ಚಿಂತನೆಗೆ ಗ್ರಾಸ ವಾದ ಹರಿಕಥಾ ಸಪ್ತಾಹ


Team Udayavani, Feb 21, 2020, 5:07 AM IST

kala-6

ಕಾರ್ಕಳ ಶ್ರೀ ಅನಂತಪದ್ಮನಾಭ ದೇಗುಲದಲ್ಲಿ ಹರಿಕಥಾ ಪರಿಷತ್ತು ಮಂಗಳೂರು ಹಾಗೂ ದೇವಳದ ಭಜಕವೃಂದಗಳ ಸಂಯುಕ್ತ ಆಶ್ರಯದಲ್ಲಿ ಐದನೇ ವರ್ಷದ ಭಾಗವತ ಹರಿಕಥಾ ಸಪ್ತಾಹವು ಜ.19 ರಿಂದ 25ರ ವರೆಗೆ ಹರಿದಾಸ ಟಿ.ಎಲ್‌. ವಾಸುದೇವ ರಾಯರ ವೇದಿಕೆಯಲ್ಲಿ ನಡೆಯಿತು.

ಆರಂಭದ ದಿನ ತುಮಕೂರಿನ ಮೋಹನದಾಸ್‌ ಅವರು “ಭಕ್ತ ಧ್ರುವ’ ಕಥಾನಕದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಪೂರ್ವವಾದ ಕಂಠಸಿರಿಯಿಂದ ಹರಿಕಥಾಪ್ರಿಯರ ಮನಗೆದ್ದರು. ಸಾಂದರ್ಭಿಕವಾದ ಸಾಕಷ್ಟು ಉಪಕತೆಗಳು ಕಥಾಭಾಗಕ್ಕೆ ಪೂರಕವಾಗಿದ್ದವು.

ಎರಡನೇ ದಿನ ಹಿರಿಯ ಹರಿದಾಸರಾದ ಅಂಬಾತನಯ ಮುದ್ರಾಡಿ ಅವರು ಇಳಿವಯಸ್ಸಿನಲ್ಲೂ “ಭಕ್ತ ಪ್ರಹ್ಲಾದ’ ಕಥಾ ಪ್ರಸಂಗದ ಪೂರ್ವಾರ್ಧವನ್ನು ಅರ್ಥಗರ್ಭಿತವಾಗಿ ನಡೆಸಿಕೊಟ್ಟರು. ಉತ್ತರಾರ್ಧವನ್ನು ಶಿಷ್ಯ ಅನಂತಪದ್ಮನಾಭ ಭಟ್‌ ಅವರೊಂದಿಗೆ ಕೊನೆಯ ತನಕ ಕೂಡಿಕೊಂಡು ಸಮರ್ಥವಾಗಿ ನಡೆಸಿಕೊಟ್ಟರು.

ಮೂರನೇ ದಿನ ಶಂಕರನಾರಾಯಣ ಅಡಿಗ ಕುಂಬ್ಳೆ ಅವರ “ಗಜೇಂದ್ರ ಮೋಕ’ ಕಥಾನಕ ರೋಮಾಂಚನವನ್ನುಂಟು ಮಾಡಿತು. ಉತ್ತಮ ಕಂಠಸಿರಿ ಸಾಕಷ್ಟು ಉಪಕತೆಗಳ ಮೂಲಕ ಪ್ರಸಂಗಕ್ಕೆ ಮೆರುಗನ್ನು ನೀಡಿದರು. ಹರಿಕಥಾಪ್ರಿಯರ ಮೆಚ್ಚುಗೆ ಗಳಿಸಿದ ಪ್ರಸಂಗ ಇದಾಗಿತ್ತು.ನಾಲ್ಕನೇ ದಿನ ತೋನ್ಸೆ ಪುಷ್ಕಳ ಕುಮಾರ್‌ ಅವರು ನಡೆಸಿಕೊಟ್ಟ “ಶ್ಯಮಂತಕೋಪಾಖ್ಯಾನೆ’ ಕಥಾನಕ ಮಂತ್ರಮುಗ್ಧರನ್ನಾಗಿಸಿತು.

ಐದನೇ ದಿನ ಮುಂಬಯಿಯ ವಿಶ್ವೇಶದಾಸರು “ವಾಮನ ಚರಿತ್ರೆ’ ಕಥಾನಕವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಉಪಕತೆಗಳು ವಿರಳವಾಗಿದ್ದರೂ ಮುಖ್ಯ ಕತೆಗೆ ಪೂರಕವಾಗಿ ಸಾಕಷ್ಟು ಚಿಂತನೆಗಳನ್ನು ಹಂಚಿಕೊಂಡರು.

ಆರನೇ ದಿನ ದೇವಕಿತನಯ ಕೊಡ್ಲು ಅವರಿಂದ “ಶ್ರೀ ಕೃಷ್ಣ ಪರಂಧಾಮ’ ಎಂಬ ಹರಿಚಿಂತನೆಯು ಸೀಮಿತ ಅವಧಿಯೊಳಗೆ ಚುಟುಕಾಗಿ ನಿವೇದಿಸಲ್ಪಟ್ಟಿತು. ಉಪಕತೆಗಳು ವಿರಳವಾಗಿದ್ದರೂ ಪ್ರಸಂಗದ ಗಾಂಭೀರ್ಯತೆಯನ್ನು ಎತ್ತಿ ಹಿಡಿದು ಶ್ರೀಕೃಷ್ಣನ ಕೊನೆಯ ದಿನಗಳನ್ನು ಉಲ್ಲೇಖೀಸಿ ರಂಜಸಿದರು.

ಕೊನೆಯ ದಿನ ಮಂಜುಳಾ ಇರಾ ಅವರು “ಅಕ್ಷಯಾಂಬರ’ ಕಥಾನಕವನ್ನು ಅಪ್ರತಿಮ ವಾಗjರಿಯಿಂದ ಪ್ರಸ್ತುತಪಡಿಸಿ ರಂಜಿಸಿದರು. ಕಥಾನಾಯಕಿ ದ್ರೌಪದಿಯ ಸಂಪೂರ್ಣ ಚಿತ್ರಣವನ್ನು ಅನೇಕ ಉಪಕತೆಗಳ ಮೂಲಕ ಎಳೆಎಳೆಯಾಗಿ ಬಿಚ್ಚಿಟ್ಟರು.

ಹಿಮ್ಮೇಳದಲ್ಲಿ ರಮೇಶ್‌ ಹೆಬ್ಟಾರ್‌, ನಾಗರಾಜ ಶೆಣೈ, ಸತ್ಯನಾರಾಯಣ ಐಲ, ರವಿರಾಜ್‌, ಪ್ರದೀಪ ಉಪಾಧ್ಯಾಯ, ವಿಘ್ನೇಶ್‌ ಪ್ರಭು, ವಾಸುದೇವ ಕಿಣಿ, ಮನೋಹರ ರಾವ್‌ ಸಹಕರಿಸಿದರು.

ಕೆ.ಕೆ. ನಂಬಿಯಾರ್‌

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.