ದೇಶಭಕ್ತಿಯ ಸಂದೇಶ ಸಾರುವ ಯೋಧ ಧರ್ಮೋ ವರಂ ಕರ್ಮ

ಧಿಗಿಣ ದಿವಿಜ ಪ್ರಸ್ತುತಿ

Team Udayavani, Nov 15, 2019, 5:00 AM IST

ff-12

ಕಥಾನಾಯಕಿ ಅಂಬಿಕೆ ಪಾತ್ರವನ್ನು ಸ್ವತಃ ರಕ್ಷಿತ್‌ ಶೆಟ್ಟಿ ನಿರ್ವಹಿಸಿ ಉತ್ತಮ ನಾಟ್ಯ , ಲಾಸ್ಯ , ಭಾವಾಭಿನಯದ ಮೂಲಕ ಪಾತ್ರದ ಘನತೆ ಹೆಚ್ಚಿಸಿದರು . ಶೃಂಗಾರ ,ಕರುಣ ರಸಗಳು ಉತ್ತಮವಾಗಿ ಪ್ರಸ್ತುತಗೊಂಡವು . ಕಥಾನಾಯಕನಾಗಿ ಕು| ಶಿವಾನಿ ಸುರತ್ಕಲ್‌ ಅವರ ನಿರ್ವಹಣೆ ಗಮನ ಸೆಳೆಯಿತು.

ಮೂಡಬಿದಿರೆಯ ಯಕ್ಷಗಾನ ಕಲಿಕಾ ಕೇಂದ್ರ ಧಿಗಿಣ ದಿವಿಜ ಇದರ ಪ್ರಥಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಸ್ತುತಗೊಂಡ ಪ್ರಸಾದ್‌ ಮೊಗೆಬೆಟ್ಟುರವರಿಂದ ರಚಿಸಲ್ಪಟ್ಟ “ಯೋಧ ಧರ್ಮೋ ವರಂ ಕರ್ಮ’ ಯಕ್ಷಗಾನ ನೃತ್ಯ ರೂಪಕದ ಪ್ರಥಮ ಪ್ರಯೋಗ ಯಶಸ್ವಿಯಾಯಿತು . ರಕ್ಷಿತ್‌ ಶೆಟ್ಟ ಪಡ್ರೆ ಪ್ರಧಾನ ಭೂಮಿಕೆಯಲ್ಲಿ ,ಸುಮಾರು 30ರಷ್ಟು ಶಿಷ್ಯರ ಸಾಂಗತ್ಯದ ಈ ಪ್ರಸ್ತುತಿ ಜನಮನ ಗೆಲ್ಲುವಲ್ಲಿ ಸಫ‌ಲವಾಯಿತು .

ಗಡಿಯಲ್ಲಿ ಕರ್ತವ್ಯ ನಿರತನಾಗಿರುವ ಅಮರನಾಥ ಎಂಬ ಯೋಧನು ರಜಾಕಾಲದಲ್ಲಿ ಕುದುರೆಯೇರಿ ಊರಿಗೆ ಬರುವಾಗ ಅಂಬಿಕೆ ಎಂಬ ಹುಡುಗಿಯಲ್ಲಿ ಅನುರಕ್ತನಾಗಿ ವಿವಾಹವಾಗುತ್ತಾನೆ . ತನ್ನ ಮಡದಿಯು ತುಂಬು ಗರ್ಭಿಣಿಯಾಗಿದ್ದು ಹೆರಿಗೆ ಸಮೀಪಿಸುವ ಸಂದರ್ಭದಲ್ಲಿಯೇ ಭಾರತಕ್ಕೆ ವೈರಿಗಳ ಆಕ್ರಮಣವಾಗಿ ಅಮರನಾಥನಿಗೆ ಸೈನ್ಯದಿಂದ ಕರೆ ಬರುತ್ತದೆ . ಅಮರನಾಥನಿಗೆ ಮಗುವನ್ನು ನೋಡಿಯೇ ಹೋಗಬೇಕೆಂಬ ಆಸೆಯಿದ್ದರೂ , ಅಂಬಿಕೆಯೇ ಸ್ವತಃ ಪತಿಗೆ ಖಡ್ಗವನ್ನು ನೀಡಿ , ಯೋಧರಿಗೆ ದೇಶ ಸೇವೆಯೇ ಪ್ರಥಮ ಕರ್ತವ್ಯ ಎಂದು ತಿಳಿ ಹೇಳಿ ಯುದ್ಧಕ್ಕೆ ಕಳಿಸುತ್ತಾಳೆ . ಇತರ ಸೈನಿಕರೊಂದಿಗೆ ಅಮರನಾಥನು ವೈರಿಗಳನ್ನು ಚೆಂಡಾಡುತ್ತಾನೆ . ಸೋತ ವೈರಿಗಳು ಹಿಂದಿನಿಂದ ಬಂದು ಅಮರನಾಥನನ್ನು ಇರಿದು ಕೊಲ್ಲುತ್ತಾರೆ .

ಅಂಬಿಕೆಯು ಗಂಡು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲೇ ಅಮರನಾಥನ ವೀರಮಣದ ವಾರ್ತೆ ಬರಸಿಡಿಲಿನಂತೆ ಎರಗುತ್ತದೆ .ಅಂಬಿಕೆಯು ಪತಿವಿಯೋಗದಿಂದ ತೀವ್ರ ದುಃಖ ಪಟ್ಟು ಸಹಗಮನಕ್ಕೆ ಸಿದ್ಧಳಾದರೂ ದೇಶಪ್ರಜ್ಞೆ ಜಾಗ್ರತೆಗೊಳ್ಳುತ್ತದೆ . ತನ್ನ ನವಜಾತ ಶಿಶುವನ್ನು ಸಖೀಯರ ಬಳಿ ನೀಡಿ , ಆತನನ್ನು ಬೆಳೆಸಿ , ಮುಂದೆ ಭಾರತದ ಸೈನ್ಯಕ್ಕೆ ಸೇರಿಸಬೇಕು ಎಂದು ಹೇಳಿ ಚಿತೆಯನ್ನು ಪ್ರವೇಶಿಸಿ ದೇಹತ್ಯಾಗ ಮಾಡುತ್ತಾಳೆ . ಇವಿಷ್ಟು ಕಥಾನಕ ಹೊಂದಿರುವ ಯೋಧ ಧರ್ಮೋ ವರಂ ಕರ್ಮ ದೇಶಭಕ್ತಿಯ ಸಂದೇಶ ಸಾರುವಲ್ಲಿ ಯಶಸ್ವಿಯಾಯಿತು .

ಕಥಾನಾಯಕಿ ಅಂಬಿಕೆ ಪಾತ್ರವನ್ನು ಸ್ವತಃ ರಕ್ಷಿತ್‌ ಶೆಟ್ಟಿ ನಿರ್ವಹಿಸಿ ಉತ್ತಮ ನಾಟ್ಯ , ಲಾಸ್ಯ , ಭಾವಾಭಿನಯದ ಮೂಲಕ ಪಾತ್ರದ ಘನತೆ ಹೆಚ್ಚಿಸಿದರು . ಶೃಂಗಾರ ,ಕರುಣ ರಸಗಳು ಉತ್ತಮವಾಗಿ ಪ್ರಸ್ತುತಗೊಂಡವು . ಕಥಾನಾಯಕನಾಗಿ ಕು| ಶಿವಾನಿ ಸುರತ್ಕಲ್‌ ಅವರ ನಿರ್ವಹಣೆ ಗಮನ ಸೆಳೆಯಿತು .

ಸಖೀಯರಾಗಿ ಅಶ್ವಥ್‌ ಆಚಾರ್ಯ ಕೈಕಂಬ ಹಾಗೂ ಶ್ರವಣ ಆಚಾರ್ಯ ಸುರತ್ಕಲ್‌ರವರ ನಿರ್ವಹಣೆ ಉತ್ತಮವಾಗಿತ್ತು .ಮಂದಾರ ಮೂಡಬಿದಿರೆ ಸೇರಿದಂತೆ ಉಳಿದ ಕಲಾವಿದರ ಸಾಂ ಕ ಶ್ರಮವೂ ಪ್ರದರ್ಶನದ ಯಶಸ್ಸಿಗೆ ಪೂರಕವಾಯಿತು . ಹಿಮ್ಮೇಳದಲ್ಲಿ ತೆಂಕು – ಬಡಗು ತಿಟ್ಟುಗಳ ಕಲಾವಿದರ ಸಮನ್ವಯತೆಯನ್ನು ಚೆನ್ನಾಗಿ ಬಳಸಿದ್ದು ಕಂಡು ಬಂತು .ತೆಂಕಿನ ಭಾಗವತರಾಗಿ ಸತ್ಯನಾರಾಯಣ ಪುಣಿಚಿತ್ತಾಯ ಹಾಗೂ ಗಿರೀಶ್‌ ರೈ ಕಕ್ಕೆಪದವುರವರು ಸುಶ್ರಾವ್ಯವಾದ ಕಂಠದಿಂದ ಎದ್ದು ಕಂಡರು . ಮದ್ದಲೆಯಲ್ಲಿ ಶ್ರೀಧರ್‌ ವಿಟ್ಲ ಸಹಕರಿಸಿದರು. ಪದ್ಮನಾಭ ಉಪಾಧ್ಯಾಯರು ಅದ್ಭುತ ಕೈ ಚಳಕದಿಂದ ಕೊನೆಯವರೆಗೂ ಏಳು ಚೆಂಡುಗಳನ್ನು ನುಡಿಸಿ ಮೋಡಿ ಮಾಡಿದರು . ಬಡಗಿನ ಭಾಗವತಿಕೆಯಲ್ಲಿ ಯಕ್ಷಗಾನ ಪ್ರಸಾದ್‌ ಮೊಗೆಬೆಟ್ಟುರವರ ನಿರ್ವಹಣೆ ಮೆಚ್ಚುಗೆ ಮೂಡಿಸಿತು . ಮದ್ದಲೆಯಲ್ಲಿ ಶಶಿಕುಮಾರ್‌ ಆಚಾರ್ಯರು ವಿವಿಧ ಶ್ರುತಿಗಳ ಏಳು ಮದ್ದಲೆಗಳ ವಾದನದಿಂದ ಚಪ್ಪಾಳೆ ಗಿಟ್ಟಿಸಿದರು .ಚಕ್ರತಾಳದಲ್ಲಿ ರಾಜೇಂದ್ರಕೃಷ್ಣರು ಸಹಕರಿಸಿದರು .

ಪ್ರಾರಂಭದಲ್ಲೇ ಭಾರತ ಮಾತೆಯೊಂದಿಗೆ ವೀರ ಸೈನಿಕರು ಜಯಹೇ ಜಯಹೇ ಭಾರತ ಭಾಗ್ಯವತಿ ಯೋಧರ ಪುಣ್ಯಕ್ಷಿತಿ ಹಾಡನ್ನು ಕಕ್ಕೆಪದವುರವರು ಹಾಡಿದಾಗ ದೇಶಭಕ್ತಿಯ ಅನುಭವ ಮೂಡಿತು . ವಿರೋಧಿ ಸೈನಿಕರನ್ನು ಯಕ್ಷಗಾನದ ಪರಂಪರೆಯ ಐದು ಬಣ್ಣದ ವೇಷಗಳ ಮೂಲಕ ರಂಗಕ್ಕೆ ಬಳಸಿದ್ದುದು ಮೆಚ್ಚುಗೆ ಮೂಡಿಸಿತು . ಅಂಬಿಕೆಯ ನವಜಾತ ಶಿಶುವಾಗಿ ನೈಜ ಶಿಶುವನ್ನೇ ತಂದು ಎತ್ತಿ ಮು¨ªಾಡಿಸಿದ ನಾಟ್ಯವೂ ಮನ ಗೆದ್ದಿತು .

ಶೀರ್ಷಿಕೆ ಪದ್ಯವಾದ ಜಯಹೇ ಜಯಹೇ ಭಾರತ ಭಾಗ್ಯವತಿ , ವಂದೇ ಮಾತರಂ ಪದ್ಯಗಳು ಹೃದ್ಯವಾಗಿತ್ತು . ಅಡಿಯೆ ಮುಂದಿಡೆ ಸ್ವರ್ಗ , ಯೋಧನ ರಮಣಿ ಹಡೆದರೆ ಸ್ವರ್ಗ ಯೋಧನು ರಣದಿ ಮಡಿದರೆ ಸ್ವರ್ಗ , ಗೆಜ್ಜೆ ನಾದ ಹೆಜ್ಜೆ ಮೋದ ಮುಂತಾದ ಪದ್ಯಗಳು ಸನ್ನಿವೇಶಕ್ಕನುಗುಣವಾಗಿ ಹೆಣೆಯಲಾಗಿದೆ .

ಎಂ .ಶಾಂತರಾಮ ಕುಡ್ವ

ಟಾಪ್ ನ್ಯೂಸ್

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

PM ಮೋದಿ ಸಾಗುತ್ತಿದ್ದ ವೇಳೆ ‘ಚೊಂಬು’ ತೋರಿಸಲೆತ್ನಿಸಿದ ಮೊಹಮ್ಮದ್ ನಲಪಾಡ್

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.