ಪುಟಾಣಿಗಳ ಹೆಜ್ಜೆಯಲ್ಲಿ ಲವ-ಕುಶ


Team Udayavani, Oct 11, 2019, 4:26 AM IST

u-2

ಯಕ್ಷದೇಗುಲ ಸಂಸ್ಥೆಯ ಮಕ್ಕಳ ತಂಡದವರಿಂದ ಅಪರೂಪದ ಲವ-ಕುಶ ಕಾಳಗ ಯಕ್ಷಗಾನ ಪ್ರದರ್ಶನ ಇತ್ತೀಚೆಗೆ ಬೆಂಗಳೂರಿನ ಗಾಂಧಿ ಬಜಾರಿನ ಯುವಶಕ್ತಿ ಗೆಳೆಯರ ಸಂಘದವರ ಆಶ್ರಯದಲ್ಲಿ ನಡೆಯಿತು. ಇಡೀ ರಾತ್ರಿ ಪ್ರದರ್ಶನವಾಗುತ್ತಿದ್ದ ಪ್ರದರ್ಶನವನ್ನು ಕಾಲಮಿತಿಗೊಳಪಡಿಸಿದಾಗ 25 ವಾಕ್ಯದ ಮಾತನ್ನು 4 ಮಾತಿನಲ್ಲಿ ಮನ ಮುಟ್ಟುವ ಹಾಗೆ ಪ್ರೇಕ್ಷಕರಿಗೆ ತಲುಪಿಸಬೇಕಾಗುತ್ತದೆ. ಅತಿಯಾದ ನೃತ್ಯ, ಅಭಿನಯ ಇಂದಿನ ಪ್ರೇಕ್ಷಕರಿಗೆ ಅವಶ್ಯಕತೆಯಿಲ್ಲ ಎಂಬುದಕ್ಕೆ ಲವ-ಕುಶ ಕಾಳಗದ ಪ್ರದರ್ಶನ ಸಾಕ್ಷಿ. ಹಟ್ಟಿಯಂಗಡಿ ರಾಮ ಭಟ್ಟ ವಿರಚಿತ ಲವ-ಕುಶ (ಪಟ್ಟದ ಸಂಧಿ)ಪ್ರಸಂಗದಲ್ಲಿ ಭಾವಾಭಿವ್ಯಕ್ತಿಯೇ ಪ್ರಧಾನವಾಗಿದ್ದು ಪ್ರಸಂಗದ ಬಾಲ ಕಲಾವಿದರೆಲ್ಲಾ ಆ ಕಡೆಗೆ ಒತ್ತು ಕೊಟ್ಟಿದ್ದು ಮೆಚ್ಚುಗೆಯ ಅಂಶ.

ಲವ-ಕುಶರ ಪಾತ್ರದಲ್ಲಿ ಮೊದಲು ಶ್ರೀನಿಧಿ, ಪ್ರಣಮ್ಯಾ ನಂತರದ ಲವ-ಕುಶರಾಗಿ ಶ್ರೀವತ್ಸ, ಶ್ರೇಯಾ ಅವರ ಚೂರುಕಿನ ನೃತ್ಯ, ಇತಿ, ಮಿತಿ ಸಂಭಾಷಣೆ ಅಮೋಘವಾಗಿತ್ತು. ನಂತರ ಘೋರ ಶೂರ್ಪನಕಿಯಾಗಿ ಶ್ರೀವಿದ್ಯಾ ಹೆಣ್ಣು ಬಣ್ಣದ ತಟ್ಟಿ ಕಟ್ಟಿಕೊಂಡು, ಬಣ್ಣದ ವೇಷಕ್ಕೆ ಬೇಕಾದ ಗಟ್ಟಿ ಸ್ವರದಿಂದ ಬಡುಗುತಿಟ್ಟಿನ ಶ್ರೀಮಂತಿಕೆಯನ್ನು ಸಾದರಪಡಿಸಿದರು. ಮಾಯಾ ಶೂರ್ಪನಕಿಯಾಗಿ ಚೈತ್ರಾ ಅವರ ಸುಂದರ ರೂಪ ಲಾವಣ್ಯ, ನೃತ್ಯ ನಯನ ಮನೋಹರವಾಗಿತ್ತು. ಸೀತೆಯಾಗಿ ಪರಿಮಿಕ, ವಾಲ್ಮೀಕಿಯಾಗಿ ಶ್ರೀರಾಮ್‌ ಗಮನ ಸೆಳೆದರು. ವಿಭೀಷಣನ ಒಡ್ಡೋಲಗ ಸಂಪ್ರದಾಯ ಬದ್ಧವಾಗಿತ್ತು. ಕಟ್ಟು ಮೀಸೆಯೊಂದಿಗೆ ಕೆಂಪು ಮುಂಡಾಸು ಧರಿಸಿ ಶ್ರೀರಾಮ ಹೆಬ್ಟಾರ್‌ ತನ್ನ ಛಾಪನ್ನು ಒತ್ತಿದರು. ವಿಭೀಷಣನ ಪಡೆಯ ವೇಷಗಳನ್ನು ಆದರ್ಶ ಮತ್ತು ಅಕ್ಷಯ್‌ ನಿರ್ವಹಿಸಿದರು. ಯುದ್ಧದ ಸನ್ನಿವೇಶ, ವನಪ್ರದೇಶ ಮುಂತಾದ ರಸ ಘಟ್ಟಗಳನ್ನು ಯಕ್ಷದೇಗುಲದ ಮಕ್ಕಳು ಸಮರ್ಪಕವಾಗಿ ಪ್ರದರ್ಶಿಸಿದರು. 2 ಗಂಟೆಯ ಪ್ರಸಂಗದ ಪ್ರದರ್ಶನವನ್ನು ಪ್ರಿಯಾಂಕ ಕೆ. ಮೋಹನ್‌ ನಿರ್ದೇಶನದಲ್ಲಿ ಮಕ್ಕಳು ಶುದ್ಧ ಕನ್ನಡದಲ್ಲಿ ಚೊಕ್ಕವಾಗಿ ತೋರಿಸಿಕೊಟ್ಟಿದ್ದಾರೆ. ಪ್ರದರ್ಶನದ ಮೊದಲಿಗೆ ಯಕ್ಷಗಾನದ ಸಭಾಲಕ್ಷಣದ ಕೋಡಂಗಿ ವೇಷಗಳನ್ನು ಮೇಘನಾ ಹಾಗೂ ಚಿನ್ಮಯ್‌ ಶುದ್ಧವಾಗಿ ಪ್ರದರ್ಶಿಸಿದರು. ಭಾಗವತರಾಗಿ ಲಂಬೋದರ ಹೆಗಡೆ, ಮದ್ದಲೆಯಲ್ಲಿ ಗಣಪತಿ ಭಟ್‌ ಯಲ್ಲಾಪುರ, ಚಂಡೆಯಲ್ಲಿ ಮಂಜುನಾಥ ನಾವುಡ ಸಹಕರಿಸಿದರು.

– ಕೋಟ ಸುದರ್ಶನ ಉರಾಳ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.