ಗಾನವೈಭವ -ತಾಳಮದ್ದಲೆಯಲ್ಲಿ ನಾವಡರ ಸ್ಮರಣೆ


Team Udayavani, Aug 23, 2019, 5:00 AM IST

Udayavani Kannada Newspaper

ಸಾಲಿಗ್ರಾಮದ ಗುರು ನರಸಿಂಹ ದೇವಸ್ಥಾನದಲ್ಲಿ ಗಾನವೈಭವ ಹಾಗೂ ದಿನಪೂರ್ತಿ ತಾಳಮದ್ದಲೆ ಮೂಲಕ ಬಡಗಿನ ಭಾಗವತಿಕೆಗೆ ಹೊಸ ತಿರುವು ನೀಡಿದ ಕಾಳಿಂಗ ನಾವಡರ ಸಂಸ್ಮರಣೆ ನಡೆಯಿತು. ಸರಣಿ ತಾಳಮದ್ದಯಲ್ಲಿ ಮೊದಲ ಪ್ರಸಂಗ ಭೀಷ್ಮ ಸೇನಾಧಿಪತ್ಯ. ಪ್ರಧಾನ ಪಾತ್ರಗಳು ಭೀಷ್ಮ ಹಾಗೂ ಕೌರವ. ಅರ್ಥಪೂರ್ಣವಾದ ಪೀಠಿಕೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು. ಮುಂದಿನ ಗೀತೋಪದೇಶದಲ್ಲಿನ ಕೃಷ್ಣ ಪಾತ್ರದ ಅರ್ಥಗಾರಿಕೆಯಲ್ಲಿ ಮೂಡಿಬಂದ ದೇಹ, ಆತ್ಮ, ಹುಟ್ಟು, ಸಾವುಗಳ ಕುರಿತ ತತ್ವಜ್ಞಾನದ ಹಿನ್ನೆಲೆಯ ವಿವರಣೆ ಗೀತಾಸಕ್ತರನ್ನು ವಿಶೇಷವಾಗಿ ರಂಜಿಸಿತು.

ಮುಂದಿನ ಪ್ರಸಂಗ ಭೀಷ್ಮಾರ್ಜುನ. ಭೀಷ್ಮ ಹಾಗೂ ಅರ್ಜುನರ ಸಂಭಾಷಣೆಯೊಂದಿಗೆ ಇತರ ಸನ್ನಿವೇಶಗಳೂ ಪ್ರೇಕ್ಷಕರನ್ನು ಸೆರೆ ಹಿಡಿಯುವಲ್ಲಿ ಯಶಸ್ಸನ್ನು ಕಂಡವು. ರಾಜಾ ವಿಕ್ರಮಾದಿತ್ಯ ಪ್ರಸಂಗವು ಸರಣಿಯ ಕೊನೆಯ ಹಾಗೂ ಆ ದಿನದ ಕೊನೆಯ ತಾಳಮದ್ದಲೆ. ಬೆಳಗ್ಗೆ 11 ರಿಂದ ಸಂಜೆ ಏಳರ ತನಕ ನಡೆದ ನಿರಂತರ ಸರಣಿ ತಾಳಮದ್ದಲೆ ಹಾಗೂ ನಡುನಡುವೆ ಗಾನವೈಭವ ನಡೆಯಿತು.

ಕಾರ್ಯಕ್ರಮದ ಇನ್ನೊಂದು ವಿಶೇಷ ಭಾಗವತಿಕೆ ರಂಗದಲ್ಲಿ ಭರವಸೆ ಮೂಡಿಸುವ ಬಾಲಕಿಯರಿಂದ ಗಾನವೈಭವ‌. ಶಿರಸಿ ಸಿದ್ದಾಪುರದ ಕು| ಶ್ರೀರಕ್ಷಾ ಬಡಗಿನ ಭಾಗವತಿಕೆಯ ಮೂಲಕ ಜನರನ್ನು ರಂಜಿಸಿದರು. ರಾಗಗಳ ಮೇಲಿನ ಹಿಡಿತ, ಸಮಧುರ ಶಾರೀರ ವಿಶೇಷ ಗಮನ ಸೆಳೆಯಿತು. ಕು| ಪದ್ಮಪ್ರಿಯಾ ಕಲ್ಲೂರಾಯ ತೆಂಕಿನ ಭಾಗವತಿಕೆಯ ಮೂಲಕ ಗಮನ ಸೆಳೆದ ಮತ್ತೋರ್ವ ಬಾಲಕಿ. ಹಿಮ್ಮೇಳದಲ್ಲಿ ಸಾಥ್‌ ನೀಡಿದವರು ದೇವದಾಸ್‌ಕೂಡ್ಗಿ, ಅಕ್ಷಯ ಆಚಾರ್ಯ(ಬಡಗಿನ ಮದ್ದಲೆ ಹಾಗೂ ಚಂಡೆ), ಸುದರ್ಶನ ಕಲ್ಲೂರಾಯ, ಪವನ್‌ ಕಲ್ಲೂರಾಯ(ತೆಂಕು). ಭಾಗವತರಾಗಿ ಹರಿಕೃಷ್ಣ ಹೊಳ್ಳ, ವಾಸುದೇವ ಪಣಿಯೂರು, ಗೋಪಾಲ ಮಯ್ಯ.

ಅರ್ಥಧಾರಿಗಳಾಗಿ ಕಾಣಿಸಿಕೊಂಡವರು ರವಿ ಕಾಮತ್‌, ವಿಶ್ವನಾಥ ಶೆಣೈ, ರಾಮಕೃಷ್ಣ ಭಟ್‌, ಶಿವಕುಮಾರ್‌ ಅಳಗೋಡು, ಮೋಹನ ಕಲ್ಲೂರಾಯ, ಜನಾರ್ದನ ಐತಾಳ್‌, ಶ್ರೀನಿವಾಸ ಐತಾಳ್‌, ಸುರೇಶ್‌ ಕಲ್ಲೂರಾಯ, ಅಚ್ಯುತ ಭಟ್‌, ರಜನೀಶ್‌ ಹೊಳ್ಳ, ಶ್ರೀಪಾದ ಭಟ್‌, ಬಾಲಕೃಷ್ಣ ಮಂಜ, ಕೀರ್ತನ ಮಿತ್ಯಂತ, ಆದಿತ್ಯ ಹೆಗಡೆ ಮೊದಲಾದವರು.

ಕಾಳಿಂಗ ನಾವಡರ ಮೇಲಿನ ಅಭಿಮಾನದಿಂದ ಸಂಘಟಿತರಾದ ಈ ಹವ್ಯಾಸಿಗಳು ನಾವುಡರ ಸಂಸ್ಮರಣೆಯ ನೆಪದಲ್ಲಿ ವೇದಿಕೆಯನ್ನೇರಿ ಅರ್ಥಧಾರಿಗಳಾಗಿ ಕಾಣಿಸಿದ್ದು ನಾವುಡರ ಪ್ರಭಾವ ಇಂದೂ, ಮುಂದೂ ಶಾಶ್ವತವಾಗಿರುವುದಕ್ಕೆ ಸಾಕ್ಷಿ.

– ಡಾ| ಶ್ರೀಕಾಂತ್‌ ಸಿದ್ದಾಪುರ

ಟಾಪ್ ನ್ಯೂಸ್

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.