ಆಳ್ವಾಸ್‌ ನುಡಿಸಿರಿಯಲ್ಲಿ ನಗೆಸಿರಿ!


Team Udayavani, Dec 8, 2017, 4:25 PM IST

08-41.jpg

ಇತ್ತೀಚೆಗೆ ವ್ಯಂಗ್ಯಚಿತ್ರಗಳ ಬೆಳವಣಿಗೆಗೆ ಪೂರಕವಾಗಿ ಆಳ್ವಾಸ್‌ ನುಡಿಸಿರಿಯ ಪೂರ್ವಭಾವಿ ಯಾಗಿ “ವ್ಯಂಗ್ಯಚಿತ್ರಸಿರಿ’ ಎಂಬ ರಾಜ್ಯಮಟ್ಟದ ವ್ಯಂಗ್ಯಚಿತ್ರ ಶಿಬಿರ, ಪ್ರಶಸ್ತಿ ಪ್ರದಾನ ಮತ್ತು ಪ್ರದರ್ಶನ ನಡೆಯಿತು. 

ಎರಡು ದಿನಗಳ ವ್ಯಂಗ್ಯಚಿತ್ರ ಶಿಬಿರಕ್ಕೆ ರಾಜ್ಯದೆಲ್ಲೆಡೆಯಿಂದ 26 ಪ್ರಸಿದ್ಧ ವ್ಯಂಗ್ಯಚಿತ್ರಕಾರ ರನ್ನು ಕರೆಸಲಾಗಿತ್ತು. ಹಿರಿಯ-ಕಿರಿಯ, ವೃತ್ತಿಪರ-ಹವ್ಯಾಸಿ ವ್ಯಂಗ್ಯಚಿತ್ರಕಾರರ ಕೂಡುವಿಕೆ ಅಲ್ಲಿನ ವಿಶೇಷ ಲವಲವಿಕೆಗೆ ಕಾರಣ ಎಂದರೆ ಅತಿಶಯೋಕ್ತಿಯಾಗದು! ಅಲ್ಲದೆ ಒಬ್ಬೊಬ್ಬರ‌ ವಿಭಿನ್ನ ಶೈಲಿ- ತಂತ್ರಗಳನ್ನು ಪ್ರತ್ಯಕ್ಷವಾಗಿ ಕಾಣುವ ಸೌಭಾಗ್ಯ ಕೂಡ ಲಭಿಸಿತು!

ಪತ್ರಿಕೆಗಳಲ್ಲಿ ಪ್ರಕಟನೆಗೆ ಸೀಮಿತವಾಗಿದ್ದ ಪಾಕೆಟ್‌ ಕಾಟೂìನ್‌ಗಳನ್ನು ವ್ಯಂಗ್ಯಚಿತ್ರಕಾರರು ಒಂದೆಡೆ ಸೇರಿ ದೊಡ್ಡದಾಗಿ ಬರೆದಾಗ ಹೇಗಿರಬಹುದು ಅನ್ನುವ ವಿಚಾರ ಎಲ್ಲರಿಗೂ ಕುತೂಹಲಕಾರಿ. ಆದ್ದರಿಂದ ಎರಡು ದಿನಗಳ ಕಾರ್ಯಾಗಾರ ಹೇಗಿರಬೇಕು ಎನ್ನುವ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿತ್ತು. ಮೊದಲ ದಿನ “ಕನ್ನಡ ಪ್ರೀತಿ’ ಮತ್ತು “ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ವಿಷಯಗಳ ಮೇಲೆ ವ್ಯಂಗ್ಯಚಿತ್ರಗಳನ್ನು, ಎರಡನೇ ದಿನ ಪ್ರಮುಖ ವ್ಯಕ್ತಿಗಳ ವ್ಯಂಗ್ಯ ಭಾವಚಿತ್ರಗಳನ್ನು ಬಣ್ಣದಲ್ಲಿ ರಚಿಸಲಾಯಿತು.

ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪಳಗಿದ ಹಿರಿಯರಾದ ಬೆಂಗಳೂರಿನ ವಿ. ಜಿ. ನರೇಂದ್ರ, ಶಿವಮೊಗ್ಗದ ಮೇಗರವಳ್ಳಿ ಸುಬ್ರಹ್ಮಣ್ಯ, ದಾವಣಗೆರೆಯ ಎಚ್‌. ಬಿ. ಮಂಜುನಾಥ್‌, ಧಾರವಾಡದ ಅಶೋಕ್‌ ಜೋಶಿ, ಹೊಸನಗರದ ಏಕನಾಥ್‌ ಬೊಂಗಾಳೆ, ವೆಂಕಟ್‌ ಭಟ್‌ ಎಡನೀರು, ಸಂಕೇತ್‌ ಗುರುದತ್ತ ಮುಂತಾದವರ ಹುಮ್ಮಸ್ಸು ಯುವ ಕಲಾವಿದರಿಗೆ ಸ್ಫೂರ್ತಿ ತುಂಬುವಂತಿತ್ತು. ಮಣಿಪಾಲದ ಜೇಮ್ಸ್‌ ವಾಜ್‌ ಮತ್ತು ತೀರ್ಥಹಳ್ಳಿಯ ನಟರಾಜ್‌ ಅರಳಸುರುಳಿಯವರ ಕೈಚಳಕ ಚೆನ್ನಾಗಿ ನಗಿಸುವಂತಿತ್ತು. ಮಂಗಳೂರಿನ ಜಾನ್‌ ಚಂದ್ರನ್‌, ಉದಯ ವಿಟ್ಲ ಮತ್ತು ಶೈಲೇಶ್‌ ಉಜಿರೆ ಅವರ ಚಿತ್ರಗಳಲ್ಲಿ ತಮ್ಮದೇ ಎಂದಿನ ರೀತಿಯ ಪ್ರಬುದ್ಧ ವಿಡಂಬನೆಯಿತ್ತು. ಖ್ಯಾತ ವ್ಯಂಗ್ಯಚಿತ್ರಕಾರರಾದ ಬಿ. ಜಿ. ಗುಜ್ಜಾರಪ್ಪ, ರಾಮಧ್ಯಾನಿ, ಪ್ರಕಾಶ್‌ ಶೆಟ್ಟಿ ಮತ್ತು ಹರಿಶ್ಚಂದ್ರ ಶೆಟ್ಟಿ ತೋರಿದ ಆಕರ್ಷಕ ಶೈಲಿಯ ಝಲಕ್‌ ಬೆರಗುಗೊಳಿಸುವಂತಿತ್ತು. ರಘುಪತಿ ಶೃಂಗೇರಿ, ಯತೀಶ್‌ ಸಿದ್ಧಕಟ್ಟೆ, ಜಿ. ಎಂ. ಬೊಮ್ನಳ್ಳಿ, ದತ್ತಾತ್ರಿ ಎಂ. ಎನ್‌., ಗಂಗಾಧರ ಅಡ್ಡೇರಿ ಮುಂತಾದ ಯುವ ಉದಯೋನ್ಮುಖ ವ್ಯಂಗ್ಯಚಿತ್ರಕಾರರ ದಂಡೇ ಶಿಬಿರದಲ್ಲಿತ್ತು.  

ಸಿರಿ ಎಂದರೆ ಸಂಪತ್ತು! ಕನ್ನಡ ಭಾಷೆ, ನಾಡು, ನುಡಿ ಸಂಪತ್ತಿನ ಜತೆಗೆ ಸಾಹಿತ್ಯದ ಒಂದು ಅವಿಭಾಜ್ಯ ಅಂಗವಾಗಿರುವ ವ್ಯಂಗ್ಯಚಿತ್ರ ಕಲೆಯೂ ಸಂಪತ್ತು ಎಂಬ ಗೌರವ ಆಳ್ವಾಸ್‌ ವ್ಯಂಗ್ಯಚಿತ್ರಸಿರಿಯಲ್ಲಿ ಪ್ರಾಪ್ತವಾಗಿದೆ. ಅದರಲ್ಲಿ ಬೆಳಗುವ ಒಂದು ಮುತ್ತನ್ನು ವ್ಯಂಗ್ಯಚಿತ್ರಸಿರಿ ಪ್ರಶಸ್ತಿಗೂ ಆರಿಸಲಾಯಿತು. ಖ್ಯಾತ ವ್ಯಂಗ್ಯಚಿತ್ರಕಾರ ಪ್ರಕಾಶ್‌ ಶೆಟ್ಟಿ ಈ ಪ್ರಶಸ್ತಿಗೆ ಭಾಜನರಾದರು.  

ವಿ.ಆರ್‌. ಸಿ. ಶೇಖರ್‌, ಜಿ. ಎಸ್‌. ನಾಗನಾಥ್‌, ಜೀವನ್‌ ಶೆಟ್ಟಿ, ಬಾಬು ಜತ್ತಕರ್‌ ಅವರು ಡಾ| ಪದ್ಮನಾಭ ಶೆಣೈ ಹಾಗೂ ಆಳ್ವಾಸ್‌ ವಿಶುಯಲ್‌ ಆರ್ಟ್ಸ್ ವಿಭಾಗದ ಭಾಸ್ಕರ್‌, ಶರತ್‌ ಮತ್ತು ವಿದ್ಯಾರ್ಥಿ ವೃಂದದ ಸಲಹೆ, ಸಹಕಾರದೊಂದಿಗೆ ಶಿಬಿರವನ್ನು ಸಂಘಟಿಸಿದ್ದರು.

ವಿನ್ಯಾಸ್‌

ಟಾಪ್ ನ್ಯೂಸ್

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.