ಆಧುನಿಕ ರಂಗಭೂಮಿಯ ರಸಾಯನ ಕರ್ಣ ಸಾಂಗತ್ಯ

ನೀನಾಸಂ ತಂಡ ಪ್ರಸ್ತುತಿ

Team Udayavani, Nov 22, 2019, 4:32 AM IST

pp-13

ಕರ್ಣ ಇಂದಿಗೂ ಮಹಾಭಾರತದ ಯಾವ ರೂಪದ ಪಾತ್ರ ಎಂಬ ಬಗ್ಗೆ ಜಿಜ್ಞಾಸೆಗಳಿವೆ. ಒಂದೆಡೆ ಆತ ದುರಂತಮಯ ನಾಯಕನಾದರೆ ಮತ್ತೂಂದೆಡೆ ವೀರಾಧಿವೀರ ಮಗದೊಂದೆಡೆ ದಾನಶೂರ, ಜೊತೆಗೆ ಅನ್ಯಾಯವನ್ನು ಕಂಡು ಕಣ್ಣು ಮುಚ್ಚಿ ಕೂರುವ ಹೇಡಿ, ಆಸಹಾಯಕ.

ಮಂಗಳೂರಿನಲ್ಲಿ ನೀನಾಸಂ ತಿರುಗಾಟ 2019ರ ನಾಟಕ ಕರ್ಣ ಸಾಂಗತ್ಯ ನಾಟಕ ಪ್ರದರ್ಶನಗೊಂಡಿತು. ಇಡೀ ಮಹಾಭಾರತವೇ ಕರ್ಣ ರಸಾಯನವೆಂದು ಪಂಪ ಹತ್ತನೇ ಶತಮಾನದಲ್ಲೇ ಹೇಳಿದ್ದ. ವ್ಯಾಸರು ಶಿಷ್ಟ ರೂಪದ ಮಹಾಭಾರತದಲ್ಲಿ, ಕುಮಾರವ್ಯಾಸ ತನ್ನ ಅಭಿವ್ಯಕ್ತಿಯಲ್ಲಿ, ಜನಪದರು ತಮ್ಮ ಶೈಲಿಯಲ್ಲಿ ಹೇಳಿರುವ ಎಲ್ಲ ವಿಧದಿಂದಲೂ ನಮಗೀಗಾಗಲೇ ತಿಳಿದಿರುವ ಮಹಾಭಾರತದ ಅನಧಿಕೃತ ಹೀರೊ ಕರ್ಣನನ್ನು ನೀನಾಸಂ ತಂಡ ಪರಿಪರಿಯಾಗಿ ಕಡೆದು ತುಸು ದೀರ್ಘ‌ವೇ ಎನ್ನಬಹುದಾದ ಸರಿಯಾಗಿ ಎರಡೂವರೆ ತಾಸುಗಳ ಕಾಲ ನಮ್ಮೆದುರು ರಂಗದಲ್ಲಿ ತಂದಿಟ್ಟಾಗ ಒಂದು ಅಪೂರ್ವ ಅನುಭವವಾದದ್ದು ಮಾತ್ರ ಸುಳ್ಳಲ್ಲ.

ಕರ್ಣ ಇಂದಿಗೂ ಮಹಾಭಾರತದ ಯಾವ ರೂಪದ ಪಾತ್ರ ಎಂಬ ಬಗ್ಗೆ ಜಿಜ್ಞಾಸೆಗಳಿವೆ. ಒಂದೆಡೆ ಆತ ದುರಂತಮಯ ನಾಯಕನಾದರೆ ಮತ್ತೂಂದೆಡೆ ವೀರಾಧಿವೀರ ಮಗದೊಂದೆಡೆ ದಾನಶೂರ, ಜೊತೆಗೆ ಅನ್ಯಾಯವನ್ನು ಕಂಡು ಕಣ್ಣು ಮುಚ್ಚಿ ಕೂರುವ ಹೇಡಿ, ಆಸಹಾಯಕ. ಹೀಗೆ ನಾನಾ ರೀತಿಯಲಿ ಆತನನ್ನು ಹಾಡಿ ಹೊಗಳಿ ತೆಗಳಿರುವ ಭಾರತದ ಪರಂಪರೆಗೆ ಕರ್ಣನ ಮನಸ್ಥಿತಿ ಹುಟ್ಟಿನಿಂದ ಸಾಯುವ ಕೊನೆ ಕ್ಷಣದವರೆಗೂ ಆತನೊಳಗಿರುವ ಪ್ರಶ್ನೆ – ಉತ್ತರಗಳನ್ನು ಸೇರಿಸಿಕೊಂಡು ಇಂದೂ ಅಲ್ಲಲ್ಲಿ ಚಾಲ್ತಿಯಲ್ಲಿರುವ ಜಾತಿ ಪದ್ಧತಿಯೂ ಸೇರಿದಂತೆ ಸಾಮಾಜಿಕವಾದ ಅನೇಕ ಆಯಾಮಗಳನ್ನು ತನ್ನೊಳಗೆ ಹೊತ್ತು ಕೊಂಡೆ ಸುಲಭ ಸಾಧ್ಯವಲ್ಲದ ಕರ್ಣ ಸಾಂಗತ್ಯ ಹೊರಬಂದಿದೆ.

ಕರ್ಣ ಸಾಂಗತ್ಯ ಒಂದಿಷ್ಟು ಲಘುವಾಗಿ ಆರಂಭಗೊಂಡ ನಾಟಕ ಮತ್ತು ಇತ್ತೀಚಿನ ವರ್ಷಗಳ ನೀನಾಸಂನ ಕೆಲವು ನಾಟಕಗಳಂತೆ ಬರೀ ಓಲಾಟದ ಪ್ರಹಸನದೆಡೆಗೆ ಸಾಗುತ್ತಿದೆಯೋ ಎಂಬ ಶಂಕೆ ಒಂದರೆಕ್ಷಣ ಮೂಡಿಸಿದರೂ ಬರುಬರುತ್ತಾ ಗಟ್ಟಿಯಾಗಿ ಭಾಗವತ ಮತ್ತವರ ತಂಡದ ಪ್ರಸ್ತುತಿಯ ರೂಪದಲ್ಲಿ ಹಾಡು ಸಂಗೀತದ ಜೊತೆಗೆ ಸಾಗಿ ಪ್ರೇಕ್ಷಕರನ್ನು ತನ್ನೆಡೆಗೆ ಸೆಳೆಯಿತು. ಕರ್ಣನ ಹುಟ್ಟು, ಹುಟ್ಟಿನೊಂದಿಗೆ ಬಂದ ಬವಣೆ ತನ್ಮೂಲಕ ಇಡೀ ಮಹಾಭಾರತದ ಮತ್ತು ಮಹಾಭಾರತದ ಅನೇಕ ಜನರ ಹುಟ್ಟಿನ ಗೂಡಾರ್ಥವನ್ನು ಬಯಲಿಗೆಳೆಯುವ, ಕರ್ಣನ ಎಲ್ಲಾ ಮುಖದ ಸಾಧು ಮತ್ತು ಸಾಧ್ಯತೆಯನ್ನು ಪೂರಕವಾಗಿ ಮಹಾಭಾರತದ ಸವಿಸ್ತರತೆಯನ್ನು ಕುಂತಿ ಅರ್ಜುನ ಧರ್ಮರಾಯ, ಶಕುನಿ… ಹೀಗೆ ನಾನಾ ಪಾತ್ರಗಳ ಜೊತೆಗೆ ಬೇರೆ ಬೇರೆ ದೃಷ್ಟಿಕೋನ ಮತ್ತು ಸನ್ನಿವೇಶದೊಂದಿಗೆ ಹೊಸ ರೂಪ- ರಸದಲ್ಲಿ ರಂಗದಲ್ಲಿ ಹೇಳುವಂತಹ ಒಂದು ಪ್ರಯೋಗ ನೀನಾಸಂನ ವಿಶೇಷತೆಯೇ ಸರಿ.

ಪ್ರತಿಯೊಂದು ಸನ್ನಿವೇಶಕ್ಕೂ ಒಂದೊಂದು ಶೈಲಿಯ ಅಳವಡಿಕೆ, ಅದಕ್ಕೆ ಸೂಕ್ತ ಹಾಡುಗಳು, ಆಧುನಿಕ ರಂಗ ಪರಿಕರ,ರಂಗಸಜ್ಜಿಕೆ, ಸಂಗೀತ ಬೆಳಕು ಹೆಚ್ಚು ಕಡಿಮೆ ಒಂದಕ್ಕೊಂದು ಪೂರಕವಾಗಿದ್ದರೆ ಬಹುಶಃ ಧ್ವನಿ ತುಸು ಗಟ್ಟಿಯಾಗಿರಬೇಕಿತ್ತು ಎಂದೆನಿಸುತ್ತಿತ್ತು. ನೂತನ ರೀತಿಯ ಪ್ರಸಾಧನ ವಸ್ತ್ರ ವಿನ್ಯಾಸದ ಬಳಕೆ ಈಗ ಸಾಮಾನ್ಯವಾಗಿದ್ದರೂ, ಇಂದಿಗೂ ಕೆಲವೊಮ್ಮೆ ಅದು ಅಲ್ಲಲ್ಲಿ ಅಪ್ಯಾಯಮಾನದ ಜೊತೆಗೆ ಕೆಲವೊಮ್ಮೆ ಅಭಾಸ ಅನಿಸುವುದಿದೆ . ಅದರಲ್ಲೂ ಹೇರಿದ ಹಾಸ್ಯ ಲೇಪನದ ನೃತ್ಯ ಇತ್ಯಾದಿಗಳನ್ನು ಸೇರಿಸಿಕೊಂಡಲ್ಲಿ ಪ್ರಬುದ್ಧ ಪ್ರೇಕ್ಷಕ ಖಂಡಿತ ಒಪ್ಪಿಕೊಳ್ಳಲಾರ. ಇದೇನಿದ್ದರೂ ಜನಪ್ರಿಯತೆಗೆ ಸೈ ಅಷ್ಟೇ. ಇಂತಹ ಒಂದೆರಡು ಅನಗತ್ಯ ಆನಿವಾರ್ಯತೆಗಳನ್ನು ಈ ನಾಟಕವೂ ತನ್ನೊಳಗೆ ಇಟ್ಟುಕೊಂಡಿದ್ದದ್ದು ಬೇಕಾಗಿರಲ್ಲಿಲ್ಲ.

ಕರ್ಣನ ಪ್ರಮುಖ ಸನ್ನಿವೇಶಗಳೆಲ್ಲ ನಾಟಕದ ದೃಶ್ಯ ರೂಪದಿ ಬಂದರೂ ಕರ್ಣ ಭಾನುಮತಿಯರ ಪಗಡೆಯಾಟದಿ ಲಂಬಣದ ಮುತ್ತುಗಳು ರಂಗದೊಳಗೆ ಬೀಳದೆ ಬರೀ ಬಾಯಿ ಮಾತಿನಲೆ ಹಾದು ಹೋದದು ಸಾಂಗತ್ಯದ ರಸಾಯನದಲ್ಲಿ ಹುಳಿ ಹಿಂಡಿದಂತಾಗಿತ್ತು. ಹಳೆ – ನಡುಗನ್ನಡ ಸೇರಿದ ಅಧುನಿಕ ಭಾಷ ಬಳಕೆ ಚೇತೋಹಾರಿ.ಗಣಪತಿಯನ್ನು ಬಿಡದಂತೆ ಮಹಾಭಾರತ ರಚನೆಯ ಎಲ್ಲಾ ಸಮಕಾಲೀನರ ಜೊತೆಗೆ ಸ್ವಲ್ಪವಾದರೂ ಪ್ರಾಯೋಗಿಕವಾಗಿ ರನ್ನನನ್ನು ಬಳಸಬಹುದಾಗಿತ್ತು. ಒಟ್ಟಾರೆಯಾಗಿ ಒಂದು ದಶಕದ ಹಿಂದಿನ ನೀನಾಸಂ ನೋಡಿದ ಸಣ್ಣ ಅನುಭವದ ನೆನಪನ್ನು ಮರುಕಳಿಸಲು ಸಾಥ್‌ ನೀಡಿದ ಕರ್ಣ ಸಾಂಗತ್ಯದ ರಸಾಯನ ಮತ್ತೂಮ್ಮೆ ಬಲಗೊಂಡಿರುವ ನಾಲ್ಕು ದಶಕದ ಕರಾವಳಿಯ ರಂಗಮಂದಿರದ ಬೇಡಿಕೆಯ ಕೂಗನ್ನು ಇನ್ನಷ್ಟು ಗಟ್ಟಿ ಗೊಳಿಸುತ್ತದೆ.

ಕಲ್ಲಚ್ಚು ಮಹೇಶ ಆರ್‌. ನಾಯಕ್‌

ಟಾಪ್ ನ್ಯೂಸ್

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.