ಗಮ್ಮತ್ ಕೊಟ್ಟ ಗಮ್ಮತ್ ಕಲಾವಿದರ ನಾಟಕ
Team Udayavani, Mar 13, 2020, 6:16 PM IST
ಪ್ರತಿ ದೃಶ್ಯದ ಕೊನೆಗೆ ಸಿಳ್ಳೆ, ಚಪ್ಪಾಳೆಯ ಝೇಂಕಾರ, ವೃತ್ತಿಪರ ಕಲಾವಿದರಿಗಿಂತ ನಾವೇನು ಅಭಿನಯದಲ್ಲಿ ಕಮ್ಮಿ ಇಲ್ಲ ಎಂದು ತೋರಿಸಿ ಕೊಟ್ಟ ಹವ್ಯಾಸಿ ಕಲಾವಿದರು, ಆರಂಭದಲ್ಲಿ ನಗೆಗಡಲಲ್ಲಿ ತೇಲಾಡಿಸಿ ಕೊನೆಯಲ್ಲಿ ಕಣ್ಣೀರು ಸುರಿಸುವಂತೆ ಮಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಯುಎಈ ಕಲಾಭಿಮಾನಿಗಳಿಗೆ ಗಮ್ಮತ್ ಕೊಟ್ಟ ಗಮ್ಮತ್ ಕಲಾವಿದರು ದುಬೈ ಯುಎಈ ಯ 9ನೇ ವರ್ಷದ ಕಲಾ ಕಾಣಿಕೆ “ದಾದ ಮಲ್ಪೆರೆ ಆಪುಂಡು’ ನಾಟಕ ಫೆ.21 ರಂದು ಪ್ರದರ್ಶನಗೊಂಡಿತು.
ಶ್ರೀಮಂತಿಕೆಯ ಮದದಿಂದ ಮಾನವೀಯತೆಯನ್ನು ಮರೆತರೆ ಏನಾಗಬಹುದು, ತುಳುನಾಡಿನ ಕಲೆಯಾದ ಯಕ್ಷಗಾನವನ್ನು ಪ್ರೀತಿಸಬೇಕು, ಯಕ್ಷಗಾನದ ಮಹತ್ವದ ಬಗ್ಗೆ ವಿವರ ಸಹಿತ ಸಂಭಾಷಣೆಯ ಮೂಲಕ ಸಂದೇಶ,ಪ್ರೀತಿಗೆ ಶ್ರೀಮಂತ-ಬಡವ ಎಂಬ ಭೇದಭಾವ ಇಲ್ಲ, ಕೊನೆಗೆ ಪ್ರೀತಿಸಿದ ಹೃದಯ ಸಿಗದಿದ್ದರೆ ಹುಚ್ಚಾಗುವ ಸಾಧ್ಯತೆ, ಸರಕಾರಿ ಕೆಲಸ ದೇವರ ಕೆಲಸ, ಈ ಕೆಲಸದಲ್ಲಿದ್ದು ಲಂಚಕ್ಕೆ ಕೈ ನೀಡಿದರೆ ಕೊನೆಗೆ ಲಂಚದ ಹಣವನ್ನೆಲ್ಲ ಸರಕಾರಕ್ಕೆ ನೀಡಿ ಸೆರೆಮನೆ ಸೇರಬೇಕೆಂಬಂಥ ಉತ್ತಮ ಸಂದೇಶಗಳು ನಾಟಕದಲ್ಲಿದ್ದವು. ಕಲಾವಿದರಾಗಿ ವಾಸು ಕುಮಾರ್ ಶೆಟ್ಟಿ, ಚಿದಾನಂದ ಪೂಜಾರಿ,ಡೊನಾಲ್ಡ್ ಕೊರೇಯೊ,ಗಿರೀಶ್ ನಾರಾಯಣ್, ಸುನೀಲ್ ಸುವರ್ಣ, ಸಂದೀಪ್ ಬರ್ಕೆ,ರಮೇಶ್ ಸುವರ್ಣ, ಜೇಶ್ ಬಾಯಾರ್,ರೂಪೇಶ್ ಪೂಜಾರಿ, ದೀಪಕ್ ಎಸ್. ಪಿ., ಗೌತಮ್ ಬಂಗೇರ ,ಮೋನಪ್ಪ, ಸುವರ್ಣಾ ಸತೀಶ್,ದೀಪ್ತಿ ದೀನರಾಜ್,ಜಾನೆಟ್ ಸಿಕ್ವೆರಾ ಪಕ್ವ ಅಭಿ ನಯ ನೀಡಿ ದರು. ಸಂಗೀತ ನಿರ್ದೇಶಕರಾಗಿ ಶುಭಕರ ಬೆಳಪು,ನೃತ್ಯ ನಿರ್ದೇಶಕರಾಗಿ ಗೌತಮ್ ಬಂಗೇರ, ಮೇಕಪ್ನಲ್ಲಿ ಕಿಶೋರ್ ಗಟ್ಟಿ ಸಹಕರಿಸಿದರು. ನವೀನ್ ಶೆಟ್ಟಿ ಅಳಕೆ ರಚಿಸಿದ ನಾಟಕವನ್ನು ವಿಶ್ವನಾಥ ಶೆಟ್ಟಿ ದುಬೈ ನಿರ್ದೇಶಿಸಿದ್ದರು.
ವಿಜಯ ಕುಮಾರ್ ಶೆಟ್ಟಿ, ಮಜಿಬೈಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ