ಮಕ್ಕಳ ಅಭಿನಯದಲ್ಲಿ ಕಳೆಗಟ್ಟಿದ ಕಂಸಾಯಣ

ನಂದ ಗೋಕುಲ ಕಲಾವಿದರ ಪ್ರಸ್ತುತಿ

Team Udayavani, Feb 7, 2020, 4:09 AM IST

big-21

 

ಬಂಧನದಲ್ಲಿದ್ದ ವಸುದೇವ ದೇವಕಿಯರ ನಡುವೆ ಹದಿನಾರು ವರುಷದ ಹಿಂದಿನ ಪೂತನಿಯ ಸಾವಿನಂದಿನಿಂದಲೇ ಎಲ್ಲವನ್ನೂ ತಿಳಿದಂತಿದ್ದ ಕಂಸ ತನ್ನ ಸಾವಿಗೆ ಕೃಷ್ಣನನ್ನೇ ಕಾಯುವಂತೆ ಭಾಸವಾಗುತ್ತದೆ ಒಂದೊಮ್ಮೆ ಇಲ್ಲಿ ಆತನ ಭಾವ ಮತ್ತು ಬಿಂಬದಲ್ಲಿ.

ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ “ನಂದಗೋಕುಲ ‘ಹೆಸರಿಗೆ ತಕ್ಕಂತೆ ಐದರಿಂದ ಇಪ್ಪತ್ತರೊಳಗಿನ ವಯೋಮಾನದ,ಹೆಚ್ಚು ಕಲಾವಿದೆಯರನ್ನೆ ಒಳಗೊಂಡಿರುವ ಸುಮಾರು 20 ಮಂದಿಯ ಪುಟ್ಟ ತಂಡ. ಅತ್ತ ಪೂರ್ಣ ವೃತ್ತಿಪರರು ಅಲ್ಲದ ಹವ್ಯಾಸದ ಭಾಗವಾಗಿಯೇ ಕಾಣಿಸಿಕೊಳ್ಳುವ ಇವರಿಗೆ ಆಧುನಿಕ ರಂಗಭೂಮಿಯ ಅಗಾಧ ಅನುಭವವೆನಿಲ್ಲ. ಇದೀಗ ಅವರ ಎರಡನೇ ಪ್ರಯತ್ನ ಈ ಕಂಸಾಯಣ, ಡಾ| ಎಚ್ಚೆಸ್ವಿಯವರ ಗದ್ಯ ಪದ್ಯದ ರೂಪಕ ಆಧಾರಿತವಾಗಿ ಶಿರಸಿಯ ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಪಾದುವ ಕಾಲೇಜಿನ ಬಯಲು ರಂಗಮಂದಿರದಲ್ಲಿ ಉತ್ತಮ ರೀತಿಯ ಮೊದಲ ಪ್ರದರ್ಶನ ಕಂಡಿದೆ.

ಕಾಕತಾಳೀಯವಾಗಿ ಈ ಹಿಂದೆ ಗೋಕುಲ ನಿರ್ಗಮನದಲ್ಲಿ ವೃಂದಾವನದ ಪ್ರೇಮ ಭರಿತ ಕೊಳಲಿನಾಟದ ಲೋಲುಪತೆಯಲ್ಲಿ ಮೈ ಮರೆತ್ತಿದ ಕೃಷ್ಣ, ಬೇರೆ ದಾರಿಯಿಲ್ಲದೆ ರಾಧೆಯ ಮುನಿಸಿನೆದುರು ಸಹ ಬಲರಾಮನೊಡನೆ ಮಥುರೆಗೆ ಹೊರಟು ಮುಂದೆ ಅಲ್ಲಿ ಒಂದೊಂದಾಗಿ ತನ್ನ ಪರಾಕ್ರಮಗಳನ್ನು ತೋರಿಸುತ್ತಾ ಕಂಸನ ವಧೆಯವರೆಗೆ ಸಾಗುತ್ತಾನೆ ಈ ಕಂಸಾಯಣದಲ್ಲಿ. ಈ ಹಂತದ ಕೃಷ್ಣನ ಆಟಾಟೋಪಕ್ಕಿಂತ ಕಂಸನ ತುಮುಲತೆಯೇ ಈ ನಾಟಕದ ವಸ್ತು. ಬಂಧನದಲ್ಲಿದ್ದ ವಸುದೇವ ದೇವಕಿಯರ ನಡುವೆ ಹದಿನಾರು ವರುಷದ ಹಿಂದಿನ ಪೂತನಿಯ ಸಾವಿನಂದಿನಿಂದಲೇ ಎಲ್ಲವನ್ನೂ ತಿಳಿದಂತಿದ್ದ ಕಂಸ ತನ್ನ ಸಾವಿಗೆ ಕೃಷ್ಣನನ್ನೇ ಕಾಯುವಂತೆ ಭಾಸವಾಗುತ್ತದೆ ಒಂದೊಮ್ಮೆ ಇಲ್ಲಿ ಆತನ ಭಾವ ಮತ್ತು ಬಿಂಬದಲ್ಲಿ.

ಬಿಲ್ಲ ಹಬ್ಬಕ್ಕೆ ಆಹ್ವಾನಿತನಾಗಿ ಮಥುರೆಗೆ ಕೃಷ್ಣನ ಆಗಮನ ಕಂಸನಿಗೆ ಒಳಗೊಳಗೇ ಭಯಾನಕವಾದರೆ ಜನತೆಗೆ ಆನಂದವೇ. ಕಂಸನ ಸಾವಿಗಿಂತಲೂ ಅರಾಜಕತೆಯ ಅಂತ್ಯದ ಬಯಕೆ ಅವರ ಆದ್ಯತೆ, ಹೀಗಾಗಿ ಕೃಷ್ಣ , ಕಂಸನ ಪಟ್ಟದಾನೆಯನ್ನು ಕೊಂದದ್ದು ಅವರಿಗೆ ಗಮ್ಮತ್ತಿನ ಮುಂದಿನ ಬಿಲ್ಲ ಹಬ್ಬದ ಸಂಕೇತವೇ ನಿಜ. ಇಂತಹ ಸನ್ನಿವೇಶಗಳನ್ನು ಕೃಷ್ಣನ ಹುಟ್ಟು, ಕಾಳಿಂಗ ಮರ್ದನ ಗೋವರ್ಧನ ಗಿರಿಯಂತಹ ಬಾಲಲೀಲೆಯ ತುಣುಕುಗಳನ್ನು ಜನರ ಮಾತುಕತೆ ಮೂಲಕ ರಂಗದಲ್ಲಿ ಪೇರಿಸಿ ಸಾಕಷ್ಟು ನೃತ್ಯದೊಂದಿಗೆ ಸಾಗಿದ ಈ ಕಂಸಾಯಣ, ದೃಶ್ಯಗಳ ಸಂಯೋಜನೆಯಲ್ಲಿ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ರೆಕಾರ್ಡೆಡ್‌ ಹಾಡು ಸಂಗೀತವಂತೂ ನಾಟಕದ ಲಯಕ್ಕೆ ಬಹಳ ಅಸಹಜತೆಯನ್ನೇ ಕೊಟ್ಟಂತ್ತಿತ್ತು. ಇವೆಲ್ಲ ಶಾಲಾ ವಾರ್ಷಿಕೋತ್ಸವಕ್ಕಷ್ಟೆ ಚಂದ ವಿನಹ ಕಮರ್ಷಿಯಲ್‌ ಟಚ್‌ ಇರುವಂತಹ ಈ ಬಗೆಯ ನಾಟಕ ತಂಡಗಳಿಗೆ ಖಂಡಿತ ಅಲ್ಲ.

ಅನೇಕ ಮಕ್ಕಳ ಅಭಿನಯ ಅದರಲ್ಲೂ ಒಂದಿಬ್ಬರ ಭಾವತೀವ್ರತೆ ಶ್ಲಾಘನೀಯ. ಅದಾಗಿಯೂ ವಸ್ತ್ರಾಲಂಕಾರ ಇನ್ನೊಂದಿಷ್ಟು ಹೊಸತನದೆಡೆಗೆ ಸಾಗಬಹುದಿತ್ತೇನೋ? ರಂಗಸಜ್ಜಿಕೆ ಉತ್ತಮವಿದ್ದರೂ ಅದನ್ನು ಮಕ್ಕಳು ರಂಗದಲ್ಲಿ ಸ್ವತಃ ನಿಭಾಯಿಸುವಾಗ ಕ್ಲಿಷ್ಟತೆ ಎದ್ದು ಕಾಣುತ್ತಿತ್ತು. ಪ್ರಸಾಧನ ಆಕರ್ಷಣೆಯೊಂದಿಗೆ ಸಹ ಕೆಲವು ಅನಿವಾರ್ಯ ಬದಲಾವಣೆ ಬಯಸುತಿದೆ.ಬೆಳಕು ನೃತ್ಯಕ್ಕೆ ಪೂರಕವಾಗಿತ್ತು ವಿನಹ ದೃಶ್ಯಕ್ಕಲ್ಲ. ಅತ್ಯುತ್ತಮ ಧ್ವನಿ ನಾಟಕದ ಹೈಲೈಟ್‌. ಸ್ವಲ್ಪ ಹೆಚ್ಚೇ ಬೊಬ್ಬಿರಿಯುತ್ತಿದ್ದ ಕಂಸನೆದುರು ಪೇಲವವಾಗಿ ಕಾಣುತ್ತಿದ್ದ ಕೃಷ್ಣ, ಬಲರಾಮನ ದಿಟ್ಟತನದೆದುರು ಕೊನೆಗೂ ಅವಸರವಸರದಿ ಕಂಸನ ವಧೆ ಮಾಡಿದಾಗ ಇಡೀ ಮಥುರೆ ಕೋಲಾಟದಿ ಕುಣಿದಾಡಿದ್ದು ಮಾತ್ರ ಮನಮೋಹಕ.ನಿರ್ದೇಶಕರು ಮಕ್ಕಳ ಮುಖ ನೋಡಿ ತಮ್ಮ ಆನುಭವವನ್ನು ಸಂಪೂರ್ಣವಾಗಿ ಧಾರೆಎರೆಯಲ್ಲಿಲ್ಲವೋ ಎಂಬ ಸಣ್ಣ ಅನುಮಾನ.

ಕಲ್ಲಚ್ಚು ಮಹೇಶ ಆರ್‌. ನಾಯಕ್‌

ಟಾಪ್ ನ್ಯೂಸ್

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

jds

JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ 10 ಲಕ್ಷ ಬಹುಮಾನ ಘೋಷಣೆ

Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA

prahlad-joshi

LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ

1-wewqeq

Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Yatindra

Yathindra Siddaramaiah ಗೂಂಡಾ, ರೌಡಿ ಹೇಳಿಕೆ : EC ಗೆ ದೂರು ನೀಡಿದ ಬಿಜೆಪಿ

1-ewqeqwqe

AAP ‘ಮಹಾರ್‍ಯಾಲಿ’ಯಲ್ಲಿ ಭಾಗಿಯಾಗಲಿರುವ ರಾಹುಲ್,ಖರ್ಗೆ,ಪವಾರ್, ಅಖಿಲೇಶ್

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?

ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ್ ನಾಯ್ಕ ಸೋನಿ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.