ಚಿಣ್ಣರಿಗೆ ಮಜಾ ನೀಡಿದ‌ ದಸರಾ ರಜಾ ಶಿಬಿರ


Team Udayavani, Nov 23, 2018, 6:00 AM IST

6.jpg

ಇತ್ತೀಚೆಗೆ ಕುಂದಾಪುರದ ಕುಂಭಾಶಿ ಆನೆಗುಡ್ಡ ಶ್ರೀ ವಿನಾಯಕ ದೇವಾಲಯದಲ್ಲಿ ಚಿತ್ರಕಲೆಗೆ ಸಂಬಂಧ ಪಟ್ಟ ಹಲವಾರು ಚಟುವಟಿಕೆಗಳ ದಸರಾ ರಜಾ ಶಿಬಿರವನ್ನು ಕೋಟೇಶ್ವರದ ಮಯೂರ ಸ್ಕೂಲ್‌ ಆಫ್ ಆರ್ಟ್ಸ್ ಸಂಸ್ಥೆ ಆಯೋಜಿಸಿತ್ತು. 

ಅಂದು ಗ್ರಾಮೀಣ ವಲಯದ ಚಿಣ್ಣರ ಎವೆಯಿಕ್ಕಿ ಕಾಣುವ ಜೋಡಿ ಕಣ್ಣುಗಳು, ತೆರೆದಿಟ್ಟ ಪುಟ್ಟ ಮನಸ್ಸುಗಳು ಅಚ್ಚರಿಯ ಲೋಕದಲ್ಲಿ ವಿಹರಿಸುತ್ತಿದ್ದುವು. ಒಂದರಿಂದ ಹತ್ತನೇ ತರಗತಿಯ ವರೆಗಿನ ಮಕ್ಕಳಿಗಾಗಿ 6ದಿನಗಳ ಕಾಲ ಹಮ್ಮಿಕೊಂಡ ಶಿಬಿರ ಹೊರವಲಯದಲ್ಲಿ ಇತ್ತು. 

ಎಲ್ಲಾ ಸೃಜನಾತ್ಮಕ ಕಲಾವಿದರಿಗೆ ಹೊಸತನದ ತುಡಿತ ಇರುವಂತೆ ಶಿಬಿರದ ರೂವಾರಿ ಕಲಾವಿದ ಮಹೇಂದ್ರ ಆಚಾರ್ಯ ಕೂಡ ಭಿನ್ನವಾದ ಆಲೋಚನೆಗಳನ್ನು ಪ್ರಯೋಗಿಸಲು ಸಿದ್ಧರಾಗಿದ್ದರು. ಮಂಗಳೂರು, ಉಡುಪಿ, ಕುಂದಾಪುರ ಮುಂತಾದೆಡೆಗಳಿಂದ ಅವರವರ ಕ್ಷೇತ್ರದಲ್ಲಿ ಪರಿಣತಿ ಹೊಂದಿದ ಖ್ಯಾತ ಕಲಾವಿದರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ಆಹ್ವಾನಿಸಲಾಗಿತ್ತು. 

ಕಾಟೂìನಿಷ್ಟ್ ಜೀವನ್‌ ಶೆಟ್ಟಿಯವರು ವ್ಯಂಗ್ಯಚಿತ್ರ ರಚನೆಗೆ ಪೂರಕವಾಗಿ ಸುಲಭ ಚಿತ್ರಗಳನ್ನು ಬರೆಯಿಸಿ, ವಿವಿಧ ಆಕಾರಗಳ ಮುಖಗಳಲ್ಲಿ ನವರಸ ಭಾವ ಹೇಗೆ ಮೂಡುತ್ತದೆ ಎಂದು ತೋರಿಸಿದಾಗ ಮಕ್ಕಳು ಅನುಭವಿಸಿ ಸಂತೋಷ ಪಟ್ಟರು. ಸ್ಥಳದಲ್ಲೆ ಸಂಯೋಜಕರ ವ್ಯಂಗ್ಯಭಾವಚಿತ್ರ ಬರೆದಾಗ ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. 

ಕಲಾವಿದ ತಾರಾನಾಥ ಕೈರಂಗಳ ಅವರಿಂದ ಕೊಲಾಜ್‌ ಕಲೆಯ ಕಲಿಕೆಯಲ್ಲಿ ಮಕ್ಕಳು ಬಿಳಿ ಹಾಳೆ ಮೇಲೆ ಬಣ್ಣ ಬಣ್ಣದ ಕಾಗದ ಕತ್ತರಿಸಿ ಹೂವು, ಆನೆ, ಮರ, ನವಿಲು, ಯಕ್ಷ ಮೊದಲಾದ ಚಿತ್ರಗಳ ಆಕಾರಕ್ಕೆ ಅಂಟಿಸಿ ಆನಂದಿಸಿದರು. ಕಲಾವಿದ ದಿನೇಶ್‌ ಹೊಳ್ಳ ಚಿತ್ರಕಲೆಗೆ ಗೆರೆಗಳ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿ, ಚಂದದ ಬರವಣಿಗೆಯಿಂದ ಮಕ್ಕಳಲ್ಲಿ ಹೊಸ ಹುರುಪು ಹುಟ್ಟಿಸಿದರು. ಅವರ ಜತೆ ಕಲಾವಿದ ಭವನ್‌ ಅವರು ಎ ಟು ಝಡ್‌ ಅಕ್ಷರಗಳಿಂದ ಚಿತ್ರಗಳು ಸಾಧ್ಯ ಎಂದು ತೋರಿಸಿದರು. 

ನಾಲ್ಕನೇ ದಿನ ವಿನಯಚಂದ್ರ ಸಾಸ್ತಾನ ಮತ್ತು ಸುಮಾ ಆಚಾರ್ಯ ಅವರು ಪೇಪರ್‌ ಕ್ರಾಫ್ಟ್ ಕಲಿಸಿದರು. ಅವರು ಪ್ರಸ್ತುತ ಪರಿಸರ ಪ್ರಜ್ಞೆ ಕುರಿತು ಮಾಹಿತಿ ನೀಡುತ್ತಾ, ಮಣ್ಣಿಂದ ಸೀಡ್‌ ಬಾಲ್‌ ಹಾಗೂ ಸಜೀವ ಗಣಪ ಪ್ರಾತ್ಯಕ್ಷಿಕೆಗೆ ಮಕ್ಕಳ ಕೈಗಳನ್ನೂ ಕುಣಿದಾಡಿಸಿದರು. ಮನೆಯಲ್ಲಿ ಮಣ್ಣಾಟಕ್ಕೆ ಅವಕಾಶ ನೀಡದ್ದು ಶಿಬಿರದಲ್ಲಿ ನೆರವೇರಿದ ಖುಷಿ ಅದು! ಕಲಾವಿದ ಪೂರ್ಣೇಶ್‌ ಥರ್ಮಾಫೋಮ್‌ ಬಳಸಿ ಪ್ರಾಣಿ ಪಕ್ಷಿಗಳ ಮುಖವಾಡ ಪ್ರತಿಯೊಬ್ಬರೂ ಧರಿಸುವಂತೆ ಮಾಡಿದರು. ನಿರೀಕ್ಷಾ, ವಿಶ್ರುತ ಮತ್ತಿತರರು ಒಂದಷ್ಟು ಆಟ- ರಂಜನೆಗಳಿಗೂ ಆಗಿಂದಾಗ್ಗೆ ಅವಕಾಶ ಕೊಟ್ಟರು. 

ಕೊನೆಯ ದಿನ ತುಂಬಾ ಕುತೂಹಲದ ಬೆಂಕಿಯಿಲ್ಲದೆ ಅಡುಗೆ ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಯಿತು. ನಾಗರತ್ನ ಹೇಳೆìಯವರು ಕನ್ನಡ ಸಾಹಿತ್ಯವನ್ನು ಮಕ್ಕಳಲ್ಲೂ ಬೆಳೆಸುವ ಸಲುವಾಗಿ ಕವನ ರಚನೆ ಮತ್ತು ವೇದಿಕೆಯಲ್ಲಿ ನಿರೂಪಣೆ, ಸ್ವಾಗತ ಭಾಷಣ ಮಾಡುವ ಕುರಿತು ಪ್ರೇರೇಪಣೆ ನೀಡಿದರು. ಮೊದಲ ದಿನ ಹೆಸರು ಹೇಳಲು ಹಿಂಜರಿಯುತ್ತಿದ್ದ ಮಕ್ಕಳು ನಾ ಮುಂದು ತಾ ಮುಂದು ಎಂದು ತಮ್ಮ ವಾಕ್ಚತುರತೆ ತೋರಿದರು. 

ಜೀವನ್‌ ಶೆಟ್ಟಿ 

ಟಾಪ್ ನ್ಯೂಸ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

BS ಯಡಿಯೂರಪ್ಪನೇ ನನ್ನನ್ನು ವಾಪಸ್‌ ಬಿಜೆಪಿ ಕರೆಸಿಕೊಳ್ಳುತ್ತಾರೆ: ಈಶ್ವರಪ್ಪ

7-mng

Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್‌ ವಶ: ಜಿಲ್ಲಾಧಿಕಾರಿ ಮಾಹಿತಿ

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

K.S. Eshwarappa ಗಂಡಸಾಗಿದ್ದರೆ ಮಗನಿಗೆ ಟಿಕೆಟ್‌ ಕೊಡಿಸಲಿ: ಮಧು

Biriyani was being served on paper plates with images of Lord Rama

Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Congress ಗೆದ್ದರೆ ಸಿದ್ದರಾಮಯ್ಯ ಕೆಳಗಿಳಿಸಿ ಡಿಕೆಶಿ ಸಿಎಂ: ಯತ್ನಾಳ್

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ,

Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್‌ಗೆ ಜೀವ ಬೆದರಿಕೆ

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Gajendragad; ದಕ್ಷಿಣ ಕಾಶಿ ಕಾಲಕಾಲೇಶ್ವರ ಅದ್ದೂರಿ ರಥೋತ್ಸವ

Jamyang Tsering Namgyal missed bjp ticket in ladakh

Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್‌ ಹಾಲಿ ಸಂಸದ ನಮ್‌ಗ್ಯಾಲ್‌ ಗೆ ಕೊಕ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.