. ಎಲ್ಲಿಯೂ ಪುನರುಕ್ತಿ ಇಲ್ಲ, ದ್ವಿರುಕ್ತಿ ಇಲ್ಲ. ಧಾರೇಶ್ವರರ ಸಮರ್ಥ ನಿರ್ದೇಶನ. ರಾಜಾಂಗಣದಲ್ಲಿ ಜು.21ರಿಂದ 28ರವರೆಗೆ ನಡೆದ ಯಕ್ಷಗಾನ ಪ್ರದರ್ಶನಗಳು ಜನಸಂದೋಹದ ಮನಮುಟ್ಟುವಲ್ಲಿ ಯಶಸ್ವಿಯಾಯಿತು.ಪರ್ಯಾಯ ಪಲಿಮಾರು ಮಠ,ಶ್ರೀ ಕೃಷ್ಣ ಮಠ, ತಲ್ಲೂರ್ಸ್‌ ಫ್ಯಾಮಿಲಿ ಟ್ರಸ್ಟ್‌, ಲಯನ್ಸ್‌ ಸಂಸ್ಥೆ ಸಹಯೋಗದಲ್ಲಿ ಧಾರೇಶ್ವರ ಯಕ್ಷಬಳಗ ಟ್ರಸ್ಟ್‌ ಕಿರಿಮಂಜೇಶ್ವರ ಸಂಯೋಜನೆಯಲ್ಲಿ  ಮೂರನೇ ವರ್ಷದ ಯಕ್ಷ ಅಷ್ಟಾಹ ಅಂಗವಾಗಿ ಎಂಟು ಪ್ರಸಂಗಗಳ ಆಯೋಜನೆ. 

ಕಂದಾವರ ರಘುರಾಮ ಶೆಟ್ಟರು ಬರೆದ “ವಸು ವರಾಂಗಿ’ ಪ್ರಸಂಗದ ಒಂದು ಭಾಗ ಶಿಖಂಡಿ ವಿವಾಹ. ಇದರಲ್ಲಿ ಶಿಖಂಡಿಯಾಗಿ ಸಿದ್ಧಾಪುರ ಅಶೋಕ ಭಟ್ಟರ ಸಮರ್ಥ, ಶ್ರೀಧರ ಭಟ್‌ ಕಾಸರಕೋಡು ಅವರ ಅಡುಗೆ ಭಟ್ಟ, ಉದಯ ಹೆಗಡೆ ಮಾಳ್ಕೊàಡು ಅವರ ಹಿರಣ್ಯವರ್ಮ, ಕೊಂಡದಕುಳಿಯವರ ದ್ರುಪದ, ವಸಂತ್‌ ಚಿಕ್ಕೊಳ್ಳಿಯವರ ಕೌಸವಿ, ವಂಡಾರು ಅವರ ರಾಜಕುಮಾರಿ, ತೀರ್ಥಹಳ್ಳಿಯವರ ಸ್ಥೂಲಕರ್ಣನ ಪಾತ್ರಗಾರಿಕೆ. ಮಗಳಾಗಿ ಜನಿಸಿದರೂ ಮಗನೆಂದೇ ಮುದ್ದಿಸಿ ಬೆಳೆಸಿದ ರಾಜ. ದಿನಗಳೆದಂತೆ ಯುವಕರ ಮೇಲೆ ಆಸಕ್ತಿ ಬೆಳೆಸಿಕೊಂಡ ರಾಜಕುಮಾರ. ರಾಜಕುಮಾರಿ ಜತೆ ವಿವಾಹ ಮಾಡಿ ಸಂಸಾರ ಮಾಡಲಾಗದೇ ಆಗುವ ತೊಳಲಾಟ. ಹೆಂಡತಿಗೆ ಮದುವೆಯಾದದ್ದು ಶಿಖಂಡಿಯನ್ನು ಎಂದು ತಿಳಿದಾಗ ಆಕೆಯ ತಂದೆಗೆ ದೂರು. ಯುದ್ಧಭೀತಿಯಿಂದ ಮನೆಬಿಟ್ಟು ಆತ್ಮಹತ್ಯೆಗೈಯಲು ಹೋಗುವ  ಶಿಖಂಡಿಯನ್ನು ರಕ್ಷಿಸುವ ಸ್ಥೂಲಕರ್ಣ ಎಂಬ ಗಂಧರ್ವ. ನಂತರ ಶಾಪವಿಮೋಚನೆ ಮೂಲಕ ಸುಖಾಂತ್ಯ. ರಾಜಕುಮಾರಿಯು ಶಿಖಂಡಿಯನ್ನು ವಿವಾಹವಾದಾಗ ಆಗುವ ತಳಮಳ, ಪತಿಯಿಂದ ಸುಖವಿಹೀನೆಯಾಗುವ ದುಃಖ, ಹೆಣ್ಣೊಬ್ಬಳ ತುಮುಲ, ಪತಿ ಮನೆಯವರಿಂದ ವಂಚನೆಯಾಗಿದೆ ಎಂದು ತಿಳಿಯುವಾಗ ಆಗುವ ಆಘಾತ ಇದೆಲ್ಲವನ್ನೂ ವಂಡಾರು ಮಾರ್ಮಿಕವಾಗಿ ಅಭಿನಯಿಸಿದರು.  ನೋಡುವಾಗ ಗಂಡಾಗಿದ್ದು ಒಳಗಿನಿಂದ ಹೆಣ್ಣಾಗಿದ್ದು ಕಾಮನೆಗಳನ್ನು ಹೇಳಿಕೊಳ್ಳಲಾಗದೆ , ಪ್ರದರ್ಶಿಸಲೂ ಆಗದ ಸಂದಿಗ್ಧವನ್ನು ಅಶೋಕ್‌ ಭಟ್‌ ಚೆನ್ನಾಗಿ ಅಭಿನಯಿಸಿದರು. ಇವರಿಬ್ಬರ ಭಾವಭರಿತ ಅಭಿನಯವೇ ಒಟ್ಟು ಪ್ರಸಂಗದ ಹೈಲೈಟ್‌ ಆಗಿ ಕಂಡಿತು.   

ದೇವವ್ರತ ಪ್ರತಿಜ್ಞೆಯಲ್ಲಿ ವಂಡಾರು ಅವರ ಸತ್ಯವತಿ (ಯೋಜನಗಂಧಿ) ಹಾಗೂ ಕೊಂಡದಕುಳಿಯವರ ಶಂತನು, ತೀರ್ಥಹಳ್ಳಿಯವರ ದೇವವ್ರತ, ಮಂತ್ರಿ ಸುಧೀಚಿ ಅಶೋಕ್‌ ಭಟ್‌ ಸಿದ್ದಾಪುರ, ದಾಶರಾಜ ಕಂಧರ ಶ್ರೀಧರ ಕಾಸರಕೋಡು ಅವರು ನಿರ್ವಹಿಸಿದರು. ಕಾಸರಕೋಡು ಅವರು ಪ್ರತಿದಿನ ಹೊಸತನದ ಹಾಸ್ಯರೂಪಕಗಳ ಮೂಲಕ ಹಾಸ್ಯವೆಂದರೆ ಕೇವಲ ಮಂಗಾಟವಲ್ಲ ಎಂದು ನಿರೂಪಿಸಿದರು. ಬಿಟ್ಟು ಹೋದ ಗಂಗೆಯ ಚಿಂತೆಯಲ್ಲಿ ಯೋಜನಗಂಧಿಯನ್ನು ಕಂಡು ಮೋಹಕ್ಕೊಳಗಾಗುವ ಶಂತನು, ದಾಶರಾಜನಿಂದ ಬಂದ ಮೊಮ್ಮಗುವಿಗೆ ಹಸ್ತಿನೆಯ ಸಿಂಹಾಸನದ ಬೇಡಿಕೆಯನ್ನು ಕೇಳಿ ದುಃಖ ಗೃಹವನ್ನು ಸೇರಿಕೊಳ್ಳುವ ಅಭಿನಯ ಕೊಂಡದಕುಳಿಯವರಿಂದ ವ್ಯಕ್ತವಾದರೆ, ದೇವವ್ರತ ವಿದ್ಯಾಭ್ಯಾಸ ಮುಗಿಸಿ ಬಂದಾಗ ಬಿಕೋ ಎನ್ನುವ ಅರಮನೆ ಬೀದಿ, ತಳಿರು ತೋರಣಗಳಿಲ್ಲದ ಬಣಗುಟ್ಟುವ ಸ್ವಾಗತ, ಸಿಂಹಾಸನವೇರದೇ ಅದೆಷ್ಟೋ ದಿನವಾದಂತೆ ಕಾಣುವ ರಾಜಚಾವಡಿ ಇದೆಲ್ಲ ಕಂಡು ವ್ಯಾಕುಲನಾಗಿ ಅಪ್ಪನ ಚಿಂತೆಗೆ ಕಾರಣ ತಿಳಿದುಕೊಂಡು ಸತ್ಯವತಿಯ ಮನವೊಲಿಸಿ ಅಪ್ಪನಿಗೆ ಮದುವೆ ಮಾಡಿಸಿ ಪಟ್ಟ ಬೇಡ ಎಂದು ಪ್ರತಿಜ್ಞೆ ಮಾಡುವ ಆ ಮೂಲಕ ಭೀಷ್ಮ ಎಂದು ಕರೆಸಿಕೊಳ್ಳಲ್ಪಡುವವನ ಪಾತ್ರಾಭಿನಯ ತೀರ್ಥಹಳ್ಳಿಯವರಿಂದ ಮೂಡಿಬಂತು. ವೀರಮಣಿ ಕಾಳಗದಲ್ಲಿ ಕೊಂಡದಕುಳಿ ಅವರ ಹನುಮಂತ, ಉಪ್ಪುಂದ ನಾಗೇಂದ್ರ ರಾವ್‌ ಅವರ ವೀರಮಣಿ ಉತ್ತಮವಾಗಿತ್ತು. ರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕುವ ವೀರಮಣಿಯ ಮಕ್ಕಳ ಪಾತ್ರವನ್ನು ತೀರ್ಥಹಳ್ಳಿಯವರು ಮಾಡಿದ್ದರು. 

ಸುಬ್ರಹ್ಮಣ್ಯಧಾರೇಶ್ವರ, ಚಂದ್ರಕಾಂತ ಮೂಡುಬೆಳ್ಳೆ, ಗಜಾನನ ಬೊಳ್ಗೆರೆ, ಕೋಟ ಶಿವಾನಂದ ಹಾಗೂ ಕಾರ್ತಿಕ್‌ ಧಾರೇಶ್ವರ ಅವರ ಹಿಮ್ಮೇಳ ಸೊಗಸಾಗಿತ್ತು.

ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

Mangaluru; ಪೆಟ್ರೋಲ್‌ ಬದಲು ಡೀಸೆಲ್‌ ತುಂಬಿಸಿದ ಆರೋಪ: ಕೋರ್ಟ್‌ಗೆ ಮೊರೆ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.