ಹಿಂದಿಯಲ್ಲಿ ಸಂದಾಯವಾಯಿತು ಗುರುದಕ್ಷಿಣಾ


Team Udayavani, Oct 4, 2019, 4:15 AM IST

c-11

ಮಂಗಳೂರು ಅಧಿಕೃತ ಭಾಷಾ ಅನುಷ್ಠಾನ ಸಮಿತಿ ಹಾಗೂ ಆಕಾಶವಾಣಿ ಮಂಗಳೂರು ಸಹಯೋಗದಲ್ಲಿ ಹಿಂದಿ ದಿವಸ್‌ ಆಚರಣೆ “ಇಂದ್ರ ಧನುಷ್‌’ ಅಂಗವಾಗಿ ಸರಯೂ ಮಕ್ಕಳ ಮೇಳದಿಂದ ಹಿಂದಿ ಯಕ್ಷಗಾನ “ಗುರುದಕ್ಷಿಣಾ’ ಏರ್ಪಡಿಸಲಾಗಿತ್ತು.

ಶ್ರೀಕೃಷ್ಣ – ಬಲರಾಮರು ಗುರು ಸಾಂದೀಪನಿಯವರ ಪುತ್ರನನ್ನು ಆತ್ಮಸ್ವರೂಪದಲ್ಲಿ ತಂದು ಗುರುದಕ್ಷಿಣೆ ನೀಡುವುದೇ ಈ ಕಥೆಯ ಸಾರ. ಕೃಷ್ಣ , ಪಂಚಜನನನ್ನು ಕೊಂದು ಅವನ ಬೆನ್ನ ಮೂಳೆಯ ಎಲುಬಿನಿಂದ ಶಂಖವನ್ನು ಸೃಷ್ಟಿಸಿ ಆ ರಾಕ್ಷಸನ ನೆನಪು ಉಳಿಯುವಂತೆ ಅದಕ್ಕೆ “ಪಾಂಚಜನ್ಯ’ ಎಂಬ ಹೆಸರನ್ನಿರಿಸುತ್ತಾನೆ. ದುಷ್ಟನ ವಧೆಯಿಂದ ಧರ್ಮಸಂಸ್ಥಾಪನೆಯ ಕೂಗಿಗಾಗಿ ಪಾಂಚಜನ್ಯ ಮೊಳಗಿತು. ಶೈಮಿನಿಯರಸನನ್ನು ಕಂಡು ಅವನಲ್ಲಿಂದ ಬಾಲಕನ ಆತ್ಮವನ್ನು ತಂದು ಗುರುಗಳ ಪಾದಕ್ಕೊಪ್ಪಿಸುವುದೇ ಈ ಪಾಂಚಜನ್ಯೋತ್ಪತ್ತಿ. ಡಾ| ದಿನಕರ ಪಚ್ಚನಾಡಿಯವರ ಪ್ರಸಂಗವನ್ನು ಹಾಗೂ ಬಿ.ಪ್ರಕಾಶ ಪೈಯವರ ಭಾಷಾಂತರವನ್ನು ಸರಯೂ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಪ್ರದರ್ಶಿಸಿದರು. ಪದ್ಯಗಳೂ ಹಿಂದಿ ಭಾಷೆಯಲ್ಲೇ ಇದ್ದದ್ದು ಪ್ರಸಂಗದ ಹೈಲೈಟ್‌. ಇದರ್‌ ಇಸ್‌ ತರಹ್‌ ರಾಮಕೃಷ್ಣನೆ ಅನುಜ್‌ ತು ಸುನು ಮೋರೇ … ಎಂಬಿತ್ಯಾದಿ ಹಾಡುಗಳು ಸತೀಶ್‌ ಶೆಟ್ಟಿ ಬೋಂದೇಲ್‌ರವರ ಮಧುರ ಕಂಠದಿಂದ ಬಹಳ ಸುಂದರವಾಗಿ ಮೂಡಿ ಬಂದು ಪ್ರಸಂಗದ ಅಂದವನ್ನು ಹೆಚ್ಚಿಸಿದುವು.

ವರ್ಕಾಡಿ ರವಿ ಅಲೆವೂರಾಯರ ನಿರ್ದೇಶನ ಈ ಯಕ್ಷ ಕಾಣೆಗಿತ್ತು. ಬಲರಾಮನಾಗಿ ಪ್ರಥಮ್‌ ರೈ, ವರುಣನಾಗಿ ಚಿಂತನ್‌ ಆರ್‌.ಕೆ., ಸಾನ್ವಿ ಜೆ. ಮತ್ತು ಅದ್ವಿತ್‌ ಸೇನಾವೀರರಾಗಿದ್ದರು. ವಿಜಯಲಕ್ಷ್ಮೀ ಎಲ…. ಪಂಚಜನನಾದರೆ ಚಿರಾಗ್‌ ಆರ್‌.ಕೆ., ಸಂಜನಾ ಜೆ. ರಾವ್‌, ಪೂರ್ವಿ ಎಸ್‌., ಹರ್ಷಿತ್‌ ಶೆಟ್ಟಿ ಬಲಗಳಾದರು. ಯಮಧರ್ಮನಾಗಿ ಅಕ್ಷಯ್‌ ಸಿ., ಮೃತ್ಯುವಾಗಿ ನಚಿತ್‌ ಕೆ., ಯಮಭಟರಾಗಿ ಸಾನ್ವಿ ಬಿ.ಕೆ., ಸಾರ್ಥಕ್‌ ಶೆಣೈ, ಹರಿಚರಣ್‌ ಆರ್‌.ಪಿ.ಯವರಿದ್ದರು. ಸುರೇಖಾ ಶೆಟ್ಟಿಯವರು ಗುರುವಾದರೆ, ಮಲ್ಲಿಕಾ ಜೀವನ್‌ ಗುರುಪತ್ನಿಯಾಗಿದ್ದರು. ಒಟ್ಟಂದದಲ್ಲಿ ಸುಂದರವಾದ ಪ್ರಸ್ತುತಿಯಾಗಿತ್ತು ಹಿಂದಿ ಯಕ್ಷಗಾನ “ಗುರುದಕ್ಷಿಣಾ’.

ಟಾಪ್ ನ್ಯೂಸ್

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.