ನಾದ ಮಾಂತ್ರಿಕನಿಗೆ ಗುರು ವಂದನೆ


Team Udayavani, Aug 30, 2019, 5:11 AM IST

f-7

ಗುರುಕುಲ ಮಾದರಿಯಂತೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಪ್ರತ್ಯೇಕ ಸಂಗೀತ ಪಾಠ. ಅವರವರ ಸಾಮರ್ಥ್ಯಕ್ಕೆ ತಕ್ಕ ವಿಭಿನ್ನ ಪಾಠ-ಕಲಿಕೆಗೆ ಅವಕಾಶ. ಪ್ರಾಥಮಿಕ ಸಂಗೀತ ಪಾಠ ಕಲಿತಿರುವವರಿಗೆ ಅವರಿಗೆ ಬೇಕಾದ ಹಾಡುಗಳಿಗೆ ಅವರ ಆಲೋಚನೆಯಲ್ಲಿ ಸಂಪ್ರದಾಯಿಕ ಚೌಕಟ್ಟಿನಲ್ಲಿ ಸಂಗೀತ ಸಂಯೋಜಿಸಿಕೊಳ್ಳುವ ವಿಭಿನ್ನ ಅವಕಾಶ. ಇದು ಉಡುಪಿ ನಾದವೈಭವಂ ಸಂಗೀತ ಶಿಕ್ಷಣ ಸಂಶೋಧನಾ ಸಂಸ್ಥೆಯ ವಿಭಿನ್ನ ಸಾಧನೆ‌ಯ ನೋಟ. ಆಗಸ್ಟ್‌ 30 ರಂದು ಉಡುಪಿಯ ಕಡಿಯಾಳಿ ಕಾತ್ಯಾಯಿನಿ ಮಂಟಪದಲ್ಲಿ ಪ್ರತಿಷ್ಠಾಪನಾ ದಿನಾಚರಣೆ ಮತ್ತು ಗುರು ವಂದನ ಕಾರ್ಯಕ್ರಮವಿದೆ.

40 ವರ್ಷಗಳಿಂದ 8000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಗುರು ನಾದವೈಭವಂ ಉಡುಪಿ ವಾಸುದೇವ ಭಟ್‌ ಅವರಿಂದ ಸಂಗೀತ ಕಲಿತು ಕೀರ್ತಿವಂತರಾಗಿದ್ದಾರೆ. ಆ ದಿನಗಳಲ್ಲಿ ಪಿ.ಬಿ ಶ್ರೀನಿವಾಸ್‌, ಎಸ್‌. ಜಾನಕಿ ಸೇರಿದಂತೆ ನಾಡಿನ ಹಿರಿಯ ಪ್ರಸಿದ್ಧ ಸಂಗೀತಜ್ಞರ ಒಡನಾಡಿಯಾಗಿದ್ದರು.

ಉಡುಪಿಯ ಪಿಪಿಸಿ ಸಭಾಂಗಣದಿಂದ ಪೇಟೆಗೆ ಬರುವ ಒಳದಾರಿಯಲ್ಲಿ ಗುರುಕೃಪಾದಲ್ಲಿ ಇಂದಿಗೂ ಸಂಗೀತ ನಾದೋಪಾಸನೆ ನಿರಂತರ ನಡೆಯುತ್ತಿರುವುದು ನಾದವೈಭವಂ ಸಂಗೀತ ಶಾಲೆಯ ಸಾಧನೆ. ಕರ್ನಾಟಕ ಸಂಗೀತದ ಮಹತ್ವದ ಹೆಸರು ಬಿಡಾರಂ ಕೃಷ್ಣಪ್ಪ ಅವರು. ಅವರ ಪರಮಾಪ್ತ ಶಿಷ್ಯ ವಾಸುದೇವ ಭಟ್ಟರ ಗುರು ಪಿಟೀಲು ಮಂಜುನಾಥಯ್ಯ ಅವರ ಸ್ಫೂರ್ತಿಯ ಸೆಲೆ ಈ ಪರಮ ಶಿಷ್ಯ. ಭವ್ಯ ಪರಂಪರೆಯ ಮೂರನೆ ಮಜಲು ಈ ವಾಸುದೇವ ಭಟ್ಟರು.

ಗಾಯಕ, ಲೇಖಕ, ಶಿಕ್ಷಕ, ಸಂಗೀತ ನಿರ್ದೇಶಕ, ಸಾಮಾಜಿಕ ಕಾರ್ಯಕರ್ತ ಹೀಗೆ ವಿಭಿನ್ನ ಸಾಧನೆಯ ಮುಖವುಳ್ಳ ಭಟ್ಟರು ಈ 82ರ ಹರೆಯದಲ್ಲೂ ಸಂಗೀತ ಸಂಶೋಧನಾ ಶಾಲೆಯನ್ನು ಮುನ್ನಡೆಸುತ್ತಿದ್ದಾರೆ. ಶಿಷ್ಯವೃಂದದಲ್ಲಿ ಜಿಲ್ಲಾಧಿಕಾರಿಗಳಿಂದ ಹಿಡಿದು ಐ.ಎ.ಎಸ್‌ ಅಧಿಕಾರಿಗಳು ಇದ್ದಾರೆ. ಜತೆಗೆ ರಿಕ್ಷಾ ಚಾಲಕರು, ನಿವೃತರೂ ಇದ್ದಾರೆ. ಎಲ್ಲರನ್ನು ಸಮಾನ ಭಾವದಿಂದ ನೋಡುತ್ತಾ ಇಲ್ಲಿ ಕಲಿಕೆಗೆ ಅವಕಾಶ ಮಾಡಿ ಕೊಡಲಾಗುತ್ತಿದೆ.

ಕರ್ನಾಟಕ ಶಾಸ್ತ್ರೀಯ ಸಂಗೀತ, ಭಕ್ತಿ ಗೀತೆಗಳು, ಜಾನಪದ ಗೀತೆಗಳು, ಭಾವಗೀತೆಗಳಿಗೆ ತಮ್ಮ ಸ್ವತಂತ್ರ ಸಂಗೀತ ನಿರ್ದೇಶನ ನೀಡಿರುವ ಅವರು ತಮ್ಮ ತಂಡದ ನೃತ್ಯ- ಸಂಗೀತ ಕಾರ್ಯಕ್ರಮಗಳನ್ನು ದೇಶದ ಬಹುತೇಕ ಭಾಗಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಅವರು ಈಗಲೂ ಶಿಷ್ಯರೊಂದಿಗೆ ಹಾರ್ಮೋನಿಯಂನಲ್ಲಿ ಸಾಥಿಯಾದರೆ, ಹಾಡಲು ಆರಂಭಿಸಿದರೆ ಅವರ ಅನುಭವಾಮೃತವನ್ನು ಸವಿಯುವ ಅವಕಾಶ ಕಲಾಪ್ರೇಮಿಗಳಿಗೆ ತೆರೆದು ಕೊಳ್ಳುತ್ತದೆ.

– ಡಾ| ಶೇಖರ ಅಜೆಕಾರು

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.