ಮಹಾನಗರದಲ್ಲಿ ನಡೆಯಿತು ದೇವಸೇನಾ ಪರಿಣಯ


Team Udayavani, Oct 18, 2019, 4:31 AM IST

f-50

ಇತ್ತೀಚೆಗೆ ಬೆಂಗಳೂರಿನಲ್ಲಿ ಯಕ್ಷಸಿಂಚನ ತಂಡದವರಿಂದ ಉಪನ್ಯಾಸಕ ಶಿವಕುಮಾರ ಬಿ.ಎ. ಅಳಗೋಡು ರಚಿಸಿದ ದೇವಸೇನಾ ಪರಿಣಯ(ಸ್ಕಂದ ವಿಜಯ) ಪ್ರಸಂಗದ ಪ್ರಥಮ ರಂಗಪ್ರದರ್ಶನ ಸಂಪನ್ನಗೊಂಡಿತು. ಮಹಾಭಾರತದ ವನಪರ್ವದಲ್ಲಿ ಉಲ್ಲೇಖವಿರುವ ಸ್ಕಂದೋದ್ಭವದ ಕಥೆ ಈ ಪ್ರಸಂಗದ ವಸ್ತು. ಅಗ್ನಿ ಸಪ್ತರ್ಷಿಗಳ ಆಶ್ರಮಕ್ಕೆ ಹವಿಸ್ಸನ್ನು ಒಯ್ಯಲು ಬಂದಾಗ ಅಲ್ಲಿ ಅವರ ಪತ್ನಿಯರನ್ನು ಕಂಡು ಮೋಹಗೊಳ್ಳುತ್ತಾನೆ. ವಿರಹಾಗ್ನಿಯಿಂದ ಆತ ಬಳಲುತ್ತಿರುವಾಗ ದಕ್ಷಸುತೆ ಸ್ವಾಹಾ ಅವನಲ್ಲಿ ಪ್ರೇಮನಿವೇದನೆ ಮಾಡಿ ತಿರಸ್ಕೃತಳಾಗುತ್ತಾಳೆ. ಬಳಿಕ ಅಗ್ನಿಯ ಮನವನ್ನರಿತ ಸ್ವಾಹಾ ಸಪ್ತರ್ಷಿ ಪತ್ನಿಯರಲ್ಲಿ ಅರುಂಧತಿಯನ್ನುಳಿದು ಮಿಕ್ಕುಳಿದ ಸಾದ್ವಿಯರ ರೂಪ ಧರಿಸಿ ಅವನನ್ನು ಸೇರುತ್ತಾಳೆ. ಮಿಲನೋತ್ತರ ಸ್ಖಲಿತವಾದ ರೇತಸ್ಸನ್ನು ತನ್ನ ಗರ್ಭದಲ್ಲಿ ಧರಿಸಲಾರದ ಆಕೆ ಅದನ್ನು ಶೆ¤àತಪರ್ವತದ ಶರವಣ ಕುಂಭದಲ್ಲಿ ನಿಕ್ಷೇಪಿಸುತ್ತಾಳೆ. ಆರನೇ ದಿನಕ್ಕೆ ಅವೆಲ್ಲವೂ ಸೇರಿ ಸ್ಕಂದನ ಆವಿರ್ಭಾವವಾಗುತ್ತದೆ. ಈ ಮೊದಲೇ ಶಿವ ಪಾರ್ವತಿಯರು ಕ್ರೀಡಿಸುವಾಗ ಶಿವನಿಂದ ಸ್ಖಲಿತವಾದ ರೇತಸ್ಸಿನ ಒಂದಂಶ ಅಗ್ನಿಯನ್ನು ಸೇರಿದ್ದು, ಅದೇ ಮುಂದೆ ಸ್ಕಂದನ ಹುಟ್ಟಿಗೆ ಕಾರಣವಾಗಿರುತ್ತದೆ. ಬಳಿಕ ಸ್ಕಂದ ಕೇಶಿ, ಮಹಿಷಾಸುರ ಮೊದಲಾದವರನ್ನು ಸಂಹರಿಸಿ ದೇವಸೇನೆಯನ್ನು ವರಿಸಿ ದೇವಸೇನಾನಿಯಾಗುವುದು ಮುಖ್ಯ ಕಥೆ.

ಆರಂಭದಲ್ಲಿ ದೇವೇಂದ್ರ ದೇವಸೇನಾನಿಗಾಗಿ ಹುಡುಕಾಟ ನಡೆಸುವುದು, ದಕ್ಷನ ಮಗಳಾದ ದೇವಸೇನೆಯೂ ವರಾನ್ವೇಷಣೆಯ ಬಯಕೆ ವ್ಯಕ್ತಪಡಿಸುವುದು, ಕೇಶಿ ದಾನವ ಆಕೆಯನ್ನು ಹೊಂದಲು ಯತ್ನಿಸಿ ದೇವೇಂದ್ರನಿಂದ ಪರಾಜಿತನಾಗುವುದು ಮೊದಲಾದ ಸನ್ನಿವೇಶಗಳು ಮೂಲದಲ್ಲಿ ಇರುವಂತೆಯೇ ಕಥೆಗೆ ಪೂರಕವಾಗಿ ಬಂದಿವೆ. ಈ ಕಥೆಯನ್ನು ರಂಗಕ್ಕೆ ಹೊಂದುವಂತೆ ಛಂದೋಬದ್ಧ ಪದ್ಯಗಳೊಂದಿಗೆ ಕವಿಯು ಸುಂದರ ಪೌರಾಣಿಕ ಪ್ರಸಂಗವನ್ನಾಗಿ ರಚಿಸಿದ್ದಾರೆ. ಐವತ್ತೇಳು ಬಗೆಯ ಯಕ್ಷಗಾನೀಯ ಮಟ್ಟುಗಳು, ಐದು ಸಮೀಕೃತ ಬಂಧಗಳು, ಇನ್ನೂರ ಮೂರು ಪದ್ಯಗಳಿಂದ ಕೂಡಿದ ಈ ಪ್ರಸಂಗದ ಸಾಹಿತ್ಯ ಸುಲಲಿತವೂ, ಸುಮಧುರವೂ ಆಗಿದೆ.

ಭಾಗವತರಾಗಿ ಎ.ಪಿ. ಪಾಟಕರ ಸಂಪ್ರದಾಯ ಶೈಲಿಯ ಸುಶ್ರಾವ್ಯ ಗಾಯನ, ಕೃಷ್ಣಮೂರ್ತಿ ಭಟ್‌, ಶರತ್‌ ಜಾನಕೈ ಇವರ ಚೆಂಡೆ-ಮದ್ದಳೆ ನಿನಾದ ಮುಮ್ಮೇಳದವರಿಗೆ ಸ್ಫೂರ್ತಿಯನ್ನೊದಗಿಸಿತು. ದೇವೇಂದ್ರ ಪಾತ್ರಧಾರಿ ರವಿ ಮಡೋಡಿಯವರ ವಿಶಿಷ್ಟ ಪೀಠಿಕೆ, ಸಂಪ್ರದಾಯದ ವೇಷ, ಗಂಭೀರ ನಡೆನುಡಿ, ಕಥೆಯ ಸಂದೇಶವನ್ನು ನಿರೂಪಿಸಿದ ರೀತಿ ಮನಮುಟ್ಟಿದವು. ಅಗ್ನಿಯಾಗಿ ವಿಜೃಂಭಿಸಿದ ಶಶಾಂಕ ಕಾಶಿಯವರ ಲಾಲಿತ್ಯದ ಕುಣಿತ, ಸ್ಪಷ್ಟ ಮಾತು, ಸಂದರ್ಭಾನುಕೂಲಿಯಾದ ಭಾವಾಭಿವ್ಯಕ್ತಿ ಸೊಗಸಾಗಿತ್ತು. ಮನೋಜ್‌ ಭಟ್‌ರ ಸ್ವಾಹಾ ದೇವಿಯ ಪಾತ್ರಚಿತ್ರಣ ಮನಮೋಹಕವಾಗಿದ್ದು ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿತು., ಸ್ಕಂದನ ಪಾತ್ರ ನಿರ್ವಹಿಸಿದ ಶಶಿರಾಜ ಸೋಮಯಾಜಿ ಚುರುಕಿನ ಹೆಜ್ಜೆ, ಅಚ್ಚುಕಟ್ಟಾದ ಕುಣಿತ, ಮಿತ ಮಾತುಗಳಿಂದ ರಂಗದಲ್ಲಿ ಮಿಂಚಿದರು. ಆದಿತ್ಯ ಉಡುಪರ ಬಣ್ಣದ ವೇಷದ ಒಡ್ಡೋಲಗ ರಂಗಕ್ಕೆ ವಿಶೇಷವಾಗಿತ್ತು. ಕೃಷ್ಣ ಶಾಸ್ತ್ರಿಯವರ ಗರುಡಾಕ್ಷ(ಹಾಸ್ಯ) ಪವಿತ್ರಾ ಅವರ ದೇವಸೇನೆ ಮೊದಲಾದ ಪಾತ್ರಗಳು ಪ್ರಶಂಸೆಗೆ ಪಾತ್ರವಾದವು. ಒಟ್ಟು ಪರಿಣಾಮದಲ್ಲಿ ಪ್ರಸಂಗ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಸಾಧಿಸಿದರೂ ಸಮಯದ ಅಭಾವದಿಂದ ಕೊನೆಯ ಕೆಲವು ಮಹತ್ವದ ಸನ್ನಿವೇಶಗಳನ್ನು ವೇಗವಾಗಿ ಓಡಿಸುವುದು ಅನಿವಾರ್ಯವಾಯಿತು. ಕೃಷ್ಣಮೂರ್ತಿ ತುಂಗರ ನಿರ್ದೇಶನದಲ್ಲಿ ಇಡೀ ಪ್ರಸಂಗ ಸಂಪ್ರದಾಯ ಶೈಲಿಯ ಸೌಂದರ್ಯದಿಂದ ರಂಜಿಸಿತು.

ಶಿವಕುಮಾರ ಮಾತನಾಲಿಸು ನಮನವಿತ್ತೆ ಪವನ ಸಖನೆ ಅಸುರ ಕೇಶಿ ಕಂಡ ದೂರದಿ ಕಾಮಿನಿಮಣಿ ಮಣಿ ನಿಲ್ಲು ಮೊದಲಾದ ಪದ್ಯಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಒಟ್ಟಂದದಲ್ಲಿ ಆಕರ್ಷಕವಾಗಿರುವ ಕಥೆಯೊಂದನ್ನು ಯುವ ಯಕ್ಷಕವಿ ಸುಂದರ ಸಾಹಿತ್ಯ ರಚನೆಯಿಂದ ಯಕ್ಷಗಾನೀಯವಾಗಿಸಿದ್ದಾರೆ.

ರಂಜನ್‌ ಮಿಶ್ರ

ಟಾಪ್ ನ್ಯೂಸ್

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.