ಭಕ್ತಿ ಪರವಶವಾಗಿಸಿದ ಭಕ್ತಿ ಭಾವ ಗಾಯನ


Team Udayavani, May 24, 2019, 5:50 AM IST

q-1

ಹಂಗಾರಕಟ್ಟೆಯ ಶ್ರೀ ಮಠ ಬಾಳೆಕುದ್ರು ಇದರ ಸಾಂಸ್ಕೃತಿಕ ಸಂಜೆಯ ಕಾರ್ಯಕ್ರಮದ ಅಂಗವಾಗಿ ಸಾಧನ ಕಲಾ ಸಂಗಮ(ರಿ.) ಕುಂದಾಪುರ ಇಲ್ಲಿನ ವಿದ್ಯಾರ್ಥಿಗಳು “ಭಕ್ತಿ ಭಾವ ಗಾಯನ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೊದಲಿಗೆ “ನೀ ಸುಖಕಾರಕ ವಿಘ್ನ ನಿವಾರಕ …’ ಎನ್ನುವ ಗಣೇಶ ಸ್ತುತಿ ಹಾಡಿನ ಮೂಲಕ ಮಾ| ಶುಭಾಂಗ್‌ ಐತಾಳ್‌ ಕಾರ್ಯಕ್ರಮಕ್ಕೆ ಸೊಗಸಾದ ಮುನ್ನುಡಿ ಬರೆದರು. ನಂತರ ಗುರುವಂದನೆಯಾಗಿ “ಗುರುವಿನ ಗುಲಾಮನಾಗುವ ತನಕ …’ ವನ್ನು ಕು| ವರ್ಷಾ ಹಾಡಿದರೆ, ಸಮೂಹ ಗಾಯನದಲ್ಲಿ “ಆಂಜನೇಯ ಸ್ತೋತ್ರ’ವನ್ನು ಹಾಡಿರುವುದು ಶ್ರೋತೃಗಳನ್ನು ಭಕ್ತಿ ಪರವಶರಾಗುವಂತೆ ಮಾಡಿತು. ಅನಂತರ ಮಾ| ಭಾರ್ಗವ “ಇದು ಭಾಗ್ಯವಿದು ಭಾಗ್ಯ…’ ಮತ್ತು ವಿಜಯ ವಿಠಲ ದಾಸರ “ಸದಾ ಎನ್ನ ಹೃದಯದಲ್ಲಿ…’ ಹಾಡನ್ನು ಕು| ಶರಣ್ಯಾ ಇವರುಗಳು ಹಾಡಿ ಗಮನ ಸೆಳೆದರು. ಅಪೂರ್ವಾ ಅವರ ಸೊಗಸಾದ ಕಂಠಸಿರಿಯಲ್ಲಿ “ಸೌರಾಷ್ಟ್ರ ದೇಶದಲಿ…’ ಈಶ್ವರ ಭಕ್ತಿಯ ಹಾಡು ಮೂಡಿ ಬಂದರೆ, ಸಮೂಹ ಗಾಯನದಲ್ಲಿ ಆದಿ ಶಂಕರಾಚಾರ್ಯರ “ಶಿವ ಮಾನಸ ಸ್ತೋತ್ರ’ ತಲ್ಲೀನರಾಗುವಂತೆ ಮಾಡಿತು. ಮುಂದೆ ಪುರಂದರ ದಾಸರ “ತಾರಕ್ಕ ಬಿಂದಿಗೆ…’ಯನ್ನು ಮಾ| ಶುಭಾಂಗ್‌ ಐತಾಳ್‌, ನರೇಂದ್ರ ಶರ್ಮರ “ಭಾಜೆ ಮುರಳೀಯ…’ವನ್ನು ಕು| ವರ್ಷಾ, ಪುರಂದರ ದಾಸರ “ಪವಮಾನ…’ವನ್ನು ಮತ್ತು “ಬಂದಾನೋ ಗೋವಿಂದ…..” ಹಾಗೂ “”ನೋಡಿದ್ಯಾ ಸೀತಮ್ಮ…’ವನ್ನು ಮಾ| ಭಾರ್ಗವ್‌ ಹಾಗೂ ಅಪೂರ್ವಾ ಮತ್ತು ಕು| ಶರಣ್ಯಾ ಇವರುಗಳು ಹಾಡಿರುವುದು ಖುಷಿ ನೀಡಿತು. ನಂತರ ಮೀರಾ ಭಜನ್‌ನ “ಪಾಯೋಜೆ ಮೈನೆ…’ ಇದನ್ನು ಸಮೂಹವಾಗಿ ಹಾಡಿರುವುದು ಚೇತೋಹಾರಿಯಾಗಿತ್ತು. ಮುಂದೆ “ಕವನ ಸುಖ ಪಾಯೋ…’ವನ್ನು ಹಿರಿಯರಾದ ಡಾ| ಎಚ್‌. ಆರ್‌. ಹೆಬ್ಟಾರ್‌ ಮತ್ತು ಮೀರಾ ಭಜನ್‌ನ “ಮೇ ಗಿರಿದಾರಿ …’ಯನ್ನು ಕು| ವರ್ಷಾ ಹಾಡಿದ್ದು ಮೆಚ್ಚುಗೆಗೆ ಪಾತ್ರವಾಯಿತು. ಕೊನೆಯಲ್ಲಿ ಸಮೂಹವಾಗಿ “ಮಂತ್ರ ಪುಷ್ಪ’ ಹಾಡಿನೊಂದಿಗೆ ಕಾರ್ಯಕ್ರಮಕ್ಕೆ ಮಂಗಳವನ್ನಿತ್ತರು. ತಬಲಾದಲ್ಲಿ ರಾಘವೇಂದ್ರ ಹೆಗಡೆ ಭಟ್ಕಳ್‌ ಮತ್ತು ಪೂರ್ಣಾನಂದ ಬಸ್ರೂರ್‌, ಕೀ ಬೋರ್ಡ್‌ನಲ್ಲಿ ಭಾಸ್ಕರ್‌ ಆಚಾರ್‌ ಬಸ್ರೂರು, ಕೊಳಲಿನಲ್ಲಿ ಕಿರಣ್‌ ಹೊಳ್ಳ ವಡ್ಡರ್ಸೆ ಸಹಕರಿಸಿದ್ದರು.

– ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.