ಹೊಸ ಅನುಭವ ನೀಡಿದ ದೊಂದಿ ಬೆಳಕಿನ ಯಕ್ಷಗಾನ


Team Udayavani, Jul 12, 2019, 5:00 AM IST

u-3

ಪಣಂಬೂರು ವೆಂಕಟ್ರಮಣ ಐತಾಳ ಪ್ರತಿಷ್ಠಾನದಿಂದ ನಡೆಯುತ್ತಿರುವ ಯಕ್ಷಾಂಬುಧಿಯ ಎರಡನೇ ವಾರ್ಷಿಕೋತ್ಸವವನ್ನು ರಾಕೇಶ್‌ ರೈ ಅಡ್ಕ ಅವರ ನಿರ್ದೇಶನದಲ್ಲಿ ಉಡುಪಿಯ ರಾಜಾಂಗಣದಲ್ಲಿ ಜೂ. 30ರಂದು ದೊಂದಿಬೆಳಕಿನಲ್ಲಿ ಎರಡು ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸುವ ಮೂಲಕ ಆಚರಿಸಲಾಗಿದ್ದು, ಹವ್ಯಾಸಿ ಕಲಾವಿದರು ಪ್ರದರ್ಶಿಸಿದ ಎರಡೂ ಪ್ರಸಂಗಗಳು ಪ್ರೇಕ್ಷಕರ ಶ್ಲಾಘನೆಗೆ ಪಾತ್ರವಾಗಿ ತಂಡದ ಬಗ್ಗೆ ಭಾರೀ ನಿರೀಕ್ಷೆ ಮೂಡಿಸುವಂತಾಯಿತು.

ಖ್ಯಾತ ಭಾಗವತರಾದ ಪುಂಡಿಕಾ ಗೋಪಾಲಕೃಷ್ಣ ಭಟ್‌ ಮತ್ತು ಧರ್ಮಸ್ಥಳ ಮೇಳದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ಭಾಗವತಿಕೆಯಲ್ಲಿ ಹಿರಣ್ಯಾಕ್ಷ ವಧೆ ಮತ್ತು ಗಜೇಂದ್ರ ಮೋಕ್ಷ ಎಂಬ ಪ್ರಸಂಗಗಳು ರಾತ್ರಿ 7 ಗಂಟೆಯಿಂದ 12.30ರವರೆಗೆ ಪ್ರದರ್ಶನಗೊಂಡಿತು. ಮಧ್ಯದಲ್ಲಿ ಸಣ್ಣದೊಂದು ಸಭಾ ಕಾರ್ಯಕ್ರಮವಿತ್ತು. ಮದ್ದಳೆಯಲ್ಲಿ ನೆಕ್ರಮೂಲೆ ಗಣೇಶ್‌ ಭಟ್‌, ಚೆಂಡೆಯಲ್ಲಿ ಮುರಾರಿ ಕಡಂಬಳಿತ್ತಾಯ ಹಾಗೂ ಚಕ್ರತಾಳದಲ್ಲಿ ರಾಜೇಂದ್ರಕೃಷ್ಣ ಅವರು ಸಹಕರಿಸಿದರು.

ಆರಂಭದಲ್ಲಿ ಪ್ರದರ್ಶನಗೊಂಡ ಹಿರಣ್ಯಾಕ್ಷ ವಧೆಯಲ್ಲಿ ಹಿರಣ್ಯಾಕ್ಷ ಪಾತ್ರ ಮಾಡಿದ್ದ ನಾಗರಾಜ ಭಟ್‌ ಮತ್ತು ಅಶ್ವಿ‌ತ್‌ ಸರಳಾಯ, ವರಾಹನಾಗಿದ್ದ ಧನರಾಜ್‌, ಭೂದೇವಿಯಾಗಿ ರವಿನಂದನ್‌ ಭಟ್‌ ಅವರು ಅದ್ಭುತ ಪ್ರದರ್ಶನ ನೀಡಿದರು. ವೃತ್ತಿಪರರಿಗೆ ಸಮದಂಡಿಯಾಗುವ ಪ್ರಯತ್ನ ಇವರ ಅಭಿನಯದಲ್ಲಿ ಎದ್ದು ಕಾಣುತ್ತಿತ್ತು. ಉಳಿದಂತೆ ದಿತಿಯಾಗಿ ಸರಸ್ವತಿ, ಬ್ರಹ್ಮನಾಗಿ ಸೌಮ್ಯಾ, ಅದಿಶೇಷನಾಗಿ ವಾದಿರಾಜ, ದೇವೇಂದ್ರನಾಗಿ ವಿಷ್ಣುಪಾದ, ನಾರದನಾಗಿ ರಘುವೀರ್‌, ವಿವಿಧ ಪಾತ್ರಗಳ ಬಲಗಳಾಗಿ ಮೋಹನ್‌, ಪ್ರಸನ್ನ, ಸತೀಶ್ಚಂದ್ರ, ಶ್ರಾವ್ಯಾ, ಮಂಜುಳಾ, ಲತಾ ಶೆಟ್ಟಿ, ವರುಣ್‌, ಆಶ್ಲೇಷ್‌, ಸುಶಾಂತ್‌, ದೇಶಾಧಿಪಾಲಕರಾಗಿ ಧೀರಜ್‌, ಅವನೀಶ್‌, ಸನ್ವಿತ್‌ ಮೊದಲಾದವರು ಕೂಡ ಸಮರ್ಥವಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರು.

ರಾಮಕೃಷ್ಣ ಮಯ್ಯ ಅವರ ಭಾಗವತಿಕೆಯಲ್ಲಿ ಮೂಡಿಬಂದ ಗಜೇಂದ್ರ ಮೋಕ್ಷದಲ್ಲಿ ಇಂದ್ರದ್ಯುಮ್ನವಾಗಿ ಶರತ್‌, ಗಜೇಂದ್ರನಾಗಿ ಡಾ| ಸುನಿಲ್‌ ಮುಂಡ್ಕೂರು, ಮಕರನಾಗಿ ಸಂದೀಪ್‌, ಯಮನಾಶ್ವನಾಗಿ ಪ್ರಮೋದ್‌ ತಂತ್ರಿ, ವಿಷ್ಣುವಾಗಿ ಶ್ರೀಶ ಅವರ ಪಾತ್ರ ಹೆಚ್ಚು ಗಮನ ಸೆಳೆಯಿತು. ಗಜೇಂದ್ರ ಮತ್ತು ಮಕರ ಪಾತ್ರಗಳು ಸಭಾಂಗಣದ ಮೂಲೆಯಿಂದ ಅಬ್ಬರದ ಪ್ರವೇಶ ಮಾಡಿದ್ದು ವೃತ್ತಿಪರರಿಗೆ ಸಮಾನವಾಗಿತ್ತು. ಅವರ ಕಾಳಗ ಭೇಷ್‌ ಎನಿಸುವಂತಿತ್ತು. ಜತೆಗೆ ಮಕರ ಮತ್ತು ವಿಷ್ಣು ನಡುವಿನ ಹೋರಾಟವೂ ಅದ್ಭುತವಾಗಿತ್ತು. ಮಕರ ಪಾತ್ರಧಾರಿ ಸಂದೀಪ್‌ ರಂಗನಡೆ ಮತ್ತು ಡಾ| ಸುನಿಲ್‌ ಅವರ ಅಬ್ಬರ ಭೇಷ್‌ ಎನಿಸಿತು. ಇದೇ ಪ್ರಸಂಗದಲ್ಲಿ ಹೂಹೂ ಗಂಧರ್ವ ಮತ್ತು ಆತನ ಪತ್ನಿಯರ ನೀರಾಟ, ಸರಸದ ನೃತ್ಯಗಳು ಮೋಹಕವಾಗಿತ್ತು ಮತ್ತು ಚುರುಕುತನದಿಂದ ಕೂಡಿತ್ತು. ಉಳಿದಂತೆ ಅಗಸ್ತ್ಯ ಮುನಿಯಾಗಿ ನಿರುಪಮಾ, ದೇವಳ ಮುನಿಯಾಗಿ ರಘುವೀರ್‌, ಇಂದ್ರದ್ಯುಮ್ನನ ಹೆಂಡತಿಯಾಗಿ ಅರ್ಪಿತಾ, ಬಲಗಳಾಗಿ ಸುಧನ್ವ, ವಿಶ್ವಮೇಧ, ಅಚ್ಯುತ, ಸುಮನ್ಯು, ಶ್ರೇಯಸ್‌, ಪ್ರಣಮ್ಯ ರಾವ್‌ ಮುಂತಾದವರು ಕೂಡ ಮೆಚ್ಚುವಂಥ ಪ್ರಬುದ್ಧತೆ ಪ್ರದರ್ಶಿಸಿದರು. ಗಂಧರ್ವನಾಗಿ ವಿಂಧ್ಯಾ, ಆತನ ಪತ್ನಿಯರಾಗಿ ಪ್ರಣಮ್ಯ ತಂತ್ರಿ, ವನ್ಯಶ್ರೀ, ಅನ್ವಿತಾ ಅಭಿನಯಿಸಿದ್ದರು.

ಯಕ್ಷ ಗುರು ರಾಕೇಶ್‌ ರೈ ಅಡ್ಕ ಅವರಿಂದ ತರಬೇತಿ ಪಡೆಯುತ್ತಿರುವ ಈ ತಂಡವು ದೊಂದಿಬೆಳಕಿನಲ್ಲಿ ನೀಡಿದ್ದ ಪ್ರದರ್ಶನಕ್ಕೆ ಒಂದು ಹೊಸ ವರ್ಗದ ಪ್ರೇಕ್ಷಕರನ್ನು ಸೆಳೆದಿದೆ ಎಂಬುದು ಖಚಿತವಾಗಿದೆ. ಕೆಎಂಸಿಯಲ್ಲಿ ಖ್ಯಾತ ಮಕ್ಕಳ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ| ಸುನಿಲ್‌ ಅವರ ಯಕ್ಷಗಾನ ಪ್ರೀತಿಗೆ ತನ್ನೊಂದಿಗೆ ಪುತ್ರರಾದ ಸುಮನ್ಯು ಮತ್ತು ಸುಧನ್ವರಿಗೂ ವೇಷ ತೊಡಿಸಿ ರಂಗಸ್ಥಳ ಪ್ರವೇಶಿಸುವಂತೆ ಮಾಡಿರುವುದು ಸಾಕ್ಷಿ. ಇವರು ಈ ಹಿಂದೆಯೂ ಜತೆಯಾಗಿ ಕೆಲವು ಪ್ರದರ್ಶನ ನೀಡಿದ್ದಾರೆ.ಪಣಂಬೂರು ವೆಂಕಟ್ರಮಣ ಐತಾಳ ಪ್ರತಿಷ್ಠಾನದ ಈ ತಂಡವು ಭವಿಷ್ಯದಲ್ಲಿ ಯಕ್ಷಗಾನ ರಂಗಕ್ಕೆ ಹೊಸ ಕೊಡುಗೆ ನೀಡಲಿದೆ ಎಂಬುದನ್ನು ಈ ಕಾರ್ಯಕ್ರಮ ಖಚಿತಪಡಿಸಿದೆ. ಸಂಸ್ಥೆಯ ವತಿಯಿಂದ ಪ್ರತಿ ಬುಧವಾರ ಸಂಜೆ 5.30ರಿಂದ 7ರ ತನಕ ಉಚಿತ ತರಗತಿಯು ಸೋದೆ ಮಠದಲ್ಲಿ ನಡೆಯುತ್ತಿದ್ದು, ಪ್ರಸ್ತುತ ಸುಮಾರು 60ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿದ್ದಾರೆ.

– ಪುತ್ತಿಗೆ ಪದ್ಮನಾಭ ರೈ

ಟಾಪ್ ನ್ಯೂಸ್

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ

ದೇಶ ಒಡೆಯುವ ಮಾನಸಿಕತೆ ಕಾಂಗ್ರೆಸ್‌ನದ್ದು: ಮೀನಾಕ್ಷಿ ಲೇಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.