ಬದುಕಿನ ಸತ್ಯದ ಪ್ರತಿಬಿಂಬ ನ್ಯಾಯ ಅನ್ಯಾಯ

ಬೈಕಾಡಿಯ ಮಂದಾರದ ಪ್ರಸ್ತುತಿ

Team Udayavani, Apr 26, 2019, 5:50 AM IST

11

ಸಮಾಜದಲ್ಲಿ ನಮಗೆ ಬದುಕಲು ಹಲವಾರು ವೃತ್ತಿ ಮತ್ತು ದಾರಿಗಳಿವೆ. ಬಹಳಷ್ಟು ಜನ ನ್ಯಾಯಯುತವಾಗಿ ಜೀವನ ಸಾಗಿಸಿದರೆ, ಇನ್ನು ಕೆಲವರು ಅನ್ಯಾಯದ ಹಾದಿಯಲ್ಲಿ ಸಾಗುತ್ತಾರೆ. ಈ ದ್ವಂದ್ವವೇ ನಾಟಕದ ಮೂಲ ವಸ್ತು.

ನಮ್ಮ ಸುತ್ತಲಿನ ಸಮಾಜ ಸ್ವಸ್ಥವಾಗಿ ಇರಬೇಕಾದರೆ ನಮ್ಮೊಳಗಿನ ದುರಾಸೆ, ದುರಹಂಕಾರ, ದುರ್ಗುಣ ಮತ್ತು ದುಶ್ಚಟ ಮುಂತಾದುವುಗಳನ್ನು ದೂರ ಮಾಡುವುದರ ಹೊರತು ಬೇರೆ ದಾರಿಯಿಲ್ಲ. ರಂಗಭೂಮಿಯಂತಹ ಸಾಂಸ್ಕೃತಿಕ ಚಟುವಟಿಕೆಗಳು ಸಮಾಜದ ಎಲ್ಲರನ್ನೂ ಒಗ್ಗೂಡಿಸಿ ಸಾಮರಸ್ಯದ ಬದುಕನ್ನು ಮುನ್ನಡೆಸುವ ಶಕ್ತಿ ಹೊಂದಿದೆ. ಹಾಗಾಗಿ ಭಾವೀ ಪ್ರಜೆಗಳಾದ ಎಳೆಯರನ್ನು ಶಿಕ್ಷಣದ ಜೊತೆಗೆ ಇಂತಹ ಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗುವಂತೆ ನಾವು ಮಾಡಬೇಕಾಗಿದೆ. ಅದಕ್ಕಾಗಿ ಬ್ರಹ್ಮಾವರದ ಬೈಕಾಡಿಯ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆಯಾದ ಮಂದಾರ(ರಿ.) ಇವರು ತನ್ನ ಸುತ್ತಲಿನ ಶಾಲಾ ಎಳೆಯರನ್ನು ವಾರಾಂತ್ಯದಲ್ಲಿ ಕಲೆಹಾಕಿ ಅಭಿನಯ ಮತ್ತು ರಂಗ ತರಬೇತಿಯನ್ನು ನೀಡುತ್ತಿದೆ. ಈ ಬಾರಿ ಎಸ್‌. ಮಾಲತಿಯವರ ರಚನೆಯಾದ “ನ್ಯಾಯ ಅನ್ಯಾಯ’ ಎನ್ನುವ ನಾಟಕವನ್ನು ಆಯ್ದು ತರಬೇತಿಯ ಸಮಾರೋಪ ದಂದು ಸಾಲಿಕೇರಿಯ ಅಂಬೇಡ್ಕರ್‌ ಭವನದಲ್ಲಿ ಪ್ರದರ್ಶಿಸಿ ದರು.

ಸಮಾಜದಲ್ಲಿ ನಮಗೆ ಬದುಕಲು ಹಲವಾರು ವೃತ್ತಿ ಮತ್ತು ದಾರಿಗಳಿವೆ. ಬಹಳಷ್ಟು ಜನ ನ್ಯಾಯಯುತವಾಗಿ ಜೀವನ ಸಾಗಿಸಿದರೆ, ಇನ್ನು ಕೆಲವರು ಅನ್ಯಾಯದ ಹಾದಿಯಲ್ಲಿ ಸಾಗುತ್ತಾರೆ. ಈ ದ್ವಂದ್ವವೇ ನಾಟಕದ ಮೂಲ ವಸ್ತು. ದುರಾಸೆಗೆ ಸಿಲುಕಿದ ಸಿರಿವಂತ ವ್ಯಕ್ತಿಯೊಬ್ಬ ಮಾನವೀಯತೆ ಮತ್ತು ರಕ್ತ ಸಂಬಂಧವನ್ನೇ ಮರೆತು, ನ್ಯಾಯಯುತವಾಗಿ ಜೀವನ ಸಾಗಿಸುತ್ತಿದ್ದ ತಮ್ಮನೊಂದಿಗೆ ಕ್ರೂರಿಯಾಗಿ ವರ್ತಿಸುತ್ತಾನೆ. ಆತನ ಸಂಸಾರವನ್ನೇ ಹಾಳುಗೆಡವಿ ನಿರ್ಗತಿಕನ‌ನ್ನಾಗಿಸುತ್ತಾನೆ. ಆದರೆ ಕೊನೆಗೊಂದು ದಿನ ಅದುವೇ ಆತನಿಗೆ ಮುಳುವಾಗಿ ಪರಿತಪಿಸುವ ಕಾಲ ಬರುತ್ತದೆ. ಹೀಗೆ ನಮ್ಮೊಳಗೆ ಅಡಗಿರುವ ದುಶ್ಚಟ, ದುರ್ಗುಣ, ದುರಹಂಕಾರ, ದುರಾಸೆ ಮುಂತಾದುವುಗಳು ಭೂತರೂಪ ತಾಳಿ ನಮ್ಮನ್ನೇ ಹೇಗೆ ನುಂಗಿ ಹಾಕುತ್ತವೆ ಎನ್ನುವುದನ್ನು ಅನಾವರಣಗೊಳಿಸುತ್ತದೆ ಈ ನಾಟಕ. ಹಾಗೆಯೇ ಆಧುನಿಕತೆಯೆಂಬ ಧಾವಂತದ ಬದುಕಿಗೆ ಹೆಚ್ಚು ಹತ್ತಿರವಾಗಿರುವ ರಂಗ ಕೃತಿ. ನಾಟಕದೊಳಗಿನ ಕೆಲವು ಸಂದರ್ಭಗಳು ಉಳ್ಳವರ ಮತ್ತು ಕಾವಿಧಾರೀ ಬದುಕಿನೊಳಗಿನ ಸತ್ಯ ವಿಚಾರಗಳನ್ನು ನೇರವಾಗಿ ಹೇಳುತ್ತದೆ.

ಮನುಷ್ಯನ ಮನದಲ್ಲಿ ಅಡಗಿರುವ ವಿವಿಧ ವಿಕಾರಗಳನ್ನು ಯಕ್ಷಗಾನದ ತೆರೆ ಒಡ್ಡೋಲಗ ಶೈಲಿಯಲ್ಲಿ ಅನಾವರಣಗೊಳಿಸಿರುವುದು ವಿಶೇಷವಾಗಿತ್ತು. ಕಥೆಯ ಅಂತ್ಯವೂ ಮಾನವೀಯತೆಯ ಬದುಕನ್ನು ಎತ್ತಿ ಹಿಡಿಯುತ್ತದೆ. ತಮ್ಮ ರಾಮಣ್ಣನಾಗಿ ಆದರ್ಶ ಮತ್ತು ಅಣ್ಣ ಭೀಮಣ್ಣನಾಗಿ ಪ್ರೇಮ್‌ ಉತ್ತಮ ಅಭಿನಯದಿಂದ ಪಾತ್ರಕ್ಕೆ ಸರಿಯಾದ ನ್ಯಾಯ ಒದಗಿಸಿದರು. ದುರಾಸೆ, ದುಶ್ಚಟ, ದುರ್ಗುಣ ಮತ್ತು ದುರಹಂಕಾರದ ಭೂತಗಳಾಗಿ ಮಾನ್ಯ, ಚಂದನ್‌, ಶುಭಾಂಗ್‌ ಮತ್ತು ರೂಪ ಅವುಗಳನ್ನು ಸೊಗಸಾಗಿ ಅಭಿವ್ಯಕ್ತಿಗೊಳಿಸಿದರು.

ರಾಮಣ್ಣನ ಹೆಂಡತಿ ಮತ್ತು ಮಕ್ಕಳಾಗಿ ಕೃತಿಕಾ, ನಿರೀಕ್ಷಾ ಹಾಗೂ ಆದರ್ಶ ಮಾರ್ಮಿಕವಾಗಿ ನಟಿಸಿದರೆ, ಸ್ವಾಮೀಜಿಯಾಗಿ ಕೌಶಿಕ್‌, ಸೈನಿಕನಾಗಿ ರಕ್ಷಣ್‌ ರಾಜ್‌, ಮಾರನಾಗಿ ಸುಶಾಂತ್‌ ರಾಜ್‌, ಸಾವಾರನಾಗಿ ಅಕ್ಷಯ್‌ ಎಸ್‌., ಗ್ರಾಹಕನಾಗಿ ಮನೀಷ್‌, ಚೆನ್ನಿಯಾಗಿ ನವ್ಯ ಇವರುಗಳ ಲವಲವಿಕೆಯ ಅಭಿನಯ ಎಲ್ಲರ ಗಮನ ಸೆಳೆಯಿತು. ನಿರ್ದೇಶನ ವಿಘ್ನೇಶ್ವರ ಹೊಳ್ಳ ತೆಕ್ಕಾರು, ಸಂಗೀತ ರೋಷನ್‌ ಎಸ್‌. ಬೈಕಾಡಿ, ರಂಗ ಪರಿಕರ ಮತ್ತು ಬೆಳಕು ಪ್ರಸಾದ್‌ ಸಾಲಿಕೇರಿ, ಪ್ರಸಾದನ ರಮೇಶ್‌ ಕಪಿಲೇಶ್ವರ, ಸಮಗ್ರ ನಿರ್ವಹಣೆ ರೋಹಿತ್‌ ಎಸ್‌. ಬೈಕಾಡಿಯವರದ್ದಾಗಿತ್ತು.

ಕೆ. ದಿನಮಣಿ ಶಾಸ್ತ್ರಿ

ಟಾಪ್ ನ್ಯೂಸ್

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.